

ಸಿದ್ಧಾಪುರ ತಾಲೂಕಿನ ಕೋಲಶಿರ್ಸಿ ಗ್ರಾ.ಪಂ. ಅವರಗುಪ್ಪಾ ಆಯ್.ಟಿ.ಆಯ್. ಕಾಲೇಜಿನ ಬಸ್ ನಿಲ್ಧಾಣವನ್ನು ವರ್ಷಾಂತ್ಯದಲ್ಲಿ ಬಿಲ್ ಪಡೆಯಲು ನಿರ್ಮಿಸಿದಂತಿದೆ ಎಂದು ಆರೋಪಿಸಿರುವ ಸ್ಥಳಿಯ ಯುವಕರು ಈ ಕಳಪೆ ಕಾಮಗಾರಿ ಸರಿಪಡಿಸಿ ಕಳಪೆಯಾದದ್ದನ್ನು ಮರು ನಿರ್ಮಿಸದಿದ್ದರೆ ಉದ್ಘಾಟನೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಸಮಾಜಮುಖಿ ಡಾಟ್ ನೆಟ್ ಗೆ ಲಿಖಿತವಾಗಿ ದೂರಿ ನಿರ್ಮಾಣ ಹಂತದ ಛಾಯಾ ಚಿತ್ರಗಳನ್ನು ಕಳುಹಿಸಿರುವ ಸ್ಥಳಿಯರು ಈ ಬಸ್ ನಿಲ್ಧಾಣದ ಕಾಮಗಾರಿಗೆ ಕ್ಯೂರಿಂಗ್ ಮಾಡಿಲ್ಲ. ಒಂದೇ ವಾರದಲ್ಲಿ ಅಡಿಪಾಯದಿಂದ ಛಾವಣಿವರೆಗೆ ನಿರ್ಮಿಸಿರುವ ಗುತ್ತಿಗೆದಾರರು ಸ್ಥಳಿಯ ಶಾಸಕರ ಕಡೆಯವರಿಗೆ ಈ ವರ್ಷಾಂತ್ಯದ ಒಳಗೆ ಬಿಲ್ ಮಾಡಿಕೊಳ್ಳಲು ಸಹಕರಿಸಿದಂತಿದೆ.
ಈ ಕಾಮಗಾರಿ ಸಂಪೂರ್ಣವಾದ ಬಗ್ಗೆ ಪ್ರಮಾಣಪತ್ರ ನೀಡುವ ಅಧಿಕಾರಿ ಆಗಿರುವ ನ್ಯೂನ್ಯತೆ ಸರಿಪಡಿಸದೆ ಸರಿಯಾಗಿ ಪರೀಕ್ಷಿಸದೆ ಮುಂದುವರಿದರೆ ಅವರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಈ ರೀತಿಯ ಕಳಪೆ ಕಾಮಗಾರಿ ನಾಲ್ಕು ವರ್ಷವೂ ಬಾಳಿಕೆ ಬರದಿದ್ದರೆ ಅದಕ್ಕೆ ಸ್ಥಳೀಯ ಅಧಿಕಾರಿಗಳು, ಶಾಸಕರನ್ನೇ ಹೊಣೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿರುವ ಸ್ಥಳೀಯರು ಇಂಥಹ ಕೆಲಸ ಮಾಡಿ ಸಾರ್ವಜನಿಕ ಹಣ ದುರುಪಯೋಗ ಮಾಡುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






