ಒಂದು ಡಜನ್‌ ಹಿರಿಯರಿಗೆ ಟಿಕೆಟ್‌ ಇಲ್ಲ! ಕಂಗಾಲಾದರಾ ಕಾಗೇರಿ?

ರಾಜ್ಯ ಬಿ.ಜೆ.ಪಿ.ಯಲ್ಲಿ ಹಲವು ಬದಲಾವಣೆಗಳಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪನವರನ್ನು ಸೈಡ್‌ ಲೈನ್‌ ಮಾಡಲಾಗುತ್ತಿದೆ.

ರೈತ ಮುಖಂಡರಾಗಿ ರಾಜ್ಯದಲ್ಲಿ ಬಿ.ಜೆ.ಪಿ. ಬೆಳೆಸಿದ್ದ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಿಂದ ದಿಡೀರ್‌ ಕೆಳಗಿಳಿದಾಗಲೇ ಯಡಿಯೂರಪ್ಪ ಭವಿಷ್ಯ ಸ್ಪಷ್ಟವಿತ್ತು. ಈಗ ಚುನಾವಣಾ ಹೊಸ್ತಿಲಲ್ಲಿ ಯಡಿಯೂರಪ್ಪ ಸೇರಿದಂತೆ ಕೆಲವು ಮಾಜಿ ಮುಖ್ಯಮಂತ್ರಿಗಳು, ಹಿರಿಯ ನಾಯಕರನ್ನು ಹಿಂದಿನ ಸಾಲಿನಲ್ಲಿ ಕೂಡ್ರಿಸಲಾಗಿದೆ. ಹೀಗೆ ದಿಢೀರನೇ ಹಿಂದಿನ ಸಾಲಿಗೆ ಸರಿದ ನಾಯಕರಲ್ಲಿ ಸದಾನಂದ ಗೌಡ,ಜಗದೀಶ್‌ ಶೆಟ್ಟರ್‌, ಸುರೇಶ್‌ ಕುಮಾರ್‌, ವಿಶ್ವೇಶ್ವರ ಹೆಗಡೆ ಕಾಗೇರಿ, ಅನಂತಕುಮಾರ ಹೆಗಡೆ ಸೇರಿದಂತೆ ಕೆಲವು ಪ್ರಮುಖರು ಎನ್ನುವುದು ಗಮನಾರ್ಹ ವಿಷಯ.

ಈ ವಿಚಾರ ಮುಖ್ಯ ಭೂಮಿಕೆಯಲ್ಲೇ ಚರ್ಚೆಯಾಗುತಿದ್ದರೆ ತೆರೆಮರೆಯಲ್ಲಿ ಅಡ್ಡದಾರಿಯ ನಾಯಕ ಸಂತೋಷ ಚಿತಾವಣೆಯಿಂದ ಬಿ.ಜೆ.ಪಿ.ಯ ಹಿರಿಯ ನಾಯಕರು ವಿಶೇಶವಾಗಿ ಬ್ರಾಹ್ಮಣ ಮುಖಂಡರು ಮತ್ತು ಲಿಂಗಾಯತ್‌ ಮುಖಂಡರನ್ನೇ ಗುರಿಯಾಗಿಸಿ ೨೦೨೩ ರ ವಿಧಾನಸಭೆ ಚುನಾವಣೆಗೆ ಹೊಸ ತಂಡ ಕಟ್ಟುವ ತಯಾರಿ ನಡೆದಿದೆ ಎನ್ನುವುದು ಸಧ್ಯದ ವಿಚಾರ.

ಈ ವಿಚಾರದ ಹಿನ್ನೆಲೆಯಲ್ಲಿ ಆರ್. ಎಸ್.ಎಸ್.‌ ಮತ್ತು ಬಿಜೆ.ಪಿ.ಯ ನಿಯಂತ್ರಣ ಮಾಡುವ ಮಲೆನಾಡು, ಕರಾವಳಿಯ ಕುಟಿಲ ಮತಾಂಧರ ತಂಡವೊಂದು ನಾನಾವೇಶದಲ್ಲಿ ಕೆಸರಿನ ರಾಜಕಾರಣ ಮಾಡುತ್ತ ಈ ಬಾರಿ ನೇರ ಅಖಾಡ ಎಂದು ಸಿದ್ಧವಾಗುತ್ತಿದೆಯಂತೆ!

ಈ ಕುಟಿಲ ಶಕುನಿಗಳ ತಂಡದಲ್ಲಿ ಆರ್.‌ ಎಸ್.‌ ಎಸ್.‌ ಪರಿವಾರದ ಹಿನ್ನೆಲೆಯ ಕುಂಡೆ ಬಳಗವಿದ್ದು, ಈ ಬಳಗ ಕುಮಟಾವಿಧಾನಸಭಾ ಕ್ಷೇತ್ರ, ಭಟ್ಕಳ, ಶಿರಸಿ, ಯಲ್ಲಾಪುರಗಳಲ್ಲಿ ತಮ್ಮ ಬಳಗಕ್ಕೇ ಬಿ.ಜೆ.ಪಿ. ಟಿಕೇಟ್‌ ಕೊಡಬೇಕೆಂದು ಪಟ್ಟು ಹಿಡಿದಿದೆಯಂತೆ. ಈ ಬಳಗದ ಪ್ರಮುಖನಾಗಿರುವ ಪತ್ರಿಕೆ ಸಂಪಾದಕನೊಬ್ಬ ಬಿ.ಜೆ.ಪಿ. ಮಾತ್ರವಲ್ಲ ಕಾಂಗ್ರೆಸ್‌ ಟಿಕೇಟುಗಳೂ ನನ್ನ ತೀರ್ಮಾನದಂತೇ ಹಂಚಿಕೆಯಾಗಲಿದ್ದು ಕುಮಟಾದಿಂದ ತನಗೆ ತಪ್ಪಿದರೆ ಶಶಿಭೂಷಣ ಹೆಗಡೆ, ಶಿರಸಿ ಕ್ಷೇತ್ರದ ಟಿಕೇಟ್‌ ತನ್ನ ಮಾವ ತಲೆಮಾಸಿದ ಮಾಜಿ ಪತ್ರಕರ್ತನಾಗಿರುವ ಮತಾಂಧ ಆಶಾಢಭೂತಿಗೆ ತಪ್ಪಿದರೆ ಶಶಿಭೂಷಣ ಹೆಗಡೆಯವರಿಗೆ ನಮ್ಮ ಬಳಗದ ಮೂರು ಜನರಿಗೆ ಟಿಕೇಟ್‌ ಸಂತೋಷದಿಂದಲೇ ಸಿಗಲಿದೆ. ನಮಗೆ ಬೇಕಾದವರಿಗೇ ಕಾಂಗ್ರೆಸ್‌ ಟಿಕೇಟೂ ಸಿಗಲಿದೆ ಎಂದು ಬೈಟಕ್‌ ನಲ್ಲಿ ಬಾಯಿ ಬಿಟ್ಟಿದ್ದಾನಂತೆ!

ಈ ಹೊಸ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪಕ್ಷದ ಪ್ರಚಾರ,ಚುನಾವಣಾ ವಿದ್ಯಮಾನಗಳಲ್ಲಿ ಅನಂತಕುಮಾರ ಹೆಗಡೆ, ವಿಶ್ವೇಶ್ವರ ಹೆಗಡೆ, ಸುರೇಶ್‌ ಕುಮಾರ್‌ ಸೇರಿದಂತೆ ಕೆಲವು ಬ್ರಾಹ್ಮಣ ಮುಖಂಡರು ಮತ್ತು ಲಿಂಗಾಯತ್‌ ಮುಖಂಡರನ್ನು ಹೊರಗಿಡಲಾಗಿದೆಯಂತೆ!

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಕೆಲವು ಸಂಘಿಗಳು ಸ್ವಜನಪಕ್ಷಪಾತದ ಕುಟಿಲ ಬಳಗದ ಕುತಂತ್ರಿಗಳಿಗೆ ನೆರವಾಗಲು ಮೋದಿಯ ಹಿತ್ತಾಳೆ ಕಿವಿಗೂ ಹೂವು ಮುಡಿಸಿದ್ದಾರೆ ಎನ್ನಲಾಗಿದೆ. ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕಂಗಾಲಾಗಿರುವ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆಕಾಗೇರಿ, ಅರಗಜ್ಞಾನೇಂದ್ರ, ಸೇರಿದ ಕೆಲವು ಹಿರಿಯರ ತಂಡ ಬಿ.ಜೆ.ಪಿ.ಯ ಹೊಸ ವರಸೆ ತಮ್ಮ ಬುಡಕ್ಕೆ ಬಿಸಿ ನೀರು ಬಿಡುವ ಸಾಧ್ಯತೆ ಅರಿತು ಟಿಕೇಟ್‌ ಸಂಕಲ್ಪ ಯಾತ್ರೆಯ ಹಿನ್ನೆಲೆಯಲ್ಲಿ ಪ್ರಯಾಣ, ಪ್ರವಾಸ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ. ಬಿ.ಜೆ.ಪಿ.ಯ ಸಿಂಪಥೈಸರ್‌ ಗಳಾಗಿ ಮಾಧ್ಯಮಗಳಲ್ಲಿ ಕೋಮುವಾದದ ರೋಗ ತುಂಬಿ ಸಂಘದ ಬಕೆಟ್‌ ಹಿಡಿದ ಲಾಭಕೋರ ಮತಾಂಧ ಬಳಗದ ಕುಟಿಲತೆ ಈಗ ಸ್ವಜಾತಿ,ಸ್ವಪರಿವಾರದ ನಾಯಕತ್ವ, ಮುಖಂಡತ್ವಕ್ಕೆ ಎರವಾಗಿರುವುದು ಸಾರ್ವಜನಿಕರ ವಿರೋಧಕ್ಕೂ ಕಾರಣವಾಗಿದೆ ಎನ್ನಲಾಗುತ್ತಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

ಪಿ.ಎಂ.ಶ್ರೀ ಎಲ್.ಕೆ.ಜಿ.ಗೆ ಚಾಲನೆ ನೀಡಿದ ಶಾಸಕ ಭೀಮಣ್ಣ

ಸಿದ್ದಾಪುರ: ತಾಲೂಕಿನ ಕೋಲಶಿರ್ಸಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿನಿಂದ ಪ್ರಾರಂಭವಾಗಿರುವ ಪಿ.ಎಮ್.ಶ್ರೀ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಗೆ ಶಿರಸಿ-ಸಿದ್ದಾಪುರ ಕ್ಷೇತ್ರದ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *