ಈಡಿಗರ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಸ್ವಾಮೀಜಿ ಪ್ರವಚನ ‌ಈಗ ವೈರಲ್


ದೇಶ ಕಟ್ಟುವ ಕೆಲಸದ ಜೊತೆಗೆ ಸಮಾಜಕಟ್ಟುವ ಕೆಲಸವನ್ನು ಮಾಡಲು ಸಲಹೆ ನೀಡಿರುವ ಹೊಸನಗರ  ಸಾರಂಗನಜೆಡ್ಡು ಕಾರ್ತಿಕೇಯಪೀಠದ ಯೋಗೇಂದ್ರ  ಸ್ವಾಮೀಜಿ ಉತ್ತರ ಕನ್ನಡದ ತರಳಿಯಲ್ಲಿ ಸಿಗಂದೂರು ವಿಚಾರ ಪ್ರಸ್ಥಾಪಿಸಿ ವೈರಲ್‌ ಆಗುವ ಹೇಳಿಕೆ ನೀಡಿದ್ದಾರೆ.


ಶಿವರಾತ್ರಿ ನಿಮಿತ್ತ ಸಿದ್ಧಾಪುರದ ತರಳಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿಸ್ತು,ಶೃದ್ಧೆ,ಪರಿಶ್ರಮದಿಂದ ಸಮಾಜಕಟ್ಟುವ ಜೊತೆಗೇ ದೇಶಕಟ್ಟಬೇಕು. ಸಿಗಂದೂರಿನ ವಿವಾದದ ವಿಚಾರದಲ್ಲಿ ಈಡಿಗ ಸಮಾಜ ಒಂದಾಗುತ್ತದೆ ಎನ್ನುವ ನಿರೀಕ್ಷೆ ಎಲ್ಲರಿಗಿತ್ತು ಆದರೆ ಆಡಳಿತ ಪಕ್ಷದ ಸದಸ್ಯರು, ಜನಪ್ರತಿನಿಧಿಗಳು,ರಾಜಕೀಯ ನಾಯಕರು ಸಿಗಂದೂರು ವಿಚಾರದಲ್ಲಿ ಈಡಿಗರ ಬೆಂಬಲಕ್ಕೆ ಬರದೆ ಹಿಂದೇಟು ಹಾಕಿದರು.


ಚುನಾವಣೆ ಮತಕ್ಕಾಗಿ ಸಮಾಜ,ಸ್ವತ: ಸಮೂದಾಯದ ನೆರವು ಪಡೆಯುವ ರಾಜಕಾರಣಿಗಳು ಸಮಾಜದ ನೋವಿಗೆ  ಸ್ಪಂದಿಸದಿದ್ದರೆ ಏನರ್ಥ ಎಂದು ಪ್ರಶ್ನಿಸಿ ರಾಜಕಾರಣಿಗಳಿಗೆ ಸಮಾಜಕಟ್ಟುವ ಜವಾಬ್ಧಾರಿ ಇಲ್ಲವೆ ಎಂದು ತರಾಟೆಗೆ ತೆಗೆದುಕೊಂಡರು.
 ಇಂದು  ತರಳೀಶ್ರೀ ಪ್ರಶಸ್ತಿ ಸ್ವೀಕರಿಸಿದ ಸಿಗಂದೂರು ಧರ್ಮದರ್ಶಿ ರಾಮಪ್ಪ ಮತ್ತು ಸಿಗಂದೂರು ದೇವಾಲಯದ ವಿಚಾರದಲ್ಲಿ ವ್ಯವಸ್ಥೆ ಈಡಿಗರ ವಿರೋಧಿಯಾಗಿ ವರ್ತಿಸಿತು.ಸರ್ಕಾರದಲ್ಲಿ ಸಮಾಜವನ್ನು ಪ್ರತಿನಿಧಿಸುವವರು,ಈಡಿಗರ ರಾಜಕಾರಣಿಗಳು ತಮ್ಮ ಸಮಾಜದ ದೇವಾಲಯದ ಪರವಾಗಿ ನಿಲ್ಲಲಿಲ್ಲ ರಾಜಕಾರಣಿಗಳಿಗೆ ಸಮಾಜಕಟ್ಟುವ ಜವಾಬ್ಧಾರಿ ಇಲ್ಲವೆ ಎಂದು ಪ್ರಶ್ನಿಸಿದ ಯೋಗೇಂದ್ರ ಸ್ವಾಮೀಜಿಯವರ ಪ್ರವಚನ ಸಂಚಲನಕ್ಕೆ ಕಾರಣವಾಗಿದೆ. ರಾಜ್ಯದ ಪ್ರಮುಖ ಸಮೂದಾಯವಾದ ಈಡಿಗರ ವಲಯದಲ್ಲಿ ಈ ಪ್ರಶ್ನೆಯ ವಿಚಾರ ವೈರಲ್‌ ಹೇಳಿಕೆಯಾಗಿ ಚರ್ಚೆಯಾಗುತ್ತಿದೆ. ಸರ್ಕಾರ ವ್ಯವಸ್ಥೆ ಒಂದು ಸಮೂದಾಯದ ವಿರುದ್ಧವಾಗಿ ವರ್ತಿಸಿದಾಗ ಅದನ್ನು ಪ್ರತಿಭಟಿಸದ ಸಮೂದಾಯದ ಜನಪ್ರತಿನಿಧಿಗಳು,ರಾಜಕಾರಣಿಗಳ ಬಗ್ಗೆ ಸ್ವಾಮೀಜಿ ಹೇಳಿಕೆಗೆ ಈಡಿಗ ಸಮೂದಾಯ ಸಹಮತ ವ್ಯಕ್ತಪಡಿಸಿದೆ.

ಹಿಂದೂ ಕಾರ್ಯಕರ್ತನ ಹತ್ಯೆ ಪ್ರಕರಣ: ಶಾಸಕಿ ರೂಪಾಲಿ ನಾಯ್ಕ ವಿವಾದಾತ್ಮಕ ಹೇಳಿಕೆ ವೈರಲ್​

ಸಿದ್ಧಾಪುರ ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಕಿಲಾರದಲ್ಲಿ ಶಿವರಾತ್ರಿ ಆಚರಣೆ ವಿಜೃಂಣೆಯಿಂದ ಜರುಗಿತು. ಊರಿನ ಆನೆಗುಂಡಿಯ ನಿಸರ್ಗದ ಮಡಿಲಿನಲ್ಲಿರುವ ಅಘನಾಶಿನಿ ಸಂಗಮದಲ್ಲಿರುವ ಶ್ರೀ ಕೂಡಲ ಸಂಗಮೇಶ್ವರನಿಗೆ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ಬಂದಂತ ಭಕ್ತರು ಹೊಳೆಯಲ್ಲಿ ಮಿಂದು ಸಂಗಮೇಶ್ವರನಿಗೆ ನೀರಿನ ಅಭಿಷೇಕ ಮಾಡಿ ಪೂಜೆ ನೆರವೇರಿಸಿದರು. ನಂತರ ಎಲ್ಲರಿಗೂ ಅನ್ನ ಸಂತರ್ಪಣೆ ಮಾಡಲಾಯಿತು.

ನಮ್ಮ ಹುಡುಗ ದಾರುಣವಾಗಿ ಕೊಲೆಗೀಡಾದ. ನಾವು ಅಧಿವೇಶನದಲ್ಲಿ ಕುಳಿತು ಅತ್ತಿದ್ದೇವೆ. ಆದ್ರೆ ನಾವೂ ಸಹ ಹಿಂದೂಗಳು ಎಂದು ಹೇಳಿಕೊಳ್ಳುವ ಕೆಲವರು ವಿಧಾನಸಭೆಯೊಳಗೆ ಇದ್ದು ಸಚಿವ ಈಶ್ವರಪ್ಪರನ್ನು ಅಮಾನತು ಮಾಡಿ ಎಂದು ಆಗ್ರಹಿಸುತ್ತಿದ್ದರು ಎಂದು ಪರೋಕ್ಷವಾಗಿ ಕಾಂಗ್ರೆಸ್​ ವಿರುದ್ಧ ಶಾಸಕಿ ರೂಪಾಲಿ ನಾಯ್ಕ ಹರಿಹಾಯ್ದರು.

ಕಾರವಾರ: ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಹಿನ್ನೆಲೆಯಲ್ಲಿ ಶಾಸಕಿ ರೂಪಾಲಿ ನಾಯ್ಕ ಆಡಿದ ಹೇಳಿಕೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.https://c00fd143f806f5036859317be79c096f.safeframe.googlesyndication.com/safeframe/1-0-38/html/container.html

ಅಂಕೋಲಾದಲ್ಲಿ ನಡೆದ ಶಿವಾಜಿ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ, ನಮ್ಮ ಹುಡುಗ ದಾರುಣವಾಗಿ ಸಾವನ್ನಪ್ಪಿದ್ದಾನೆ. ನಾವು ಅಧಿವೇಶನದಲ್ಲಿ ಕುಳಿತು ಅತ್ತಿದ್ದೇವೆ. ಆದ್ರೆ ನಾವೂ ಸಹ ಹಿಂದೂಗಳು ಎಂದು ಹೇಳಿಕೊಳ್ಳುವವರು ವಿಧಾನಸಭೆಯ ಒಳಗೆ ಇದ್ದು, ಸಚಿವ ಈಶ್ವರಪ್ಪರನ್ನು ಅಮಾನತು ಮಾಡಿ ಎಂದು ಆಗ್ರಹಿಸುತ್ತಿದ್ದರು. ಇದು ನಾಚಿಕೆಗೇಡಿನ ಸಂಗತಿ ಎಂದು ಪರೋಕ್ಷವಾಗಿ ಕಾಂಗ್ರೆಸ್​ ವಿರುದ್ಧ ಹರಿಹಾಯ್ದರು. (etbk)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *