ಕೆರೆಭೇಟೆ… ಹೊಡೆತ ತಿಂದೂ ಮಾನವೀಯತೆ ಮೆರೆದ ಪೊಲೀಸರು!

ಕಾನಗೋಡು ಕೆರೆಭೇಟೆ- ಒಂದು ಅಳತೆ (ತೂಕದ) ಯಂತ್ರ, ಒಂದು ಝೆರಾಕ್ಸ್‌ ಯಂತ್ರದೊಂದಿಗೆ ಮೂರು ಜನರ ಬಂಧನ ೨೪ ಕ್ಕೇರಿದ ಬಂಧಿತರ ಸಂಖ್ಯೆ

ರಾಜ್ಯವ್ಯಾಪಿ ಸುದ್ದಿಯಾದ ಕಾನಗೋಡು ಕೆರೆಭೇಟೆ ಪ್ರಕರಣದ ದೊಂಬಿ,ದರೋಡೆ ಆರೋಪಿಗಳನ್ನಾಗಿ ಈವರೆಗೆ ೨೪ ಜನರನ್ನು ಬಂಧಿಸಿದ ಪೊಲೀಸರು ಆರೋಪಿಗಳ ಹುಡುಕಾಟಕ್ಕಾಗಿ ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಕೆರೆಭೇಟೆಯ ರವಿವಾರ ದುಷ್ಕರ್ಮಿಗಳು ಅಪಹರಿಸಿದ ಕೆಲವು ವಸ್ತುಗಳು ಮರಳಿವೆ. ಘಟನೆಯ ಮಾರನೇ ದಿವಸ ಕಾನಗೋಡಿಗೆ ಭೇಟಿ ನೀಡಿದ್ದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ನಾಯ್ಕ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದರು. ಇಂದು ಸ್ಥಳಿಯ ಶಾಸಕ, ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಾನಗೋಡಿಗೆ ಭೇಟಿ ನೀಡಿದ್ದರು. ಈ ವರ್ತಮಾನಗಳ ನಡುವೆ ಸೊರಬಾದಲ್ಲಿ ಪ್ರತಿಭಟನೆ ನಡೆಸಿದ ಮೀನು ಭೇಟೆಗಾರರು ಕಾನಗೋಡಿನಲ್ಲಿ ಗ್ರಾಮಸ್ಥರು, ಸಂಘಟಕರ ತಪ್ಪಿನಿಂದಾಗಿ ರಾದ್ಧಾಂತವಾಗಿದೆ. ಆ ಘಟನೆಯಲ್ಲಿ ಪೊಲೀಸರ ತಪ್ಪಿಲ್ಲ, ಕೆರೆಭೇ ಟಿಗೆ ಬಂದವರು, ಬಂಧಿತರಿಗೆ ಕಿರುಕುಳ ಕೊಡಬೇಡಿ ಎಂದು ಮನವಿ ನೀಡಿ ತಹಸಿಲ್ಧಾರರ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.

ಈ ವಿದ್ಯಮಾನಗಳು ಒಂದೆಡೆಯಾದರೆ ಕೆರೆಭೇಟೆಯಲ್ಲಿ ರಗಳೆ ಮಾಡಿ ರಾದ್ಧಾಂತ ಮಾಡಿದವರು ಬೇರೆ ಕೆಲವು ಅಮಾಯಕರು ಪೊಲೀಸರ ಕೈಗೆ ಸಿಕ್ಕು ತೊಂದರೆಗೆ ಒಳಗಾದ ಘಟನೆಗಳೂ ವರದಿಯಾಗಿವೆ. ಕೆಲವರನ್ನು ಕೂಲಂಕುಶವಾಗಿ ತನಿಖೆ ನಡೆಸಿ ನಿರಪರಾಧಿಗಳೆಂದು ಬಿಡುಗಡೆ ಮಾಡಿರುವ ಮಾಹಿತಿಯೂ ಚರ್ಚೆಯಾಗುತ್ತಿದೆ.

ಇದರ ಮಧ್ಯೆ ಕಾನಗೋಡು ತವರುಮನೆಯಾಗಿರುವ ಮಹಿಳೆಯ ಕುಟುಂಬ ತಮ್ಮ ಮಕ್ಕಳನ್ನು ಕಾನಗೋಡಿನ ಶಾಲೆಗೆ ಬಿಡಲು ಶಿಕಾರಿಪುರದಿಂದ ಬಂದವರು ಗಂಡ ನಾಪತ್ತೆಯಾಗಿರುವುದನ್ನು ತಿಳಿದು ಸಿದ್ದಾಪುರ ಪೊಲೀಸ್‌ ಠಾಣೆಗೆ ಬಂದರೆ ಅಲ್ಲಿ ಕೆರೆಭೇಟೆ ರಾದ್ಧಾಂತದ ಕಾರಣಕ್ಕೆ ಬಂಧಿತರಾವರ ಜೊತೆ ಶಿಕಾರಿಪುರದ ಚಂದ್ರು ಸೇರಿದ್ದರು.

ಈ ಬಗ್ಗೆ ಆತಂಕಗೊಂಡ ಚಂದ್ರು ಪತ್ನಿ ತನ್ನ ಇಬ್ಬರು ಚಿಕ್ಕ ಮಕ್ಕಳು,ವಯೋವೃದ್ಧ ತಾಯಿಯೊಂದಿಗೆ ಪೊಲೀಸ್‌ ಠಾಣೆ ಎದುರು ನಿಂತು ಅಳತೊಡಗಿದ್ದರು. ಈ ಸಂದರ್ಭದಲ್ಲಿ ಬಂದ ಪತ್ರಕರ್ತರು ಗಾಯಗೊಂಡಿದ್ದ ಪಿಎಸ್.ಆಯ್.‌ ಹನುಮಂತಪ್ಪ ಕುಂಬಾರ ಬಳಿ ವಾಸ್ತವ ತಿಳಿಸಿದಾಗ ಅವರು ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ವಿಚಾರಣೆ ನಂತರ ಚಂದ್ರು ರನ್ನು ಬಿಡುಗಡೆ ಮಾಡಿದರು. ಹೀಗೆ ಗಲಾಟೆ ನಂತರ ನೋವಿನ ಸಂದರ್ಭದಲ್ಲೂ ಪೊಲೀಸರು ನಿರಪರಾಧಿಗಳನ್ನು ಬಂಧಿಸದೆ ಮಾನವೀಯತೆ ಮೆರೆದ ವಿಷಯ ಸುದ್ದಿಯಾಗಲಿಲ್ಲ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *