ಗಾಂಧಿ ಜತೆಗೆ ಬಂದ ಗಣಪ….ಸರ್ಕಾರ ಸಾವರ್ಕರ್‌ ಎಂದರೆ ಜನ ಗಾಂಧಿ,ಪುನೀತ್‌ ಎಂದರು!

ಕುವೆಂಪು ವಿ. ವಿ ಯಲ್ಲಿ ಇಪ್ಪತ್ತು ವರ್ಷದ ಹಿಂದೆ ಎಂ ಎ ಓದಲು ಹೋದಾಗ ನಮ್ಮ ಒಳಗೆ ಇದ್ದ ಪರಕೀಯ ಒಂಟಿತನ ಭಾವ ವನ್ನ ಮೀರಲು ಕಾರಣ ಆಗಿದ್ದು ತೀರ್ಥಹಳ್ಳಿಯ ಹಳ್ಳಿ ಬಿದರಗೊಡಿನ ನಾಗೇಶ್ ರವರು. ನಮಗಿಂತ ಸೀನಿಯರ್ ಆಗಿದ್ದ ಅವರು ಎಂ ಎ ಮುಗಿಸಿ ಅಲ್ಲೇ ಸಂಶೋಧನೆಯಲ್ಲಿ ತೊಡಗಿಕೊಂಡು ಪುಟ್ಟ ರೂಮಿನಿಂದ ಭದ್ರಾವತಿ ಗೆ ಕನ್ನಡ ಅಥಿತಿ ಉಪನ್ಯಾಸಕ ಕೆಲಸಕ್ಕೆ ಹೋಗುತ್ತಿದ್ದರು.

ಅವರು ರಾಜೇಂದ್ರ ಜತೆಯಾಗಿ ಹಾಡುತ್ತಾ ಇದ್ದ ಭಾವಗೀತೆ ಆಗ ಯುನಿವರ್ಸಿಟಿಯಲ್ಲಿ ಗುಂಗು ಹಚ್ಚುತ್ತಿತ್ತು. ಯಬಡ ತಬಡ ಇದ್ದ ನನಗೆ ಪರಮೇಶಿ ಗೆ ಬೈದು ಬುದ್ದಿ ಹೇಳುತ್ತಾ ಅಪಾರ ಪ್ರೀತಿ ಮತ್ತು ಕಾಳಜಿ ತೋರುತ್ತಾ ಹಲವು ಸಾಮಾಜಿಕ ರಾಜಕೀಯ ವಿಚಾರವನ್ನ ಅರಿವಿಗೆ ತರುತ್ತಾ ಇದ್ದರು. ನಮ್ಮ ಪ್ರತಿಭೆ ಬಗ್ಗೆ ಬಹಳ ಮೆಚ್ಚುಗೆ ಕೊಟ್ಟವರು ಅವರು. ನೀವು ಏನೋ ಮಾಡ್ತೀರಿ ಕಣ್ರೋ ಅನ್ನುವ ಮಾತು ಆಗಾಗ ನೆನಪಿಗೆ ಬರುತ್ತದೆ ಈಗಲೂ.

ಇದೇ ಕಾರಣ ಅವರ ಹಳ್ಳಿ ಬಿದರಗೋಡು ಮನೆಗೆ ಹೋಗಿದ್ದೆ. ಅಲ್ಲಿನ ಆರ್ಥಿಕ ಸಾಮಾಜಿಕ ಚಿತ್ರಣಗಳನ್ನ ನಾಗೇಶ್ ಮತ್ತೆ ಕಟ್ಟಿ ಕೊಟ್ಟಿದ್ದರು. ಓದು ಅರಿವು ಆಗುವ ಬಗ್ಗೆ ಮಾತಾಡಿದ್ದರು. ಆ ಮನೆಯಲ್ಲಿ ಅವರ ಅಪ್ಪಯ್ಯ ನನ್ನ ಅಪ್ಪಯ್ಯ ನ ಪಾತ್ರವೇ ಆಗಿದ್ದರು. ಖಚಿತ ಮಾತು ನಿಲುವು ದೃಷ್ಟಿ ಎಲ್ಲವೂ. ಅಪ್ಪನೊಬ್ಬ ಮಗನ ಮೇಲೆ ಬೀರುವ ಪ್ರಭಾವ ನಾಗೇಶ್ ಮೊದಲು ನೋಡಿ ಆಮೇಲೆ ಅವರ ತಂದೆ ಭೇಟಿ ಮಾಡಿದಾಗ ಆಗಿತ್ತು.

ಕಾಲ ಮುಂದಕ್ಕೆ ಸಾಗಿ ಬಂತು

ನಾಗೇಶ್ ಲಂಕೇಶ್ ರ ಸಣ್ಣ ಕತೆ ಕಾದಂಬರಿ ಮೇಲೆ ಡಾಕ್ಟರೇಟ್ ಪಡೆದರು. ಪಿಯು ಕಾಲೇಜ್ ಉಪನ್ಯಾಸಕರಾದರು. ಈಗ ಶೆಟ್ಟಿ ಹಳ್ಳಿಯಲ್ಲಿ ವಿದ್ಯಾರ್ಥಿ ನೆಚ್ಚಿನ ಮೇಸ್ಟ್ರು ಆಗಿದ್ದಾರೆ. ಅವರ ಹೆಂಡತಿ ಪೋಲಿಸ್ ಹುದ್ದೆಯಲ್ಲಿದ್ದಾರೆ.

ಬಿದರಗೋಡಿನ ಅವರ ಮನೆಯಿಂದ ಈಗಷ್ಟೇ ಈ ಚಿತ್ರಗಳು ಬಂದವು. ಕುವೆಂಪು ನೆಲದ ಹಳ್ಳಿಯ ಮನೆಯಲ್ಲಿ ಗಣಪ ಗಾಂಧಿ ಜತೆ ಬಂದಿದ್ದಾನೆ. ವಿಶೇಷ ಎಂದರೆ ಗಣಪನನ್ನು ಅವರ ಮನೆಯ ಮಕ್ಕಳೆ ಮಾಡಿದ ಮೇಲೆ ಓರೆ ಕೋರೆ ಅವರ ಅಣ್ಣ ತಿದ್ದಿದ್ದಾರೆ. ಮನೆಯ ಗಣಪನನ್ನ ಗಾಂಧಿ ಜತೆಗೆ ಕರೆ ತಂದಿದ್ದಾರೆ. ಗಾಂಧಿಯ ಬದುಕಿನ ಹಲವು ಹಂತದ ಚಿತ್ರಗಳು ಹಿಂಭಾಗದಲ್ಲಿ ದರ್ಶನಕೆ ಸಿಕ್ಕಲಿವೆ.

ಗಾಂಧಿ ಆದರ್ಶಗಳು ಮೌಲ್ಯಗಳು ತಲೆಮಾರಿನಿಂದ ತಲೆಮಾರಿಗೆ ಇನ್ನಷ್ಟು ಬಲಗೊಳ್ಳಲೀ ಎನ್ನುವ ಆಶಯದೊಂದಿಗೆ dr ನಾಗೇಶ್ ಜೀ ಮೇಸ್ಟ್ರು ಮನೆಯ ಈ ಹೆಜ್ಜೆ ಮಾದರಿ ಅನ್ನಿಸಿತು.

ಮನೆ ಮನಕೆ ಗಾಂಧಿ
ಗಾಂಧಿ ಇನ್ನಷ್ಟು ಹತ್ತಿರವಾಗಲಿ…..

ಜಿ. ಟಿ ತುಮರಿ.
31-08-2022

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *