

ಪಠ್ಯ ವಾಪಸ್,ಪ್ರಶಸ್ತಿ ವಾಪಸ್ ಇವುಗಳೆಲ್ಲ ಅರ್ಥವಿಲ್ಲದ ಪ್ರತಿಭಟನೆಗಳು ಎಂದು ಲೇವಡಿಮಾಡಿರುವ ರಾಜ್ಯ ಸಮಾಜಕಲ್ಯಾಣ ಸಚಿವ ಶ್ರೀನಿವಾಸ ಪೂಜಾರಿ ಪಠ್ಯಪರಿಷ್ಕರಣೆಯ ವಿವಾದ ಮುಗಿದ ವಿಷಯವಾಗಿದ್ದು ಶಾಲೆಗಳಿಗೆ ಪಠ್ಯಗಳನ್ನು ವಿತರಿಸುತಿದ್ದೇವೆ. ಈ ಬಗ್ಗೆ ಪ್ರತಿಭಟನೆಗಳಿಗೆ ಅರ್ಥವಿಲ್ಲ ಅಂಥ ಪ್ರತಿಭಟನೆಗಳನ್ನು ಲೆಕ್ಕಿಸುವುದೂ ಇಲ್ಲ ಎಂದು ಕಡಕ್ ಆಗಿ ಪ್ರತಿಕ್ರೀಯಿಸಿದ್ದಾರೆ


.
ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ಮಾತನಾಡಿದ ಅವರು ಗಡ್ಡ ಬಿಟ್ಟು ಚೀಲ ಹಾಕಿಕೊಂಡು ಸಮಾಜ ಬದಲಾಯಿಸುತ್ತೇವೆ ಎನ್ನುವ ಪ್ರಗತಿಪರರ ಭ್ರಮೆ ಸತ್ಯವಾಗುವುದಿಲ್ಲ. ಪ್ರಗತಿಪರರು ಸರ್ಕಾರ ವ್ಯವಸ್ಥೆಯನ್ನು ವಿರೋಧ ಮಾಡಿದರೆ ರಾಜ,ಮಂತ್ರಿ,ವ್ಯವಸ್ಥೆ ಸರಿದಾರಿಯಲ್ಲಿದೆ ಎಂದು ತಿಳಿಯಬೇಕು ಎಂದು ಪ್ರಗತಿಪರರನ್ನು ಕಾಲೆಳೆದಿರುವ ಪೂಜಾರಿ ಚಾಣಕ್ಯರ ಮಾತನ್ನು ಉಲ್ಲೇಖಿಸಿದ್ದಾರೆ. ಇದರಿಂದ ಪಠ್ಯಪರಿಷ್ಕರಣೆಯ ವಿವಾದದ ಹಿನ್ನೆಲೆಯಲ್ಲಿ ಪ್ರಗತಿಪರರ ಬಗ್ಗೆ ಲೇವಡಿ ಮಾಡಿ ಹೊಸ ವಿವಾದ ಹುಟ್ಟುಹಾಕಿದಂತಾಗಿದೆ.
ಪಠ್ಯಪರಿಷ್ಕರಣೆ,ಕಾಂಗ್ರೆಸ್ ನಾಯಕರ ಮೇಲಿನ ತನಿಖೆ ಈ ವಿಚಾರಗಳಲ್ಲಿ ರಾಜಕೀಯ ನಡೆಯುತ್ತಿದೆ ಎಂದಿರುವ ಸಚಿವರು ಇವನ್ನೆಲ್ಲಾ ಲೆಕ್ಕಿಸದೆ ಮೋದಿ ನೇತೃತ್ವದಲ್ಲಿ ಸರ್ಕಾರ ಸುಸ್ಥಿರವಾಗಿದೆ ಎಂದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
