ಭಟ್ಟರ ಮಂತ್ರಕ್ಕೆ ಸಿದ್ಧರಾಮಯ್ಯನವರೂ ಉದುರಿ ಬಿದ್ದರೆ….!?

ವಿಶ್ವೇಶ್ವರ ಭಟ್ಟರ ವಿಶ್ವಾಸಕ್ಕೆ ಪಾತ್ರರಾಗಿ ವಿಲನ್‌ ಗಳಾದ ಕನ್ನಡದ ಅನೇಕ ಪ್ರಮುಖರ ಪಟ್ಟಿಯೇ ಇದೆ. ಇತ್ತೀಚೆಗೆ ಭಟ್ಟರ ಕಾರ್ಯಕ್ರಮಕ್ಕೆ ಸಿದ್ಧರಾಮಯ್ಯ ಹೋಗಲಿದ್ದಾರೆ ಎನ್ನುವ ವಿಚಾರ ಬಹುಚರ್ಚೆಯ ವಿಷಯವಾಗಿದೆ.

ವಿಶ್ವೇ ಶ್ವರ ಭಟ್ಟರು ಮನುವಾದಿಗಳು ಎನ್ನುವ ವಿಚಾರದಲ್ಲಿ ಎರಡು ಮಾತುಗಳಿಲ್ಲ. ಅವರ ಹಿನ್ನೆಲೆ, ಅವರು ಬೆಳೆದು ಬಂದ ಪರಿಸರ, ಅವರ ಒಡನಾಟ ಇವೆಲ್ಲವುಗಳಿಗಿಂತ ಹೆಚ್ಚಾಗಿ ಭಟ್ಟರು ಬಿ.ಜೆ.ಪಿ. ಭಟರಾಗಿ ಬಹುಸಂಖ್ಯಾತರ ಭಾವನೆ,ಧೋರಣೆಗಳಿಗೆ ವಿರುದ್ಧವಾಗಿದ್ದರು ಎನ್ನುವುದು ಇಶ್ಯು.

ನಮ್ಮ ಪ್ರಗತಿ ಪರ ಸ್ನೇಹಿತರೆಲ್ಲಾ ಭಟ್ಟರ ಸ್ನೇಹಿತರನ್ನು ಸೈದ್ಧಾಂತಿಕ ಹಿನ್ನೆಲೆಯಿಂದ ಮಾತ್ರ ವಿಮರ್ಶಿಸಿದರೆ, ವಿರೋಧಿಸಿದರೆ ಅದನ್ನು ತಪ್ಪು ಎಂದು ಹೇಳಲಾದೀತೆ? ಅದೇನೇ ಇರಲಿ, ಮೊನ್ನೆ ಕೃಷ್ಣಪ್ರಸಾದ ಬರೆದ ಪ್ರಜಾವಾಣಿಯ ಅಂಕಣ ಈ ಭಟ್ಟರ ಪರಿವಾರ ಕನ್ನಡಿಗರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಎನ್ನುವುದನ್ನು ಒಪ್ಪುವ,ಬೆಂಬಲಿಸುವ ಕೆಲವೇ ಬರಹಗಾರರಲ್ಲಿ ನಾನೂ ಒಬ್ಬ.

ವಿಚಾರ ಏನಪ್ಪಾ ಅಂದ್ರೆ ನಮ್ಮ ಭಾಗದ ಹೋರಿ ಸ್ವಾಮಿ ತನ್ನ ಘನ ಕಾರ್ಯಕ್ಕೆ ಬಂಧನಕ್ಕೊಳಗಾಗಬೇಕಿದ್ದ ಸಮಯದಲ್ಲಿ ಈ ಭಾರತೀಯ ಬಹುಜನವಿರೋಧಿ ಪರಿವಾರದ ಮನುವಾದಿಗಳು ಸಿದ್ಧರಾಮಯ್ಯನವರೊಂದಿಗೆ ಸಲುಗೆ ಬಳಸಿ ಹೋರಿ ಸ್ವಾಮಿಯನ್ನು ಬಚಾವು ಮಾಡಿಸಿದರು! ಎನ್ನುವುದು.

ಹೋರಿ ಸ್ವಾಮಿಯಿರಲಿ, ತಿರುಪತಿ, ಕಾಂಚಿ, ಕಾಮಕೋಟಿ,ಪೇಜಾವರ ಯಾರೂ ಈ ನೆಲದ ಕಾನೂನಿಗೆ ಅತೀತರಲ್ಲ. ಇವರನ್ನು ಸಿದ್ಧರಾಮಯ್ಯನವರಂಥ ಸಮಾಜವಾದಿ ರಕ್ಷಿಸಿದರು ಎನ್ನುವುದು ನಂಬಲರ್ಹ ಸುದ್ದಿಯೂ ಅಲ್ಲ. ಆದರೆ ಅದಕ್ಕೆ ದಾಖಲೆಗಳಿವೆ. ಸಿದ್ಧರಾಮಯ್ಯ ಯಾವ ಜಾತಿ, ಧರ್ಮ,ಮತಗಳ ಸಂಕುಚಿತತೆಗೆ ಸಿಲುಕದ ಸಿಡುಕಿನ ಸಮಾಜವಾದಿ. ಅಂಥವರನ್ನು ಮನುವಾದಿಗಳು ಬಳಸಿಕೊಳ್ಳುತ್ತಾರೆ ಎನ್ನುವುದರಲ್ಲಿ ಮನುವಾದಿಗಳ ಸಮಯಸಾಧಕತನ,ಹಿಪೊಕ್ರಶಿ ಕಾಣಬಹುದು. ಕೆಲವು ಸಂದರ್ಭಗಳಲ್ಲಿ ಇದು ಸಿದ್ಧರಾಮಯ್ಯನವರ ಹೃದಯವೈಶಾಲ್ಯ,ಉದಾರತೆ ಕೂಡಾ ಎನ್ನಬಹುದು! ಆದರೆ ಈಗ ರಾಜ್ಯದ ರಾಜಕೀಯ ವಿದ್ಯಮಾನ, ಅವಕಾಶ, ಅಧಿಕಾರಗಳ ಹಿನ್ನೆಲೆಯೊಂದಿಗೆ ಚರ್ಚಿಸುವುದಾದರೆ ಈ ನೆಲಮೂಲದ ಭಾರತೀಯ ಬಹುಸಂಖ್ಯಾತರ ಶೋಷಕರು, ವಿರೋಧಿಗಳಾದ ಮನುವಾದಿಗಳು ರಾಜ್ಯಮಟ್ಟದಲ್ಲಿ ಈಡಿಗರು ಸೇರಿದಂತೆ ಎಲ್ಲಾ ಅಹಿಂದ್ ಗಳನ್ನು ಹುಡುಹುಡುಕಿ ವಿರೋಧ, ವಿಮರ್ಶೆ, ಟೀಕೆ ಮಾಡುವ ಸಂದರ್ಭದಲ್ಲಿ ಮತಾಂಧ ಮೋದಿ ಪರಿವಾರದ ಆಪ್ತರಾದ ಈ ಗುಂಪನ್ನು ಸಿದ್ಧರಾಮಯ್ಯ ಬೆಂಬಲಿಸುವ ಮೂಲಕ ಯಾವ ಸಂದೇಶ ಕೊಡಲು ಹೊರಟಿದ್ದಾರೆ ಎನ್ನುವ ಪ್ರಶ್ನೆ ಎದ್ದಿದೆ.

ಮನುವಾದಿಗಳು ಅಹಿಂದ್‌ ವಿರೋಧಿಗಳು ಅವರು ಹರಿಪ್ರಸಾದ್‌ ರಂಥ ಸೈದ್ದಾಂತಿಕ ಬದ್ದತೆಯ ಕಟ್ಟರ್‌ ಕಾಂಗ್ರೆಸ್ಸಿಗರನ್ನು ವಿರೋಧಿಸುವ ಸಂದರ್ಭದಲ್ಲಿ ಅವರ ವಿರೋಧ ಕಾಂಗ್ರೆಸ್‌ ಮತ್ತು ಸೋನಿಯಾ, ರಾಹುಲ್‌ ರತ್ತ ಎನ್ನುವುದು ಸ್ಪಸ್ಟ. ಸಿದ್ಧರಾಮಯ್ಯ ಮನುವಾದಿಗಳನ್ನು ಓಲೈಸುತ್ತಾ, ಹೋರಿಸ್ವಾಮಿಯಂಥವರನ್ನು ರಕ್ಷಿಸುತ್ತಾ ಯಾವ ಕಾಂಗ್ರೆಸ್‌, ಜಾತ್ಯಾತೀತತೆ ಕಟ್ಟಬಲ್ಲರು ಎನ್ನುವುದು ಪ್ರಶ್ನೆ?

ಭಾರತದ ಬಹುಸಂಖ್ಯಾತರ ಬೆವರನ್ನು ನಿಂದಿಸುವ ಮತೀಯವಾದಿ ಮನುವಾದಿ ಸಮಯಸಾಧಕರು ಸಿದ್ಧರಾಮಯ್ಯನಂಥವರನ್ನೂ ಬಳಸಿಕೊಂಡು ತಮ್ಮ ದುಷ್ಟಪರಿವಾರವನ್ನು ರಕ್ಷಿಸತೊಡಗಿದರೆ ಬೇಲಿಯೇ ಎದ್ದು ಹೊಲ ಮೇದಂತಾಗುವುದಿಲ್ಲವೆ? ನಮ್ಮ ನೆಚ್ಚಿನ ಸಿದ್ಧರಾಮಣ್ಣ , ಕಾಂಗ್ರೆಸ್‌, ಭಾರತೀಯ ಬಹುಸಂಖ್ಯಾತ ಮೂಲನಿವಾಸಿ ಅಹಿಂದ್‌ ವಿರೋಧಿಗಳೂ, ಸನಾತನ ವೈದಿಕ ವಂಚಕರೂ ಆದ ಮನುವಾದಿ ಪರಿವಾರ ನಿಮಗೂ ಎರಡು ಬಗೆಯುವ ಅವಕಾಶವಾದಿ ದೇಶದ್ರೋಹಿಗಳ ಗುಂಪು ಎನ್ನುವುದನ್ನು ನಿಮಗೆ ಮತ್ತೊಮ್ಮೆ ನೆನಪಿಸುವ ಕೆಲಸವನ್ನು ಈಗ ನಿಮಗೆ ಟೀಕಾಕಾರರಾದವರು ಮಾಡುತಿದ್ದಾರೆ ಎನ್ನಬಹುದಷ್ಟೇ….

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ‌ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ೨೪ ಗಂಟೆಗಳಲ್ಲಿ ನಿರಂತರ ಮಳೆಯಾಗಿದೆ. ಇದರ ಪರಿಣಾಮ ಶಿರಸಿ-ಅಂಕೋಲಾ ಮಾರ್ಗದ ಮಧ್ಯೆ ಗುಡ್ಡ...

Recommended For You

About the Author: Kanneshwar Naik

Leave a Reply

Your email address will not be published. Required fields are marked *