goswarga of siddapur- ಭೂಮಿ ಮೇಲಿನ ಸ್ವರ್ಗ ಭಾನ್ಕುಳಿಮಠದ ಗೋಸ್ವರ್ಗ

ಸುಖ,ಶಾಂತಿ ಇದ್ದರೆ ಇಹಲೋಕವೇ ಸ್ವರ್ಗ, ಸ್ವರ್ಗದ ಕಲ್ಪನೆಯನ್ನು ಜನಸಾಮಾನ್ಯರೂ ಕೂಡಾ ಇದೇ ಮಾನದಂಡಗಳಿಂದ ನೋಡುತ್ತಾರೆ. ಕೆಲವರಿಗೆ ಈ ಲೋಕವೇ ಸ್ವರ್ಗವಾದರೆ, ಅನೇಕರಿಗೆ ಸ್ವರ್ಗ ಎನ್ನುವುದು ಒಂದು ಕಲ್ಪನೆ,ಭ್ರಮೆ. ಆದರೆ ನಾವಿಲ್ಲಿ  ನಿಮಗೆ ಭೂಮಿ ಮೇಲಿನ ಸ್ವರ್ಗವನ್ನು ತೋರಿಸುತಿದ್ದೇವೆ. ಇದು ಭ್ರಮೆ, ಕಾಲ್ಪನಿಕ ಸ್ವರ್ಗವಲ್ಲ. ಜಾನುವಾರುಗಳಿಗೆ ಮಠ ನಿರ್ಮಿಸಿಕೊಟ್ಟಿರುವ ಗೋಸ್ವರ್ಗ.
ಹೌದು ಗೋವಿನ ಬಗ್ಗೆ ಅನೇಕ ಕಾಲ್ಪನಿಕ, ಪೌರಾಣಿಕ ಮಿಥ್‌ ಗಳಿವೆ. ಗೋವಿನ ಕತೆ, ದಂತಕತೆ,ಪುರಾಣ,ಪ್ರವಚನಗಳಿಗೇನೂ ಕಡಿಮೆ ಇಲ್ಲ. ಆದರೆ ಈ  ಶಾಸ್ತ್ರಗಳನ್ನು ಮೀರಿದ ಗೋವಿನ ಸ್ವಚ್ಚಂದ ಬದುಕಿನ ವಾಸ್ತವದ ಗೋಸ್ವರ್ಗ ಒಂದು ಉತ್ತರ ಕನ್ನಡ ಜಿಲ್ಲೆಯಲ್ಲಿದೆ.

ಸಿದ್ಧಾಪುರದ ಬಾನ್ಕುಳಿಯಲ್ಲಿ ಶ್ರೀ ರಾಮದೇವರ ಶಾಖಾ ಮಠವೊಂದಿದೆ. ಈ ಮಠಕ್ಕೆ ನೂರಾರು ವರ್ಷಗಳ ಇತಿಹಾಸ ವಿದೆಯಾದರೂ ಈಗ ಈ ಮಠವನ್ನು ನಿರ್ವಹಣೆಮಾಡುತ್ತಿರುವ ಹೊಸನಗರದ ರಾಮಚಂದ್ರಪುರ ಮಠ ಇಲ್ಲಿ ಗೋವುಗಳಿಗೆ ಗೋಸ್ವರ್ಗವೊಂದನ್ನು ನಿರ್ಮಿಸಿದೆ. ಈ ಗೋಸ್ವರ್ಗದಲ್ಲಿ ಜನರು ಕೊಟ್ಟ ಹಾಗೂ ಕಸಾಯಿಖಾನೆಗಳಿಗೆ ಸಾಗಣೆಯಾಗುವ ಜಾನುವಾರುಗಳನ್ನು ರಕ್ಷಿಸಿ ಸಾಕಲಾಗುತ್ತದೆ. ದೇಶೀ ಹಸುಗಳ ಅಭಿವೃದ್ಧಿ ಕೇಂದ್ರವನ್ನಾಗಿಸಿ ಜಾನುವಾರು ಪೋಷಣೆ ಮಾಡುತ್ತಿರುವ ಈ ಗೋಸ್ವರ್ಗದಲ್ಲಿ ಆರು ನೂರಕ್ಕೂ ಹೆಚ್ಚು ವೈವಿಧ್ಯಮಯ ಹಸುಗಳಿವೆ.


ದೇಶದ ೩೪ ದೇಶೀ ತಳಿಗಳಲ್ಲಿ ಅರ್ಧದಷ್ಟು ಪ್ರಬೇಧಗಳ ಹಸುಗಳನ್ನು ರಕ್ಷಿಸಿ,ತಳಿ ಸಂವರ್ಧನೆ ಮಾಡುತ್ತಿರುವ ರಾಮಚಂದ್ರಪುರ ಮಠದ ಭಾನ್ಕು ಳಿ ಶಾಖೆ ಕಾಮಧುಗಾ ಎನ್ನುವ ಟ್ರಸ್ಟ ಒಂದನ್ನು ನಿರ್ಮಿಸಿಕೊಂಡಿದೆ.
ಹಾಲುಕೊಡುವ,ಕರು ಹಾಕುವ, ಕರುಹಾಕಿದ ಹೀಗೆ ಎಲ್ಲಾ ವಯೋಮಾನದ ನಾನಾ ತಳಿಗಳನ್ನು ರಕ್ಷಿಸಿ,ತಳಿ ಸಂವರ್ಧನೆ ಮಾಡುತ್ತಿರುವ ರಾಮಚಂದ್ರಪುರ ಮಠದ ಈ ಗೋಸ್ವರ್ಗ ಈಗ ಕೇವಲ ಗೋವುಗಳಿಗೆ ಮಾತ್ರ ಸ್ವರ್ಗವಲ್ಲ ಈ ಗೋಸ್ವರ್ಗವನ್ನು ನೋಡಿ ಆನಂದಿಸಲು ಪ್ರವಾಸಿಗರೂ ಬರುತಿದ್ದಾರೆ. ವಿಶಾಲ ಪ್ರದೇಶದಲ್ಲಿ ಮಲೆನಾಡ ಜಲಸಿರಿಯ ಕಾರಂಜಿಗಳ ಪಕ್ಕ ಪಕ್ಷ ಮಾಸಗಳ ಹಂಗಿಲ್ಲದೆ ಜಾನುವಾರುಗಳು ಸ್ವಚ್ಛಂದವಾಗಿ ವಿಹರಿಸುವುದನ್ನು ನೋಡುವುದೇ ಚಂದ.
ಕಣ್ಮನಗಳಿಗೆ ಹಬ್ಬ ನೀಡುವ  ಮಠದ ಗೋಸ್ವರ್ಗದ ಕಲ್ಪನೆ ಮಠಕ್ಕೆ ಖರ್ಚಿನ ಬಾಬ್ತಾದರೂ ಸರ್ಕಾರ, ಸಾರ್ವಜನಿಕರ ನೆರವಿನಿಂದ ನಡೆಯುತ್ತಿರುವ ಈ ಗೋಸ್ವರ್ಗ ಮೂಖಪ್ರಾಣಿಗಳಿಗೆ ಅವುಗಳನ್ನು ನೋಡಲು ಬರುವ ಜನರಿಗೆ ಸ್ವರ್ಗಸದೃಶ ಅನುಭವ ನೀಡುವುದಂತೂ ಸತ್ಯ.

(ಕನ್ನೇಶ್ವರ ನಾಯ್ಕ, ಕೋಲಶಿರ್ಸಿ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *