ಅಯ್ಯಪ್ಪ ಇಲ್ಲಿದೆ ಉತ್ತರದ ಅಯ್ಯಪ್ಪ….

ಅಯ್ಯಪ್ಪನ ಭಕ್ತರು ಎಲ್ಲಿಲ್ಲ ಹೇಳಿ? ಕೇರಳದ ಶಬರಿಮಲೆ ಅಯ್ಯಪ್ಪ ಬಹುಪ್ರಸಿದ್ಧ ದೇವರು. ಈ ದೇವರ ಭಕ್ತರು ದೇಶ-ವಿದೇಶಗಳಲ್ಲೂ ಕಾಣ ಸಿಗುತ್ತಾರೆ. ವರ್ಷಕ್ಕೊಮ್ಮೆ ವೃತ ಮಾಡಿ ಚಟ ಮರೆತು ಅಯ್ಯಪ್ಪನನ್ನು ಆರಾಧಿಸುವ ಭಕ್ತರು ಮಾಡುವ ವೃತಾನುಷ್ಠಾನಗಳು ಬಹು ಕಠಿಣ. ಅಯ್ಯಪ್ಪ ಮಾಲೆ ಧರಿಸಿದ ಅಯ್ಯಪ್ಪನ ಆರಾಧಕರು ಕಠಿಣ ನೀತಿ-ನಿಯಮ ಪಾಲಿಸುವ ಜೊತೆಗೆ ದೈಹಿಕ ಸುಖ,ಭೋಗಗಳನ್ನೂ ತ್ಯಜಿಸುತ್ತಾರೆ. ಇಂಥ ಅಯ್ಯಪ್ಪ ಮಾಲಾಧಾರಿಗಳು ದೇಶದ ಉದ್ದ-ಅಗಲಗಳಿಂದಲೂ ಪಶ್ಚಿಮದ ಕೇರಳಕ್ಕೆ ತೆರಳಿ ತಮ್ಮ ದೈವೀಭಕ್ತಿ ಪ್ರದರ್ಶಿಸುತ್ತಾರೆ.

ಹೀಗೆ ದೇಶದುದ್ದಗಲದಿಂದಲೂ ದೇಶದ ತುದಿ ಕೇರಳಕ್ಕೆ ಬರುವ ಜನರಿಗೆ ಉತ್ತರ ಕನ್ನಡದಲ್ಲಿ ಒಂದು ಪರ್ಯಾಯ ಶಬರಿಮಲೆ  ನಿರ್ಮಾಣವಾಗಿದೆ. ಶಬರಿಮಲೆ ದೇವಸ್ಥಾನದ ಎಲ್ಲಾ ವೈಶಿಷ್ಯಗಳನ್ನೂ ಹೋಲುವ ಮಾದರಿಯಲ್ಲಿ ನಿರ್ಮಾಣವಾಗಿರುವ ಸಿದ್ದಾಪುರದ ಅಯ್ಯಪ್ಪ ದೇವಾಲಯ ಈಗ ಭಕ್ತರ ಆಕರ್ಷಣೆಯ ಕೇಂದ್ರವಾಗಿದೆ. ಮಿನಿ ಶಬರಿಮಲೆ ಮಾದರಿಯಲ್ಲಿ ನಿರ್ಮಾಣವಾಗಿರುವ ಈ ದೇವಸ್ಥಾನದಲ್ಲಿ ಶಬರಿಮಲೆಯ ಎಲ್ಲಾ ವಿಶೇಶಗಳೂ ಇಲ್ಲಿವೆ. ಮಾಲಾಧಾರಿಗಳು ಹತ್ತುವ ೧೮ ಮೆಟ್ಟಿಲುಗಳ ಜೊತೆಗೆ ಶಬರಿಮಲೆಯ ಆಚಾರ- ವಿಚಾರಗಳ ಸಂಪೂರ್ಣ ರೀತಿ ಇಲ್ಲಿಯ ರಿವಾಜು. ಪ್ರತಿವರ್ಷ ಸಂಕ್ರಾಂತಿಯಲ್ಲಿ ಇಡೀ ವಾರ ಇಲ್ಲಿ ನಡೆಯುವ ಜಾತ್ರೆ ಶಬರಿಮಲೆಯ ನಕಲಿನಂತೆ.


ದೂರದ ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿಯ ದೇವಾಲಯವನ್ನು ಜೋಗ ಸಮೀಪದ ಸಿದ್ದಾಪುರದಲ್ಲಿ ನಿರ್ಮಾಣ ಮಾಡಲು ಅನೇಕ ಕಾರಣಗಳಿವೆ. ಶಬರಿಮಲೆ ಅಯ್ಯಪ್ಪ ದೇವರ ದರ್ಶನ, ವೃತಾಚರಣೆ ಅಷ್ಟು ಸುಲಭ ಸಾಧ್ಯವಲ್ಲ. ಕೇರಳದ ಅಯ್ಯಪ್ಪ ದೇವಾಲಯಕ್ಕೆ ಹೋಗುವ ಅನೇಕರು ಈ ಭಾಗದಿಂದ ಕೇರಳಕ್ಕೆ ತೆರಳುತ್ತಾರೆ. ಅವರಿಗೆ ಅನುಕೂಲವಾಗಲಿ, ಅಷ್ಟು ದೂರ ಕಷ್ಟ ಪಟ್ಟು ಹೋಗಲಾರದ ಇತರರಿಗೆ ಶಬರಿಮಲೆಯ ದರ್ಶನ ಸುಲಭದಲ್ಲಿ ಸಿಗುವಂತಾಗಲಿ ಎಂದು ಯೋಚಿಸಿದ ಸಿದ್ಧಾಪುರದ ಕೆಲವು ಸಮಾನಮನಸ್ಕರ ಸಂಘ ಸ್ಫಷ್ಟ ಕಲ್ಪನೆಯೊಂದಿಗೆ ಈ ದೇವಸ್ಥಾನದ ನಿರ್ಮಾಣದ ಯೋಜನೆ ಪ್ರಾರಂಭಿಸಿದ್ದೇ ಆರಂಭ ನಂತರ ಸಲೀಸಾಗಿ ಕೆಲವೇ ವರ್ಷಗಳಲ್ಲಿ ತಲೆ ಎತ್ತಿ ನಿಂತ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಈಗ ಉತ್ತರ ಕನ್ನಡ, ಉತ್ತರ ಕರ್ನಾಟಕ ಜನರ ನೆಚ್ಚಿನ ತಾಣವಾಗಿದೆ.


ವೃತಾಧಾರಿಗಳಿಗೆ ಊಟ-ವಸತಿಯೊಂದಿಗೆ ದರ್ಶನ ವ್ಯವಸ್ಥೆ ಇರುವ ಇಲ್ಲಿ ಸಾವಿರಾರು ಜನರು ಬಂದು ಹೋಗುತ್ತಾರೆ. ದಕ್ಷಿಣದ ಕಾಶ್ಮೀರ ಎನ್ನುವ ಉತ್ತರ ಕನ್ನಡದಲ್ಲಿ ಈಗ ಉತ್ತರದ ಶಬರಿಮಲೆ ಎಂದು ಸಿದ್ದಾಪುರದ ಈ ಅಯ್ಯಪ್ಪ ದೇಗುಲ ಪ್ರಸಿದ್ಧವಾಗುತ್ತಿದೆ. ಗೋವಾಕ್ಕೆ ಹೋಗುವ ದಕ್ಷಿಣ ಕರ್ನಾಟಕದ ಜನರಿಗೆ. ಮಂಗಳೂರು, ಕೇರಳ,ಧರ್ಮಸ್ಥಳ. ಶೃಂಗೇರಿಗಳಿಗೆಲ್ಲಾ ಹೋಗುವವರಿಗೆ ಜೋಗ ಜಲಪಾತದ ವೀಕ್ಷಣೆಗೆ ಬರುವವರಿಗೆ ಸುಲಭದಲ್ಲಿ ಸಿಗುವ ಈ ಶಬರಿಮಲೆ ಅಯ್ಯಪ್ಪ ದೇವಸ್ಥಾನ ವಿಶೇಶ ಆಕರ್ಷಣೆಯಾಗಿ ಗಮನ ಸೆಳೆಯುತ್ತಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *