![](https://i0.wp.com/samajamukhi.net/wp-content/uploads/2023/01/IMG_20230130_151240-scaled.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಸ್ಥಳಿಯ ಜನಪ್ರತಿನಿಧಿಗಳಿಗೆ ತಮ್ಮ ಅಹವಾಲು ಸಲ್ಲಿಸಿ ಯಶಕಾಣದ ಉತ್ತರ ಕನ್ನಡದ ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ನೆರೆಯ ಜಿಲ್ಲೆಯ ಜನಪ್ರತಿನಿಧಿಗಳನ್ನು ಹುಡುಕಿಹೋದ ಘಟನೆ ನಡೆದಿದೆ.
ಸಿದ್ಧಾಪುರದ ಜಾಗೃತ ವೇದಿಕೆ ಸದಸ್ಯರು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಬಗ್ಗೆ ಸ್ಥಳಿಯ ಶಾಸಕ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಸಂಸದ ಅನಂತಕುಮಾರ ಹೆಗಡೆಯವರ ಬಳಿ ತೆರಳಿ ಹಲವು ಬಾರಿ ಮನವಿ ಮಾಡಿದ್ದರು.ಆದರೆ ಇದರಿಂದ ಪ್ರಯೋಜನವಾಗದಿರುವುದರಿಂದ ತಮ್ಮ ಜನಪ್ರತಿನಿಧಿಗಳಿಗೆ ಹೇಳಿದರೆ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ ಎಂದು ಮನಗಂಡು ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದ ಬಿ.ವೈ. ರಾಘವೇಂದ್ರರನ್ನು ಬೇಟಿ ಮಾಡಿ ತಾಳಗುಪ್ಪ ಶಿರಸಿ ಪ್ರಯಾಣಿಕರ ರೈಲು ಮಾರ್ಗ ನಿರ್ಮಾಣ ಮತ್ತು ಸಿದ್ದಾಪುರದಿಂದ ಹಲವು ಪ್ರದೇಶಗಳಿಗೆ ಬಸ್ ಸೌಕರ್ಯ ಒದಗಿಸುವಂತೆ ಕೋರಿ ಮನವಿ ನೀಡಿದರು. ಈ ಸಂದರ್ಭದಲ್ಲಿ ವಾಸುದೇವ ಬಿಳಗಿ. ಅಣ್ಣಪ್ಪ ನಾಯ್ಕ ಸೇರಿದಂತೆ ಕೆಲವರು ಜೊತೆಗಿದ್ದರು.
![](https://i0.wp.com/samajamukhi.net/wp-content/uploads/2023/01/IMG_20230130_151240.jpg?resize=661%2C312&ssl=1)
![](https://i0.wp.com/samajamukhi.net/wp-content/uploads/2023/01/IMG-20230130-WA0058.jpg?resize=662%2C372&ssl=1)
![](https://i0.wp.com/samajamukhi.net/wp-content/uploads/2023/01/IMG-20230128-WA0001.jpg?resize=485%2C686&ssl=1)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)