ದಿ ಪ್ರಿಂಟ್‌ ನ ದಿಟ್ಟ ವರದಿಯಿಂದಾಗಿ ಮಣಿಪುರದ ಪೈಶಾಚಿಕತೆ ಹೊರಬಂತು!

ಸುಮಾರು ಎರಡು ತಿಂಗಳ ಕೆಳಗೆ ಮಣಿಪುರದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತೆ. ಮಹಿಳೆಯೊಬ್ಬಳ ಮೃತ ದೇಹವನ್ನು ಪ್ಲಾಸ್ಟಿಕ್ ಶೀಟ್ ಒಂದರಲ್ಲಿ ಸುತ್ತಿ ಬೀದಿಗೆಸೆದಿರುವುದು ಆ ವಿಡಿಯೋದಲ್ಲಿ ಕಾಣಸಿಗುತ್ತದೆ. ಚೂರಚಂದ್ ಪುರದ ಮೇತಿ ಜನಾಂಗಕ್ಕೆ ಸೇರಿದ, ನರ್ಸಿಂಗ್ ಓದುತ್ತಿದ್ದ ಹೆಣ್ಣು ಮಗಳ ಮೃತದೇಹವದು ಎಂಬ ಸುಳ್ಳು ಸುದ್ದಿ ಎಲ್ಲೆಡೆ ಹರಿದಾಡುತ್ತದೆ. ಕುಕಿ ಜನಾಂಗದ ಹೆಯ ಕೃತ್ಯವಿದು ಎಂದು ಮೇತಿ ಜನ ರೊಚ್ಚಿಗೇಳುತ್ತಾರೆ.



ಎಂಟು ನೂರು ಮೇತಿಗಳು ಕುಕಿ ಹಳ್ಳಿಗೆ ಲಗ್ಗೆಯಿಡುತ್ತಾರೆ. ಹಳ್ಳಿಯ ಒಂದು ಮನೆಯನ್ನ ಸುತ್ತುವರೆದು ಮನೆಗೆ ನುಗ್ಗುತ್ತಾರೆ. ಅಂದು ಮನೆಯಲ್ಲಿದ್ದವರು ಇಬ್ಬರು ಐವತ್ತರ ಆಸುಪಾಸಿನ ಮಹಿಳೆಯರು, 56 ವರ್ಷದ ತಂದೆ,18ವರ್ಷದ ಮಗ, ಮತ್ತು 21 ವಯಸ್ಸಿನ ಮಗಳು. ವರದಿಗಳ ಪ್ರಕಾರ ಪೊಲೀಸರು ಆ ಐವರನ್ನ ರಕ್ಷಿಸಿ ತನ್ನ ಕಸ್ಟಡಿಗೆ ತೆಗೆದುಕೊಂಡರೂ ರೊಚ್ಚಿಗೆದ್ದ ಜನ ಐವರನ್ನ ಮತ್ತೆ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ!


ನಂತರ ಹೆಣ್ಣು ಮಕ್ಕಳಿಗೆ ಬೆತ್ತಲಾಗಲು ಆದೇಶ ನೀಡಲಾಗಿದೆ. ಬೆತ್ತಲಾಗದಿದ್ದರೆ ಅಲ್ಲೇ ಕೊಚ್ಚಿ ಕೊಲ್ಲಲಾಗುವುದು ಎಂದು ಧಮಕಿ ಹಾಕಲಾಗಿದೆ. ಇದನ್ನ ವಿರೋಧಿಸಿದ ತಂದೆ ಮತ್ತು ಮಗನನ್ನ ಅಲ್ಲೇ ಇರಿದು ಕೊಲ್ಲಲಾಗಿದೆ. ಬೀದಿಗಳಲ್ಲಿ ಮೂವರನ್ನು ನಗ್ನವಾಗಿ ನಡೆಸಿಕೊಂಡು ಹೋಗುವಾಗ ಅವರೊಡನೆ ಅಸಭ್ಯವಾಗಿ ನಡೆದುಕೊಳ್ಳಲಾಗಿದೆ. ಕೊನೆಗೆ 21ವರ್ಷದ ಹುಡುಗಿಯ ಮೇಲೆ ನಿರಂತರ ಅತ್ಯಾಚಾರವೆಸಗಲಾಗಿದೆ. ಇದಾದ ನಂತರ ಈ ಸುದ್ದಿ ಮಣಿಪುರದಲ್ಲೇ ಮಣ್ಣಾಗಿ ಹೋಗಿದೆ. ಯಾರನ್ನೂ ಅಪರಾಧಿ ಎಂದು ಹೆಸರಿಸದೆ Zero FIR ಫೈಲ್ ಮಾಡಲಾಗಿದೆ.

ಬಹುಶಃ “ದ ಪ್ರಿಂಟ್” ದಿಟ್ಟ ವರದಿಗಾರ್ತಿ ಸೋನಾಲ್ ಮಥಾರು ಇಂಫಾಲ್ ನಿರಾಶ್ರಿತ ಶಿಬಿರಗಳಿಗೆ ಹೋಗಿ ತನಿಖೆ ಮಾಡದಿದ್ದರೆ ಈ ಧಾರುಣ ಕತೆ ಸಮಾಧಿಯಾಗಿರುತಿತ್ತು. ಮಣಿಪುರದಲ್ಲಿ ಏನು ನಡೆದಿಲ್ಲವಂಬಂತೆ ಇಡೀ ಭಾರತ ಮುಂದೆ ಸಾಗಿರುತ್ತಿತ್ತು. ಮಣಿಪುರಕ್ಕೆ ಹೋದ ಸೋನಾಲ್ ಮಥಾರು ಮಾಡಿದ ಮೊದಲ ಕೆಲಸ ಪ್ಲಾಸ್ಟಿಕ್ ಶೀಟ್ ನಲ್ಲಿದ್ದ ಮೃತದೇಹದ ಗುರುತು ಪತ್ತೆ ಹಚ್ಚಿದ್ದು. ವಾಸ್ತವದಲ್ಲಿ 2022ರ ನವೆಂಬರ್ 22ರಂದು ದೆಹಲಿಯಲ್ಲಿ ಪೋಷಕರಿಂದಲೆ ಬರ್ಬರವಾಗಿ “ಮರ್ಯಾದಾ” ಹತ್ಯೆಗೆ ಬಲಿಯಾದ ಆಯುಷಿ ಚೌಧರಿಯ ಮೃತ ದೇಹ ಅದಾಗಿತ್ತು.



ತುಂಬಾ ವ್ಯವಸ್ಥಿತವಾಗಿ ಈ fake ಚಿತ್ರ/ವಿಡಿಯೋವನ್ನ ಹರಿಯಬಿಡಲಾಗಿತ್ತು. ಹೆಣ್ಣು ಮಕ್ಕಳ ವಿಷಯವನ್ನ ಕಾರಣವಾಗಿಟ್ಟುಕೊಂಡು ಇಡೀ ಸಮುದಾಯವನ್ನ ಉದ್ವೇಗಗೊಳಿಸಬಹುದು ಎಂಬ ಯೋಜನೆ ಅಲ್ಲಿ ಸಫಲವಾಗಿತ್ತು. ಸೋನಾಲ್ ಮಥಾರು ಸುಳ್ಳು ಸುದ್ದಿಯನ್ನ ಬಯಲಿಗೆಳೆದಳು, ಮಣ್ಣಾಗುತ್ತಿದ್ದ ಹೇಯ ಕೃತ್ಯವನ್ನ ಜನರ ಮುಂದಿಟ್ಟಳು…

ಕಣ್ಣ ಮುಂದೆಯೇ ತಂದೆ ತಮ್ಮನನ್ನ ಕಳೆದುಕೊಂಡ, ವಿವರಿಸಲಾಗದ ಯಾತನೆಗೆ ಒಳಗಾದ ಇಪ್ಪತ್ತೊಂದು ವರ್ಷದ ಹುಡುಗಿಗೆ ಮರುಗುವ ಹೃದಯವಿದ್ದದ್ದು ಬಹುಶಃ ಸೋನಲ್ ಮಥಾರುಗೆ ಮಾತ್ರ ಅನ್ನಿಸುತ್ತೆ.



ಇನ್ನೊಂದೆಡೆ ತಮ್ಮ ಹವಾನಿಯಂತ್ರಿತ ಕೋಣೆಗಳಲ್ಲಿ ಕೂತು ಪತ್ರಿಕಾ “ಉದ್ಯಮ” ನಡೆಸುವ ಸೂಟುಧಾರಿಗಳ ಸುದ್ದಿವಾಹಿನಿಗಳಲ್ಲಿ ಈ ದುಷಕೃತ್ಯದ ಸುಳಿವು ಕೂಡ ಇರಲಿಲ್ಲ. ಅವರೆಲ್ಲ ಕೋಮು ದ್ವೇಷದ ಹೊಸ ಕತೆಯನ್ನ ಹುಟ್ಟಿಹಾಕುವುದರಲ್ಲಿ ಎಂದಿನಂತೆ ತಲ್ಲೀನರಾಗಿದ್ದರು. ಭಾರತ ಎಂದಿನಂತೆ ಬೆಳಗುತ್ತಿದೆ…

– Harish Gangadhar

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *