ಜಾದಳದ ಪೆಟ್ಟಿಗೆಗೆ ಬೀಳಲಿದೆ ಆರೆಸ್ಸೆಸ್‌ ನ ಕೊನೆ ಮೊಳೆ!

ಹೇಮಂತ್‌ ಸೊರೆನ್‌ ಬಂಧನ, ಬಿ.ಜೆ.ಪಿ.ಯೇತರ ಇತರ ಪಕ್ಷಗಳ ಮುಖಂಡರ ಮನೆ ಮೇಲೆ ಆದಾಯ ತೆರಿಗೆ, ಜಾರಿ ನಿರ್ಧೇಶನಾಲಯದ ದಾಳಿ ಸೇರಿದಂತೆ ರಾಷ್ಟ್ರೀಯತೆ, ದೇಶಭಕ್ತಿಯ ಮುಖವಾಡದ ಠಕ್ಕರ ಪರಿವಾರ ಈಗ ಇಂಡಿಯಾದಲ್ಲಿ ಆಡುತ್ತಿರುವ ಆಟಕ್ಕೆ ದುರಂತ ಅಂತ್ಯವನ್ನಂತೂ ಕಾಣಲಿದ್ದಾರೆ. ಈ ಭಯದ ವಾತಾವರಣದ ಮಧ್ಯೆ ಜಾದಳದ ದಳವಾಯಿಗಳು ಸಂಘಿ ಠಕ್ಕರ ದುಷ್ಟಕೂಟವನ್ನು ಸೇರದೆ ಉಳಿಗಾಲವುಂಟೆ?

ನಿರೀಕ್ಷೆಯಂತೆ ಕುಮಾರಸ್ವಾಮಿಯವರ ಭಯ ಎನ್.ಡಿ.ಎ.ಗೆ ವರವಾಗಿದೆ. ಈ ನಡುವೆ ಸಿ.ಎಂ. ಇಬ್ರಾಹಿಂ ತಂಡ ಮತಾಂಧರನ್ನು ಒಪ್ಪದೆ ಜಾದಳದಿಂದ ಹೊರಹೋಗಲು ಕಾಯುತ್ತಿದೆ.

ಕುಮಾರಸ್ವಾಮಿ ಎನ್.ಡಿ.ಎ ಸೇರದಿದ್ದರೆ ಜೈಲು ಸೇರುತ್ತಾರೆ ಕುಮಾರಸ್ವಾಮಿ ಮೋದಿ ಪರಿವಾರ ಸೇರಿದರೆ ಜಾದಳದ ಜಾತ್ಯಾತೀತರು ಹೊರಹೋಗುತ್ತಾರೆ. ಈ ಉಭಯ ಸಂಕಟದಲ್ಲಿ ಫೇಕುದೊಣ್ಣೆಯಿಂದ ತಪ್ಪಿಸಿಕೊಳ್ಳಲು ಕುಮಾರಸ್ವಾಮಿ ಅನಿವಾರ್ಯವಾಗಿ ಎನ್.ಡಿ. ಎ. ಸೇರಿದ್ದಾರೆ. ಮೂರು ಕ್ಷೇತ್ರಗಳಿಗೆ ಅವಕಾಶ ಕೇಳಿ ಮೈತ್ರಿ ಮಾಡಿಕೊಂಡಿರುವ ಸ್ವಾಮಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಲೋಕಸಭಾ ಚುನಾವಣೆಯ ಉಸ್ತುವಾರಿಗಳನ್ನು ನೇಮಿಸಿದ್ದಾರೆ!

ಈ ನಾಟಕ ಒಂಡೆದೆ ನಡೆಯುತ್ತಿದ್ದರೆ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಜಾದಳದ ಬಿ.ಜೆ.ಪಿ.ಯ ಮೈತ್ರಿಯನ್ನು ವಿರೋಧಿಸುತ್ತಿರುವ ಸಮಾನಮನಸ್ಕರು ಸಭೆ ನಡೆಸಿ ಜಾದಳದ ಹೊಸ ನಡೆಗೆ ನಮ್ಮ ವಿರೋಧ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಜಾದಳವಿದ್ದಾಗ ವಿಭಜನೆಯಾಗುತ್ತಿದ್ದ ಅಹಿಂದ ಮತಗಳು ಈ ಬಾರಿ ಕಾಂಗ್ರೆಸ್‌ ಪರವಾಗಿ ಕ್ರೋಢೀಕರಣವಾಗಿ ಬಿ.ಜೆ.ಪಿ. ಸೋಲುವ ಅಪಾಯದ ನಡುವೆ ಅಹಂಕಾರದ ಸಂಘಿಗಳು ಉತ್ತರ ಕನ್ನಡ ದಕ್ಷಿಣ ಕನ್ನಡ ಸೇರಿದಂತೆ ಕೆಲವೆಡೆ ತಮಗೆ ಎದುರಾಳಿಗಳೇ ಇಲ್ಲ ಎಂದು ಬೀಗುತಿದ್ದಾರೆ.

ಬಲವಂತದ ಮೈತ್ರಿ ಗೆ ಒಪ್ಪಿರುವ ಕುಮಾರಸ್ವಾಮಿ ತಮ್ಮ ಶಕ್ತಿ ಇರುವ ಕೆಲವು ಕ್ಷೇತ್ರಗಳಲ್ಲಿ ಬಿ.ಜೆ.ಪಿ.ಗೆ ಬೆಂಬಲಿಸಿದರೂ ಕಾರ್ಯಕರ್ತರ ಹೊಂದಾಣಿಕೆ ಕಷ್ಟ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಒಳಜಗಳ, ಒಂದೇ ಜಾತಿಯ ಸ್ಫರ್ಧಿಗಳ ಭಾರದಿಂದ ಕುಸಿಯುತ್ತಿರುವ ಬಿ.ಜೆ.ಪಿ. ದಿನಕ್ಕೊಂದು ಅಭ್ಯರ್ಥಿಗಳ ಹೆಸರು ತೇಲಿ ಬಿಡುತ್ತಿದೆ. ಅದರಲ್ಲಿ ಹರಿಪ್ರಕಾಶ್‌ ಕೋಣೆಮನೆ, ಅಜಿತ್‌ ಹನುಮಕ್ಕನವರ್‌, ಚಕ್ರವರ್ತಿ ಸೂಲಿಬೆಲೆ ಪ್ರಮುಖರು. ಈ ಮೂವರೂ ಗೆಲ್ಲುವ ಅಭ್ಯರ್ಥಿಗಳಲ್ಲ ಎನ್ನುವುದು ಬಹಿರಂಗ ಗುಟ್ಟು. ಇವರ ಮಧ್ಯೆ ನಿರ್ಮಲಾ ಸೀತಾರಾಮನ್‌, ಜೈಶಂಕರ್‌ ಕೂಡಾ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾಗಬಹುದು ಎನ್ನಲಾಗುತ್ತಿದೆ.!

ಇಲ್ಲಿ ಬಿ.ಜೆ.ಪಿ. ಬ್ರಾಹಣರ ತುಷ್ಟೀಕರಣದಲ್ಲಿ ಮುಳುಗಿ ಬಹುಸಂಖ್ಯಾತರ ವಿರೋಧಿಯಾಗಿ ಬಣಗಳಿಂದ ಹೋಳಾಗುತ್ತಿದೆ. ಜಾದಳದ ಹತ್ತನ್ನೆರಡು ಮುಖಂಡರಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಮತಾಂಧ ಬಿ.ಜೆ.ಪಿ. ಜೊತೆ ನಮ್ಮ ಹೊಂದಾಣಿಕೆ ಇಲ್ಲ ಎಂದು ಸಮಾನಮನಸ್ಕರ ಕೂಟದ ಮೂಲಕ ಹೋರಾಟಕ್ಕಿಳಿದಿದ್ದಾರೆ. ಇದು ಜೆ.ಡಿ.ಎಸ್.‌ ಬಿ.ಜೆ.ಪಿ.ಯ ಅಪವಿತ್ರ ಮೈತ್ರಿಯ ವಿದ್ಯಮಾನವಾದರೆ ಕಾಂಗ್ರೆಸ್‌ ನಲ್ಲಿ ನಾಯಕರ ಮೇಲಾಟದಿಂದ ಮಹಿಳೆಯರಿಗೆ ಅವಕಾಶ ಎನ್ನಲಾಗುತ್ತಿದೆ.

ಇದು ಬರೀ ಉತ್ತರ ಕನ್ನಡದ ದುಸ್ಥಿತಿಯಲ್ಲ ರಾಜ್ಯದ ಬಹುತೇಕ ಕಡೆ ಮೋದಿ ಅಲೆಯಲ್ಲಿ ಗೆಲ್ಲುತ್ತೇವೆನ್ನುವ ಮೋದಿ ಭಟ್ಟಂಗಿಗಳು ಜನರ ಭಾವನೆ, ಆಶೋತ್ತರಗಳ ವಿರೋಧಿಯಾಗಿದ್ದಾರೆ. ಕಾಂಗ್ರೆಸ್‌ ನ ಗ್ಯಾರಂಟಿಗಳ ಫಲಾನುಭವಿಗಳು ಬಿ.ಜೆ.ಪಿ. ದೇಶಪ್ರೇಮದ ಕಪಟ ನಾಟಕಕ್ಕಿಂತ ಗ್ಯಾರಂಟಿ ಯೋಜನೆಗಳಿಗೆ ನಮ್ಮ ಮತ ಎನ್ನುತಿದ್ದಾರೆ. ಈ ಸ್ಥಿತಿಯಲ್ಲಿ ಪ್ರವಾಹದೊಂದಿಗೇ ಈಜುವ ನಾಯಕರು ಕಾಂಗ್ರೆಸ್‌, ಬಿ.ಜೆ.ಪಿ.ಗಳಲ್ಲಿ ಮತ ಬಾಹುಳ್ಯದ ಬಹುಸಂಖ್ಯಾತ ಸಮೂದಾಯಗಳಿಗೆ ಟಿಕೇಟ್‌ ತಪ್ಪಿಸಿಬಿಟ್ಟರೆ ಆಗ ಹಾಳೂರಿಗೆ ಉಳಿದವನೇ ಗೌಡ ಎನ್ನುವ ಸ್ಥಿತಿ ನಿರ್ಮಾಣವಾಗುತ್ತದೆ. ಈ ವಾತಾವರಣ ನೋಡಿದರೆ ಈಗ ಚಾಲ್ತಿಯಲ್ಲಿರುವ ಹೆಸರುಗಳಿಗೆ ಟಿಕೇಟ್‌ ಕೊಡದೆ ಯಾರ್ಯಾರನ್ನೋ ತಂದು ನಿಲ್ಲಿಸಿದರೆ ಆಗ ಚುನಾವಣೆಯ ಮಜಾ ಇರದೆ ಯಾರೋ ಒಬ್ಬರು ಆಯ್ಕೆಯಾಗುತ್ತಾರೆ. ಈ ಯಾರೋ ಒಬ್ಬರು ಆಯ್ಕೆಯಾಗಲು ಜಾದಳ ಬಲಿಯಾಗಬೇಕಾಗಿರುವುದು ಮಾತ್ರ ಈ ಬಾರಿ ಉತ್ತರ ಕನ್ನಡ ಮತ್ತು ರಾಜ್ಯದ ದುರಂತ ಎನ್ನಲಾಗುತ್ತಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *