ಸಿದ್ದಾಪುರದಲ್ಲಿ ಕಾರ್ ಕಳವು.. ಭಟ್ಕಳದಲ್ಲಿ ಆರೋಪಿಗಳ ಬಂಧನ

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮದಲ್ಲಿ ಕಳ್ಳತನಕ್ಕೆ ಹೊಂಚುಹಾಕಿ ಮನೆಯ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಮನೆಯ ಒಳಗೆ ಹಣ-ಆಭರಣಗಳಿಗಾಗಿ ಹುಡುಕಿ ಕೊನೆಗೆ ಮನೆಯ ಎದುರಿಗಿದ್ದ ಕಾರ್ ಕದ್ದೊಯ್ದ ಘಟನೆ ಬುಧವಾರ ರಾತ್ರಿಯಿಂದ ಗುರುವಾರ ಬೆಳಿಗ್ಗೆ ಸಮಯದೊಳಗೆ ನಡೆದಿದೆ.

ಶಿರಳಗಿಯ ಖಾಸಗಿ ಬ್ಯಾಂಕ್ ಉದ್ಯೋಗಿ ಮತ್ತು ಶಿಕ್ಷಕಿ ದಂಪತಿಗಳ ಮನೆಯಲ್ಲಿ ಯಾರೂ ಇರದಿರುವುದನ್ನು ಅರಿತ ಕಳ್ಳರು ಬೆಳಿಗ್ಗೆ 2-3 ಗಂಟೆಯ ಸಮಯಕ್ಕೆ ಬಾಗಿಲು ಒಡೆದು ಮನೆಗೆ ನುಗ್ಗಿದ್ದಾರೆ. ಮನೆಯ ಒಳಗೆ ಆಭರಣ-ಹಣಕ್ಕಾಗಿ ತಡಕಾಡಿದ್ದಾರೆ. ಯಾವ ಸ್ವತ್ತೂ ಸಿಗದೆ ವಾರ್ಡ್ ರೋಬ್ ನಲ್ಲಿ ದೊರೆತ ಕಾರ್ ಆರ್.ಸಿ. ಪುಸ್ತಕ ಹಿಡಿದು ಮನೆಯ ಮೇಜಿನ ಮೇಲಿದ್ದ ಕಾರ್ ಕೀಲಿ ಪಡೆದು ಕಾರ್ ನೊಂದಿಗೆ ಪರಾರಿಯಾಗಿದ್ದಾರೆ. ಇಂದು ಮುಂಜಾನೆ ಮಾಹಿತಿ ಮೇರೆಗೆ ಪೊಲೀಸ್ ದೂರು ದಾಖಲಿಸಿ ಪರಿಶೀಲಿಸಿದಾಗ ಕಳ್ಳರು ಕಳ್ಳತನಕ್ಕಾಗಿ ಪ್ರಯತ್ನಿಸಿ ವಿಫಲರಾಗಿ ನಂತರ ಕಾರ್ ನೊಂದಿಗೆ ಪರಾರಿಯಾದ ವಾಸ್ತವ ತಿಳಿದಿದೆ.

ಸ್ಥಳಿಯರ ಮಾಹಿತಿ ಪ್ರಕಾರ ಬೆಳಿಗ್ಗೆ 2 ಗಂಟೆಯಿಂದ 2.30 ರ ಅವಧಿಯಲ್ಲಿ ಬಾಗಿಲು ಒಡೆದ ಶಬ್ಧ, ನಂತರ ಕಾರಿನ ಅವಾಜ್ ಗಮನಕ್ಕೆ ಬಂದಿದೆ. ಆದರೆ ಕಳ್ಳತನದ ಬಗ್ಗೆ ಸಂಶಯಿಸದ ಸ್ಥಳಿಯರು ತೆಂಗಿನ ಮರದಿಂದ ಕಾಯಿ ಬಿದ್ದಿರಬಹುದು ಎಂದು ಭಾವಿಸಿ ಸುಮ್ಮನಾಗಿದ್ದಾರೆ. ಮುಂಜಾನೆಯ ವೇಳೆ ಕಳ್ಳತನದ ವಿಷಯ ತಿಳಿಯುತ್ತಲೇ ಶಬ್ಧಬಂದ ಬಗ್ಗೆ ಮಾಹಿತಿ ನೀಡಿದ್ದಾರೆ.

ಪುರುಷೋತ್ತಮ ನಾಯ್ಕ ಕೆಲವು ದಿವಸ ಶಿರಳಗಿಯಲ್ಲಿ ಕೆಲವು ದಿವಸ ಹೊರ ಊರಲ್ಲಿ ಕುಟುಂಬದೊಂದಿಗೆ ಇರುತಿದ್ದರು. ಈ ಮಾಹಿತಿ ಸಂಗ್ರಹಿಸಿದ ಕಳ್ಳರು ಅವರ ಕುಟುಂಬ ಶಿರಳಗಿಯ ಮನೆಯಲ್ಲಿರದಿರುವುದನ್ನು ಖಚಿತಪಡಿಸಿಕೊಂಡು ಬಾಗಿಲು ಒಡೆದಿದೆ. ಈ ಕಳ್ಳತನದ ವೇಳೆ ಬೀಡಿ ಸೇದು ಎಸೆದಿರುವ ಕುರುಹುಗಳಿದ್ದು ಹಣ-ಆಭರಣ ದೋಚುವ ಉದ್ದೇಶದಿಂದ ಬಂದವರು ಹತಾಶರಾಗಿ ಕಾರ್ ಅಪಹರಿಸಿರುವ ಸಾಧ್ಯತೆ ಕಂಡು ಬಂದಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಸಿದ್ಧಾಪುರ ಪೊಲೀಸರು ಕಳ್ಳರು ಶಿವಮೊಗ್ಗ ಜಿಲ್ಲೆಯ ಕಡೆಯಿಂದ ಬಂದಿದ್ದು ಒಳದಾರಿಯಿಂದ ಪರಾರಿಯಾಗಿರುವ ಸಾಧ್ಯತೆ ಬಗ್ಗೆ ಊಹಿಸಿದ್ದಾರೆ.

ಭಟ್ಕಳ ಅರಣ್ಯ ಇಲಾಖೆಯಿಂದ ಭರ್ಜರಿ ಕಾರ್ಯಾಚರಣೆ : ಸಾಗವಾನಿ ಮರ ಕಡಿದು ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನ

ಕಾರವಾರ : ಭಟ್ಕಳ ತಾಲೂಕಾ ಅರಣ್ಯ ವಲಯ ವ್ಯಾಪ್ತಿಯ ಶಿರಾಲಿ ಶಾಖೆಯ ಕೊಪ್ಪಾ ಮೀಸಲು ಅರಣ್ಯ ಸರ್ವೆ ನಂ.157 ರಲ್ಲಿ ಸಾಗವಾನಿ ಮರ ಕಡಿದು ತಲೆಮರೆಸಿಕೊಂಡಿದ್ದ ಆರೋಪಿಗಳಾದ ಇಲಿಯಾಸ ಕೊಳಗೇರಿ,ಉತ್ತರಕೊಪ್ಪಾ ಮತ್ತು ಸೋಮ ಕೃಷ್ಣ ಮರಾಠಿ,ಉತ್ತರಕೊಪ್ಪಾ ಈ ಇಬ್ಬರು ಆರೋಪಿಗಳನ್ನು ಬಂಧಿಸಿ ದಂಡ ವಸೂಲಿ ಮಾಡಲಾಯಿತು.

ಅಕ್ರಮವಾಗಿ ಕಡಿದ ಸಾಗವಾನಿ ತುಂಡುಗಳನ್ನು ವಶಪಡಿಸಿಕೊಂಡು ಸದರಿ ಆರೋಪಿಗಳಿಂದ ರೂ.25000/- ದಂಡ ವಸೂಲಿ ಮಾಡಲಾಯಿತು.ಈ ಕಾರ್ಯಚರಣೆಯಲ್ಲಿ ಭಟ್ಕಳ ವಲಯ ಅರಣ್ಯಾಧಿಕಾರಿ ಸವಿತಾ ಆರ್.ದೇವಾಡಿಗ, ಉಪ ವಲಯ ಅರಣ್ಯಾಧಿಕಾರಿಗಳಾದ ಜಗದೀಶ ನಾಯ್ಕ,ಮಧುಕುಮಾರ ನಾಯ್ಕ, ಸಂದೀಪ ಭಂಡಾರಿ,ಶ್ರೀಕಾಂತ ಪವಾರ,ಗಣಪತಿ ನಾಯ್ಕ,ಅರಣ್ಯ ರಕ್ಷಕರಾದ ಸಚಿನ್ ಕಾಡು ಗೋಲಬಾವಿ,ಮೃತ್ಯುಂಜಯ,ಪುಂಡಲೀಕ ಮತ್ತು ವಾಹನ ಚಾಲಕರು ಪಾಲ್ಗೊಂಡಿದ್ದರು.ತಾಲೂಕಿನಲ್ಲಿ ನಡೆದ ಅರಣ್ಯ ಇಲಾಖೆಯ ಈ ಕಾರ್ಯಾಚರಣೆಗೆ ತಾಲೂಕಿನಾದ್ಯಂತ ಪ್ರಶಂಸೆಯ ಸುರಿಮಳೆಯೇ ಹರಿದು ಬಂದಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *