ಗೆಲುವಿನ ಗಾಳಿ ಕೈ ಬೀಸುತ್ತಿರುವ ಮುನ್ಸೂಚನೆ! ಈ ಬಾರಿಯೂ ಭೀಮಣ್ಣ ಎಡವಿದ್ದಾರೆಯೆ? ಬಿ.ಜೆ.ಪಿ.ಗೆ ಬಂಡಾಯದ ಬಿಸಿ ಮುಟ್ಟಿದೆಯೆ?

ವಿ.ಪ. ಚುನಾವಣೆಯ ಮತದಾನ ಮುಕ್ತಾಯದ ಹಂತ ತಲುಪಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಧ್ಯಾಹ್ನ ಒಂದು ಘಂಟೆಯ ವೇಳೆಗೆ ಪ್ರತಿಶತ ೯೦ ರಷ್ಟು ಮತದಾನವಾಗಿರುವುದು ಗರಿಷ್ಠ ಮತದಾನದ ಮುನ್ಸೂಚನೆ ನೀಡಿದೆ.

ಮತದಾನೋತ್ತರ ಸಮೀಕ್ಷೆಯ ಅಂದಾಜಿನ ಪ್ರಕಾರ ಗೆಲ್ಲುವ ಅಭ್ಯರ್ಥಿ ಯಾರು? ಎನ್ನುವ ಪ್ರಶ್ನೆ ಈಗ ಚರ್ಚೆಯಾಗುತ್ತಿದೆ.

ರಾಜ್ಯದಲ್ಲಿ ಆಡಳಿತಾರೂಢ ಬಿ.ಜೆ.ಪಿ. ೧೦ ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆ ನಿಚ್ಚಳ ವಾಗಿದೆ. ಜೆ.ಡಿಎಸ್.‌ ಮೂರು ಕ್ಷೇತ್ರಗಳಲ್ಲಿ ೨-೩ ಕ್ಷೇತ್ರಗಳಲ್ಲಿ ಸ್ವತಂತ್ರರು ಆಯ್ಕೆಯಾದರೆ ಉಳಿದ ಹತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲುವುದೆ? ಎನ್ನುವ ಪ್ರಶ್ನೆ ಈಗ ರಾಜ್ಯದ ಮುಂದಿರುವ ಒಗಟು.

ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೋತು ಪಕ್ಷೇತರ ಅಭ್ಯರ್ಥಿ ಅಥವಾ ಬಿ.ಜೆ.ಪಿ. ಗೆಲ್ಲುವ ಸಾಧ್ಯತೆ ಕಂಡು ಬಂದಿದೆ.

ಬಿ.ಜೆ.ಪಿ. ಯ ಪ್ರಾಬಲ್ಯದ ಉತ್ತರ ಕನ್ನಡ ಮತ್ತು ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿ.ಜೆ.ಪಿ.ಗೆ ಪೂರಕ ವಾತಾವರಣವಿಲ್ಲದೆ ಕಾಂಗ್ರೆಸ್‌ ಗೆಲ್ಲುವ ಸಾಧ್ಯತೆ ಹೆಚ್ಚು ಎನ್ನುವ ಅಭಿಪ್ರಾಯಗಳಿವೆ.

ಶಿವಮೊಗ್ಗ ಜಿಲ್ಲೆಯಲ್ಲಿ ಬಿ.ಜೆ.ಪಿ. ನಾಯಕರ ಪ್ರತಿಷ್ಠೆ ತಮ್ಮ ಪಕ್ಷದ ಅಭ್ಯರ್ಥಿಗೆ ಹಿನ್ನಡೆ ಮಾಡಿರುವಂತಿದೆ. ಬಿ.ಜೆ.ಪಿ. ಒಳಜಗಳದ ಲಾಭ, ಜಾತ್ಯಾತೀತ ಜನತಾದಳದ ಬೆಂಬಲ ಕಾಂಗ್ರೆಸ್‌ ಗೆ ದೊರೆತಿರುವ ಹಿನ್ನೆಲೆಗಳಲ್ಲಿ ಬಿ.ಜೆ.ಪಿ. ಯ ತವರು ಶಿವಮೊಗ್ಗದಲ್ಲಿ ಬಿ.ಜೆ.ಪಿ.ಯ ಕಚ್ಚಾಟದ ಕಾರಣಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಪ್ರಸನ್ನಕುಮಾರ ಗೆಲುವು ನಿಶ್ಚಿತ ಎನ್ನಲಾಗಿದೆ.

ಉತ್ತರ ಕನ್ನಡ- ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಬಿ.ಜೆ.ಪಿ. ಮತ್ತು ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ ರ ವಿರುದ್ಧ ಹಿರಿಯ ಶಾಸಕರು, ಸಂಸದರು ಕೆಲಸ ಮಾಡಿರುವ ಸಾಧ್ಯತೆ ಕಂಡುಬಂದಿದೆ. ಇದೇ ಮೊದಲ ಬಾರಿ ಹೆಬ್ಬಾರ್‌ ನೇತೃತ್ವದಲ್ಲಿ ಬಿ.ಜೆ.ಪಿ. ಹಣದ ಹೊಳೆ ಹರಿಸಿದೆಯಾದರೂ ಬಿ.ಜೆ.ಪಿ.ಯ ಬಂಡಾಯ ಅಮಾಯಕ ಗಣಪತಿ ಉಳ್ವೇಕರ್‌ ರಿಗೆ ಮಾರಕವಾಗಬಹುದೆ? ಎನ್ನುವ ಅನುಮಾನಗಳನ್ನು ಹುಟ್ಟುಹಾಕಿದೆ.

ಸರ್ಕಾರ ಮತ್ತು ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ ರಿಗೆ ಈ ಚುನಾವಣೆ ಪ್ರತಿಷ್ಠೆ ಆಗಿರುವುದರಿಂದ ಹೆಬ್ಬಾರ್‌ ಆಪ್ತರು ಬಿ.ಜೆ.ಪಿ ಅಭ್ಯರ್ಥಿ ಪರವಾಗಿ ಅಹರ್ನಿಸಿ ದುಡಿದಿದ್ದಾರೆ ಎನ್ನುವ ಮಾಹಿತಿ ಇದೆ. ಆದರೆ ಶಿರಸಿ ಕೇಂದ್ರಿತ ರಾಷ್ಟ್ರೀಯವಾದಿಗಳು ಹೆಬ್ಬಾರ್‌ ವಿರುದ್ಧ ಕೆಲಸಮಾಡುವ ಅಂಗವಾಗಿ ನಿರ್ಲಿಪ್ತರಾಗಿದ್ದು ವಿರೋಧಿ ಪಾಳಯದ ಕಾಂಗ್ರೆಸ್‌ ಅಭ್ಯರ್ಥಿ ಭೀಮಣ್ಣ ನಾಯ್ಕರಿಗೆ ನೆರವಾಗಿದ್ದಾರೆ ಎನ್ನಲಾಗುತ್ತಿದೆ.

ಭೀಮಣ್ಣ ನವರ ದೀವರ ಜಾತಿ, ಜೆ.ಡಿ.ಎಸ್.‌ ಮತಗಳ ಆಕರ್ಷಣೆ, ಎರಡೆರಡು ಕ್ಷೇತ್ರಗಳಲ್ಲಿ ಭೀಮಣ್ಣ ವೈಯಕ್ತಿಕವಾಗಿ ಹೊಂದಿರುವ ಸಂಪರ್ಕ,ಕಾಂಗ್ರೆಸ್‌ ನ ಮಾಜಿ ಶಾಸಕರು, ಸಚಿವರು ಒಗ್ಗಟ್ಟಾಗಿ ಭೀಮಣ್ಣ ಪರ ಕೆಲಸ ಮಾಡಿರುವ ಮಾಹಿತಿ ಭೀಮಣ್ಣ ನಾಯ್ಕ ಈ ಬಾರಿ ಗೆಲ್ಲುತ್ತಾರೆ ಎನ್ನುವ ವಿಶ್ವಾಸಕ್ಕೆ ಕಾರಣವಾಗಿದೆ.

ಕಾಂಗ್ರೆಸ್‌ ಮತ್ತು ಭೀಮಣ್ಣನವರಿಗೆ ಪೂರಕ ಅಂಶಗಳು ಹೆಚ್ಚಿದ್ದವು. ಈ ಲೆಕ್ಕಾಚಾರದಲ್ಲೇ ಮಾಜಿಗಳೆಲ್ಲಾ ಸೇರಿ ಭೀಮಣ್ಣರನ್ನು ಅಭ್ಯರ್ಥಿ ಮಾಡಿದರು ಎನ್ನುವ ಅಂಶಗಳ ಜೊತೆಗೆ ಕಾಂಗ್ರೆಸ್‌ ನ ಅವೈಜ್ಞಾನಿಕ ಚುನಾವಣಾ ತಂತ್ರ, ಚಿರಪರಿಚಿತ ಭೀಮಣ್ಣ ನಾಯ್ಕ ತಮ್ಮ ಪರವಾಗಿ ವೈಯಕ್ತಿಕವಾಗಿ ಜೊತೆಗೆ ಪಕ್ಷದಿಂದ ನೇರವಾಗಿ ಮತ ಯಾಚನೆಯನ್ನೇ ಮಾಡದಿರುವುದು ಅವರ ಗೆಲ್ಲುವ ಸಾಧ್ಯತೆಯನ್ನು ಕ್ಷೀಣಿಸಿದೆ ಎನ್ನಲಾಗಿದೆ. ಆದರೆ ಶಿವಮೊಗ್ಗ ಮತ್ತು ಉತ್ತರ ಕನ್ನಡದಲ್ಲಿ ಕಾಂಗ್ರೆಸ್‌ ಗೆಲುವು,ಬೆಳಗಾವಿ, ಹಾಸನಗಳಲ್ಲಿ ಕಾಂಗ್ರೆಸ್‌,ಬಿ.ಜೆ.ಪಿ.ಗೆ ಸೋಲು ಎನ್ನುವ ಗುಪ್ತಚರ ಇಲಾಖೆಯ ಮಾಹಿತಿ ರಾಜ್ಯದಲ್ಲಿ ಕಾಂಗ್ರೆಸ್‌ ಒಂದಂಕಿ ದಾಟುವ ಮುನ್ಸೂಚನೆ ನೀಡಿದೆ. ಬಿ.ಜೆ.ಪಿ. ಯ ಬಂಡಾಯ, ಭೀಮಣ್ಣ ಪಾಳೆಯದ ನ್ಯೂನ್ಯತೆಗಳ ನಡುವೆ ಕೂಡಾ ಭೀಮಣ್ಣ ಸಣ್ಣ ಅಂತರದಲ್ಲಿ ಗೆಲ್ಲುತ್ತಾರೆ ಎನ್ನುವ ಸಮೀಕ್ಷೆ ನಿಜವಾಗಲು ನಾಲ್ಕು ದಿವಸ ಕಾಯಬೇಕಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *