ಇಂದು ಡಿ.ದೇವರಾಜ ಅರಸು ಅವರ 107ನೇ ಜನ್ಮದಿನಾಚರಣೆ.

ಮಹಾಪುರುಷರ ಹುಟ್ಟುಹಬ್ಬದ ದಿನ ಗುಣಗಾನ ನಡೆಯುತ್ತಾ ಇರುತ್ತದೆ.

ಅರಸು ಅವರನ್ನು ನಿಜವಾಗಿಯೂ ಗೌರವಿಸುವವರು, ಕಷ್ಟಕಾಲದಲ್ಲಿಯೂ ಕೈಬಿಡದೆ ಜೊತೆಯಲ್ಲಿ ನಿಂತವರು, ರಾಜಕೀಯವಾಗಿ ವಿರುದ್ಧ ದಿಕ್ಕಿನಲ್ಲಿದ್ದರೂ ಅರಸು ಅವರನ್ನು ಸೈದ್ಧಾಂತಿಕವಾಗಿ ಒಪ್ಪುವವರ ಜೊತೆಯಲ್ಲಿ,

ಅರಸು ಬೆನ್ನಿಗೆ ಇರಿದವರು, ಕಷ್ಟಕಾಲದಲ್ಲಿ ಕೈಬಿಟ್ಟು ಹೋದವರು, ಅವರಿದ್ದ ಪಕ್ಷದಲ್ಲಿಯೇ ಇದ್ದು ಅವರ ವಿರುದ್ಧ ಮಾತನಾಡುತ್ತಿರುವವರು…

ಹೀಗೆ ತರಹೇವಾರಿ ಜನ ಇಂದು ದೇವರಾಜ ಅರಸು ಅವರನ್ನು ಹೊಗಳಿ ಹಾಡುತ್ತಿದ್ದಾರೆ.

ಒಬ್ಬ ಮಹಾಪುರುಷನಿಂದ ಕಲಿಯಬೇಕಾಗಿರುವುದು ಕೇವಲ ಅವರ ಶಕ್ತಿ-ಸಾಮರ್ಥ್ಯ ಮತ್ತು ಸಾಧನೆಗಳಿಂದ ಮಾತ್ರ ಅಲ್ಲ,

ಅವರ ದೌರ್ಬಲ್ಯ ಮತ್ತು ವೈಫಲ್ಯಗಳಿಂದಲೂ ಕಲಿಯುವುದಿರುತ್ತದೆ.

ಮೂರುನಾಲ್ಕು ವರ್ಷಗಳ ಹಿಂದೆ ಆಗಿನ್ನೂ ನನಗೆ ಆತ್ಮೀಯರಾಗಿದ್ದ ಎಚ್.ವಿಶ್ವನಾಥ್ ದೇವರಾಜ ಅರಸು ಬಗ್ಗೆ ಬರೆದಿದ್ದ ಪುಸ್ತಕವನ್ನು ಮೈಸೂರಿನಲ್ಲಿ ನಾನು ಬಿಡುಗಡೆ ಮಾಡಿದ್ದೆ. ಆ ಸಮಾರಂಭದಲ್ಲಿ ನಾನಾಡಿದ ಮಾತುಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ದಾಖಲಿಸಿದ್ದೇನೆ:

“….ದೇವರಾಜ ಅರಸು ಅವರ ಬದುಕಿನಿಂದ ಇಂದಿನ ರಾಜಕಾರಣಿಗಳು ಕಲಿಯಬೇಕಾಗಿರುವ ಮತ್ತು ಕಲಿಯಬಾರದ ಕೆಲವು ಪಾಠಗಳಿವೆ.

ಮೊದಲನೆಯದಾಗಿ ಅರಸು ಅವರಿಗೆ ಜ್ಯೋತಿಷಿಗಳು, ಮಂತ್ರವಾದಿಗಳ ಬಗ್ಗೆ ಇದ್ದ ಮೂಢನಂಬಿಕೆ,

ಎರಡನೆಯದಾಗಿ ತಮ್ಮ ಸುತ್ತ ಕೂಡಿಹಾಕುತ್ತಿದ್ದ ಭಟ್ಟಂಗಿಗಳು ಮತ್ತು ಮೂರನೆಯದಾಗಿ ಅವರು ತಮ್ಮ ಗೆಳತಿಯರ ಆಯ್ಕೆಯಲ್ಲಿ ಮಾಡುತ್ತಿದ್ದ ತಪ್ಪುಗಳು.

ಈ ದೌರ್ಬಲ್ಯಗಳನ್ನು ದೇವರಾಜ ಅರಸು ಅವರಿಗೆ ಮೀರಲು ಸಾಧ್ಯವಾಗಿದ್ದರೆ ಅವರು ಇನ್ನೊಂದಿಷ್ಟು ಕಾಲ ಬದುಕಿರುತ್ತಿದ್ದರು, ಕರ್ನಾಟಕದ ರಾಜಕೀಯ ಬೇರೆಯೇ ಹಾದಿ ಹಿಡಿಯುತ್ತಿತ್ತು. ತಮಿಳುನಾಡು, ಆಂಧ್ರಪ್ರದೇಶಗಳಂತೆ ಕರ್ನಾಟಕದಲ್ಲಿಯೂ ಒಂದು ಬಲಿಷ್ಠ ಪ್ರಾದೇಶಿಕ ಪಕ್ಷ ಅಸ್ತಿತ್ವಕ್ಕೆ ಬರುತ್ತಿತ್ತು.

ಅರಸು ಅವರಿಗೆ ಜ್ಯೋತಿಷಿಗಳು, ಮಂತ್ರವಾದಿಗಳ ಬಗ್ಗೆ ಇದ್ದ ಮೂಢ ನಂಬಿಕೆ ಬಗ್ಗೆ ಹಲವಾರು ಸತ್ಯ,ಅರ್ಧ ಸತ್ಯ ಮತ್ತು ಸುಳ್ಳು ಕತೆಗಳಿವೆ. ಅದೇನೇ ಇದ್ದರೂ ಅವರು ಜ್ಯೋತಿಷಿಗಳನ್ನು ನಂಬುತ್ತಿದ್ದದ್ದು ನಿಜ. ಅವರು ತಮ್ಮ ಎರಡೂ ತೋಳುಗಳಲ್ಲಿ ಕಟ್ಟಿಕೊಂಡಿದ್ದ ತಾಯಿತಗಳ ಬಗ್ಗೆ ವಡ್ಡರ್ಸೆಯವರು ಬೇಸರದಿಂದ ಬರೆದಿದ್ದರು. ಆದರೆ ನಂಬಿದ್ದ ಜ್ಯೋತಿಷಿಗಳು ಹೇಳಿದ್ದ ಯಾವ ಭವಿಷ್ಯವೂ ಅವರ ಬದುಕಲ್ಲಿ ನಿಜ ಆಗಿರಲಿಲ್ಲ.

ಎರಡನೆಯದಾಗಿ ಅವರ ಸುತ್ತ ಇದ್ದ ಭಟ್ಟಂಗಿಗಳ ಕೂಟ. 1977ರ ಚಿಕ್ಕಮಗಳೂರು ಉಪಚುನಾವಣೆಯಲ್ಲಿ ಇಂದಿರಾಗಾಂಧಿಯವರಿಗೆ ರಾಜಕೀಯ ಮರುಹುಟ್ಟು ನೀಡಿದ ನಂತರ, ಅರಸು ಅವರಿಗೆ ತಮ್ಮ ಪಕ್ಷದಲ್ಲಿ ಮಾತ್ರವಲ್ಲ ವಿರೋಧಪಕ್ಷಗಳಲ್ಲಿಯೂ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ‘’ ಬುದ್ದಿ, ಇಂದಿರಾಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿರುವ ನೀವು ಅವರಿಗಿಂತ ಏನು ಕಡಿಮೆ? ಎಂಬರ್ಥದ ಹೊಗಳಿಕೆಯ ಮಾತುಗಳಿಗೆ ಅರಸು ತಲೆದೂಗಲಾರಂಭಿಸಿದ್ದರಂತೆ. ಅಂತಿಮವಾಗಿ ಇಂತಹ ಭಟ್ಟಂಗಿಗಳು ಅರಸು ಅವರಲ್ಲೊಬ್ಬ ಬಂಡುಕೋರನನ್ನು ಹುಟ್ಟುಹಾಕಿದ್ದರು.

ಮೂರನೆಯದಾಗಿ, ಕೊನೆದಿನಗಳಲ್ಲಿ ಅವರಿಗೆ ಗೆಳತಿಯರು, ದತ್ತುಪುತ್ರಿಯರ ರೂಪದಲ್ಲಿ ಬಂದ ಹೆಣ್ಣುಮಕ್ಕಳು, ಖಾಸಗಿ ವಿಷಯಗಳಿಗಷ್ಟೇ ಸೀಮಿತಗೊಳ್ಳದೆ, ಅವರ ರಾಜಕೀಯ ತೀರ್ಮಾನಗಳ ಮೇಲೆಯೂ ಪ್ರಭಾವ ಬೀರುವಷ್ಟು ಪ್ರಬಲರಾಗಿ ಹೋದರು. ಇದು ಅರಸು ಬದುಕಲ್ಲಿ ಮಾತ್ರ ನಡೆಯಲಿಲ್ಲ, ಜಾರ್ಜ್ ಫರ್ನಾಂಡಿಸ್, ಎನ್.ಟಿ.ರಾಮರಾವ್, ಎಂ.ಜಿ.ರಾಮಚಂದ್ರನ್ ಮೊದಲಾದವರ ಬದುಕಲ್ಲಿಯೂ ನಡೆದಿದೆ ( ಉದ್ದೇಶಪೂರ್ವಕವಾಗಿ ಈಗ ಬದುಕಿರುವ ರಾಜಕಾರಣಿಗಳ ಹೆಸರನ್ನು ನಾನು ಉಲ್ಲೇಖಿಸಿಲ್ಲ, ಕ್ಷಮಿಸಿ).

-ಇಷ್ಟು ಮಾತುಗಳನ್ನು ಆ ಸಭೆಯಲ್ಲಿ ಹೇಳಿದ ನಂತರ ನಾನು ವಾಪಸು ಬೆಂಗಳೂರಿಗೆ ಬಂದೆ.

ಅಲ್ಲಿರುವ ಸ್ನೇಹಿತರು ನಂತರ ಪೋನ್ ಮಾಡಿ ನಿಮ್ಮ ಭಾಷಣದ ಬಗ್ಗೆ ವಿಶ್ವನಾಥ್ ಬೇಸರಿಸಿಕೊಂಡಿದ್ದರು ಎಂದು ಹೇಳಿದ್ದರು. ಯಾಕೆಂದು ನನಗೆ ಗೊತ್ತಾಗಿಲ್ಲ. ಆದರೆ ನಂತರದ ದಿನಗಳಲ್ಲಿ ನನಗೆ ಪೋನ್ ಮಾಡುವುದನ್ನೇ ನಿಲ್ಲಿಸಿಬಿಟ್ಟಿದ್ದರು. (-dinesh ameenmattu)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *