ಕರೋನಾ ಪರಿಣಾಮ- ಟಿ.ಎಂ.ಎಸ್.ಗೆ ಲಾಭ,ಪ್ಯಾಡಿ ಸೊಸೈಟಿಗೆ ಹಾನಿ

ಭಾರತ ಸೇರಿದಂತೆ, ವಿಶ್ವದಾದ್ಯಂತ ಕರೋನಾ ವಿಪರೀತ ಪರಿಣಾಮ ಬೀರಿದೆ. ಸಣ್ಣ ಉದ್ದಿಮೆಗಳು, ವ್ಯಾಪಾರಿಗಳು ಹಾನಿಗೆ ಒಳಗಾಗಿ ವ್ಯಾಪಾರ, ಉದ್ಯೋಗ, ಉದ್ದಿಮೆಗಳನ್ನೂ ಬದಲಾಯಿಸಿದ್ದಾರೆ.ಉ.ಕ. ಸಿದ್ಧಾಪುರದಲ್ಲಿ ಸಹಕಾರಿ ಕ್ಷೇತ್ರದ ಮೇಲೆ ಕರೋನಾ ನೇರ ಪರಿಣಾಮ ಬೀರಿದೆ. ಬಡಸಂಸ್ಥೆಯಾದ ಕೃಷಿ ಹುಟ್ಟುವಳಿಗಳ ಸಂಸ್ಕರಣ ಮತ್ತು ಮಾರಾಟ ಸಂಘ ಕಳೆದ ವಾರ್ಷಿಕ ವರ್ಷದಲ್ಲಿ ಲಕ್ಷಾಂತರ ರೂಪಾಯಿಗಳ ಹಾನಿ ಅನುಭವಿಸಿದರೆ ಟಿ.ಎಂ.ಎಸ್. ಕಳೆದ ಆರ್ಥಿಕ ವರ್ಷದಲ್ಲಿ ದಾಖಲೆಯ ಲಾಭ ಮಾಡಿದೆ.

ಸಿದ್ಧಾಪುರ ತಾಲೂಕಾ ವ್ಯವಸಾಯ ಹುಟ್ಟುವಳಿಗಳಸಹಕಾರಿ ಮಾರಾಟ ಸಂಘ ೨೦೨೦-೨೧ ಸಾಲಿನಲ್ಲಿ೫.೭೮ ಸಾವಿರ ನಿಕ್ಕಿ ಲಾಭ ಗಳಿಸಿದೆ. ಈ ಟಿ.ಎಂ.ಎಸ್.ತನ್ನ ೭೪ ವರ್ಷಗಳ ಇತಿಹಾಸದಲ್ಲಿ ಈ ವರ್ಷ ಗರಿಷ್ಠ ಲಾಭಗಳಿಸಿದೆ ಎಂದು ಅದರ ಆಡಳಿತ ಸಮೀತಿ ಹೇಳಿದೆ. ಟಿ.ಎಂಎಸ್.‌ ನಲ್ಲಿ ಅಡಿಕೆ ವ್ಯಾಪಾರ, ಮಾರಾಟ, ಸಾಲ,ಇತರ ಜೀವನಾವಶ್ಯಕ ವಸ್ತುಗಳ ಮಾರಾಟ- ಖರೀದಿ ವ್ಯವಹಾರಗಳಿವೆ. ಟಿ.ಎಂ.ಎಸ್.‌ ತನ್ನ ಸದಸ್ಯರಿಗೆ ಸಾಲ ನೀಡುತಿದ್ದು ಸಂಘದ ಏಳುಸಾವಿರಕ್ಕಿಂತ ಹೆಚ್ಚಿನ ಸದಸ್ಯರು ಅಡಿಕೆ ಮಾರಾಟ, ಇತರ ಖರೀದಿಗಳನ್ನು ಮಾಡುವ ಮೂಲಕ ಹೆಚ್ಚಿನ ವ್ಯವಹಾರ ಮಾಡಿರುವುದರಿಂದ ಟಿ.ಎಂ.ಎಸ್.‌ ಗೆ ದಾಖಲೆಯ ಲಾಭವಾಗಿದೆ.

ಸಿದ್ಧಾಪುರದ ಕೃಷಿ ಹುಟ್ಟುವಳಿಗಳ ಸಂಸ್ಕರಣ ಮತ್ತು ಮಾರಾಟ ಸಂಘ೫೨೪ ಸದಸ್ಯರನ್ನು ಹೊಂದಿ ೩.೧೦ ಲಕ್ಷ ಲಾಭ ಗಳಿಸಿದೆ. ಕರೋನಾ ಅವಧಿ, ಲಾಕ್‌ ಡೌನ್‌ ಹಿನ್ನೆಲೆಗಳಲ್ಲಿ ಅಕ್ಕಿ ಮಾಡುವ ಪ್ರಮಾಣ ಮತ್ತು ಸದಸ್ಯರ ವ್ಯವಹಾರ ಕಡಿಮೆ ಇದ್ದುದರಿಂದ ಈ ವರ್ಷ ಲಕ್ಷಾಂತರ ಪ್ರಮಾಣದಲ್ಲಿ ಲಾಭ ಕಡಿಮೆಯಾಗಿದೆ ಎಂದು ಪ್ಯಾಡಿ ಸೊಸೈಟಿ ಅಧ್ಯಕ್ಷ ರಮಾನಂದ ಹೆಗಡೆ ಮಳಗುಳಿ ಹೇಳಿದ್ದಾರೆ. ಈ ಸಹಕಾರಿ ಸಂಸ್ಥೆಗಳ ವ್ಯವಹಾರ, ಲಾಭಗಳ ಲೆಕ್ಕದಲ್ಲಿ ಬಡ ಸಂಸ್ಥೆ, ಬಡ ಸದಸ್ಯರ ಕೃಷಿ ಹುಟ್ಟುವಳಿಗಳ ಸಂಸ್ಕರಣ ಮತ್ತು ಮಾರಾಟ ಸಹಕಾರಿ ಸಂಘ ಹಾನಿ ಅನುಭವಿಸಿದ್ದರೆ, ಶ್ರೀಮಂತ ಸಂಸ್ಥೆ ಟಿ.ಎಂ.ಎಸ್.‌ ಲಾಭ ಗಳಿಸಿದೆ ಇದರಿಂದ ಕರೋನಾ ಹಾನಿ, ಪರಿಣಾಮ ಶ್ರೀಮಂತರಿಗಿಂತ ಬಡವರನ್ನೇ ಬಾಧಿಸಿದೆ ಎನ್ನುವಂತಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *