ಯಕ್ಷಗಾನ ವಿಶೇಶ….

ಯಕ್ಷಗಾನ ತಾಳಮದ್ದಲೆಯು ಒಂದು ಅದ್ಭುತವಾದ ಕಲಾ ಮಾಧ್ಯಮ. ನೃತ್ಯ ಹಾಗೂ ವೇಷಭೂಷಣಗಳಿಲ್ಲದೇ ಪಾತ್ರಗಳಾಗುವ ಪ್ರಕ್ರಿಯೆಯೇ ಕಲಾಭಿವ್ಯಕ್ತಿಯ ಪರಾಕಾಷ್ಠೆ ಎಂದರೂ ತಪ್ಪಲ್ಲ. ದೈನಂದಿನ ವೇಷಗಳಲ್ಲೇ ಪೌರಾಣಿಕ ಪಾತ್ರಗಳನ್ನು ಕಟ್ಟುವ ಮಾತುಗಾರಿಕೆಯ ಎಲ್ಲ ಸಾಧ್ಯತೆಗಳನ್ನು ತೆರೆದಿಡುವ ಈ ಕಲಾ ಪ್ರಕಾರವು ಅನನ್ಯವಾದುದು. ಇಂತಹ ತಾಳಮದ್ದಳೆ ಪ್ರದರ್ಶನವೊಂದು ಇಟಗಿಯ ಕಲಾಭಾಸ್ಕರ ಸಂಸ್ಥೆಯಿಂದ ತಾರಗೋಡಿನ ರಾಮಕೃಷ್ಣ ಹೆಗಡೆಯವರ ಮನೆಯಲ್ಲಿ ಪಿತೃಪಕ್ಷದ ನಿಮಿತ್ತ ಇಟಗಿ ಮಹಾಬಲೇಶ್ವರ ವಿರಚಿತ “ಪ್ರೇತೋದ್ಧರಣ” ಎಂಬ ಪೌರಾಣಿಕ ಯಕ್ಷಗಾನ ತಾಳಮದ್ದಲೆಯು ನೆರವೇರಿತು.

ಕಪ್ಪೆಕೆರೆ ಫಣೀಂದ್ರ ಹೆಗಡೆ ಮತ್ತು ಆತಿಥೇಯ ರಾಮಕೃಷ್ಣ ಹೆಗಡೆ ಭಾಗವತರಾಗಿ ನಡೆಸಿದರು. ನಾಗಭೂಷಣ ರಾವ್ ಹಗ್ಗೋಡು ಮದ್ದಳೆಯಲ್ಲಿ ಸಹಕರಿಸಿದರು. ಹಿರಿಯ ಕಲಾವಿದ ಅಶೋಕ ಭಟ್ಟ ಸಿದ್ದಾಪುರ ಇವರು ದುಂದುಕಾರಿಯಾಗಿ ವಿವಿಧ ಮಜಲುಗಳಲ್ಲಿ ಪಾತ್ರವನ್ನು ತೆರೆದಿಟ್ಟರು. ಮಹಾಜ್ಞಾನಿ ಗೋಕರ್ಣನಾಗಿ ಮಹಾಬಲೇಶ್ವರ ಭಟ್ಟ ಇಟಗಿಯವರು ನಾಯಕ ಪಾತ್ರದ ನಿರೂಪಣೆಯನ್ನು ಚೆನ್ನಾಗಿಯೇ ನಿರ್ವಹಿಸಿದರು.

ಬ್ರಾಹ್ಮಣ ಆತ್ಮದೇವನಾಗಿ ಹಾಗೂ ಶ್ರೀಮನ್ನಾರಾಯಣನಾಗಿ ಕವಲಕೊಪ್ಪ ವಿನಾಯಕ ಹೆಗಡೆ ಸೊಗಸಾಗಿ ಪಾತ್ರಗಳನ್ನು ಕಡೆದಿಟ್ಟರು. ಶಿವಂಕರ ಯತಿಯಾಗಿ ನಾಗಭೂಷಣ ಕೆ.ಎಸ್. ಸೂರ್ಯ ಹಾಗೂ ವಿಷ್ಣುದೂತರಾಗಿ ಗಣಪತಿ ಹೆಗಡೆ ಹೊನ್ನೆಕೈ, ವೇಷ್ಯೆ ಚಂಪಕಮಾಲಿನಿಯಾಗಿ ನಾಗಪತಿ ಹೆಗಡೆ ಕೊಪ್ಪ ದುಂಧುಲಿಯಾಗಿ ಪ್ರಸನ್ನ ಹೆಗಡೆ ಹೊಸಗದ್ದೆ ಉತ್ತಮವಾಗಿ ಪಾತ್ರಗಳನ್ನು ನಿರ್ವಹಿಸಿದರು. ಒಟ್ಟಾರೆಯಾಗಿ ಕಾರ್ಯಕ್ರಮವು ಅತ್ಯುತ್ತಮ ಪ್ರದರ್ಶನವಾಗಿ ನಡೆಯಿತು.

ಹೇರೂರಿನಲ್ಲಿ ಸುದರ್ಶನ ವಿಜಯ-
ಸಿದ್ದಾಪುರ
ತಾಲೂಕಿನ ಯಕ್ಷಕಲಾ ಬಳಗ ಹೇರೂರು ಆಶ್ರಯದಲ್ಲಿ ಪ್ರಸಿದ್ದ ಕಲಾವಿದರಿಂದ ಸುದರ್ಶನ ವಿಜಯ ಹಾಗೂ ಚಂದ್ರಾವಳಿ ವಿಲಾಸ ಯಕ್ಷಗಾನ ಅ.೯ರಂದು ಸಂಜೆ ೬ರಿಂದ ಹೇರೂರಿನ ಸಿದ್ಧಿವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ.

ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಗಣೇಶ್ ಆಚಾರ್, ದರ್ಶನ ಎಂ.ಗೌಡ, ಅಕ್ಷಯ ಆಚಾರ್,ಸುಬ್ರಹ್ಮಣ್ಯ ಭಂಡಾರಿ, ಮುಮ್ಮೇಳದಲ್ಲಿ ಕಾರ್ತಿಕ ಚಿಟ್ಟಾಣಿ, ಚಂದ್ರಹಾಸ ಗೌಡ,ರಾಜೇಶ ಭಂಡಾರಿ, ಅಣ್ಣಪ್ಪ ಗೌಡ,ನಾಗರಾಜ ಭಟ್ಟ ಕುಂಕಿಪಾಲ್,ಮAಜು ಗೌಡ,ನಾಗೇಂದ್ರ ಮೂರುರು,ಪುರಂದ ಮೂಡ್ಕಣಿ, ಮಂಜು ನಾಣಿಕಟ್ಟಾ ಪಾತ್ರ ನಿರ್ವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ದೊಡ್ಮನೆಯಲ್ಲಿ ಯಕ್ಷಗಾನ- ಸಿದ್ದಾಪುರ
ಅನಂತ ಯಕ್ಷಕಲಾ ಪ್ರತಿಷ್ಠಾನ ಸಿದ್ದಾಪುರ ದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾ ಸಂಘ ದೊಡ್ಮನೆ ಸಹಯೋಗದಲ್ಲಿ ಯಕ್ಷೋ ತ್ಸವ-೨೦೨೧ ಕಾರ್ಯಕ್ರಮದ ಅಂಗವಾಗಿ ಸುರತ ಆಂಜನೇಯ ಯಕ್ಷಗಾನ ದೊಡ್ಮನೆ ಎಂಜಿವಿವಿ ಪ್ರೌಢಶಾಲೆಯ ಸಭಾಂಗಣದಲ್ಲಿ ಅ.೧೦ರಂದು ಸಂಜೆ ೬ರಿಂದ ಪ್ರದರ್ಶನಗೊಳ್ಳಲಿದೆ.
ಯಕ್ಷಗಾನ ಅಕಾಡೆಮಿ ಸದಸ್ಯೆ ನಿರ್ಮಲಾ ಹೆಗಡೆ ಗೋಳಿಕೊಪ್ಪ ಯಕ್ಷೋ ತ್ಸವ ಉದ್ಘಾಟಿಸುವರು. ಶಂಕರನಾರಾಯಣ ಹೆಗಡೆ ದಾನ್ಮಾಂವ ಅಧ್ಯಕ್ಷತೆವಹಿಸುವರು.ಡಾ.ಶಶಿಭೂಷಣ ಹೆಗಡೆ ದೊಡ್ಮನೆ, ಶ್ರೀಧರ ಭಟ್ಟ ಗಡಿಹಿತ್ಲ, ಎಫ್.ಎನ್.ಹರನಗಿರಿ,ವಿ.ಎಂ.ಭಟ್ಟ ಕೊಳಗಿ ಉಪಸ್ಥಿತರಿರುತ್ತಾರೆ.
ನಂತರ ಹೊಸ್ತೋಟ ಮಂಜುನಾಥ ಭಾಗವತರು ರಚಿಸಿದ ಸುರತ ಆಂಜನೇಯ ಯಕ್ಷಗಾನ ಪ್ರದರ್ಶನಗಳ್ಳಲಿದೆ.ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಮಹೇಶ ಹೆಗಡೆ ಕೊಳಗಿ, ಶಂಕರ ಭಾಗ್ವತ್ ಶಿರಸಿ, ಗಣೇಶ ಭಟ್ಟ ಕೆರೆಕೈ, ಮುಮ್ಮೇಳದಲ್ಲಿ ವಿನಾಯಕ ಹೆಗಡೆ ಕಲಗದ್ದೆ, ಅಶೋಕ ಭಟ್ಟ ಸಿದ್ದಾಪುರ, ವಿ.ದತ್ತಮೂರ್ತಿ ಭಟ್ಟ , ಪ್ರಭಾಕರ ಹೆಗಡೆ ಹಣಜೀಬೈಲ್, ವೆಂಕಟೇಶ ಹೆಗಡೆ ಬೊಗರಿಮಕ್ಕಿ, ಅವಿನಾಶ ಹೆಗಡೆ ಕೊಪ್ಪ, ಪ್ರಣವ್ ಭಟ್ಟ ಶಿರಳಗಿ ಪಾತ್ರನಿರ್ವಹಿಸಲಿದ್ದಾರೆ.
ನಂತರ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾ ಸಂಘ ದೊಡ್ಮನೆ ಯಿಂದ ಮಾಗಧ ವಧೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಹಿಮ್ಮೇಳದಲ್ಲಿ ಸರ್ವೇಶ್ವರ ಹೆಗಡೆ ಮೂರುರು, ಗಣಪತಿ ಹೊನ್ನೆಕೈ, ಶಿವರಾಮ ಹೆಗಡೆ,ಮುಮ್ಮೇಳದಲ್ಲಿ ನರಸಿಂಹ ಚಿಟ್ಟಾಣಿ, ಮಹಾಬಲೇಶ್ವರ ಭಟ್ಟ ಕ್ಯಾದಗಿ, ನಿರ್ಮಲಾ ಹೆಗಡೆ ಗೊ

ಗೋಳಿಕೊಪ್ಪ,ಶ್ರೀಧರ ಭಟ್ಟ, ಪ್ರವೀಣ ತಟ್ಟೀಸರ,ಶಂಕರ ಹೆಗಡೆ, ಕೇಶವ ಹೆಗಡೆ ಕಿಬ್ಳೆ ಮತ್ತಿತರರು ಪಾತ್ರನಿರ್ವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *