ಮಲೆನಾಡ ಪರಿಸರ ಗೌರಿ….. #malnad spl-gouri-fest# gouri habba part-02


ಮಲೆನಾಡು ವೈವಿಧ್ಯ, ಜೀವ ವೈವಿಧ್ಯಗಳ ಬೀಡು. ಇಲ್ಲಿಯ ಆಚರಣೆ, ಹಬ್ಬ ಹರಿದಿನಗಳೂ ಕೂಡಾ ಪರಿಸರಾಧಾರಿತ, ಪ್ರಕೃತಿ ಪೂರಕ. ದೇವರಕಾಡಲಿ ನಾಗರಕಲ್ಲು ಇಟ್ಟು ಪೂಜಿಸುವುದು, ಕೆರೆ, ಭಾವಿಗಳಲ್ಲಿ ಚೌಡಿ ಅಥವಾ ಚೌಡೇಶ್ವರಿ ಆರಾಧನೆ,ನೀರಿನಲ್ಲಿ ಬಲೀಂದ್ರ,ಗಂಗೆ, ಗೌರಿ ಕಾಣುವುದು ಮಲೆನಾಡಿನ ಸಾಂಪ್ರದಾಯಿಕತೆ ಕೂಡಾ. ಈಗ ಗೌರಿ ಗಣೇಶ ಹಬ್ಬದ ಸಮಯ ಬಿಡುವಿಲ್ಲದ ಬದುಕಿನ ಒತ್ತಡದ ಜೀವನದಲ್ಲಿ ಸಂಪ್ರದಾಯ, ಆಚರಣೆ ಕಷ್ಟ ಎಂದು ಎಲ್ಲರೂ ಕೃತಕ ಸಿದ್ಧ ವಸ್ತುಗಳಿಗಾಗಿ ಹುಡುಕುವವರೆ.
ಬಹುತೇಕ ಬಿಜಿಜೀವಿಗಳೆಲ್ಲ ಸಮಸ್ತ ಒತ್ತಡಗಳ ನಡುವೆಯೂ ಗೌರಿ-ಗಣೇಶ ಹಬ್ಬಕ್ಕೆ ಹುಟ್ಟೂರಿಗಂತೂ ಬಂದೇ ಬರುತ್ತಾರೆ. ಆಗ ಸ್ವಲ್ಪ ಸಮಯಮಾಡಿಕೊಂಡು ಗೌರಿ ಗಣಪನಿಗಾಗಿ ನಾವೂ ಬದಲಾದರೆ ಹೇಗೆಲ್ಲಾ ಹಬ್ಬದ ಗಮ್ಮತ್ತು ಹೆಚ್ಚುವುದು ಗೊತ್ತಾ?


ಭಾದ್ರಪದ ಶುಕ್ಲಪಕ್ಷದ ತದಗೆ ದಿನ ಮಲೆನಾಡಿನ ಗೌರಮ್ಮನೋ… ಪೇಟೆಗಳ ಸ್ವರ್ಣಗೌರಿಯೋ ಮನೆಗೆ ಬರುತ್ತಾಳೆ.ಈ ಸ್ವರ್ಣ ಗೌರಿ ತಮ್ಮೆಲ್ಲರ ಮನೆಗೆ ಬಂದು ಸಂಪತ್ತು- ಸಂಮೃದ್ಧಿಗೆ ಹಾರೈಸಿ ಮಾರನೆ ದಿನ ಮಗ ಗಣಪನೊಂದಿಗೆ ಮರಳಿ ಕೈಲಾಸಕ್ಕೆ ಹೋಗಲೇಬೇಕು.
ಈ ಗೌರಿ ಪೂಜೆಗೆ ಊರಿಗೆ,ಮನೆಗೆ ಬರುವವರು ಗೌರಿಯ ಶೃಂಗಾರಕ್ಕೆ ಬಂಗಾರವನ್ನು ಪೇಟೆಯಿಂದಲೇ ತನ್ನಿ ಆದರೆ ಗೌರಿಯ ಪ್ರೀತಿಯ ಕೇದಿಗೆ ಹೂವಿಗೆ ಪಟ್ಟಣದಲ್ಲಿ ಹುಡುಕಬೇಡಿ ಈಗಲೂ ನಮ್ಮ ಪಶ್ಚಿಮಘಟ್ಟದ ತೊಪ್ಪಲಲ್ಲಿ ಅಲ್ಲಲ್ಲಿ ಕೆರೆ ಕಟ್ಟೆ, ಹೊಳೆಗಳ ಅಂಚಲ್ಲಿ ಮುಳ್ಳುಗಳ ಮಧ್ಯೆ ಕೇದಿಗೆ ಸುವಾಸನೆ ಬೀರುತ್ತಾ ಕೂತಿರುತ್ತದೆ. ಹಾವಿನ ಹೆದರಿಕೆಯ ಎಚ್ಚರಿಕೆಯೊಂದಿಗೆ ಕೇದಿಗೆ ವನಕ್ಕೆ ನೀವು ಹೋದರೆ ನಿಮಗೆ ಕೇದಿಗೆ ತೋಟದ ಸುಖ ಸುಲಭವಾಗಿ ದಕ್ಕುತ್ತದೆ.


ಹಾಗೆಯೇ ಗೌರಿಗೆ ಇಂದ್ರನ ಹೂವು ಎನ್ನುವ ಅಗ್ನಿಶಿಖೆ ಬೇಕು. ಗ್ಲೋರಿಯೋಸಾ ಸುಪರ‍್ಬಾ ಎನ್ನುವ ವೈಜ್ಞಾನಿಕ ಹೆಸರಿನ ಆಯರ‍್ವೇದಿಕ್‌ ಗೌರಿ ಹೂವು ಮಲೆನಾಡಿನ ಕಾಡಿನಲ್ಲಿ ಯತೇಚ್ಛವಾಗಿ ದೊರೆಯುತ್ತವೆ. ಸ್ಥಳೀಯ ಪರಿಸರದ ಅರಿವಿರುವ ಮಕ್ಕಳು ಜೊತೆಗಿದ್ದರೂ ನೀವು ತಮಿಳುನಾಡಿನ ರಾಜ್ಯಪುಷ್ಪ ಇಂದ್ರನ ಹೂವನ್ನು ತಂದು ಗೌರಮ್ಮನ ಮುಡಿಗೇರಿಸಿದರೆ ನಿಮಗೆ ಟ್ರೆಕ್ಕಿಂಗ್‌ ಅನುಭವ ಉಚಿತ!


ಗೌರಿ-ಗಣೇಶ ಚತುರ್ಥಿ ಹೆಂಗಳೆಯರ ಪ್ರೀತಿಯ ಹಬ್ಬವಾದರೂ ಇಲ್ಲಿ ಕಾಡೋ, ನಾಡೋ ಎಲ್ಲಿಂದಲಾದರೂ ಫಲಾವಳಿಗಳನ್ನು ಹೊತ್ತು ತರುವವರು ಗಂಡಸರೇ, ಪೂಜೆ ಮಾಡುವವರೂ ಪುರುಷ ಪೂಜಾರಿಗಳೇ ಆಗಿರುವುದರಿಂದ ಕಲಸಪೂಜೆ, ಮೂರ್ತಿ ಪೂಜೆ ಮಾಡುವವರು ಕಳಲೆ, ಕೆಸುವಿನ ಎಲೆ ಸೇರಿದ ಪ್ರಕೃತಿಯಲ್ಲಿ ಸಿಗುವ ಸಸ್ಯಗಳನ್ನೇ ಬಳಸಿ ಅವು ನಿಮಗೆ ರಾಸಾಯನಿಕ ಬಳಸಿ ಬೆಳೆಯುವ ಇತರ ಕಾಯಿಪಲ್ಲೆ, ಸೊಪ್ಪಿಗಿಂತ ಉತ್ತಮ, ಆರೋಗ್ಯಕರ.


ಹಾಗೆಯೇ ಮೂರ್ತಿ ಪೂಜೆ ಮಾಡುವವರು ಪರಿಸರ ಪೂರಕ ಗೌರಿ-ಗಣೇಶನನ್ನು ತರಬಹುದು ಅವು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಕಲಸ ಪೂಜೆ ಮಾಡುವವರಿಗೆ ಹೆಚ್ಚು ಪರಿಸರವಾದಿಯಾಗುವ ಸುವರ್ಣಾವಕಾಶ. ಗೌರಮ್ಮನ ಸೀರೆ ತಂದು ಕಂಚಿನ ತಂಬಿಗೆಯಲ್ಲಿ ಬಾವಿಯ ನೀರು ತುಂಬಿ ಅದಕ್ಕೆ ಗರಿಕೆಜೊತೆ ಚಿಕ್ಕ ಕಲ್ಹಳ್ಳನ್ನೂ ಸೇರಿಸಿ,ಅಗ್ನಿಶಿಖೆ,ಅಡಿಕೆಯ ಸಿಂಗಾರ. ಕೇದಿಗೆ ಸೇರಿಸಿ ಮುಡಿ ಕಟ್ಟಿ ಸಿಹಿ ನೈವೇಧ್ಯಗಳೊಂದಿಗೆ ಗೌರಿ ಪೂಜಿಸಿದರೆ, ಗೌರಮ್ಮನಿಗೂ ಖುಷಿ ಜೊತೆಗೆ ಪರಿಸರ ಪೂರಕ. ಗೌರಮ್ಮನ ಹಬ್ಬ ಆಚರಣೆಯಾದಂತೆ. ಇಡೀ ಕುಟುಂಬ ಸೇರಿ ಆಚರಿಸುವ ಕುಟುಂಬದ ಹೆಂಗಳೆಯರ ಹಬ್ಬ ಗೌರಿ-ಗಣೇಶ್‌ ಚತುರ್ಥಿ ಮಲೆನಾಡಿನಲ್ಲಿ ನಡೆಯುವುದು ಹೀಗೇ. ಇದು ಒಂದು ಅಪೂರ್ವ, ನೈಸರ್ಗಿಕ ಗೌರಿ-ಗಣೇಶ್‌ ಹಬ್ಬದ ಮಾದರಿ ಎನಿಸುವುದಿಲ್ಲವೆ?

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *