ಮೊಹರೊತ್ತಲು ಮೇಲೊಬ್ಬ ಮಹಾರಾಯನಿದ್ದಾನೆ…


ಇವರ ಒಂದು ಕಲಾಕೃತಿ ಹೀಗೆ ಹೇಳುತ್ತದೆ
“ಬಂಧುಗಳೇ.. ನನಗೆ ಯಾವುದೇ ಪಕ್ಷ ಪಂಥ ಜಾತಿ ಧರ್ಮ ಲಿಂಗಗಳ ಮೊಹರೊತ್ತಬೇಡಿ, ದಯವಿಟ್ಟು ನನ್ನನ್ನು ಮನುಷ್ಯನ್ನನ್ನಾಗಿ ನೋಡಿ, ಹೃದಯದ ಪ್ರೀತಿಕೊಡಿ, ಮೋಹರೊತ್ತಲು ಮೇಲೊಬ್ಬ ಮಹಾರಾಯನಿದ್ದಾನೆ.”

ವಿಜಯ ಕಿರೇಸೂರ ಅವರು ಪ್ರಗತಿಪರ ಆಲೋಚನೆಯ ಚಿತ್ರಕಲಾ ಶಿಕ್ಷಕರು. ಗದಗ ಹತ್ತಿರದ ನಿರಲಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ತುಂಬಾ ವಿಶಿಷ್ಟ ಕನಸಿನೊಂದಿಗೆ ಕಾವ್ಯದಂತಹ ಚಿತ್ರಗಳನ್ನು ಬರೆಯುತ್ತಿದ್ದಾರೆ. ನಾಡಿನ ದಾರ್ಶನಿಕರ ಪುಟ್ಟ ಪುಟ್ಟ ಸಂದೇಶಗಳಿಗೆ ಕಲೆಯ ಸ್ಪರ್ಶ ನೀಡಿ ‘ಮಾತುಗಳು ಮಾರಾಟಕ್ಕಿವೆ’ ಶಿರ್ಷಿಕೆಡಿಯಲ್ಲಿ ಮಾತುಮಾರಿ ಜನಜಾಗೃತಿ ಮೂಡಿಸಿದ್ದಾರೆ.
ಚಿತ್ರಕಲಾ ಪದವಿಯಲ್ಲಿ ಚಿನ್ನದ ಪದಕದೊಂದಿಗೆ ವಿಜೇತರಾಗಿರುವ ಇವರು ನಾಡಿನ ಹಲವಡೆ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ, ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಚಿತ್ರ ಬರೆಯುವುದರ ಜೊತೆಜೊತೆಗೆ ಮಕ್ಕಳಲ್ಲಿ ವೈಚಾರಿಕ ಹೊಳಹುಗಳನ್ನು, ಚಿತ್ರದಾಚೆಗಿರುವ ಚಿಂತನೆಗಳನ್ನು ಬಿತ್ತುವ ಕೃಷಿಕರು. ಇವರ ರೇಖಾಚಿತ್ರಗಳು, ಕಲಾಕೃತಿಗಳು ತಕ್ಷಣ ನೋಡುಗರ ಮನಸೆಳೆಯುತ್ತವೆ.
ತಮ್ಮದೇ ಆದ ಒಂದು ಪುಟ್ಟ ಕಲಾಗ್ಯಾಲರಿಯ ಕನವರಿಕೆಯೊಂದಿಗೆ, ಜನಸಾಮಾನ್ಯರಿಗೂ ಕಲಾಕೃತಿಗಳನ್ನು ಅರ್ಥೈಸಬೇಕೆಂಬ ಸದಾಶಯದೊಂದಿಗೆ ಶ್ರಮಿಸುತ್ತಿದ್ದಾರೆ. ಕಲೆಯೊಳಗಡಗಿರುವ ಸಂಪ್ರದಾಯ ಮೌಢ್ಯದ ಚೌಕಟ್ಟನ್ನು ಮುರಿದು ಕಟ್ಟುವ ಕಾಯಕದಲಿ ತಲ್ಲೀನರಾಗಿದ್ದಾರೆ. ವೈಚಾರಿಕ ಚಿಂತನೆಯುಳ್ಳ ಕಿರೇಸೂರಂತಹ ಶಿಕ್ಷಕರ ಸಂಖ್ಯೆ ಹೆಚ್ಚೆಚ್ಚು ಹಿರಿದಾಗಬೇಕಿದೆ.
ಇವರ ಒಂದು ಕಲಾಕೃತಿ ಹೀಗೆ ಹೇಳುತ್ತದೆ
“ಬಂಧುಗಳೇ.. ನನಗೆ ಯಾವುದೇ ಪಕ್ಷ ಪಂಥ ಜಾತಿ ಧರ್ಮ ಲಿಂಗಗಳ ಮೊಹರೊತ್ತಬೇಡಿ, ದಯವಿಟ್ಟು ನನ್ನನ್ನು ಮನುಷ್ಯನ್ನನ್ನಾಗಿ ನೋಡಿ, ಹೃದಯದ ಪ್ರೀತಿಕೊಡಿ, ಮೋಹರೊತ್ತಲು ಮೇಲೊಬ್ಬ ಮಹಾರಾಯನಿದ್ದಾನೆ.” ಅಪ್ಪಟ ಜೀವಪರ ಕಾಳಜಿಯುಳ್ಳ ವಿಜಯ ಕಿರೇಸೂರವರ ಕಲಾಪಯಣ ಯಶಸ್ವಿಯಾಗಲಿ.
ಕೆ.ಬಿ.ವೀರಲಿಂಗನಗೌಡ್ರ.
ಎಸ್.ಆರ್.ಜಿ.ಹೆಚ್.ಎಂ ಪ್ರೌಢಶಾಲೆ, ಸಿದ್ದಾಪುರ-581355. ಉ.ಕ ಜಿಲ್ಲೆ. ದೂ-9448186099.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *