ಕಾಂಗ್ರೇಸ್ ಸೋಲಿಗೆ ಕಾರಣ ಯಾರು ? Part -3

ಶಿವಮೊಗ್ಗದಲ್ಲಿ ಕಾಂಗ್ರೆಸ್ ಸೋತದ್ದು ಏಕೆ..?
ಸೋಲಿನ ಆತ್ಮಾವಲೋಕನ ಸಭೆ.

ಲೋಕಸಭೆಯ ಚುನಾವಣೆ ಎರಡು ತಿಂಗಳ ಹಿಂದೆ ಏ ಬೀ ವಿ ಪೀ ಘಟಕದ ಸ್ನೇಹಿತನೊಬ್ಬ ಕಾಲೇಜು ಕಾರ್ಯಕ್ರಮದ ಆಹ್ವಾನ ಪತ್ರಿಕೆ ಕಳಿಸಿದ್ದ. ತೆರೆದು ನೋಡಿದರೆ ಅಮೃತಕಾಲದ ಬಗ್ಗೆ ವಿಶೇಷ ಉಪನ್ಯಾಸ ನಿವೃತ್ತ ಹೆಡ್ ಮಾಸ್ತರ್ ರಿಂದ. ಖಡ್ಡಾಯ ಹಾಜರಾತಿ ಇರಬೇಕು ಎನ್ನುವ ಷರತ್ತು ವಿದ್ಯಾರ್ಥಿಗಳಿಗೆ ವಿಧಿಸಲಾಗಿತ್ತು.

ಇದು ಕಾಲೇಜುಗಳ ಕತೆ. ಸಾಗರದಲ್ಲಿ ಇಂದಿರಾ ಗಾಂಧಿ ಹೆಸರಿನಲ್ಲಿ ಡಿಗ್ರಿ ಕಾಲೇಜು ಇದೆ. ಮೂರು ಸಾವಿರ ವಿದ್ಯಾರ್ಥಿಗಳು ಓದುತ್ತಾ ಇದ್ದಾರೆ. ಕಳೆದ ಸಾರಿ ಕೋಳಿ ಕಜ್ಜಾಯ ವಿಚಾರದಲ್ಲಿ ಬಹಳ ಸುದ್ಧಿ ಆಗಿತ್ತು. ಅದಕ್ಕೂ ಮೊದಲು ಕಾಲೇಜು ಕಾರ್ಯಕ್ರಮದಲ್ಲಿ ಭಗವದ್ ಧ್ವಜ ಹಾರಿಸಿ ಸುದ್ಧಿ ಆಗಿತ್ತು. ಕಾಲೇಜಿನ ವಾತಾವರಣ ಹೇಗಿದೆ ಎನುವುದರ ಆಂತರಿಕ ವರದಿ ತರಿಸಿಕೊಂಡರೆ ಭೂತಮುಖಿ ಖಾಯಂ ಉಪನ್ಯಾಸಕ ವರ್ಗ ಒಂದು ಕಡೆಯಾದರೆ ಮೇಲೆ ನಾನು ತಿಳಿಸಿದ ಅಮೃತಕಾಲದ ಉಪನ್ಯಾಸ ನೀಡುವ ನಿವೃತ್ತ ಮುಖ್ಯೋಪಾಧ್ಯಾಯರ ಮಗ ಸೇರಿ ಅವರ ಬೈಠಕ್ ಶಿಷ್ಯರುಗಳನ್ನು ಅಲ್ಲಿ ಅಥಿತಿ ಉಪನ್ಯಾಸಕರನ್ನಾಗಿ ಈ ಹಿಂದೆಯೇ ತುಂಬಿಸಲಾಗಿದೆ. ಕಾಲೇಜಿನ ವಿದ್ಯಾರ್ಥಿ ವೇದಿಕೆ ಕಾರ್ಯಕ್ರಮ ಸೇರಿ ನಡೆಯುವ ಉಪನ್ಯಾಸಗಳ ಸಂಪನ್ಮೂಲ ವ್ಯಕ್ತಿಗಳನ್ನು ಇವರು ನಿರ್ವಹಿಸುತ್ತಾರೆ. ಕಾಲೇಜಿನ 85% ವಿದ್ಯಾರ್ಥಿಗಳು ಅಹಿಂದ ಸಮುದಾಯಕೆ ಸೇರಿದವರು. ಬಹತೇಕ ಅಥಿತಿ ಉಪನ್ಯಾಸಕರ ಯೋಚನಾಕ್ರಮ ಮತ್ತು ರಾಜಕೀಯ ಹಿತಾಸಕ್ತಿ ಮತ್ತು ಅಜೆಂಡಾವನ್ನು ಪ್ರತ್ಯೇಕವಾಗಿ ಬಿಡಿಸಿ ಹೇಳಬೇಕಿಲ್ಲ.

ಸಾಗರದ ಬಿಸಿಎಂ ಹಾಸ್ಟೆಲ್ಗಳಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಸತಿ ಇದ್ದಾರೆ. ಹಾಸ್ಟೆಲ್ ಅಂದರೆ ಕೇವಲ ಅನ್ನ ನೆರಳಿನ ಜಾಗ ಅಲ್ಲ. ಮೀನು ಮಾಂಸ ತಿನ್ನುವ ಹೆಚ್ಚಿನ ಜನ ಇರುವ ಈ ಹಾಸ್ಟೆಲ್ ಗಳಲ್ಲಿ ಬಿಜೆಪಿ ಯ ವಿದ್ಯಾರ್ಥಿ ಸಂಘಟನೇ ಏ ಬೀ ವಿ ಪೀ ಯ ಸಂಘಟನಾ ಭಾಗ ಆದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಬಾರಿ ಚುನಾವಣೆಯಲ್ಲಿ ಹಾಸ್ಟೆಲ್ ನಿರ್ವಹಣೆ ಗೆ ಬಿಜೆಪಿ ಕಡೆಯಿಂದ ಪ್ರತ್ಯೇಕ ಆಕ್ಷನ್ ಪ್ಲಾನ್ ಇತ್ತು.

ಇದು ಸಾಗರದ ಕತೆ.

ಶಿವಮೊಗ್ಗದ ಗಾಜನೂರು ಸೇರಿ ಬಹತೇಕ ವಸತಿ ಶಾಲೆಗಳಲ್ಲಿ ಒಂದು ತರಗತಿಯನ್ನ ವಿಚಾರಗಳನ್ನು ತುಂಬಲು ಮೀಸಲು ಇಡಲಾಗಿದೆ. ನನಗೆ ಗೊತ್ತಿರುವ ಹಲವು ವಿದ್ಯಾರ್ಥಿಗಳು ನೀಡಿದ ಮಾಹಿತಿ ಪ್ರಕಾರ ಎಂಟರಿಂದ ಪೀ ಯು ತನಕ ವಾರಕ್ಕೆ ಎರಡು ದಿನ ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಬಲಿಷ್ಠ ನಾಯಕತ್ವ ( ಮೋದಿ ನಾಯಕತ್ವ) ಬಗ್ಗೆ ತರಗತಿ ಇರುವಂತೆ ನೋಡಿಕೊಳ್ಳಲಾಗುತ್ತ ಇದೆ. ಈಗಿನ ಎಂಟನೇ ತರಗತಿ ವಿದ್ಯಾರ್ಥಿ ಎಂದರೆ ಮುಂದಿನ ಚುನಾವಣೆಯ ಮತದಾರ ವರ್ಗ.

ಕರಾವಳಿಯಲ್ಲಿ ಮಾಡಿದ ಪ್ರಯೋಗ ಇದು
ಈಗ ಮಲೆನಾಡಲ್ಲಿ ವಿಸ್ತಾರಿಸಲಾಗಿದೆ. ಕುಂದಾಪುರದಲ್ಲಿ ಡಿಗ್ರಿ ಓದಲು ಹೋದ ನನ್ನ ಸ್ನೇಹಿತನ ಮಗಳು ಪ್ರತಿ ಬಾರಿ ಚುನಾವಣೆಯಲ್ಲಿ ಗುಪ್ತವಾಗಿ ಸಂಘೀ ಆಗಿ ಕೆಲಸ ಮಾಡುತ್ತಾಳೆ. ಅವಳ ಅಜ್ಜ ಗೆ ಭೂಮಿ ಅಮ್ಮನಿಗೆ ಕೆಲಸಾ ಎರಡನ್ನೂ ಕಾಗೋಡು ತಿಮ್ಮಪ್ಪನವರೇ ಕೊಟ್ಟಿದ್ದಾರೆ.. !! ಇವರ ಸಂಖ್ಯೆ ಪ್ರತಿ ಊರಲ್ಲಿ ಇದೆ. ಕರಾವಳಿ ಕಾಲೇಜುಗಳ ಮಾದರಿ ಮಲೆನಾಡಿಗೆ ವಿಸ್ತಾರ ಮಾಡಲಾಗಿದೆ.


ನಾವು ಊರಲ್ಲಿ ಚುನಾವಣೆ ಮುನ್ನ ದಿನಗಳಲ್ಲಿ ಕಾಂಗ್ರೆಸ್ ಮತ ಹಾಕಿ ಎಂದು ಕೇಳುತ್ತಾ ಇರುವುದು ಇದೆ ವಿದ್ಯಾರ್ಥಿಗಳು ಮತ್ತು ಇವರ ಪೋಷಕರ ಬಳಿ. ಪಾಪ ಕೆಲ ಪೋಷಕರು ಮನೆಯಲ್ಲಿ ಹೊಸ ತಲೆಮಾರಿನವರ ಈ ಪ್ರಶ್ನೆಗಳಿಗೆ ಉತ್ತರ ಕೊಡುವುದಕ್ಕೆ ಆಗದೇ ಸುಮ್ಮನೆ ಆಗಿದ್ದಾರೆ. ಮತ್ತೆ ಕೆಲ ಅಮ್ಮಂದಿರು ಮಕ್ಕಳ ಮಾತು ಕೇಳಿ ಸುಮ್ಮನೆ ವೋಟು ಹಾಕಿ ಬಂದಿದ್ದಾರೆ. ಬಿಜೆಪಿ ಗೆ
ಬೀ ವೈ ರಾಘವೇಂದ್ರ ಎನ್ನುವ ವ್ಯಕ್ತಿಗತ ಕ್ಯಾರೆಕ್ಟ್ ರ್
ಹೊರತಾಗಿ ನಡೆಯುತ್ತಾ ಇರುವ ಸಂಗತಿಗಳು ಇವು.


ಇನ್ನು ಶಿವಮೊಗ್ಗ ಕಾಂಗ್ರೆಸ್ ವಾರ್ ರೂಮ್ ಎನ್ನುವುದು ಅದ್ಬುತ ಮೇಧಾವಿಗಳಿಂದ ಕೂಡಿದೆ. ಅವರ ಪ್ರಕಾರ ಭಾಗ್ಯ ಕೊಟ್ಟ ಕಾರಣ ಹೆಣ್ಣು ಮಕ್ಕಳ ವೋಟು ಎನ್ನುವುದು ನೂರಕ್ಕೆ ನೂರು ಬೀಳುತ್ತದೆ ಅವರ ಪ್ರಕಾರ ಬಿಜೆಪಿ ಕಾರ್ಯಕರ್ತನ ಹೆಂಡತಿಯ ಮತ ಕೂಡಾ ಕಾಂಗ್ರೆಸ್ ಬಂದರೇ ಅಚ್ಚರಿ ಇಲ್ಲ. ಜಾತಿ ಲೆಕ್ಕಾ ಕೂಡಾ ಅಷ್ಟೇ ಸಲೀಸು ಈಡಿಗರು ಶೇಖಡಾ 90, ಅಲ್ಪ ಸಂಖ್ಯಾತ ನೂರಕ್ಕೆ ನೂರು, ಇತರೆ ಹಿಂದುಳಿದ ಜಾತಿಗಳು 70%,
ಎಸ್ ಸಿ ಎಸ್ ಟಿ ಖಾಯಂ. ಚುನಾವಣೆ ಮುನ್ನಾ ದಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ.

ನಾವು ಗೆದ್ದಾಗಿದೆ.


ಕಟ್ಟ ಕಡೆಗೆ ನಮ್ಮ ದಂಡನಾಯಕರಾದ ಮಧು ಬಂಗಾರಪ್ಪನವರು. ಅವರಿಗೆ ಗೊತ್ತಿಲ್ಲದೇ ಇರುವುದು ಏನಿದೆ. ಅವರು ಸರ್ವಜ್ಞರು. ಯಾರಾದರೂ ಅವರಿಗೆ ಏನಾದ್ರೂ ಹೇಳಲು ಸಾಧ್ಯವೇ..? ಹೇಳಿದರೂ ಅವರು ಕೇಳಿಸಿ ಕೊಳ್ಳಬಹುದೇ..? ಛೇ.. ಸಾಧ್ಯವೇ ಇಲ್ಲ. ಅವರು ಹೇಳಿದ್ದನ್ನು ನಾವು ಕೇಳಬೇಕು ಅಷ್ಟೇ.

ಸರ್ವಾಧಿಕಾರ. ದಾಷ್ಠ್ಯ ಬೆಳೆಸಿಕೊಂಡಾಗ ಕಿವಿ ಮಂದ ಆಗುತ್ತದೆ. ಬುದ್ಧಿಗೆ ಮಂಕು ಕವಿಯುತ್ತದೆ. ಬಹಳ ಮುಖ್ಯವಾಗಿ ಸಂವೇದನೆಗಳನ್ನ ಅರ್ಥ ಮಾಡಿಕೊಳ್ಳುವ ಸೂಕ್ಷ್ಮತೆ ಕಳೆದು ಕೊಳ್ಳುತ್ತಾರೆ.

ಮಧು ಬಂಗಾರಪ್ಪ ತಮ್ಮನ್ನ ಮುರಿದು ಕಟ್ಟಿಕೊಳ್ಳಬೇಕು. ಈ ಸರಣಿ ಸೋಲುಗಳು ಇದನ್ನೇ ದ್ವನಿಸುತ್ತಾ ಇವೆ.

ಆಗ ಈ ಲೇಖನದಲ್ಲಿ ಮೇಲೆ ನಾನು ಉಲ್ಲೇಖ ಮಾಡಿದ ಎಲ್ಲಾ ಸಂಗತಿಗಳು ಅವರಿಗೆ ಅರ್ಥ ಆಗುತ್ತದೆ.


ಕೊನೆ ಮಾತು.
ಪಕ್ಷ ಟಿಕೆಟ್ ಕೊಟ್ಟಾಗ ಅದರ ಕಾರ್ಯಕರ್ತರು ದುಡಿಯುತ್ತಾರೆ. ನಾನೂ ಕೂಡಾ ಸಾಗರ ತಾಲ್ಲೂಕಿನ ಬಹು ಭಾಗ ನಮ್ಮ ನಾಯಕರಾದ ಗೋಪಾಲಕೃಷ್ಣ ಬೇಳೂರು ಮತ್ತು ಗೀತಾ ಶಿವರಾಜ್ ಕುಮಾರ್ ದಂಪತಿಗಳು, ದುನಿಯಾ ವಿಜಯ್ ಜತೆ ಸುತ್ತು ಹಾಕಿ ಸಭೆಯಲ್ಲಿ ಪಾಲ್ಗೊಂಡೆ.

ಗೀತಾ ಮೇಡಂ ವೈಯಕ್ತಿಕವಾಗಿ ನನಗೆ ಚತುರ ಚರಿಷ್ಮ ರಾಜಕಾರಣಿ ನಮ್ಮ ಬಂಗಾರಪ್ಪ ಮಗಳಿಗಿಂತ ಎತ್ತರ ಏರಿದರೂ ಹಣ ಕೀರ್ತಿ ಎಲ್ಲವೂ ಇದ್ದರೂ ಮುಗ್ದತೆ ಉಳಿಸಿಕೊಂಡ ನಮ್ಮ ಮೇರು ನಟ ಅಣ್ಣಾವ್ರ ಸೊಸೆ ಯಾಗಿಯೆ ಕಂಡರು. ಅದಕ್ಕೆ ಅವರ ವ್ಯಕ್ತಿತ್ವ ಪೂರ್ಣವಾಗಿದೆ ಅನ್ನಿಸ್ತು. ಶಿವಣ್ಣ ಕೂಡಾ ಅಷ್ಟೇ ಎಲ್ಲೂ ಕೂಡಾ ತಮ್ಮ ಮಾತು ಮತ್ತು ನಡವಳಿಕೆಯಲ್ಲಿ ಘನತೆ ಕಳೆಯದೆ ನಡೆದರು.

ಇಷ್ಟು ಹೇಳಬೇಕಾದ ಮಾತು.
ಮೊನ್ನೆ ಸಾಗರದ ಆತ್ಮಾವಲೋಕನ ಸಭೆಯಲ್ಲಿ ಕಡಿಮೆ ಅವಕಾಶದಲ್ಲಿ ಆಡಿದ ಮಾತುಗಳು ಇವು.

(ದ್ವೀಪದ ಜಿ. ಟಿ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *