public intrest -ಕರ್ನಾಟಕ ಸರ್ಕಾರದ್ದೇ ದೊಡ್ಡ ಸಮಸ್ಯೆ!

ಕೃಷಿಕರ ಭೂಮಿಯ ಪಹಣಿ ಪತ್ರಿಕೆಯಲ್ಲಿ ಕರ್ನಾಟಕ ಸರಕಾರವೆಂದು ನಮೂದಾಗಿದ್ದರಿಂದ ರೈತರಿಗೆ ಹಲವಾರು ತೊಂದರೆ ಉಂಟಾಗುತ್ತಿದ್ದು ತಿದ್ದುಪಡಿ ಮಾಡುವಂತೆ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ರಾಜ್ಯಪಾಲರಿಗೆ ಸಾರ್ವಜನಿಕ ಹಿತಾಸಕ್ತಿ
ಹೋರಾಟಗಾರರ ವೇದಿಕೆ (ರಿ) ವತಿಯಿಂದ ಮನವಿ ನೀಡಿದರು




ಕರ್ನಾಟಕ ರಾಜ್ಯದಲ್ಲಿ ಅದರಲ್ಲಿಯೂ ಉತ್ತರ ಕರ್ನಾಟಕದ, ಉತ್ತರ ಕನ್ನಡ ಜಿಲ್ಲೆಯಲ್ಲಿಯ ಹಲವಾರು ಕೃಷಿಕರ ಪಹಣಿ ಪತ್ರಿಕೆಯ ಕಾಲಂ ನಂ.9 ರಲ್ಲಿ ಕರ್ನಾಟಕ ಸರಕಾರವೆಂದು ನಮೂದಾಗಿದ್ದು ಇರುತ್ತದೆ. ರೈತರೇ ಆಗಿದ್ದ ಇವರುಗಳ ಪಹಣಿಯಲ್ಲಿ ಕರ್ನಾಟಕ ಸರಕಾರ ಎಂದು ನಮೂದಾಗಿದ್ದರಿಂದ ಸರಕಾರದಿಂದ ಯಾವ ಪ್ರಯೋಜನ ಸಿಗುತ್ತಲಿಲ್ಲ. ಭೂಮಿಯನ್ನು ಅಭಿವೃದ್ಧಿ ಪಡಿಸಲು ಸಾಲ ಸಿಗುವುದಿಲ್ಲ. ಹಾಗೂ ಹಿಸ್ಸೆ ವಾಂಟಣಿಗೆ ಮಾಡಿಕೊಳ್ಳಲು ಬರುವುದಿಲ್ಲ. ಡೀಡು ವತ್ತೆ ಮಾಡಲು ಮಾರಾಟ ಮಾಡಲು ಬರುವುದಿಲ್ಲ ಎಂದು ಸರಕಾರಿ ಅಧಿಕಾರಿಗಳು ಬಾಯಿ ಮಾತಿನಲ್ಲಿ ತಿಳಿಸುತ್ತಲಿದ್ದಾರೆ. ಅದು ಶಾಸನ ಸಭೆಯಲ್ಲಿ ಶಾಸನವಾಗಿ ಮಾರ್ಪಾಡಾಗಬೇಕೆಂದು ಕಳೆದ 15-20 ವರ್ಷಗಳಿಂದ ಹೇಳುತ್ತಾ ಬಂದಿದ್ದಾರೆ.  ಈ ಬಗ್ಗೆ ಹಲವಾರು ರೈತರು ಸರ್ಕಾರಕ್ಕೆ ಭಿನ್ನ ವತ್ತಳೆಗಳ ಮೂಲಕ ಕೇಳಿಕೊಂಡಿದ್ದು ಯಾವುದೇ ಪ್ರಯೋಜನವಾಗಿರುವುದಿಲ್ಲ.  ನಮ್ಮ ಸಂಸ್ಥೆಯು ಈ ವಿಷಯದಲ್ಲಿ ಈ ಹಿಂದೆ ಪ್ರಯತ್ನಿಸಿದರೂ ಪ್ರಯೋಜನ ಬಾರದೇ ಇರುವುದರಿಂದ ಈಗ ತಮ್ಮೆಲ್ಲರ ಸಹಕಾರದಿಂದ ಒಗ್ಗೂಡಿ 

ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳಲ್ಲಿ ಒತ್ತಡ ತಂದು ಹೋರಾಟ ಮಾಡುವುದೊಂದೇ ದಾರಿ ಎಂದು ಮನಗಂಡು ಈ ವಿಷಯದಲ್ಲಿ ತಜ್ಞರಾದ ಹಿರಿಯ ನ್ಯಾಯವಾದಿಗಳು, ಮಾಜಿ ಭೂ ನ್ಯಾಯಮಂಡಳಿಯ ಸದಸ್ಯರುಗಳು ನಿವೃತ್ತ ಅಧಿಕಾರಿಗಳನ್ನೊಳಗೊಂಡ ಸಂಘಟನೆಯನ್ನು ಮಾಡಿಕೊಂಡು ಹೋರಾಟಕ್ಕೆ ಇಳಿಯಬೇಕಾದ್ದು ಅನಿವಾರ್ಯವಾಗಿದೆ. ರೈತರ ಪಹಣಿಯಲ್ಲಿ ಮೂಲ ಗೇಣಿದಾರ , ಡಿಕ್ಲರೇಷನ್ ತಿರಸ್ಕೃತರಾದವರು ಡಿಕ್ಲರೇಶನ್ ಕೊಡದೇ ಇದ್ದವರು ಫಾರ ನಂ 7 ಹಾಗೂ 7ಎ , ಫಾರಂ ನಂ 7ಎ ನ್ನು ತುಂಬಿ ತೀರ್ಮಾನವಾಗಿ ಇನ್ನೂ ಖಾತೆಗೆ ಹೆಸರು ಬರೆದೇ ಇರುವವರು ರೈತರ ಯುನಿಟ್ ಮೀರಿ ತಿರಸ್ಕೃತರಾದವರ ಸಮಸ್ಯೆಗಳು ಇರುತ್ತವೆ. ರೈತರು ಈಗ 15-20 ವರ್ಷಗಳಿಂದ ಈ ತರಹದ ತೊಂದರೆಗಳನ್ನು ಅನುಭವಿಸುತ್ತಲಿದ್ದು ರೈತರ ಸ್ಥಿತಿ ಚಿಂತಾಜನಕವಾಗಿದೆ. ಅದರಲ್ಲಿ ಇವರುಗಳ ಹಿರಿಯರು ಮೃತರಾದ ಮೇಲೆ ಉಳಿದವರಿಗೆ ಸರಳ ವಾರಸಾ ಮಾಡಲು ಸಹ ಬರುವುದಿಲ್ಲ. ಕಾರಣ ತಾವು ಈ ಬಗ್ಗೆ ಮುತುವರ್ಜಿವಹಿಸಿ (ತೊಡಕಾಗಿರುವ ಕಾನೂನನ್ನು) ಶೀಘ್ರ ತಿದ್ದುಪಡಿ ಮಾಡಲು ವಿನಂತಿಸುತ್ತೇವೆ. ಈ ಸಂದರ್ಭದಲ್ಲಿ

ಅಧ್ಯಕ್ಷರು ಕರ್ನಾಟಕ ಸಾರ್ವಜನಿಕ ಹಿತಾಸಕ್ತಿ
ಹೋರಾಟಗಾರರ ವೇದಿಕೆ ಯ ಅಧ್ಯಕ್ಷ ರಾದ
ಎಸ್.ಎ ಪಾಟೀಲ ಬಂದೀಸರ ಹಾಗೂ ರೈತರು ಉಪಸ್ಥಿತರಿದ್ದರು

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *