ಪುನೀತ್‌ ಮಾಮ ಮತ್ತು ಮಗಳ ಬೇಡಿಕೆ

ಯಾರಿಗೆ ಯಾರಿಷ್ಟ ಯಾಕೆ ಅದು ನನ್ನ ವ್ಯವಹಾರವಲ್ಲ, ನಾನದರ ಬಗ್ಗೆ ಆಸಕ್ತಿ ವಹಿಸುವುದೂ ಇಲ್ಲ. ಆದರೆ ಕಮಲ್‌ ಹಾಸನ್‌, ನಾನಾ ಪಾಟೇಕರ್‌ ಬಿಟ್ಟರೆ ನನಗೆ ಇಷ್ಟದ ನಟರೆಂದರೆ… ಶಾರುಖ್, ಅಮೀರ್‌ ಖಾನ್‌, ಶಿವರಾಜ್‌ ಕುಮಾರ್‌ ಇತ್ಯಾದಿ… ಇದರ ಮಧ್ಯೆ ರಾಜ್‌ ಕುಮಾರ ಮತ್ತು ಪುನೀತ್‌ ನನ್ನ ಆಯ್ಕೆ ಅಲ್ಲ ಎಂದರೆ ಸುಳ್ಳುಹೇಳಿದಂತಾಗುತ್ತದೆ.

ಕಳೆದ ತಿಂಗಳು ಪುನೀತ್‌ ಜೋಗಕ್ಕೆ ಬಂದು ನಮ್ಮ ಸೋಮಣ್ಣರಿಂದ ಚಾಕುಡಿದು ಹೋದ ಕೆಲವೇ ಕ್ಷಣಗಳ ನಂತರ ನಮ್ಮ ಕುಟುಂಬ ಜೋಗದಲ್ಲಿತ್ತು. ಸೋಮಣ್ಣರ ಮಾತು ಕೇಳಿದ ದೊಡ್ಡ ಮಗಳು ಸಸ್ಯ, ಪಪ್ಪಾ ಪುನೀತ್‌ ಮಾಮರನ್ನು ತೋರಸ್ತೇನಿ ಎಂದಿದ್ದಿಯಲ್ಲ ನೀನು ಎಂದು ಕಿವಿಹಿಡಿದು ಕೇಳಿದಳು. ಒಕೆ ಮಗಾ ಪುನೀತರನ್ನೇ ಕರೆಸೋಣ ಒಂದ್ಸಾರಿ ಎಂದು ಪೂಷಿಬಿಟ್ಟಿದ್ದೆ .

ಮಗಳಿಗೆ ಪುನೀತ್‌ ಮಾಮ ಯಾಕೆ ಇಷ್ಟ ಎನ್ನುವುದೂ ನನಗೆ ಬೇಡದ ವಿಷಯ.

ಪುನೀತ್‌ ಪ್ರಥ್ವಿ ಸಿನೇಮಾ ಮಾಡಿದ ಮೇಲೆ ಅನೇಕರು ಜಿಲ್ಲಾಧಿಕಾರಿ ಆಗಬೇಕು ಎಂದುಕೊಂಡಿರುವವರ ಬಗ್ಗೆ ಮಗಳಿಗೆ ಹೇಳಿದ್ದೆ.

ಸೊರಬಾದ ದೇವರಾಜ್‌ ಈಗ ಬೆಂಗಳೂರಿನಲ್ಲಿ ಉಪವಿಭಾಗಾಧಿಕಾರಿ ಅವರು ನಮ್ಮೂರಲ್ಲಿ ಕೃಷಿ ಅಧಿಕಾರಿಯಾಗಿ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ ಅಧಿಕಾರಿಯಾಗಿರುವ ಅವರು ನನ್ನ ಸಂದರ್ಶನ ಒಂದರಲ್ಲಿ ನಾನೂ ಸ್ಫರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಕಾರಣ ನನ್ನ ಅಪ್ಪ ಮತ್ತು ಪುನೀತ್‌ ರ ಪ್ರಥ್ವಿ ಮೂವಿ ಎಂದಿದ್ದರು.

ಹೀಗೆ ಸಿನೆಮಾ ಮತ್ತು ನಟರು ಬೆಳ್ಳಿಪರದೆಯಿಂದ ಅನೇಕರನ್ನು ಪ್ರಭಾವಿಸಬಲ್ಲರು ಎಂಬುದನ್ನು ಕಲಿಸಿದ ಉಪಾನ್ಯಾಸಕ ನಾನು. ಪುನೀತ್‌ ಬಗ್ಗೆ ಭಾವನಾತ್ಮಕವಾಗಿ ಯೋಚಿಸದೆ ಪ್ರಾಯೋಗಿಕವಾಗಿ ವಿಮರ್ಶಿಸಿದರೂ ಪುನೀತ್‌ ಅಪ್ಪ- ಅಣ್ಣನಂತೆ ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸುವ, ಪ್ರತಿಬಿಂಬಿಸುವ ಆಯ್ಕೆಗಳನ್ನು ಮಾಡಿದ ನಿಜ ನಾಯಕ.

ಪುನೀತ್‌ ರ ಮೈತ್ರಿ-ಅಮರಾವತಿ, ಯುವರತ್ನ, ರಾಜಕುಮಾರ ಸೇರಿದಂತೆ ಅನೇಕ ಚಿತ್ರಗಳನ್ನು ಕಣ್ತುಂಬಿಸಿಕೊಂಡವರಿಗೆ ಪುನೀತ್‌ ಸಾವು ಮರೆಯದ ನೋವು. ಪುನೀತ್‌,ರಾಜಕುಮಾರ್‌ ಅವರ ದೊಡ್ಮನೆ ಕುಟುಂಬ ಸಿನೆಮಾಗಳ ಮೂಲಕ ಸಾಮಾಜಿಕ ಮೌಲ್ಯಗಳ ಮಹತ್ವ ಸಾರಿರುವ ಕಾರಣಕ್ಕೆ ಅವರ ಬಗ್ಗೆ ಕನ್ನಡಿಗರಿಗೆ ಗೌರವ ಇರಲೇಬೇಕು. ಆದರೆ ಪುನೀತ್‌ ರನ್ನು ಎಳೆಯರು ಇಷ್ಟಪಡಲು ಕಾರಣ ಎನು ಎನ್ನುವ ಜಿದ್ಞಾಸೆ ಈಗಲೂ ನನ್ನಲ್ಲಿದೆ. ಘನತೆವೆತ್ತ ಕುಟುಂಬದ ಪುನೀತ್‌, ಶಿವರಾಜ್‌, ರಾಘವೇಂದ್ರ ರಾಜ್‌ ಕುಮಾರ ಗಳೆಲ್ಲ ನಮ್ಮೂರ ಸಂಬಂಧಿಕರು ಎನ್ನುವುದನ್ನು ಮೀರಿ ಕೋಟ್ಯಾಂತರ ಜನರು ಅವರನ್ನು ಆರಾಧಿಸುವ ಹಿಂದೆ ಅವರ ಶ್ರಮ, ಸರಳತೆ ಕಾರಣ ಎನ್ನುವ ಸತ್ಯ ಅರಿಯದವ ಕೋಮುವಾದಿಯಾಗಬಹುದಷ್ಟೇ.

ನನ್ನ ಮಗಳ ಪುನೀತ್‌ ಮಾಮ ಈ ವಯಸ್ಸಿನಲ್ಲಿ ಹೀಗೆ ಕೊನೆಯಾಗಬಾರದಿತ್ತು ಎನ್ನುವುದಷ್ಟೇ ನನ್ನ ವೇದನೆಯ ಮೂಲ. ಪುನೀತ್‌ ಮತ್ತೆ ಜೀವಂತ ಬರಬಾರದೆ ಮಕ್ಕಳ ಪ್ರೀತಿಗಾಗಿಯಾದರೂ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *