ಭಟ್ಟರ ಮಂತ್ರಕ್ಕೆ ಸಿದ್ಧರಾಮಯ್ಯನವರೂ ಉದುರಿ ಬಿದ್ದರೆ….!?

ವಿಶ್ವೇಶ್ವರ ಭಟ್ಟರ ವಿಶ್ವಾಸಕ್ಕೆ ಪಾತ್ರರಾಗಿ ವಿಲನ್‌ ಗಳಾದ ಕನ್ನಡದ ಅನೇಕ ಪ್ರಮುಖರ ಪಟ್ಟಿಯೇ ಇದೆ. ಇತ್ತೀಚೆಗೆ ಭಟ್ಟರ ಕಾರ್ಯಕ್ರಮಕ್ಕೆ ಸಿದ್ಧರಾಮಯ್ಯ ಹೋಗಲಿದ್ದಾರೆ ಎನ್ನುವ ವಿಚಾರ ಬಹುಚರ್ಚೆಯ ವಿಷಯವಾಗಿದೆ.

ವಿಶ್ವೇ ಶ್ವರ ಭಟ್ಟರು ಮನುವಾದಿಗಳು ಎನ್ನುವ ವಿಚಾರದಲ್ಲಿ ಎರಡು ಮಾತುಗಳಿಲ್ಲ. ಅವರ ಹಿನ್ನೆಲೆ, ಅವರು ಬೆಳೆದು ಬಂದ ಪರಿಸರ, ಅವರ ಒಡನಾಟ ಇವೆಲ್ಲವುಗಳಿಗಿಂತ ಹೆಚ್ಚಾಗಿ ಭಟ್ಟರು ಬಿ.ಜೆ.ಪಿ. ಭಟರಾಗಿ ಬಹುಸಂಖ್ಯಾತರ ಭಾವನೆ,ಧೋರಣೆಗಳಿಗೆ ವಿರುದ್ಧವಾಗಿದ್ದರು ಎನ್ನುವುದು ಇಶ್ಯು.

ನಮ್ಮ ಪ್ರಗತಿ ಪರ ಸ್ನೇಹಿತರೆಲ್ಲಾ ಭಟ್ಟರ ಸ್ನೇಹಿತರನ್ನು ಸೈದ್ಧಾಂತಿಕ ಹಿನ್ನೆಲೆಯಿಂದ ಮಾತ್ರ ವಿಮರ್ಶಿಸಿದರೆ, ವಿರೋಧಿಸಿದರೆ ಅದನ್ನು ತಪ್ಪು ಎಂದು ಹೇಳಲಾದೀತೆ? ಅದೇನೇ ಇರಲಿ, ಮೊನ್ನೆ ಕೃಷ್ಣಪ್ರಸಾದ ಬರೆದ ಪ್ರಜಾವಾಣಿಯ ಅಂಕಣ ಈ ಭಟ್ಟರ ಪರಿವಾರ ಕನ್ನಡಿಗರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಎನ್ನುವುದನ್ನು ಒಪ್ಪುವ,ಬೆಂಬಲಿಸುವ ಕೆಲವೇ ಬರಹಗಾರರಲ್ಲಿ ನಾನೂ ಒಬ್ಬ.

ವಿಚಾರ ಏನಪ್ಪಾ ಅಂದ್ರೆ ನಮ್ಮ ಭಾಗದ ಹೋರಿ ಸ್ವಾಮಿ ತನ್ನ ಘನ ಕಾರ್ಯಕ್ಕೆ ಬಂಧನಕ್ಕೊಳಗಾಗಬೇಕಿದ್ದ ಸಮಯದಲ್ಲಿ ಈ ಭಾರತೀಯ ಬಹುಜನವಿರೋಧಿ ಪರಿವಾರದ ಮನುವಾದಿಗಳು ಸಿದ್ಧರಾಮಯ್ಯನವರೊಂದಿಗೆ ಸಲುಗೆ ಬಳಸಿ ಹೋರಿ ಸ್ವಾಮಿಯನ್ನು ಬಚಾವು ಮಾಡಿಸಿದರು! ಎನ್ನುವುದು.

ಹೋರಿ ಸ್ವಾಮಿಯಿರಲಿ, ತಿರುಪತಿ, ಕಾಂಚಿ, ಕಾಮಕೋಟಿ,ಪೇಜಾವರ ಯಾರೂ ಈ ನೆಲದ ಕಾನೂನಿಗೆ ಅತೀತರಲ್ಲ. ಇವರನ್ನು ಸಿದ್ಧರಾಮಯ್ಯನವರಂಥ ಸಮಾಜವಾದಿ ರಕ್ಷಿಸಿದರು ಎನ್ನುವುದು ನಂಬಲರ್ಹ ಸುದ್ದಿಯೂ ಅಲ್ಲ. ಆದರೆ ಅದಕ್ಕೆ ದಾಖಲೆಗಳಿವೆ. ಸಿದ್ಧರಾಮಯ್ಯ ಯಾವ ಜಾತಿ, ಧರ್ಮ,ಮತಗಳ ಸಂಕುಚಿತತೆಗೆ ಸಿಲುಕದ ಸಿಡುಕಿನ ಸಮಾಜವಾದಿ. ಅಂಥವರನ್ನು ಮನುವಾದಿಗಳು ಬಳಸಿಕೊಳ್ಳುತ್ತಾರೆ ಎನ್ನುವುದರಲ್ಲಿ ಮನುವಾದಿಗಳ ಸಮಯಸಾಧಕತನ,ಹಿಪೊಕ್ರಶಿ ಕಾಣಬಹುದು. ಕೆಲವು ಸಂದರ್ಭಗಳಲ್ಲಿ ಇದು ಸಿದ್ಧರಾಮಯ್ಯನವರ ಹೃದಯವೈಶಾಲ್ಯ,ಉದಾರತೆ ಕೂಡಾ ಎನ್ನಬಹುದು! ಆದರೆ ಈಗ ರಾಜ್ಯದ ರಾಜಕೀಯ ವಿದ್ಯಮಾನ, ಅವಕಾಶ, ಅಧಿಕಾರಗಳ ಹಿನ್ನೆಲೆಯೊಂದಿಗೆ ಚರ್ಚಿಸುವುದಾದರೆ ಈ ನೆಲಮೂಲದ ಭಾರತೀಯ ಬಹುಸಂಖ್ಯಾತರ ಶೋಷಕರು, ವಿರೋಧಿಗಳಾದ ಮನುವಾದಿಗಳು ರಾಜ್ಯಮಟ್ಟದಲ್ಲಿ ಈಡಿಗರು ಸೇರಿದಂತೆ ಎಲ್ಲಾ ಅಹಿಂದ್ ಗಳನ್ನು ಹುಡುಹುಡುಕಿ ವಿರೋಧ, ವಿಮರ್ಶೆ, ಟೀಕೆ ಮಾಡುವ ಸಂದರ್ಭದಲ್ಲಿ ಮತಾಂಧ ಮೋದಿ ಪರಿವಾರದ ಆಪ್ತರಾದ ಈ ಗುಂಪನ್ನು ಸಿದ್ಧರಾಮಯ್ಯ ಬೆಂಬಲಿಸುವ ಮೂಲಕ ಯಾವ ಸಂದೇಶ ಕೊಡಲು ಹೊರಟಿದ್ದಾರೆ ಎನ್ನುವ ಪ್ರಶ್ನೆ ಎದ್ದಿದೆ.

ಮನುವಾದಿಗಳು ಅಹಿಂದ್‌ ವಿರೋಧಿಗಳು ಅವರು ಹರಿಪ್ರಸಾದ್‌ ರಂಥ ಸೈದ್ದಾಂತಿಕ ಬದ್ದತೆಯ ಕಟ್ಟರ್‌ ಕಾಂಗ್ರೆಸ್ಸಿಗರನ್ನು ವಿರೋಧಿಸುವ ಸಂದರ್ಭದಲ್ಲಿ ಅವರ ವಿರೋಧ ಕಾಂಗ್ರೆಸ್‌ ಮತ್ತು ಸೋನಿಯಾ, ರಾಹುಲ್‌ ರತ್ತ ಎನ್ನುವುದು ಸ್ಪಸ್ಟ. ಸಿದ್ಧರಾಮಯ್ಯ ಮನುವಾದಿಗಳನ್ನು ಓಲೈಸುತ್ತಾ, ಹೋರಿಸ್ವಾಮಿಯಂಥವರನ್ನು ರಕ್ಷಿಸುತ್ತಾ ಯಾವ ಕಾಂಗ್ರೆಸ್‌, ಜಾತ್ಯಾತೀತತೆ ಕಟ್ಟಬಲ್ಲರು ಎನ್ನುವುದು ಪ್ರಶ್ನೆ?

ಭಾರತದ ಬಹುಸಂಖ್ಯಾತರ ಬೆವರನ್ನು ನಿಂದಿಸುವ ಮತೀಯವಾದಿ ಮನುವಾದಿ ಸಮಯಸಾಧಕರು ಸಿದ್ಧರಾಮಯ್ಯನಂಥವರನ್ನೂ ಬಳಸಿಕೊಂಡು ತಮ್ಮ ದುಷ್ಟಪರಿವಾರವನ್ನು ರಕ್ಷಿಸತೊಡಗಿದರೆ ಬೇಲಿಯೇ ಎದ್ದು ಹೊಲ ಮೇದಂತಾಗುವುದಿಲ್ಲವೆ? ನಮ್ಮ ನೆಚ್ಚಿನ ಸಿದ್ಧರಾಮಣ್ಣ , ಕಾಂಗ್ರೆಸ್‌, ಭಾರತೀಯ ಬಹುಸಂಖ್ಯಾತ ಮೂಲನಿವಾಸಿ ಅಹಿಂದ್‌ ವಿರೋಧಿಗಳೂ, ಸನಾತನ ವೈದಿಕ ವಂಚಕರೂ ಆದ ಮನುವಾದಿ ಪರಿವಾರ ನಿಮಗೂ ಎರಡು ಬಗೆಯುವ ಅವಕಾಶವಾದಿ ದೇಶದ್ರೋಹಿಗಳ ಗುಂಪು ಎನ್ನುವುದನ್ನು ನಿಮಗೆ ಮತ್ತೊಮ್ಮೆ ನೆನಪಿಸುವ ಕೆಲಸವನ್ನು ಈಗ ನಿಮಗೆ ಟೀಕಾಕಾರರಾದವರು ಮಾಡುತಿದ್ದಾರೆ ಎನ್ನಬಹುದಷ್ಟೇ….

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *