Samajamukhi.net- ಕಲೆ,ಸಂಸ್ಕೃತಿ,ಕ್ರೀಡೆ, ಸ್ಥಳಿಯ ವಿಶೇಶ

ಸಿದ್ದಾಪುರ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ದ ನೇತೃತ್ವದಲ್ಲಿ ಸರಕಾರಿ ನೌಕರರ ವಿವಿಧ ಇಲಾಖೆಗಳೊಂದಿಗೆ ಕ್ರಿಕೆಟ್ ಪಂದ್ಯಾವಳಿ ಮಾರ್ಚ್ 6ರಂದು ಸಿದ್ದಾಪುರ ನೆಹರು ಮೈದಾನದಲ್ಲಿ ನಡೆಯಲಿದೆ.
ಬೆಳಿಗ್ಗೆ 9ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಸಿದ್ದಾಪುರ ಜೆಎಂಎಫ್ಸಿ ನ್ಯಾಯಾಧೀಶರಾದ ಸಿದ್ದರಾಮ ಎಸ್ ಉದ್ಘಾಟಿಸಲಿದ್ದಾರೆ. ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ತಸೀಲ್ದಾರ್ ಸಂತೋಷ್ ಭಂಡಾರಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್, ಸಿಪಿಐ ಕುಮಾರ್ ಕೆ , ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕುಮಾರ್ ನಾಯ್ಕ, ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರಾಜೇಶ್ ನಾಯ್ಕ ಉಪಸ್ಥಿತರಿರುವರು.

ಸಿದ್ದಾಪುರ
ಕಳೆದ ಎರಡು ದಶಕಗಳಿಂದ ರಂಗಭೂಮಿಯಲ್ಲಿ ಸಕ್ರೀಯವಾಗಿದ್ದು ಈವರೆಗೆ ಹಲವು ನಾಟಕಗಳನ್ನು ಪ್ರಸ್ತುತಪಡಿಸಿರುವ ಒಡ್ಡೋಲಗ ರಂಗ ತಂಡವು ರಂಗಪರ್ಯಟನಕ್ಕೆ ಸಿದ್ಧಪಡಿಸಿದ ಪ್ರಸಿದ್ಧ ಕಥೆಗಾರ ಜಯಂತ ಕಾಯ್ಕಿಣಿಯವರ ಕಥೆಯನ್ನಾಧರಿಸಿದ ಕೋಮಲ ಗಾಂಧಾರ ನಾಟಕವು ಮೈಸೂರಿನ ರಂಗಾಯಣ ಆಯೋಜಿಸಿರುವ ಬಹುರೂಪಿ ರಾಷ್ಟ್ರೀಯ ರಂಗೋತ್ಸವದಲ್ಲಿಮಾ.೧೨ರಂದು ಮೈಸೂರಿನ ಸಂಪತ್ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಈ ಅವಕಾಶ ನೀಡಿದ್ದಕ್ಕಾಗಿ ರಂಗಾಯಣ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಒಡ್ಡೋಲಗ ರಂಗತಂಡದ ಮುಖ್ಯಸ್ಥ, ರಂಗಕರ್ಮಿ ಗಣಪತಿ ಬಿ.ಹಿತ್ಲಕೈ ತಿಳಿಸಿದ್ದಾರೆ.
ಅವರು ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿದ್ದು ಜಯಂತ ಕಾಯ್ಕಿಣಿಯವರ ಕಥೆಯನ್ನಾಧಾರಿಸಿದ ಕೋಮಲ ಗಾಂಧಾರ ನಾಟಕ ಈಗಾಗಲೇ ಹಲವೆಡೆಗಳಲ್ಲಿ ಪ್ರದರ್ಶನಗೊಂಡಿದೆ. ಕೊರೊನಾ ಸಂಕಷ್ಠಕಾಲದಲ್ಲಿ ಸ್ಥಗಿತಗೊಂಡ ರಂಗ ಚಟುವಟಿಕೆ ನಂತರದಲ್ಲಿ ಆರಂಭಗೊಂಡಿದ್ದು ನಂತರದಲ್ಲಿ ಶಿರಸಿ ಮುಂತಾದೆಡೆಗಳಲ್ಲಿ ಅಲ್ಲದೇ ಹಲವು ಕಾಲೇಜುಗಳಲ್ಲಿ ಈ ನಾಟಕ ಪ್ರದರ್ಶನಗೊಂಡಿದೆ. ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನ ಗಣಪತಿ ಬಿ.ಹಿತ್ಲಕೈ ಅವರದ್ದು. ಸಂಗೀತ ಸಂಯೋಜನೆ ಪ್ರಸನ್ನ ವೈದ್ಯ ಹೆಗ್ಗಾರು, ಪ್ರೇರಣೆ ವಿಜಯ ಹೆಗಡೆ ದೊಡ್ಮನೆ, ಸಾಹಿತ್ಯ ಸಲಹೆ ಗಂಗಾಧರ ಕೊಳಗಿ ಅವರದ್ದಾಗಿದೆ. ಪ್ರಸ್ತುತ ಜಗತ್ತಿನ ಅನಾವರಣದ ಜೊತೆಗೆ ಕಾರ್ಪೋರೇಟ್ ಜಗತ್ತಿನ ಮೂಲ ಗುಣವಾದ ಸ್ವಾರ್ಥ, ಆಸೆ,ಆಮಿಷಗಳನ್ನು ತೆರೆದಿಡುವ ಈ ಕಥೆ ನಿಜವಾದ ಜಗತ್ತು ಯಾವುದು? ಎನ್ನುವದರ ಹುಡುಕಾಟ ನಡೆಸುತ್ತದೆ.
ಈ ರಾಷ್ಟ್ರೀಯ ರಂಗೋತ್ಸವದಲ್ಲಿ ಕೋಮಲ ಗಾಂಧಾರ ನಾಟಕ ಪ್ರದರ್ಶನ ನೀಡಲು ಅವಕಾಶ ದೊರಕಿದ ಸಂತೋಷದ ಜೊತೆಗೆ ಒಡ್ಡೋಲಗದ ಎಲ್ಲ ರಂಗ ಚಟುವಟಿಕೆಗಳಿಗೆ ಸಹಕಾರ,ಬೆಂಬಲ ನೀಡುತ್ತ, ನಾಟಕಗಳನ್ನು ನೋಡಿ, ಅಭಿಪ್ರಾಯ ವ್ಯಕ್ತಪಡಿಸಿ ತಂಡದ ಬೆಳವಣಿಗೆಗೆ ಕಾರಣಿಕರ್ತರಾದ ಪ್ರೇಕ್ಷಕ ಸಮುದಾಯವನ್ನು, ಮಾಧ್ಯಮದವರನ್ನು ರಂಗತಂಡದ ಪರವಾಗಿ ಅಭಿನಂದಿಸುತ್ತೇನೆ ಎಂದು ಗಣಪತಿ ಬಿ.ಹಿತ್ಲಕೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿದ್ದಾಪುರದಲ್ಲಿ ಆರಂಭಗೊಂಡ ನಮ್ಮ ಕಾರ್ಗೋ’ ಸೇವಾ ಕೇಂದ್ರ.
ಸಿದ್ದಾಪುರ: ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ಸಾರಿಗೆ ನಿಗಮನದ ಪಾರ್ಸಲ್ ಸೇವೆಗಾಗಿ ನಿಗಮ ಆರಮಭಿಸಿದ ‘ನಮ್ಮ ಕಾರ್ಗೋ’ ಘಟಕದ ಉದ್ಘಾಟನೆ ಇತ್ತೀಚೆಗೆ ಇಲ್ಲಿ ನಡೆಯಿತು.
ನಮ್ಮ ಕಾರ್ಗೋ ಪಾರ್ಸಲ್ ಸರ್ವಿಸ್ ಘಟಕವನ್ನು ಉದ್ಘಾಟಿಸಿದ ಬಸ್ ನಿಲ್ದಾಣ ನಿಯಂತ್ರಣಾಧಿಕಾರಿ ಆರ್.ಟಿ.ನಾಯ್ಕ ತ್ವರಿತವಾಗಿ ಮತ್ತು ಅತ್ಯಂತ ಕಾಳಜಿಯಿಂದ ಗ್ರಾಹರಿಗೆ ಪಾರ್ಸಲ್ ಸೇವೆ ಒದಗಿಸಲು ನಿಗಮ ‘ನಮ್ಮ ಕಾರ್ಗೋ’ ಸೇವೆಯನ್ನು ಆರಂಭಿಸಿರುವುದರಿಂದ ಬದಲಾವಣೆಗೆ ಹೊಸತನದ ಸ್ಪರ್ಷ ನೀಡಿದಂತಾಗಿದೆ. ಈ ಜನಸ್ನೇಹಿ ಯೋಜನೆ ಗ್ರಾಹಕರಲ್ಲಿ ಭರವಸೆ ತುಂಬಲಿ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ‘ನಮ್ಮ ಕಾರ್ಗೋ’ ಸಿದ್ದಾಪುರ ಘಟಕದ ಉಸ್ತುವಾರಿಗಾಗಿ ನೇಮಕವಾದ ಮೋಹನ ಎಸ್.ನಾಯ್ಕ, ಸ್ಥಳೀಯರಾದ ರವಿ ನಾಯ್ಕ, ಸುರೇಶ ನಾಯ್ಕ, ಸಿಬ್ಬಂದಿಗಳಾದ ರಮೇಶ ನಾಯ್ಕ, ಮಂಜುನಾಥ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ತಾಲೂಕಿನ ಗ್ರಾಹಕರು ‘ನಮ್ಮ ಕಾರ್ಗೋ’ ಸೇವೆಗಾಗಿ ಈ ಮೊಬೈಲ್ ಸಂಖ್ಯೆ ಸಂಪರ್ಕಿಸಬಹುದು : ೬೩೬೪೯೨೩೯೮೫

ಸಂಪಖಂಡದಲ್ಲಿ ಸಡಗರ ಸಂಭ್ರಮದೊಂದಿಗೆ
ವಿಜೃಂಭಣೆಯಿಂದ ಜರುಗಿದ ವಾರ್ಷಿಕೋತ್ಸವಕಾರ್ಯಕ್ರಮ

ತಾಲೂಕಿನ ಸಂಪಖಂಡದಲ್ಲಿನ ಶ್ರೀ ನಾಗಚೌಡೇಶ್ವರಿ ಹಾಗೂ ದೇವಮ್ಮ ದೇವಾಲಯದಲ್ಲಿ ಪ್ರತೀ ವರ್ಷ ದಂತೆ ಈ ವರ್ಷವೂ ಸಹ ವಾರ್ಷಿಕೋತ್ಸವ ಕಾರ್ಯಕ್ರಮ ಶುಕ್ರವಾರ
ಸಡಗರ ಸಂಭ್ರಮದೊಂದಿಗೆ
ವಿಜೃಂಭಣೆಯಿಂದ ಜರುಗಿತು. ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ನಡೆದವು ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು ವಾರ್ಷಿಕೋತ್ಸವದ ಕಾರ್ಯಕ್ರಮಗಳು ಯಶಶ್ವಿಯಾಗಿ ನಡೆದವು.

ಕಲೆ ಬದುಕಿನ ಜೀವಾಳ- ಯಕ್ಷಗಾನ ಕಲಾವಿದ ಗೋಪಾಲಾಚಾರ್ ತೀರ್ಥಹಳ್ಳಿ
ಪ್ರತಿಯೊಬ್ಬ ಮನುಷ್ಯನ ಬದುಕಿನಲ್ಲೂ ಕಲೆ ಒಂದಿಲ್ಲೊಂದು ರೀತಿಯಲ್ಲಿ ಹಾಸುಹೊಕ್ಕಾಗಿ ಇರುತ್ತದೆ. ಇದು ನಮ್ಮ ಬದುಕಿಗೆ ಬೆಳಕನ್ನೂ ಸೌಂದರ್ಯವನ್ನು ಹಾಗೂ ಸಂಸ್ಕಾರವನ್ನು ಕಲ್ಪಿಸುತ್ತದೆ. ಕಲೆಯ ಜೊತೆಗಿನ ಜೀವನಯಾನ ಸಂತೃಪ್ತಿಯನ್ನು ನೀಡುತ್ತದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ತೀರ್ಥಹಳ್ಳಿ ಗೋಪಾಲಾಚಾರ್ ಹೇಳಿದರು.

ತಾಲೂಕಿನ ಹೊನ್ನೆಘಟಗಿ ನಾಗಚೌಡೇಶ್ವರಿ ದೇವಾಲಯದ ವಾರ್ಷಿಕೋತ್ಸವದ ನಿಮಿತ್ತ ಹಮ್ಮಿಕೊಂಡ ಯಕ್ಷಗಾನ ಪ್ರದರ್ಶನದ ಮಧ್ಯೆ ದೇವಾಲಯ ಸಮಿತಿಯವರು ನೀಡಿದ ಸಂಮಾನಕ್ಕೆ ಉತ್ತರಿಸುತ್ತ ದೇಶವಿದೇಶಗಳಲ್ಲಿ ಸಂಚರಿಸಿ ಪ್ರದರ್ಶನಗಳನ್ನು ನೀಡಿ ಬದುಕಿಗೊಂದು ಆಸರೆಯಾಗಿ ನಿಂತಿರುವುದು ನಮ್ಮ ಯಕ್ಷಗಾನ. ನನ್ನ ಬದುಕಿನ ಉಸಿರೇ ಆಗಿದೆ. ನಿಮ್ಮೆಲ್ಲರ ಪ್ರೀತಿಯನ್ನು ಜನ್ಮ ಜನ್ಮಾಂತರಕ್ಕಾಗುವಷ್ಟು ಕಂಡುಂಡವನು. ನಮ್ಮೆಲ್ಲರ ಅಭಿಮಾನ ನನ್ನನ್ನು ಇಷ್ಟು ಎತ್ತರಕ್ಕೆ ಏರಿಸಿದೆ. ಅದಕ್ಕಾಗಿ ನಾನು ಸದಾ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದರು. ಕಲಾಭಾಸ್ಕರ (ರಿ.) ಇಟಗಿಯವರು ಹೆಮ್ಮನಬೈಲು ಲಕ್ಷ್ಮೀನಾರಾಯಣ ಯಕ್ಷಗಾನ ಮಂಡಳಿಯ ಸಹಯೋಗದೊಂದಿಗೆ ಮಾಲೇಕೊಡಲು ಶಂಭು ಭಟ್ಟ ವಿರಚಿತ “ಚಂದ್ರಹಾಸ ಚರಿತ್ರೆ” ಹಾಗೂ ಗುಂಡೂ ಸೀತಾರಮಯ್ಯ ವಿರಚಿಸಿದ “ಕಂಸ ದಿಗ್ವಿಜಯ- ಕಂಸವಧೆ” ಎಂಬ ಪೌರಾಣಿಕ ಆಖ್ಯಾನಗಳ ಯಕ್ಷಗಾನ ಪ್ರದರ್ಶನ ನಡೆಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಹೆರಂಜಾಲು ಗೋಪಾಲ ಗಾಣಿಗ, ಸೃಜನ ಹೆಗಡೆ ಗುಬ್ಬಿಗ, ಭಾರ್ಗವ ಮುಂಡಿಗೆಸರ ಭಾಗವಹಿಸಿದರು. ಮದ್ದಳೆವಾದಕರಾಗಿ ಶಂಕರ ಭಾಗವತ ಯಲ್ಲಾಪುರ, ಮಂಜುನಾಥ ರಾವ್ ಗುಡ್ಡೆದಿಂಬ ಸಹಕರಿಸಿದರು. ಚಂಡೆವಾದನವನ್ನು ಪ್ರಸನ್ನ ಭಟ್ಟ ಹೆಗ್ಗಾರ್ ನಡೆಸಿದರು. ಪಾತ್ರವರ್ಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಪಾಲಾಚಾರ್ ಚಂದ್ರಹಾಸನಾಗಿ ಸುಂದರವಾಗಿ ಅಭಿನಯಿಸಿದರು. ದುಷ್ಟಬುದ್ದಿಯಾಗಿ ಬೆಳೆಯೂರು ಸಂಜಯನವರು ವಿಜೃಂಬಿಸಿದರು. ಹಾಸ್ಯ ಪಾತ್ರಗಳಲ್ಲಿ ಚಪ್ಪರಮನೆ ಶ್ರೀಧರ ಹೆಗಡೆ ನಗೆಗಡಲಲ್ಲಿ ತೇಲಿಸಿದರು. ವಿಷಯೆಯಾಗಿ ಇಟಗಿ ಮಹಾಬಲೇಶ್ವರ ಲಾಲಿತ್ಯದಿಂದ ನಟಿಸಿದರು. ಮದನನಾಗಿ ಅಶೋಕಭಟ್ಟರು ಅತ್ಯದ್ಭುತವಾಗಿ ರಂಗವಾಳಿದರು. ಶ್ರೀದೇವಿಯಾಗಿ ಹಾಗೂ ಮೇದಾವಿನಿಯಾಗಿ ನಾಗಪತಿ ಹೆಗಡೆ ಕೊಪ್ಪ, ಕುಳಿಂದನಾಗಿ ಪ್ರಣವ ಭಟ್ಟ , ಸುಬುದ್ದಿಯಾಗಿ ಕಟುಕನಾಗಿ ಗಣಪತಿ ಹೆಗಡೆ ಹೊನ್ನೆಕೈ, ಬಾಲ ಚಂದ್ರಹಾಸನಾಗಿ ವಿಧಾತ ಭಟ್ಟ ಮುಂತಾದವರು ಭಾಗವಹಿಸಿದರು. ಮೆಣಸಿ ಜಯಕುಮಾರ (ಕಂಸ) , ಬೊಗರಿಮಕ್ಕಿ ವೆಂಕಟೇಶ (ಮಾಗಧ), ಕನ್ನಪ್ಪ ಮಾಸ್ತರ (ಅಸ್ತಿ) ಶಿವು ಶಿರಳಗಿ (ಪ್ರಾಸ್ತಿ) ನಂದನ ಅರಷಿಣಗೋಡು (ಬಲರಾಮ) ಪ್ರಣವ ಶಿರಳಗಿ (ಶ್ರೀ ಕೃಷ್ಣ), ಮಾರುತಿ ಗೋಳಿಕೈ (ಅಕ್ರೂರ) ಮುಂತಾದವರ ಕಲಾ ಪ್ರೌಢಿಮೆಯು ಅನಾವರಣವಾಯಿತು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ...

ಕಾಗೇರಿ ವ್ಯಂಗ್ಯಕ್ಕೆ ಕಾಂಗ್ರೆಸ್‌ ಉತ್ತರ……! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-04-

ಬಿ.ಜೆ.ಪಿ. ಮಟ್ಟಿಗೆ ಉತ್ತರ ಕನ್ನಡದ ವರಿಷ್ಠರಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಧ್ಯಮಗೋಷ್ಠಿ ನಡೆಸುವುದರಲ್ಲಿ ಮಾಧ್ಯಮಗಳಿಗೆ ಬೇಕಾದಷ್ಟೇ ಚುಟುಕಾಗಿ ಉತ್ತರಿಸುವುದರಲ್ಲಿ ನಿ಼ಷ್ಣಾತರು. ಆಗಾಗ ಮಾಧ್ಯಮಗೋಷ್ಠಿ...

ನಾಯಕರಿಗೆ ಇಂಬು, ಕಾರ್ಯಕರ್ತರಿಗೆ ಚೊಂಬು!!! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-03-

ಬಿ.ಜೆ.ಪಿ. ಸೋಲಿಸಲು ಸಾಧ್ಯವಿಲ್ಲ, ಕಾಂಗ್ರೆಸ್‌ ಗೆ ಅಧಿಕಾರವಿಲ್ಲದೆ ಅಲ್ಲಿಯ ಕಾರ್ಯಕರ್ತರು ಅನಿವಾರ್ಯವಾಗಿ ಬಿ.ಜೆ.ಪಿ. ಸೇರುತ್ತಾರೆ. ಹೀಗಾದರೆ ನೀವೆಲ್ಲಾ ಕಾಂಗ್ರೆಸ್‌ ನಲ್ಲಿದ್ದು ಏನು ಪ್ರಯೋಜನ? ಎಂದು...

ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! part-02- ವೀಶ್ವೇಶ್ವರ ಹೆಗಡೆಗೆ ಮೃಧುವಾಗೇ ತಿವಿಯುತ್ತಿರುವ ಗ್ಯಾರಂಟಿಯಣ್ಣ!

ಮೇಲ್ವರ್ಗದ ಓಲೈಕೆ, ವೈದಿಕ ತುಷ್ಟೀಕರಣಗಳ ಬಿ.ಜೆ.ಪಿ. ಅನಿವಾರ್ಯವಾದಾಗ, ಮೇಲ್ನೋಟಕ್ಕೆ ಪ್ರದರ್ಶನಕ್ಕೆ ಅಹಿಂದ್‌ ಗಳನ್ನು ಬಳಸುವುದನ್ನು ಬಿಟ್ಟರೆ ಅದು ತನ್ನ ಅಜೆಂಡಾ ಉಳ್ಳವರ ಪರ ನೀತಿಯನ್ನು...

don,t do it- ಮಗುವಿನೊಂದಿಗೆ ಪೋಷಕರ ಅಪಾಯಕಾರಿ ಸೆಲ್ಫಿ; ಸ್ಮಾರ್ಟ್ ಸಿಸಿಟಿವಿಯಿಂದ ತಪ್ಪಿದ ಸಂಭಾವ್ಯ ದುರಂತ!

ಗೋಕರ್ಣ: ಪೊಲೀಸರ ಈ ಮುನ್ನೆಚ್ಚರಿಕಾ ಕ್ರಮ ಗೋಕರ್ಣದಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರು ತಮ್ಮನ್ನು ಕ್ಯಾಮರಾ ಮೂಲಕ ನೋಡುತ್ತಿದ್ದಾರೆ ಎಂದು ದಂಪತಿಗೆ ತಿಳಿದಿರಲಿಲ್ಲ. ಮಗುವಿನೊಂದಿಗೆ ಪೋಷಕರ...

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ ಮಾತು….. ಬೆoಗಳೂರಿನ ಚಿನ್ನಸ್ವಾಮಿ ಕ್ರೀಡಾoಗಣ ದಲ್ಲಿ ಕಲ್ತುಳಿತಕ್ಕೆ ಒಳಗಾಗಿ ಜೀವತೆತ್ತ ಅಕ್ಷತಾ ಪೈ ಶವ ಸಿದ್ಧಾಪುರಕ್ಕೆ ಆಗಮಿಸಿದೆ. ಮೃತ ಅಕ್ಷತಾ ಪತಿ ಆಶಯ ನಿನ್ನೆ ಅಲ್ಲಿದ್ದರು. ನಿನ್ನೆಯ ಘಟನೆಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *