

ಸಿದ್ದಾಪುರ, ಬಾಳೂರಿನ ಶ್ರೀ ಮಲ್ಲಿಕಾರ್ಜುನ ದೇವಾಲಯ ಕಟ್ಟಡದ ಪುನರ್ ನಿರ್ಮಾಣದ ಶಿಲಾನ್ಯಾಸ ನೆರವೇರಿಸಿ ಮಾತನಾಡಿ.ದ. ಸೋಂದಾ ಮಠದ ಗಂಗಾಧರ ಸರಸ್ವತಿ ಸ್ವಾಮೀಜಿ
ಪುರಾತನ ಪರಂಪರೆಗಿಂತಲೂ ಶಾಸ್ತ್ರ ಭದ್ದವಾಗಿ ನಿರ್ಮಾಣ ಮಾಡಲು ತಿಳಿಸಿದರು. ಹಾಗೂ ಎಲ್ಲಾ ಭಕ್ತ ಸಮೂಹ ಒಗ್ಗಟ್ಟಾಗಿ ದೇವಸ್ಥಾನದ ನಿರ್ಮಾಣ ಕ್ಕೆ ಕೈ ಜೋಡಿಸುವಂತೆ.. ವಿನಂತಿಸಿದರು.. ಲಲಿತಾಂಬಾ ನಿಧಿ ಸುವರ್ಣಾ ಮಂತ್ರಾಕ್ಷತೆ ನೀಡಿದರು..
ಬಾಳೂರ ಸೀಮಾಧ್ಯಕ್ಷರಾದ ಐ ಎಸ್ ಭಟ್ ಹಸ್ರಗೋಡ ಸ್ವಾಗತಿಸಿದರು..
ದೇವಸ್ಥಾನದ ಕಾರ್ಯದರ್ಶಿ ರಾಜಾರಾಮ ಹೆಗಡೆ

ನಿರ್ವಸಿದರು. ಆಡಳಿತ ಮಂಡಳಿ ಅದ್ಯಕ್ಷ ಆರ್ ಡಿ ಭಟ್ ಊರತೋಟ ಹಾಗೂ ಗಣ್ಯರು ಉಪಸ್ಥಿತರಿದ್ದರು.
ಶುಭ ಹಾರೈಕೆ.
ವಿಧಾನ ಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹ ಕಾಗೇರಿ ಸಂದರ್ಭದಲ್ಲಿ ಶುಭ ಸಂದೇಶ ಕಳುಹಿಸಿ.. ದೇವಸ್ಥಾನ ದ ನಿರ್ಮಾಣ ನಿರ್ವಿಘ್ನವಾಗಿ ನಡಯಲಿ.. ಸರ್ಕಾರದ ದಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು.


ಸ
ರ್ಕಾರಿ ಪದವಿ ಪೂರ್ವ ಕಾಲೇಜು ಕೋಲಶಿ ರ್ಸಿಯಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ನಡೆಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿಯನ್ನು ಬೆಳಗಿಸುವ ಮೂಲಕ ಮಾಡಿದ ಮಮತಾ ಎಸ್ ಮಡಿವಾಳ ನೆರವೇರಿಸಿದರು.
.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಶಾಂತ ತಾರಿಬಾಲ ವಹಿಸಿದ್ದರು. ಕೆ. ಆರ್ ವಿನಾಯಕ ಉಪಾಧ್ಯಕ್ಷರು ಗ್ರಾಮ ಪಂಚಾಯಿತಿ ಕೋಲಸಿರ್ಸಿ, ಶ್ರೀ ಮಾದೇವ ನಾಯ್ಕ ಉಪಾಧ್ಯಕ್ಷರು ಕಾಲೇಜು ಅಭಿವೃದ್ಧಿ ಸಮಿತಿ ಕೋಲಸಿಸಿ೯ ಹಾಗೂ ಕಾ.ಅ.ಸ. ಸದಸ್ಯರಾದ ಜಿ.ಕೆ. ನಾಯ್ಕ, ಪ್ರಶಾಂತ್ ಗೌಡರ್, ರವಿ ಆಚಾರ್ಯ, ಸುಧಾ ನಾಯ್ಕ, ಉಪಸ್ಥಿತರಿದ್ದರು,
ಶ್ರೀ ತಮ್ಮಣ್ಣ ಬೀಗಾರ ಕೇಂದ್ರ ಬಾಲ ಸಾಹಿತ್ಯ ಪುರಸ್ಕ್ರತರು ಹಾಗೂ ಸಾಹಿತಿಗಳು ಮತ್ತು ಕೋಲಸಿಸಿ೯ ಕಾಲೇಜಿನಿಂದ ವರ್ಗಾವಣೆಗೊಂಡ ಡಿ. ನಂಜುಂಡ ಹಾಗೂ ಲೋಕೆಶ್ ನಾಯ್ಕ ಇವರುಗಳಿಗೆ ಸನ್ಮಾನಿಸಲಾಯಿತು. ಮಾನಸ ಎಂ. (ಸಾಂಸ್ಕೃತಿಕ) ತೀಲಕ್ ಗೌಡ(ಅಥ್ಲೇಟಿಕ್ಸ್) ಚೇತನಾ ನಾಯ್ಕ (ಅಥ್ಲೇಟಿಕ್ಸ್) ವೀರಾಗ್ರಣಿ ಪ್ರಶಸ್ತಿ ಪಡೆದಿರುತ್ತಾರೆ. 2021-2022ನೇ ಸಾಲಿನಲ್ಲಿ ಅತಿಹೆಚ್ಚು ಅಂಕಗಳಿಸಿದ ಮೇಘ ವಿ.ಗೌಡ, ರಂಜಿತಾ ನಾಯ್ಕ, ದೀಪಾ ನಾಯ್ಕ ಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ಭಾರತಿ ಸಂಗಡಿಗರು ಪ್ರಾರ್ಥಿಸಿದರು, ಮಂಜಪ್ಪ ಎಂ.ಜಿ ಸ್ವಾಗತ ಹಾಗೂ ವಾರ್ಷಿಕ ವರದಿ, ಅಶ್ವಿನಿ ಕೆ.ಎಸ್ ಮತ್ತು ಶ್ರೀಮತಿ ಭಾಗ್ಯಶ್ರೀ ಎಸ್ ನಾಯ್ಕ ವಿಜೇತರ ಹೆಸರು ಓದಿದರೆ, ಗೋಪಾಲ ಕಾನಳ್ಳಿ ಕಾರ್ಯಕ್ರಮ ನಿರೂಪಿಸಿದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
