ಜೋಗಕ್ಕೆ ಬರಬೇಡಿ ಪ್ಲೀಜ್….ಜೋಗದ ಸಿರಿ ಬೆಳಕಿಲ್ಲ…!

ವಿಶ್ವಪ್ರಸಿದ್ಧ ಜೋಗದ ಜಲಪಾತ ನೋಡದವರುಂಟೆ? ಸಾಯೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ ಎಂದು ಡಾ. ರಾಜ್‌ ಕುಮಾರ್‌ ಹಾಡಿ ಕುಣಿದಾದ ಮೇಲೆ ಮುಂಗಾರು ಮಳೆ ಚಿತ್ರದ ನಂತರ ಜೋಗದ ಗುಂಡಿ ಈಗಿನ ಭಾಷೆಯಲ್ಲಿ ವೈರಲ್‌, ಸೆನ್ಸೆಷನ್‌ ಆಗಿತ್ತು.
ಇದೇ ವೈಭವದ ಮಾತನ್ನು ಹಲವು ದಶಕಗಳಿಂದ ಕೇಳುತ್ತಾ ಬಂದ ಸಾರ್ವಜನಿಕರಿಗೆ ಈಗೊಂದು ಕೆಟ್ಟ ಸುದ್ದಿ ಇದೆ. ಜೋಗದ ಕಲ್ಪನೆ, ಯೋಚನೆ ಎಂದರೆ ರಮ್ಯ,ಗಮ್ಯ ಎಂದುಕೊಂಡವರು ಈಗ ಜೋಗದ ಜಲಪಾತವನ್ನು ನೋಡಲೇ ಬಾರದು. ಪ್ರತಿವರ್ಷ ಮಳೆಗಾಲದಲ್ಲಿ ಅದರಲ್ಲೂ ಜೂನ್ ನಿಂದ ಅಕ್ಟೋಬರ್‌, ನವೆಂಬರ್‌ ವರೆಗೆ ಜೋಗ ಜಲಪಾತ ನೋಡಲು ಹೇಳಿ ಮಾಡಿಸಿದ ಸಮಯ! ಎನ್ನುವ ರೂಢಿಯೊಂದಿತ್ತು. ಆದರೆ ಈಗ ಜೋಗದ ಸ್ಥಿತಿ -ಗತಿ ಹಿಂದಿನಂತಿಲ್ಲ.


ಮಲೆನಾಡಿನಲ್ಲಿ ಕೈಕೊಟ್ಟ ಮಳೆರಾಯ ದಿನಕ್ಕೆ ಆಗೊಮ್ಮೆ ಈಗೊಮ್ಮೆಯೂ ಹನಿಗಳನ್ನು ಚೆಲ್ಲಲು ತಯಾರಿಲ್ಲ. ಮಳೆ ಇಲ್ಲ,ನೀರಿಲ್ಲ ಎಂದರೆ ಜೋಗದ ಜಲಪಾತ ಎಷ್ಟು ನೀರಸವಿರಬೇಡ. ಹೌದು ಈಗ ಜೋಗ ಹಿಂದಿನಂತಿಲ್ಲ ಜೋಗದ ರಾಜ, ರಾಣಿ ರೋರರ್‌, ರಾಕೆಟ್‌ ಜಲಧಾರೆಗಳೆಲ್ಲಾ ಸೊರಗಿವೆ. ಜೋವೆಂದರೆ ಅಬ್ಬರ, ರೋಮಾಂಚನ, ಮಂಜು, ಮನೋಲ್ಲಾಸ ಎನ್ನುವ ಶಬ್ಧಗಳ ಭೌತಿಕ ರೂಪ ಈಗ ಕಾಣಿಯಾಗಿದೆ.


ಸುರಿಯದ ಮುಂಗಾರು ಮಳೆ ಜೋಗವೆಂದರೆ ನಿರ್ಲಿಪ್ತ, ನೀರಸ, ನೀರವೆನ್ನುವಂತೆ ಮಾಡಿದೆ. ಪ್ರತಿವರ್ಷ ಮಳೆಗಾಲದ ಈ ಅವಧಿಯಲ್ಲಿ ಜೋಗ ಜಲಪಾತದ ಸುತ್ತಮುತ್ತ ಮುತ್ತಿಕೊಳ್ಳುತಿದ್ದ ಜನ-ವಾಹನಗಳು ಈಗ ಜೋಗ ಕಡೆ ಮುಖ ಮಾಡುತ್ತಿಲ್ಲ. ಮಳೆಗಾಲದ ಮೂರು ತಿಂಗಳಲ್ಲಿ ವರ್ಷದ ದುಡಿಮೆ ಮಾಡುತಿದ್ದ ಸ್ಥಳೀಯ ವ್ಯಾಪಾರಿಗಳಿಗೆ ಈಗ ಹಸಿದ ಹೊಟ್ಟೆ ಮೇಲೆ ಹಸಿಬಟ್ಟೆ ಎನ್ನುವ ಸ್ಥಿತಿ ಇದೆ.


ಮಳೆಗಾಲವೇನೋ ಕೈಕೊಟ್ಟು ಜೋಗದಸಿರಿ ಬೆಳಕನ್ನು ಕತ್ತಲೆಗೆ ದೂಡಿದೆ. ಇದರ ಜೊತೆಗೇ ಜೋಗದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳಿಂದಾಗಿ ಜೋಗ ಜ(ನ) ಲಪಾತದ ಎದುರು ಮಣ್ಣ-ಧೂಳು ರಾರಾಜಿಸುತ್ತಿದೆ. ಜೋಗದ ಅಭಿವೃದ್ಧಿ ಕಾಮಗಾರಿಗಳಿಂದಾಗಿ ಈಗ ಜೋಗ ಜಲಪಾತದ ಎದುರು ವಾಹನಗಳೂ ಹೋಗುವಂತಿಲ್ಲ ಜನರೂ ಸುಳಿಯುವಂತಿಲ್ಲ. ಪ್ರತಿವರ್ಷ ಮಳೆ ಗಾಲದಲ್ಲಿ ಜೋಗದ ಸಂಭ್ರಮ ಸವಿಯಲು ಬರುತಿದ್ದ ಜನತೆ, ಪ್ರವಾಸಿಗರಿಗೆ ಒಂದು ಸಂದೇಶವಿದೆ. ಪ್ರತಿವರ್ಷ ಮಳೆಗಾಲಕ್ಕೆ ತಪ್ಪದೆ ಜೋಗಕ್ಕೆ ಬರುತಿದ್ದವರು ಈ ವರ್ಷ ಬರಲೇ ಬೇಡಿ ಯಾಕೆಂದರೆ ಜೋಗದಲ್ಲಿ ಈಗ ನೀರಿಲ್ಲ ಬರೀ ಮಣ್ಣು ಧೂಳು ಜೋಗವೆಂದರೆ ನಿಮ್ಮ ಕಣ್ಣಲ್ಲಿದ್ದ ಚೆಂದ ಮನದಲ್ಲಿದ್ದ ಮಧುರತೆ ಅಚಲವಾಗಿರಬೇಕೆಂದರೆ ದಯವಿಟ್ಟು ಈ ವರ್ಷ ಜೋಗದ ಕಡೆ ಬರಲೇ ಬೇಡಿ.!

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *