ಅಪ್ಪು ಜೇಮ್ಸ್‌ ಬಗ್ಗೆ ರಾಘವೇಂದ್ರರಾಜ್‌ ಕುಮಾರ್‌ ಪ್ರತಿಕ್ರೀಯೆ

ಜೇಮ್ಸ್ ಚಿತ್ರ ಬಿಡುಗಡೆ: ಫಸ್ಟ್ ಡೇ ಫಸ್ಟ್ ಶೋ ನೋಡಿ ತಮ್ಮ ಅಪ್ಪು ಬಗ್ಗೆ ರಾಘಣ್ಣ ಹೇಳಿದ್ದೇನು?

ನನಗೆ ನನ್ನ ತಂದೆ ಡಾ ರಾಜ್ ಕುಮಾರ್ ಅವರು ಅಣ್ಣನ ಬಗ್ಗೆ ತಮ್ಮ, ತಮ್ಮನ ಬಗ್ಗೆ ಅಣ್ಣ, ಅಪ್ಪನ ಬಗ್ಗೆ ಮಕ್ಕಳು, ಮಕ್ಕಳ ಬಗ್ಗೆ ಅಪ್ಪ ಹೊಗಳಬಾರದು, ಹೇಳಿಕೊಳ್ಳಬಾರದು ಎಂದು ಹೇಳುತ್ತಿದ್ದರು, ಹಾಗಾಗಿ ಇವತ್ತು ನಾನು ಜೇಮ್ಸ್ ಚಿತ್ರ ನೋಡಿ ಅಪ್ಪುವನ್ನು ಹೊಗಳುವುದಿಲ್ಲ, ನನ್ನ ತಮ್ಮ ಏನೇ ಮಾಡಿದರೂ ನನಗೆ ಮೆಚ್ಚುಗೆಯಾಗುತ್ತದೆ, ಅವನನ್ನು ನೋಡಿ, ಅವನ ಚಿತ್ರ ನೋಡಿ ಪ್ರೇಕ್ಷಕರ

Raghavendra Rajkumar

ಬೆಂಗಳೂರು: ನನಗೆ ನನ್ನ ತಂದೆ ಡಾ ರಾಜ್ ಕುಮಾರ್ ಅವರು ಅಣ್ಣನ ಬಗ್ಗೆ ತಮ್ಮ, ತಮ್ಮನ ಬಗ್ಗೆ ಅಣ್ಣ, ಅಪ್ಪನ ಬಗ್ಗೆ ಮಕ್ಕಳು, ಮಕ್ಕಳ ಬಗ್ಗೆ ಅಪ್ಪ ಹೊಗಳಬಾರದು, ಹೇಳಿಕೊಳ್ಳಬಾರದು ಎಂದು ಹೇಳುತ್ತಿದ್ದರು, ಹಾಗಾಗಿ ಇವತ್ತು ನಾನು ಜೇಮ್ಸ್ ಚಿತ್ರ ನೋಡಿ ಅಪ್ಪುವನ್ನು ಹೊಗಳುವುದಿಲ್ಲ, ನನ್ನ ತಮ್ಮ ಏನೇ ಮಾಡಿದರೂ ನನಗೆ ಮೆಚ್ಚುಗೆಯಾಗುತ್ತದೆ, ಅವನನ್ನು ನೋಡಿ, ಅವನ ಚಿತ್ರ ನೋಡಿ ಪ್ರೇಕ್ಷಕರು, ಅಭಿಮಾನಿಗಳು ಹೇಳಬೇಕು ಇದು ಜೇಮ್ಸ್ ಚಿತ್ರ ಬಿಡುಗಡೆಯಾದ ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜನ್ಮಜಯಂತಿಯಂದು ಫಸ್ಟ್ ಡೇ ಫಸ್ಟ್ ಶೋ ನೋಡಿದ ನಂತರ ರಾಘವೇಂದ್ರ ರಾಜ್ ಕುಮಾರ್ ಹೇಳಿದ ಮಾತು. 

ಇಂದು ಜನರ ಪ್ರತಿಕ್ರಿಯೆ ಮುಖ್ಯವಾಗುತ್ತದೆ, ಥಿಯೇಟರ್ ನ ಒಳಗೆ ಬರುತ್ತಿದ್ದಂತೆ ನನ್ನ ಹೃದಯ ನನ್ನ ತಮ್ಮ, ನನ್ನ ತಮ್ಮ ಎಂದು ಹೊಡೆದುಕೊಳ್ಳುತ್ತಿರುತ್ತದೆ, ಭಾವನೆಯನ್ನು ತಡೆದುಕೊಳ್ಳಲು ಆಗುವುದಿಲ್ಲ, ಜನರನ್ನು ಕೇಳಿ, ನನಗೆ ಇವತ್ತು ಇದು ಸಿನಿಮಾ ಅಲ್ಲ, ಭಾವನೆ ಎಂದರು.

ಪ್ರತಿಯೊಬ್ಬರಿಗೂ ಜೀವನದಲ್ಲಿ ಆರಂಭ-ಕೊನೆ ಎಂಬುದು ಇರುತ್ತದೆ. ನಮಗೆ ಅಪ್ಪುವನ್ನು ಕಳೆದುಕೊಂಡ ನೋವು ಇರುತ್ತದೆ, ಹಲವು ಮನೆಗಳಲ್ಲಿ 20 ವರ್ಷದಲ್ಲಿ, 25 ವರ್ಷದಲ್ಲಿ, 30 ವರ್ಷದಲ್ಲಿ ಹೋಗಿಬಿಡುತ್ತಾರೆ, ಅಂಥವರ ಕಷ್ಟ, ನೋವು ನೋಡಿ, ನಮಗೆ ನಮ್ಮ ಮನೆಯ ಸದಸ್ಯರನ್ನು ಕಳೆದುಕೊಂಡಾಗ ನೋವು ಗೊತ್ತಾಗುವುದು, ಎಲ್ಲರಿಗೂ ನೋವಾಗಿದೆ, ನಮಗೂ ಕಷ್ಟವಾಗುತ್ತಿದೆ, ನೋವನ್ನು ನುಂಗಿಕೊಂಡು ಜೀವನ ನಡೆಸಿಕೊಂಡು ಹೋಗಬೇಕಷ್ಟೆ, ನನ್ನ ತಮ್ಮನ ಸಿನಿಮಾ, ಮಾಡಿರುವ ಕೆಲಸಗಳು ಜೀವಂತವಾಗಿರುತ್ತದೆ, ಮುಂದಿನ ಪೀಳಿಗೆ ಬಂದು ನೋಡಿ ಹೊಗಳುತ್ತದೆ ಎಂದರು.

ಅಪ್ಪು ಜೀವನದ ಕೊನೆಯ ವರ್ಷಗಳಲ್ಲಿ ಆಯ್ಕೆಮಾಡಿಕೊಂಡ ರಾಜಕುಮಾರ, ಯುವರತ್ನ, ಇನ್ನು ಬಿಡುಗಡೆಯಾಗಬೇಕಿರುವ ಗಂಧದ ಗುಡಿಯಂತಹ ಚಿತ್ರಗಳು ಅದ್ಭುತವಾಗಿತ್ತು ಎಂದು ರಾಘಣ್ಣ ಹೊಗಳಿದರು. (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *