ಬಾಗ್ಲ್‌ ತೆಗಿ ಮೇರಿ ಜಾನ್‌, ಹಿಗ್ಗಿ ಹೀರೇಕಾಯಿಯಾದ ದಾಖಲೆ!

ವೆಜಿಟೇಬಲ್ಸ್ ಇರೋ ನಾನ್ ವೆಜಿಟೇರಿಯನ್ ಹಾಡು: ಹಿಗ್ಗಿ ಹೀರೆಕಾಯಾಗಿಸೋ Non Veg ಸಾಂಗ್: 2 ದಿನದಲ್ಲಿ 25 ಲಕ್ಷ ವೀಕ್ಷಣೆ

ಪ್ರಪಂಚದಲ್ಲಿ ‘ವೆಜಿಟೇಬಲ್ಸ್ ಇರೋ ನಾನ್ ವೆಜಿಟೇರಿಯನ್ ಹಾಡು’ ಅಂತೇನಾದ್ರೂ ಇದ್ರೆ ಅದು ಕನ್ನಡದ ‘ತೋತಾಪುರಿ’ ಸಿನಿಮಾದ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು. ಈ ಚೇಷ್ಟೆಭರಿತ ಹಾಡನ್ನು ‘ಹೀರೇಕಾಯಿ ಸಾಂಗ್’ ಎಂದರೂ ತಪ್ಪಿಲ್ಲ. 2 ದಿನಗಳಲ್ಲಿ 25 ಲಕ್ಷಕ್ಕೂ ಹೆಚ್ಚು views ಈ ಹಾಡಿಗೆ ಸಿಕ್ಕಿರುವುದು ಇದರ ಪಾಪ್ಯುಲಾರಿಟಿಗೆ ಹಿಡಿದ ಕೈಗನ್ನಡಿ. 


ಪ್ರಪಂಚದಲ್ಲಿ ‘ವೆಜಿಟೇಬಲ್ಸ್ ಇರೋ ನಾನ್ ವೆಜಿಟೇರಿಯನ್ ಹಾಡು’ ಅಂತೇನಾದ್ರೂ ಇದ್ರೆ ಅದು ಕನ್ನಡದ ‘ತೋತಾಪುರಿ’ ಸಿನಿಮಾದ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು. ಈ ಚೇಷ್ಟೆಭರಿತ ಹಾಡನ್ನು ‘ಹೀರೇಕಾಯಿ ಸಾಂಗ್’ ಎಂದರೂ ತಪ್ಪಿಲ್ಲ. ಯಾಕೆ, ಏನು, ಹೇಗೆಂದು ಇಂಚಿಂಚೂ ಬಿಡಿಸಿ ಹೇಳುವುದು ನಿಷಿದ್ಧ! ಅದು ಅವರವರ ಭಾವಕ್ಕೆ ಭಕುತಿಗೆ ಬಿಟ್ಟ ವಿಚಾರ. 

ಆಪ್ಪಟ ನೆಲದ ಸೊಗಡು ಮತ್ತು ಚೇಷ್ಟೆಭರಿತ ಸಂಭಾಷಣೆಗಳಿಗೆ ಹೆಸರಾಗಿರುವ  ವಿಜಯಪ್ರಸಾದ್, ‘ತೋತಾಪುರಿ’ ಸಿನಿಮಾದ ನಿರ್ದೇಶಕ. ಈ ಚೇಷ್ಟೆಭರಿತ ನಾನ್ ವೆಜಿಟೇರಿಯನ್ ಹಾಡನ್ನು ರಚಿಸಿರುವ ಮಹಾಶಯರೂ ಅವರೇ. ಸಂಗೀತ ನೀಡಿರುವವರು ಮತ್ತೋರ್ವ ದೇಸಿ ಪ್ರತಿಭೆ ಅನುಪ್ ಸೀಳಿನ್. 2 ದಿನಗಳಲ್ಲಿ 25 ಲಕ್ಷಕ್ಕೂ views ‘ಬಾಗ್ಲು ತೆಗಿ ಮೇರಿ ಜಾನ್’ ಈ ಹಾಡಿಗೆ ಸಿಕ್ಕಿರುವುದು ಇದರ ಪಾಪ್ಯುಲಾರಿಟಿಗೆ ಹಿಡಿದ ಕೈಗನ್ನಡಿ. 

ನೆಲದ ಸೊಗಡಿನ ಹಾಡು

ಸಿನಿಮಾ ಆಗಲಿ ಹಾಡೇ ಆಗಲಿ ತುಂಬಾ ಗಂಭೀರವಾಗಿರಬಾರದು ಎನ್ನುವುದು ಸಿದ್ಲಿಂಗು, ನೀರ್ ದೋಸೆ ಖ್ಯಾತಿಯ  ವಿಜಯಪ್ರಸಾದ್ ಫಿಲಾಸಫಿ. ಎಂಥ ಗಂಭೀರ ವಿಷಯ ಹೇಳುವಾಗಲೂ ಚೇಷ್ಟೆ ಮತ್ತು ತುಂಟತನದಿಂದ ಪ್ರಸ್ತುತ ಪಡಿಸುವ ಕಲೆ ಅವರಿಗೆ ಕರಗತ. ‘ಬಾಗ್ಲು ತೆಗಿ ಮೇರಿ ಜಾನ್’ ಹಾಡಿನಲ್ಲಿನ ಸರಳ  ಗ್ರಾಮ್ಯ ಭಾಷೆ ಮತ್ತು ಮುಸ್ಲಿಮರ ಆಡುಭಾಷೆಯ ಬಳಕೆ ಅದಕ್ಕೆ ಸಾಕ್ಷ್ಯ ನುಡಿಯುತ್ತದೆ.


ವಿವಾದ ಸೃಷ್ಟಿಸಿದ ಪದ

‘ಬಾಗ್ಲು ತೆಗಿ ಮೇರಿ ಜಾನ್’ ಹಾಡಿನ ಪ್ರಾರಂಭದಲ್ಲಿ ಬರುವ ಒಂದು ಹಿಂದಿ ಪದ ಅವಹೇಳನಕಾರಿಯಾಗಿದೆ ಎನ್ನುವ ವಿವಾದ ಸೃಷ್ಟಿಯಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಸ್ಪಷ್ಟನೆ ಕೊಟ್ಟಿರುವ ವಿಜಯಪ್ರಸಾದ್ ಆ ಪದವನ್ನು ‘ಮೂರ್ಖ’ ಎನ್ನುವ ಅರ್ಥದಲ್ಲಿ ಬಳಸಿಕೊಂಡಿರುವುದಾಗಿ ಹೇಳಿದ್ದಾರೆ. 

ಹಿಂದೂ ಮುಸ್ಲಿಂ ಡುಯೆಟ್ ಸಾಂಗ್

ಸಿನಿಮಾದಲ್ಲಿ ಜಗ್ಗೇಶ್ ಅವರು ಈರೇಗೌಡ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ. ನಾಯಕಿ ಅದಿತಿ ಪ್ರಭುದೇವ ಅವರು ಶಕೀಲಾ ಬಾನು ಎನ್ನುವ ಮುಸ್ಲಿಂ ಸಮುದಾಯದ ಹುಡುಗಿ ಪಾತ್ರ ನಿರ್ವಹಿಸಿದ್ದಾರೆ. ಗುಟ್ಟಾಗಿ ಒಬ್ಬರನ್ನೊಬ್ಬರು ಪ್ರೇಮಿಸುತ್ತಿರುವ ನಾಯಕ ನಾಯಕಿ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುವ ಹಾಡಿದು. ಹೀಗಾಗಿ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ನಿಜಾರ್ಥದಲ್ಲಿ ಜಾತ್ಯತೀತ ಹಾಡು.

ಈ ಹಾಡಿನ ಲಿರಿಕ್ಸ್ ಅನ್ನು ಮೊದಲು ಓದಿದಾಗ ಸಂಗೀತ ನಿರ್ದೇಶಕ ಅನುಪ್ ಸೀಳಿನ್ ಅವರಿಗೂ ನಗು ಬಂದಿತ್ತು. ಹಾಡಿನ ಪ್ರಾರಂಭದಲ್ಲಿ 80ರ ದಶಕದ ‘ಕರ್ಜ್’ ಹಿಂದಿ ಸಿನಿಮಾದ ‘ಓಂ ಶಾಂತಿ ಓಂ’ ಹಾಡಿನ ಮೊದಲ ಸಾಲನ್ನು ಬಳಸಿಕೊಳ್ಳಲಾಗಿದೆ. ಹಾಡಿನ ಪ್ರಾರಂಭದ ಸಾಲು ಮತ್ತು ಅಂತ್ಯದಲ್ಲಿ ಕೇಳಿಬರುವ ಗಂಟೆ ಶಬ್ದದ ಕ್ರೆಡಿಟ್ಟನ್ನು ಅನುಪ್ ಸೀಳಿನ್ ಅವರು ವಿಜಯಪ್ರಸಾದ್ ಅವರಿಗೆ ನೀಡುತ್ತಾರೆ. 

ಕೊರಿಯೊಗ್ರಫಿಯಲ್ಲೂ ತುಂಟತನ

ನಿರ್ದೇಶಕ ವಿಜಯಪ್ರಸಾದ್ ಬರೆದ ಸಾಲುಗಳು ಎಷ್ಟು ತುಂಟತನದಿಂದ ಕೂಡಿವೆಯೋ, ಅಷ್ಟೇ ತುಂಟತನವನ್ನು ಕೊರಿಯೋಗ್ರಫಿ ಮೂಲಕ ಮುರಳಿ ಮಾಸ್ಟರ್ ವ್ಯಕ್ತಪಡಿಸಿರುವುದು ವಿಶೇಷ. ಒಟ್ಟಿನಲ್ಲಿ ಸಮಾನಮನಸ್ಕ ತುಂಟರು ಒಟ್ಟಾಗಿ ಕಲೆತಿರುವುದರಿಂದಲೇ ಈ ಮ್ಯಾಜಿಕ್ ಸೃಷ್ಟಿಯಾಗಿದೆ ಎನ್ನಲಡ್ಡಿಯಿಲ್ಲ. 

ಹಾಡಿನಲ್ಲಿ ಜಗ್ಗೇಶ್- ಅದಿತಿ ಪ್ರಭುದೇವ ಅವರಿಗೆ ಕಲಾವಿದೆಯರಾದ ವೀಣಾ ಸುಂದರ್ ಮತ್ತು ಹೇಮಾ ದತ್ ಸಾಥ್ ನೀಡಿದ್ದಾರೆ. ಸಿನಿಮಾದ ಹಾಡೇ ಹೊಟ್ಟೆ ಹುಣ್ಣಾಗುವಂತೆ ನಗಿಸುವಂತಿದೆ, ಇನ್ನು ಸಿನಿಮಾ ಎಷ್ಟು ನಗಿಸಬಹುದು ಎನ್ನುವ ಕಾತರವನ್ನು ‘ಹೀರೇಕಾಯಿ ಸಾಂಗ್’ ಅಲ್ಲಲ್ಲ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ಹುಟ್ಟುಹಾಕಿದೆ. (ಕಪ್ರಡಾ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *