![](https://i0.wp.com/samajamukhi.net/wp-content/uploads/2022/08/4444-scaled.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ರಾಜ್ಯ ಸರ್ಕಾರ ಡಿಸೆಂಬರ್ 31ರ ವೇಳೆಗೆ ರಾಜ್ಯ ಸರ್ಕಾರ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯಡಿ 30 ಲಕ್ಷ ಮಂದಿಯ ನೋಂದಣಿಗೆ ಗುರಿ ಹೊಂದಿದೆ.
![ಯಶಸ್ವಿನಿ (ಸಂಗ್ರಹ ಚಿತ್ರ) Yashaswini](https://i0.wp.com/media.kannadaprabha.com/uploads/user/imagelibrary/2022/12/28/w900X450/yashaswini-02.jpg?w=760&ssl=1)
ಬೆಳಗಾವಿ: ರಾಜ್ಯ ಸರ್ಕಾರ ಡಿಸೆಂಬರ್ 31ರ ವೇಳೆಗೆ ರಾಜ್ಯ ಸರ್ಕಾರ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯಡಿ 30 ಲಕ್ಷ ಮಂದಿಯ ನೋಂದಣಿಗೆ ಗುರಿ ಹೊಂದಿದೆ.
ಡಿ.26 ರ ವರೆಗೆ 19 ಲಕ್ಷ ಫಲಾನುಭವಿಗಳನ್ನು ನೋಂದಣಿ ಮಾಡಿದ್ದೇವೆ, ಗುರಿ ತಲುಪಲು ಹಾಕಿಕೊಳ್ಳಲಾಗಿರುವ ಗಡುವಿನ ವಿಸ್ತರಣೇ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಪರಿಷತ್ ಗೆ ತಿಳಿಸಿದರು.
2003 ರಲ್ಲಿ ಯೋಜನೆಯನ್ನು ಪ್ರಾರಂಭಿಸಲಾಯಿತು 2017-18 ವರೆಗೂ ಯೋಜನೆ ಕಾರ್ಯನಿರ್ವಹಣೆಯಲ್ಲಿತ್ತು, ಅದಾದ ಬಳಿಕ 2018 ರಲ್ಲಿ ಯೋಜನೆಯನ್ನು ಆರೋಗ್ಯ ಇಲಾಖೆಯೊಂದಿಗೆ ವಿಲೀನಗೊಳಿಸಲಾಯಿತು. ಆದರೆ ಯಶಸ್ವಿನಿ ಯೋಜನೆಗೆ ಹೆಚ್ಚಿನ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಮತ್ತೆ ಜಾರಿಗೆ ತರಲು ನಿರ್ಧರಿಸಿದ ಸಿಎಂ ಬಸವರಾಜ 300 ಕೋಟಿ ರೂಪಾಯಿಗಳನ್ನು ಬಜೆಟ್ ನಲ್ಲಿ ಘೋಷಿಸಿದ್ದರು ಎಂದು ಸಹಕಾರ ಸಚಿವ ಸೋಮಶೇಖರ್ ಮಾಹಿತಿ ನೀಡಿದ್ದಾರೆ.
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)