ಲೋಕಸಭೆ ಸಮರ ೨೪- ಚುನಾವಣಾ ಗಾಸಿಪ್!‌ ಅನಂತಕುಮಾರ ಹೆಗಡೆ ಸಿಟ್ಟು ಮಾಡಿಕೊಳ್ಳುತ್ತಿರುವುದೇಕೆ?

ಘಟನೆ-೧-

ಲೋಕಸಭೆ ಚುನಾವಣೆಯ ಉತ್ತರ ಕನ್ನಡ ಟಿಕೆಟ್‌ ವಂಚಿತ ಅನಂತಕುಮಾರ ಹೆಗಡೆ ತನ್ನ ಲಾಗಾಯ್ತಿನ ಗಿಮಿಕ್‌ ಗಳೆಲ್ಲಾ ಕೈಕೊಡುತಿದ್ದಂತೆ ಪ್ರತಿ ಚುನಾವಣೆ ನಂತರ ಸೇರಿಕೊಳ್ಳುವ ತಮ್ಮ ಮನೆಯ ಅಂಡರ್‌ ಗ್ರೌಂಡ್‌ ಸೇರಿಕೊಂಡರಂತೆ ಎರಡೇ ದಾರಿಗಳಿರುವ ಆ ಅಂಡರ್‌ ವರ್ಲ್ಡ್ ಗೆ ಈ ಹಿಂದೆ ಎರಡು ಜನರಿಗೆ ಮಾತ್ರ ಪ್ರವೇಶ ಅವಕಾಶವಿತ್ತಂತೆ. ಈಗ ಅದು ಒಬ್ಬರಿಗೆ ಮಾತ್ರ ಉಳಿದುಕೊಂಡಿದ್ದು ಈ ಅಂಡರ್‌ ಗ್ರೌಂಡ್‌ ಪ್ರವೇಶ ಕಳೆದುಕೊಂಡ ಇನ್ನೊಬ್ಬ ಯಾರು ಎನ್ನುವ ತನಿಖೆ ಈಗ ಸಂಘದಿಂದ ಪ್ರಾರಂಭವಾಗಿದೆಯಂತೆ!

ಘಟನೆ-೨-

ತನಗೆ ಚುನಾವಣೆ ಬೇಡ ಬೇನಾಮಿ, ಡುಪ್ಲಿಕೇಟ್‌ ಖಾತೆಗಳಲ್ಲಿ ಸಂಘಿಗಳು ಇಟ್ಟಿರುವ ಹಣ-ಸಂಪತ್ತು ಉಳಿಸಿಕೊಟ್ಟರೆ ಸಾಕು. ಅವರು ನನ್ನನ್ನು ರಕ್ಷಿಸಿದರು, ಅವರನ್ನು ನಾನು ರಕ್ಷಿಸುತ್ತೇನೆ ಎಂದು ಕದಂಬ ವೃಕ್ಷದ ಕೆಳಗೆ ಕುಳಿತಿದ್ದ ಅನಂತಮಾಣಿ ಅಲಿಯಾಸ್‌ ಅನಂತಕುಮಾರ ಹೆಗಡೆಯವರನ್ನು ಮಾತನಾಡಿಸಲು ಹೋದ ಕುಲಬಾಂಧವರ ಮೇಲೆ ಎಗರಿಬಿದ್ದ ಮಾಜಿ ಸಂಸದ ʼನಿಂಗ ಎಲ್ಲಾ ಆ ನಾಟ್ಕದವನ ಹಿಂದೆ ಹೋಗಿ ನನ್ನೂ ಬೀದಿಗೆ ತಂದ್ರಿ, ಆಗ ಆನೆ ಚುನಾವಣೆ ಬ್ಯಾಡ ಅಂದ್ರೆ ಇನ್ನೊಂದಸರಿ ಹೆಗಡೆರೆ ಅಂದ್ರಿ ಈಗ ಟಿಕೆಟ್‌ ಇಲ್ಲ, ಸಾಂತ್ವನ ಹೇಳಿ ಹೋಪನ ಅಂತ ಬಂದಗಿದ್ದ ನಿಂಗಕ್ಕೆಲ್ಲಾ ಈ ಸುಟ್ಟವನ ಮನೆ ಕಾಣ್ತಿಲ್ಲನ ಎಂದು ಗದರಿಸಿ ಕಳಿಸಿದರಂತೆ!

ಘಟನೆ ಮೂರು-

ಉತ್ತರ ಕನ್ನಡದ ಉಸ್ತುವಾರಿ ಬ್ರಾಹ್ಮಣರ ಸಂಧಾನಕಾರ್ಯಕ್ಕೆ ನಿಯೋಜಿತರಾಗಿರುವ ಹೊಳೆಕೊಪ್ಪದ ಹಾಲಪ್ಪ ಯಡಿಯೂರಪ್ಪ ಆದೇಶಾನುಸಾರ ಶಿರಸಿಗೆ ಬರಲಾಗಿ ಒಂದು ಬೆಳಿಗ್ಗೆಯಿಂದ ಶಿರಸಿ- ಮತ್ತಿಕಟ್ಟಾ ಎಂದು ಕಾಯಿಸಿ ಕೊನೆಗೂ ಹುಬ್ಬಳ್ಳಿ ರಸ್ತೆ ಕೆ.ಎಚ್.ಪಿ. ಕಾಲೊನಿಗೆ ಬರಬೇಕೆಂದು ಕರೆಸಿಕೊಂಡ ಅನಂತಕುಮಾರ ಹೆಗಡೆ ʼಹಾಲಪ್ಪ ಏನು ಬಂದದ್ದುʼ ಅಂದರಂತೆ, ತಕ್ಷಣ ಟಿ.ಎಸ್.ಎಸ್.‌ ಘಟನೆ ನೆನಪಿಸಿಕೊಂಡ ಹಾಲಪ್ಪ ಏನಿಲ್ಲಾ ನಿಮನೆ ನೋಡಿ ಬರನ ಅಂತ ಬಂದವಪ್ಪಾ ಎಂದು ನಿಟ್ಟುಸಿರು ಬಿಟ್ಟರಂತೆ.

ಸರಿ ಹಾಗಾದ್ರೆ ನೋಡಾಯ್ತಲ್ಲ ಏನಾದರೂ ಆಸರಿಗೆ ತಗಂಡು ಹೋಗಬಹುದು ಎಂದು ಮಾತುಕತೆಯನ್ನೇ ಮುಗಿಸಿದ ಅನಂತಕುಮಾರ ವರ್ತನೆ ಕಂಡ ಹಾಲಪ್ಪ ನಾವೆ ಯಡವಟ್ಟು ಅಂದಕುಂದ್ರೆ ಈ ಮಾಣಿ ನಮಕ್ಕಿಂತ ಎಡವಟ್‌ ಐದನಲ್ರೋ ಎಂದು ಮುಖ ಒರೆಸಿಕೊಂಡರಂತೆ ಛೆ.

ಘಟನೆ ನಾಲ್ಕು-

ಶತಾನು ಗತಾಯ ಉತ್ತರ ಕನ್ನಡ ಲೋಕಸಭೆ ಟಿಕೇಟ್‌ ಗಿಟ್ಟಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ನಾನು ಅನಂತಕುಮಾರ ಅಣ್ಣ ತಮ್ಮಂದಿರಿದ್ದಂತೆ ಅವರ ಮನ ಒಲಿಸಿ ಪ್ರಚಾರಕ್ಕೆ ಕರೆಯುತ್ತೇನೆ ಎಂದು ಮಾಧ್ಯಮಗಳಿಗೆ ಹೇಳಿ ಮಾರಿಕಾಂಬೆಗೆ ಪರಾಮಸಿಯಾತು ಅಂತನೆ ಕೈ ಮುಗಿದು ಕಾರ್‌ ಹತ್ತಿ ಕೆ.ಎಚ್.ಬಿ. ಅನಂತ ನಿಲಯಕ್ಕೆ ಹೋದರೆ ಅಲ್ಲಿ…… ನೋ ಎಂಟ್ರಿ, ನಾಯಿ ಇದೆ ಎಚ್ಚರಿಕೆ

ಎನ್ನುವ ಬೋರ್ಡ್‌ ಕಾಣಬೇಕೆ! ಇದೆಲ್ಲಾ ಇದ್ದಿದೆಯಾ ಒಳಗೆ ಅನಂತ್‌ ಹೆಗಡೇರು ಇದ್ರನೋ ಎಂದು ಮಾಜಿ ಸ್ಫೀಕರ್‌ ತಮ್ಮ ನೀಳಕಾಯ ಬಗ್ಗಿಸಿ ಕಿಟಕಿ ಹಣಕಿ ಕೇಳಿದರಂತೆ!

ಏ ಮುಂದೆ ಹೋಗಲ್‌ ಹೇಳಭಾವ ಬಾಳ ಬಿಜಿ ಇದ್ದಿ ಎನ್ನುವ ಗಡಸು ಸ್ವರ ಪ್ರತಿಧ್ವನಿಸಿದ್ದೇ…

ಆಯ್ತರ ಹಂಗರೆ ಕಡಿಗೇ ಫ್ರೀ….. ಇದ್ದಾಗ ಬತ್ತಿ ಅಂತ ಹೇಳ ಎಂದು ಕಾಲುಕಿತ್ತರಂತೆ.

( ಇವೆಲ್ಲಾ ಮಾಜಿ ಸಚಿವರ ಮನೆಯ ಸಿ.ಸಿ.ಕೆಮರಾಗಳಲ್ಲಿ ಸೆರೆಯಾಗಿದ್ದು ಈ ಧಾರವಾಹಿ ಆಧರಿಸಿ ʼಟಿಕೇಟ್‌ ಸಿಕ್ಕರೂ ಬಿಡದೀ ಮಾಯೆ, ಎನ್ನುವ ಚಿತ್ರ ತಯಾರಾಗುತ್ತಿದೆ. ಈ ಚಿತ್ರ ನಿರ್ಮಾಣ ಕ್ರೌಡ್‌ ಫಂಡಿಂಗ್‌ ನಲ್ಲಿ ನಡೆಯುತಿದ್ದು ಹರೀಶ್‌ ಗೌಡರ್‌ ನಿರ್ಧೇಶನದ ಹೊಣೆ ಹೊತ್ತಿದ್ದಾರಂತೆ!)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *