ಮಾವಿನಗುಂಡಿ ಪ್ರಕರಣ- ಅಮಾಯಕರ ತಲೆದಂಡ!

ರಾಜಕೀಯ ಸಮಯಸಾಧಕರಾದ ಗೋಪ್ರೇಮಿಗಳ ಹಫ್ತಾ ವಸೂಲಿಗೆ ಲಾಭ ತರುವ ಏಕೈಕ ಉದ್ದೇಶದಿಂದ ಹಿಂದಿನ ಸರ್ಕಾರ ಜಾರಿ ಮಾಡಿದ್ದ ಗೋಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧ ಕಾಯಿದೆಗಳನ್ನು ಕಸದ ಬುಟ್ಟಿಗೆ ಎಸೆಯಲು ಹೊಸ ಸರ್ಕಾರ ತೀರ್ಮಾನ ಕೈಗೊಂಡಿದೆ.

ಈ ತೀರ್ಮಾನದ ನಂತರ ಸರ್ಕಾರದ ವಿರುದ್ಧ ಸಾರ್ವಜನಿಕರನ್ನು ಉತ್ತೇಜಿಸುವ ಸಂಘಿ ನಾಟಕ ತೆರೆಮರೆಯಲ್ಲಿ ನಡೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಹಫ್ತಾ ವಸೂಲಿಯ ರುಚಿ ಕಂಡಿರುವ ಸಂಘಿದಳವೊಂದು ಹಿಂದಿನ ಸರ್ಕಾರದ ಅವಧಿಯಲ್ಲಿ ಜಾನುವಾರು ಸಾಗಾಟಕ್ಕೆ ಬೆಲೆ ನಿಗದಿಪಡಿಸಿಕೊಂಡಿತ್ತಂತೆ! ಹೀಗೆ ಹಫ್ತಾ ನೀಡದ ರೈತರು, ಜಾನುವಾರು ವ್ಯಾಪಾರಿಗಳಿಗೆ ತೊಂದರೆ ಮಾಡುವ ಲಾಭದ ವ್ಯವಹಾರ ನಡೆಸುವ ಮತಾಂಧ ಸಂಘಿಗಳು ಈಗ ಕೆಲಸವಿಲ್ಲದ ಮಂಗಗಳಾದಂತಾಗಿದ್ದಾರೆ. ಇದೇ ಹಿನ್ನೆಲೆಯಲ್ಲಿ ಶಿರಸಿಯಲ್ಲಿ ಭಜರಂಗಿ ಪ್ರಹಸನ ಶುರುವಾಗಿದೆ.

ಇಂಥ ಸಂಘಿ ಕುತಂತ್ರಗಳ ಫಲವಾಗಿ ಕಳೆದ ವಾರ ಸಿದ್ಧಾಪುರ ಪೊಲೀಸರು ಮೂರು ಜನರನ್ನು ಜಾನುವಾರು ಸಾಗಾಟದ ಹಿನ್ನೆಲೆಯಲ್ಲಿ ಬಂಧಿಸಿದ್ದರು. ಈ ಬಂಧಿತ ಆರೋಪಿಗಳಲ್ಲಿ ಒಬ್ಬ ಬಕ್ರೀದ್‌ ಮತ್ತು ಹೆಂಡತಿ ತುಂಬು ಗರ್ಭಿಣಿ ಎನ್ನುವ ಕಾರಣಕ್ಕೆ ಪರಾರಿಯಾಗಿದ್ದ. ಈ ಪರಾರಿ ನಂತರ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಅದೇ ದಿನ ಬಂಧಿಸಿದ್ದಾರೆ. ಈ ಪ್ರಕರಣ ಇಷ್ಟಕ್ಕೇ ಮುಗಿದು ಹೋಗಿದ್ದರೆ ಯಾವ ಸುದ್ದಿ-ವಿಶ್ಲೇಷಣೆಗಳಾಗುತ್ತಿರಲಿಲ್ಲ.

ದುರಂತವೆಂದರೆ… ಈ ಪ್ರಕರಣದ ನಂತರ ಪರಾರಿ ವೇಳೆ ಕರ್ತವ್ಯದಲ್ಲಿದ್ದ ಮೂರು ಜನ ಪೊಲೀಸರನ್ನು ಅಮಾನತ್ತು ಮಾಡಲಾಯಿತು. ಮೂರು ಜನ ಪೊಲೀಸರ ಅಮಾನತ್ತಿಗೆ ಕಾರಣ ಕರ್ತವ್ಯನಿರ್ಲಕ್ಷ!

ವಿರೇಶ್‌ ಚಲವಾದಿ,ಉದಯ ಮೇಸ್ತ,ಪ್ರಸನ್ನಕುಮಾರ್‌ ಎಂಬ ಮೂರು ಜನ ಪೊಲೀಸರನ್ನು ಅಮಾನತ್ತು ಮಾಡುತ್ತಲೇ ಪ್ರಕರಣದ ವಿಚಾರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರ ಬಳಿ ಹೋಗಿದೆ. ನಿರೀಕ್ಷೆಯಂತೆ ಈ ಪ್ರಕರಣ ಹಿರಿಯ ಪೊಲೀಸ್‌ ಅಧಿಕಾರಿಗಳ ತಲೆಬಿಸಿಗೆ ಕಾರಣವಾಗಿದೆ. ಈ ಪ್ರಕರಣದ ದುಷ್ಪರಿಣಾಮ ಎನ್ನುವಂತೆ ಹಿರಿಯ ಅಧಿಕಾರಿಗಳು ಆದ ಲೋಪಕ್ಕೆ ಸಾಮಾನ್ಯ ಪೇದೆಗಳ ಮೇಲೇಕೆ ಬ್ರಹ್ಮಾಸ್ತ್ರ ಎಂದು ಪ್ರಶ್ನಿಸಿ ಪಿ.ಎಸ್.ಐ. ತಲೆ ದಂಡ ಕೇಳಿದ್ದಾರೆ. ಹೀಗೆ ಸಂಘಿ ಕಳ್ಳ ದಳದವರಿಂದ ಪ್ರಾರಂಭವಾದ ಬೆಂಕಿಯ ಜ್ವಾಲೆ ಅಮಾಯಕ ಪೊಲೀಸರನ್ನು ಬಲಿ ಪಡೆದಿದೆ.

ಈ ಪ್ರಕರಣದಲ್ಲಿ ಬಾಧಿತರಾದವರೆಲ್ಲ ಬಹುತೇಕ ದಲಿತರು ಎನ್ನುವುದು ವಾಸ್ತವ. ಧರ್ಮ, ದೇವರು,ಗೋಪ್ರೇಮದ ಹೆಸರಿನ ಸಮಯಸಾಧಕ ಸಂಘಿಗಳ ಉದ್ದೇಶ ಅಂತಿಮವಾಗಿ ದಲಿತರು, ಹಿಂದುಳಿದವರು. ಈ ಸಂಘಿ ಕಾರ್ಯಾಚರಣೆಯ ಬಲಿಪಶುಗಳು ಅಮಾಯಕರು. ಸಂಘಿಗಳ ರಾಜಕೀಯ ಕಪಟನಾಟಕದ ಬಲಿಪಶುಗಳು ಎಂದಿನಂತೆ ಈಗ ಕೂಡಾ ಅಮಾಯಕರೆ.

ಸಿದ್ಧಾಪುರ ಪೊಲೀಸರ ಮೇಲಿನ ಈ ಕ್ರಮ ಅರ್ಥವಾದರೆ ಶಿರಸಿ ಸಂಘಿ ನಾಟಕದ ಸೂತ್ರ ಅರ್ಥವಾಗುತ್ತದೆ. ಕವಿ ಬ್ರೆಕ್ಟ್‌ ಹೇಳಿದಂತೆ ಪಟ್ಟಬದ್ರರ ಹುಡುಗಾಟಕ್ಕೆ ಸಿಗುವವರು ಅಮಾಯಕರಾದರೆ ನ್ಯಾಯ ಸಿಗಲು ಸಾಧ್ಯವೆ?

ಸರಳ,ಸಂಭಾವಿತ ಮಾನತಪ್ಪ ಕುಂಬಾರ ಮತ್ತು ಅಮಾಯಕ ಪೊಲೀಸರಿಗೆ ನ್ಯಾಯ ಸಿಗುವಂತಾಗಲಿ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *