ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ ಗೆಳೆಯ

(ಹಿಂದಿಮೂಲ: ನಿಖಿಲ್ ಸಚನ್, ಕನ್ನಡಕ್ಕೆ: ಬೊಳುವಾರು)——————————————–

—ನನ್ನ ಗೆಳೆಯನೊಬ್ಬ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ.

ಅಮೀರ್ ಖಾನ್, ಶಾರೂಕ್ ಖಾನ್, ಸಲ್ಮಾನ್ ಖಾನರೆಂದರೆ ಬಹಳ ಅಭಿಮಾನ ಗೆಳೆಯನಿಗೆ;

ಅವರಾರಿಗೂ ಹೆದರುತ್ತಿರಲಿಲ್ಲ; ಕೇವಲ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ.

ಮಧುಬಾಲಾ, ನರ್ಗೀಸ್, ವಹೀದಾರನ್ನು ಗೆಳೆಯ ಆರಾಧಿಸುತ್ತಿದ್ದ.ಅವರನ್ನು ಕಪ್ಪು ಬಿಳುಪು ಬಣ್ಣಗಳಲ್ಲಿ ಕಾಣಬಯಸುತ್ತಿದ್ದ.ಮಮ್ತಾಜ್, ಶಬಾನಾ, ಫರೀದಾ, ಝೀನತ್ ಯಾರಿಗೂ ಹೆದರುತ್ತಿರಲಿಲ್ಲ.ಕೇವಲ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ.

ಬೇಸರವಾದಾಗ ಮಹಮದ್ ರಫಿ ಹಾಡು ಆಲಿಸುತ್ತಿದ್ದ.ಸಾಹಿರ್ ಕವನ ಓದುತ್ತಾ ಆನಂದಭಾಷ್ಪ ಸುರಿಸುತ್ತಿದ್ದ.ಅವರಾರಿಗೂ ಗೆಳೆಯ ಹೆದರುತ್ತಿರಲಿಲ್ಲ.ಕೇವಲ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ.

ಪ್ರತಿ ಜನವರಿ ಇಪ್ಪತ್ತಾರರಂದು ‘ಸಾರೇ ಜಹಾಂಸೆ’ ಹಾಡುತ್ತಿದ್ದ.ಬಿಸ್ಮಿಲ್ಲಾ ಖಾನರ ಶೆಹನಾಯಿ, ಝಾಕೀರರ ತಬಲಾ ಕೇಳುತ್ತಿದ್ದ.ಅವರಾರಿಗೂ ಗೆಳೆಯ ಹೆದರುತ್ತಿರಲಿಲ್ಲ.ಕೇವಲ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ.

ಗೆಳೆಯ ಕ್ರಿಕೆಟ್ ಆಟವೆಂದರೆ ಎಲ್ಲವನ್ನೂ ಮರೆತುಬಿಡುತ್ತಿದ್ದ.ಅಜರುದ್ದೀನ್ ಬ್ಯಾಟಿಂಗೆಂದರೆ ಎದ್ದು ಕುಣಿಯುತ್ತಿದ್ದ.ಝಹೀರ್ ಖಾನ್, ಇರ್ಫಾನ್ ಅವರಾರಿಗೂ ಹೆದರುತ್ತಿರಲಿಲ್ಲ; ಕೇವಲ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ.

ಗೆಳತಿಯ ಪ್ರೀತಿಯ ಅಮಲಿನಲ್ಲಿ ಗಾಲಿಬರ ಗಜಲ್ ಹಾಡುತ್ತಿದ್ದಫೈಝರ ಶಾಹರೀ ಗುಣುಗುಣಿಸುತ್ತಿದ್ದ.ಅವರಲ್ಲಿ ಯಾರಿಗೂ ಇವನು ಹೆದರುತ್ತಿರಲಿಲ್ಲ.ಕೇವಲ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ.ಅವನಿಗರಿವಿಲ್ಲದೇ ಪ್ರತಿಯೊಬ್ಬ ಮುಸ್ಲಿಮನನ್ನೂ ಪ್ರೀತಿಸುತ್ತಿದ್ದ.

ಅದರೆ, ಸುದ್ದಿಗಳು ಹಡೆದ ಭೂತಕ್ಕೆ ಬಲಿಯಾಗಿದ್ದ.ಆದ್ದರಿಂದಲೇ ಮುಸಲರ ಕೇರಿಗೆ ಹೋಗಲು ಹೆದರುತ್ತಿದ್ದ.ಅವನಿಗರಿವಿಲ್ಲದೇ ಮುಸಲ್ಮಾನರೆಂದರೆ ಬಿಚ್ಚಿಬೀಳುತ್ತಿದ್ದ.

ಸಿದ್ದಾಪುರ: ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಯಶಸ್ವಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿ ರುವ ಲಾನ್ಸ್ ನಾಯಕ್ ವಿನಾಯಕ್ ಶಿವ ಮಡಿವಾಳ ಹೆರವಳ್ಳಿ ಯವರಿಗೆ ತಾಲೂಕಾ ಮಡಿವಾಳ ಸಂಘದ ವತಿಯಿಂದ ಅಭಿನಂದನಾ ಕಾರ್ಯಕ್ರಮ ವನ್ನು ಹೆರವಳ್ಳಿಯ ಮಾಚಿದೇವರ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ದಲ್ಲಿ ಶಂಕರ್ ಹಿತ್ಲಕೊಪ್ಪ ಮಾತನಾಡಿ ಸಾಮರ್ಥ್ಯ, ಕೌಶಲ್ಯ ಇರುವವರು ಸೈನ್ಯ ಸೇರಿ ದೇಶದ ಸೇವೆ ಸಲ್ಲಿಸುತ್ತಾರೆ. ತಮ್ಮ ಮಕ್ಕಳ ನ್ನು ಸೇನೆಗೆ ಸೇರಿಸಲು ಅವರ ತಂದೆ ತಾಯಿ ಕುಟುಂಬದ ತ್ಯಾಗ ದೊಡ್ಡದು. ವಿನಾಯಕ ರವರ ದೇಶ ಸೇವೆ ಸಲ್ಲಿಸಿ ಊರಿಗೆ ಆಗಮಿಸಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ ಎಂದರು.
ಗ್ರಾಮ ಪಂಚಾಯತ್ ಸದಸ್ಯ ಕೃಷ್ಣ ಮೂರ್ತಿ ಮಾಡಿವಾಳ ಮಾತನಾಡಿ ವಿನಾಯಕ ರವರು ಸ್ವಾರ್ಥ ವಿಲ್ಲದೆ ದೇಶ ಸೇವೆ ಗೆ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ತ್ಯಾಗ ದೊಡ್ಡದು. ಶೃದ್ಧೆ, ನಿಷ್ಠೆ ಯಿಂದ ಕಷ್ಟ ಗಳನ್ನು ಎದುರಿಸಿ ದೇಶದ ರಕ್ಷಣೆ ಮಾಡಿದ್ದರಿಂದ ನಾವು ನೆಮ್ಮದಿ ಯ ಜೀವನ ನಡೆಸುತ್ತಿದ್ದೇವೆ. ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಹಾರಿಸಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಪಿ ಬಿ ಹೊಸೂರ ಮಾತನಾಡಿ ಸೇನೆಯಲ್ಲಿ ಸೇವೆ ಸಲ್ಲಿಸುವಾಗ ಪ್ರತಿದಿನ ಪುನರ್ಜನ್ಮ ವಾಗುತ್ತದೆ. ತಂದೆ ತಾಯಿಗಳು ತಮ್ಮ ಸ್ವಾರ್ಥವನ್ನು ಮರೆತು ಮಗನನ್ನು ಸೈನ್ಯ ಕ್ಕೆ ಕಳಿಸಿದ್ದಕ್ಕೆ ಧನ್ಯವಾದಗಳನ್ನ ತಿಳಿಸಿ ಶುಭ ಹಾರೈಸಿದರು.
ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ ಲಾನ್ಸ್ ನಾಯಕ್ ವಿನಾಯಕ್ ಶಿವ ಮಡಿವಾಳ ರವರು ಅಭಿನಂದನೆ ಸ್ವೀಕರಿಸಿ ಮಾತನಾಡಿ ಸೇವಾವಧಿಯಲ್ಲಿಯ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಪಟ್ಟಣ ಪಂಚಾಯತ್ ಸದಸ್ಯ ವಿನಯ ಹೊನ್ನೆಗುಂಡಿ ಮಾತನಾಡಿದರು. ಗ್ರಾಮ ಕಮಿಟಿಯ ಅಧ್ಯಕ್ಷ ಕೃಷ್ಣ ಮಾಡಿವಾಳ, ಗಣಪತಿ ಹೊಸಳ್ಳಿ, ಜೈರಾಮ ಹೊಸೂರ, ಗ್ರಾಮಸ್ಥರು ಉಪಸ್ಥಿತರಿದ್ದರು.
ತಾಲೂಕು ಮಡಿವಾಳ ಸಂಘದ ಕಾರ್ಯದರ್ಶಿ ಸುರೇಶ್ ಮಡಿವಾಳ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸದಾನಂದ ಎಸ್ ಗೌಡ ಸ್ವಾಗತಿಸಿ, ನಿರೂಪಿಸಿದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *