ಗಾಂಧಿ ಸ್ಮರಣೆ ಉತ್ತರಕನ್ನಡ ಅನುಲಕ್ಷಿಸಿ

ನಾಳೆ ಗಾಂಧಿ ಜಯಂತಿ-
ಶಿರಸಿ-ಸಿದ್ಧಾಪುರದ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿದ್ದ ಮಹಾತ್ಮಾ ಗಾಂಧಿ!
ರಾಷ್ಟ್ರಪಿತ ಮಹಾತ್ಮಾ ಗಾಂಧಿ ಸಿದ್ಧಾಪುರಕ್ಕೆ ಬಂದಿದ್ದರು ಮತ್ತು ಮಹಾತ್ಮಾ ಗಾಂಧಿಯವರಿಂದಾಗಿ ಉತ್ತರಕನ್ನಡದ ಮಾರಿ ಹಬ್ಬದ ಕೋಣನ ಬಲಿ,ಅಸ್ಪೃಶ್ಯತೆ ಆಚರಣೆ ಮುಕ್ತಿ ಹಾಗೂ ವಿಧವಾ ವಿವಾಹ ಪ್ರಾರಂಭವಾದವು ಎನ್ನುವ ಐತಿಹಾಸಿಕ ದಾಖಲೆಗಳಿವೆ.
ಮಹಾತ್ಮಾಗಾಂಧಿ ಶಿರಸಿ-ಸಿದ್ಧಾಪುರಕ್ಕೆ 1936 ರಲ್ಲಿ ಭೇಟಿ ನೀಡಿದ್ದರು. ಅಂದು ಅವರು ಶಿರಸಿಯ ಮಾರಿಕಾಂಬಾ ಜಾತ್ರೆಯಲ್ಲಿ ಮಾಡುತಿದ್ದ ಕೋಣನ ಬಲಿ ಆಚರಣೆ ನಿಲ್ಲಿಸುವಂತೆ ವಿನಂತಿಸಿದ್ದರು. ಶಿರಸಿಯ ರೂಢಿ-ಸಂಪ್ರದಾಯಗಳ ಜನರು ಗಾಂಧೀಜಿಯವರ ವಿನಂತಿಯನ್ನು ಮನ್ನಿಸಿರಲಿಲ್ಲ. ಆದರೆ ಮಾರಿಕಾಂಬಾ ಜಾತ್ರೆಯಲ್ಲಿ ಕೋಣನಬಲಿ ತಡೆಯುವ ವಾಗ್ದಾನ ಮಾಡದಿದ್ದರೆ ತಾನು ದೇವಸ್ಥಾನ ಪ್ರವೇಶಿಸುವುದಿಲ್ಲ, ಮತ್ತು ಅನ್ನ-ಆಹಾರ ಮುಟ್ಟುವುದಿಲ್ಲ ಎಂದು ಹಠ ಹಿಡಿದಿದ್ದರಿಂದ ಸ್ಥಳಿಯರು ಗಾಂಧೀಜಿಯವರಿಗೆ ಕೋಣನ ಬಲಿ ನಿಲ್ಲಿಸಲು ಸಮ್ಮತಿಸಿದರು.
ಇದೇ ಸಮಯದಲ್ಲಿ ಸಿದ್ಧಾಪುರಕ್ಕೆ ಬಂದಿದ್ದ ಗಾಂಧೀಜಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ವಿಧವಾ ವಿವಾಹಕ್ಕೆ ಒಪ್ಪದ ಸಂದರ್ಭವನ್ನು ಎತ್ತಿಕೊಂಡು ಆ ಕುಟುಂಬಕ್ಕೆ ವಿಧವಾ ವಿವಾಹ ಮಾಡಿಸುವ ಸಂಕಲ್ಫ ತೊಡುತ್ತಾರೆ.
ಸಿದ್ಧಾಪುರದ ದೊಡ್ಮನೆ ಕುಟುಂಬ ವಿಧವಾ ವಿವಾಹಕ್ಕೆ ಒಪ್ಪದೆ ಅಸಹಕಾರ ವ್ಯಕ್ತಪಡಿಸಿದಾಗ ಕೆಲವು ನಿಬಂಧನೆಗೆ ಒಳಪಟ್ಟು ವಿಧವಾ ವಿವಾಹವನ್ನೂ ಮಾಡಿಸುವಲ್ಲಿ ಯಶಸ್ವಿಯಾಗುತ್ತಾರೆ.

ಇಂಥದ್ದೇ ಇನ್ನೊಂದು ಪ್ರಸಂಗವೆಂದರೆ….
ಸ್ವಾತಂತ್ರ್ಯ ಹೋರಾಟಗಾರ್ತಿ ದೇವಿ ಹಸ್ಲರ್ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರೂ ಸಮಾರಂಭ, ಸಮಾವೇಶಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಅಂದಿನ ಆಚರಣೆಯ ಪ್ರಕಾರ ದೇವಿ ಹಸ್ಲರ್ ಪರಿಶಿಷ್ಟಳೆಂಬ ಕಾರಣಕ್ಕೆ ಅವರನ್ನು ಹೊರಗೆ ಬರುವುದಕ್ಕೆ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯ ಗುಂಪಿನೊಂದಿಗೆ ಸೇರುವುದಕ್ಕೆ ಅವಕಾಶಮಾಡುತ್ತಿರಲಿಲ್ಲ. ಈ ಸೂಕ್ಷ್ಮ ವಿಚಾರ ಗಮನಿಸಿದ ಗಾಂಧೀಜಿ ಸಮಾಜದಲ್ಲಿ ಅಸ್ಪೃಶ್ಯ ತೆ,ಅಸಮಾನತೆ, ರೂಢಿ ಸಂಪ್ರದಾಯಗಳ ಸಂಕುಚಿತತೆ ತೊಲಗದೆ ಸಮಾಜಸುಧಾರಣೆ,ಸ್ವಾತಂತ್ರ್ಯ ಹೋರಾಟ ಸಾಧ್ಯವಿಲ್ಲ ಎಂದು ಅಸ್ಪೃ ಶ್ಯತೆ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದರು.
ಹೀಗೆ ಮಹಾತ್ಮಾ ಗಾಂಧಿ ಆಕಾಲದ ಮೌಢ್ಯ, ಅಂಧಾಚರಣೆ,ಸಾಮಾಜಿಕ ಅನಿಷ್ಟಗಳಾದ ಕೋಣನಬಲಿ, ಅಸ್ಪೃ ಶ್ಯತೆ, ವಿರೋಧಿಸಿ ವಿಧವಾ ವಿವಾಹಕ್ಕೆ ಉತ್ತೇಜನ, ಬೆಂಬಲ ನೀಡಿದ್ದರು.

ಶಿರಸಿ-ಸಿದ್ದಾಪುರದ ಈ ಘಟನೆಗಳು ಸಿದ್ಧಾಪುರ,ಶಿರಸಿಗಳ ಇತಿಹಾಸ, ಚರಿತ್ರೆಯಲ್ಲಿ ಮಹಾತ್ಮಾಗಾಂಧಿಯವರ ಮಹತ್ವವನ್ನು ಸಾರಿವೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *