ಬಿ.ಜೆ.ಪಿ.ಯ ಕನಿಷ್ಠ ೫ ಜನ ಸಂಸದರಿಗೆ ಈ ಬಾರಿ ಟಿಕೆಟ್‌ ಇಲ್ಲ!ಯಾರು ಆ ಐವರು ಸಂಸದರು?

ರಾಜ್ಯ ಬಿ.ಜೆ.ಪಿ.ಯಲ್ಲಿ ಬಣ ರಾಜಕಾರಣ ಉಲ್ಬಣಿಸಿದ್ದು ಬಿ.ಎಲ್.‌ ಸಂತೋಷ ಬಣದ ಪ್ರತಾಪ್‌ ಸಿಂಹ, ತೇಜಸ್ವಿಸೂರ್ಯ ಸೇರಿದಂತೆ ಕನಿಷ್ಠ ೫ ಜನ ಸಂಸದರಿಗೆ ಬಿ.ಜೆ.ಪಿ. ಟಿಕೆಟ್‌ ನಿರಾಕರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಕಳೆದ ವಿಧಾನಸಭೆ ಚುನಾವಣೆ ವೇಳೆ ಈಶ್ವರಪ್ಪನವರನ್ನು ಎಳೆದು ಕೂಡ್ರಿಸಿದ ಬಿ.ಜೆ.ಪಿ. ಈ ಬಾರಿ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಸದಾನಂದ ಗೌಡರನ್ನು ಸ್ಫರ್ಧಿಸುವುದು ಬೇಡ ಎಂದು ಮೂಲೆಗೆ ತಳ್ಳಿದೆ.

ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಪಕ್ಷದಲ್ಲಿ ವಿರೋಧ ವ್ಯಕ್ತವಾಗಿದ್ದು ಜಿಲ್ಲೆಯಾದ್ಯಂತ ಬಿ.ಜೆ.ಪಿ. ಕಾರ್ಯಕರ್ತರೆ ಈ ಬಾರಿ ಅನಂತ ಕುಮಾರ ಬೇಡ ಎನ್ನುವ ಅಭಿಯಾನ ಪ್ರಾರಂಭಿಸಿರುವ ಸುದ್ದಿ ಬಹಿರಂಗವಾಗಿದೆ. ಇದಕ್ಕೆ ಪೂರಕವಾಗಿ ಮತ್ತೆ ಚುನಾವಣೆಗೆ ಕೇಸರಿ ಟವೆಲ್‌ ಕೊಡಗಿದ್ದ ಅನಂತಕುಮಾರ್‌ ಹೆಗಡೆವರಿಗೆ ಕಾಯ್ದುನೋಡಿ ತಯಾರಿ ಬೇಡ ಎನ್ನುವ ಸಂದೇಶ ರವಾನಿಸಿದೆಯಂತೆ.

ಬಿ.ಜೆ.ಪಿ.ಯಲ್ಲಿ ಬಿ.ಎಲ್.‌ ಸಂತೋಷ ಬಣ, ಯಡಿಯೂರಪ್ಪ ಬಣ ಎನ್ನುವ ಎರಡು ಗುಂಪುಗಳಾಗಿವೆ. ಇದರ ಪರಿಣಾಮವಾಗಿ ಬಿ.ಎಲ್.‌ ಸಂತೋಷರಿಂದ ಅನಾಯಾಸವಾಗಿ ಸಂಸದರಾಗಿದ್ದ ತೇಜಸ್ವಿ ಸೂರ್ಯ ಮತ್ತು ಪ್ರತಾಪ ಸಿಂಹರಿಗೆ ಟಿಕೇಟ್‌ ಸಿಗುವುದು ದರ್ಲಭವಾಗಿದೆ.

ಅನ್ಯರು ಬಹುಸಂಖ್ಯಾತರಾಗಿರುವ ಕೆಲವು ಕ್ಷೇತ್ರಗಳಲ್ಲಿ ಹಿಂದುತ್ವದ ಹೆಸರಲ್ಲಿ ಆಯ್ಕೆಯಾಗುತಿದ್ದ ಬ್ರಾಹ್ಮಣರಿಗೆ ಗೇಟ್‌ ಪಾಸ್‌ ನೀಡಲು ಸಿದ್ಧವಾಗಿರುವ ಬಿ.ಜೆ.ಪಿ. ಶೋಕಿಗಾಗಿ ಸಂಸದರಾಗಿದ್ದ ತೇಜಸ್ವಿ ಸೂರ್ಯ ಮತ್ತು ಅನಂತಕುಮಾರ ಹೆಗಡೆಯವರಿಗೆ ಕೋಕ್‌ ನೀಡಿ ಆ ಕ್ಷೇತ್ರಗಳಲ್ಲಿ ಮಹಿಳೆ ಅಥವಾ ಒಬಿ.ಸಿ. ಗೆಲ್ಲಿಸಿ ನಿಮ್ಮ ಹಿಂದುತ್ವ ಸಾಬೀತುಮಾಡಿ ಎಂದು ಬ್ರಾಹ್ಮಣರಿಗೆ ಟಾಸ್ಕ್‌ ನೀಡಿದೆ. ಇದರ ಭಾಗವಾಗಿ ಬಿ.ಜೆ.ಪಿ. ಬೆಂಗಳೂರು ದಕ್ಷಿಣದಲ್ಲಿ ಜೈಶಂಕರ್‌ ಅಥವಾ ತೇಜಸ್ವಿನಿ ಅನಂತ ಕುಮಾರ ರಿಗೆ ಅವಕಾಶ ಕಲ್ಫಿಸಲು ಯೋಚಿಸಿದೆ.

ಸಾರ್ವತ್ರಿಕ ವಿರೋಧಕ್ಕೆ ಗುರಿಯಾಗಿರುವ ಉತ್ತರ ಕನ್ನಡ ಸಂಸದ ಅನಂತಕುಮಾರ ಬದಲು ನಿರ್ಮಲಾ ಸೀತಾರಾಮನ್‌, ರೂಪಾಲಿ ನಾಯ್ಕ ಅಥವಾ ಮಿಥುನ್‌ ಶೇಟ್‌ ರಿಗೆ ಲೋಕಸಭೆಯ ಟಿಕೇಟ್‌ ನೀಡಿ ಬ್ರಾಹ್ಮಣರ ಹಿಂದುತ್ವ, ರಾಷ್ಟ್ರೀಯತೆ ಅಜೆಂಡಾವನ್ನು ನಿಗಷಕ್ಕೆ ಒಡ್ಡುವ ತಯಾರಿ ನಡೆಸಿದ್ದು ಮಾತೆತ್ತಿದರೆ ಮೋದಿ, ಹಿಂದುತ್ವ, ರಾಷ್ಟ್ರೀಯತೆ, ದೇಶಪ್ರೇಮ ಎನ್ನುವ ಬ್ರಾಹ್ಮಣರು ಈ ಬಾರಿ ನಿಗದಿತ ಸಮೂದಾಯದವರನ್ನು ಬಿಟ್ಟು ಬೇರೆಯವರನ್ನು ಗೆಲ್ಲಿಸುತ್ತಾರೋ ಎನ್ನುವ ಪರೀಕ್ಷೆ ನಡೆಸಲಿದ್ದಾರಂತೆ!

ಬಿ.ಜೆ.ಪಿ.ಯ ಈ ವಿದ್ಯಮಾನದಿಂದ ಕಂಗೆಟ್ಟ ಬ್ರಾಹ್ಮಣ ನಾಯಕರು ಮೋದಿ ಟಾರ್ಗೆಟ್ ಮುಸ್ಲಿಂ ಎಂದುಕೊಂಡಿದ್ದರೆ ಮೋದಿ ಬಳಗ ಈಗ ತಮ್ಮ ಬುಡಕ್ಕೇ ಬಿಸಿನೀರು ಬಿಡಲು ಯೋಚಿಸಿರುವ ಬಗ್ಗೆ ಆಘಾತಕ್ಕೊಳಗಾಗಿದ್ದಾರೆ.

ಚಿಕ್ಕಮಂಗಳೂರು, ಉತ್ತರ ಕನ್ನಡ, ಶಿವಮೊಗ್ಗ ಸೇರಿದಂತೆ ಕೆಲವು ಕಡೆ ಹಿಂದುಳಿದವರಿಗೆ ಬಿ.ಜೆ.ಪಿ.ಯಿಂದ ಅನ್ಯಾಯವಾಗುತಿದ್ದು ಈ ಕಾರಣ ಬಳಸಿ ಚುನಾವಣೆ ಗೆಲ್ಲಲು ಯೋಚಿಸಿರುವ ಕಾಂಗ್ರೆಸ್‌ ಗೆ ಶಾಕ್‌ ನೀಡಲು ಯೋಜಿಸಿರುವ ಬಿ.ಜೆ.ಪಿ. ಅನಂತಕುಮಾರ ಹೆಗಡೆ, ತೇಜಸ್ವಿ ಸೂರ್ಯ ಪಕ್ಷಕ್ಕಾಗಿ ದುಡಿಯಲಿ ಅವರನ್ನು ಗೆಲ್ಲಿಸಿದ ಕಾರ್ಯಕರ್ತರ ಪರವಾಗಿ ಈ ಇಬ್ಬರು ಸಂಸದರು ಪಕ್ಷದ ಅಭ್ಯರ್ಥಿ ಗೆಲ್ಲಿಸಲಿ ಎಂದು ಪ್ರತಿಪಾದಿಸಿದೆಯಂತೆ!

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

ಅಕಾಲಿಕ ಮಳೆ, ಜಾತ್ರೆ, ವಾರ್ಷಿಕೋತ್ಸವಗಳಿಗೆ ಅಡ್ಡಿ… ಶಾಸಕರ ಮಿಂಚಿನ ಸಂಚಾರ!

ಮಲೆನಾಡು ಕರಾವಳಿಯ ಅಕಾಲಿಕ ಮಳೆ ಬೇಸಿಗೆಯ ಉಷ್ಣವನ್ನು ಶಮನ ಮಾಡಿದ್ದರೆ… ಪೂರ್ವನಿಶ್ಚಿತ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *