

ಸಿದ್ದಾಪುರ : ಶಿರಸಿ ಸಿದ್ದಾಪುರ ಯಲ್ಲಾಪುರ ಭಾಗದಲ್ಲಿ ವಿಪರೀತ ಮಳೆ ಸುರಿದ ಕಾರಣ ಹಲವು ಬಡವರ ಮನೆಯ ಮಾಳಿಗೆ, ಗೋಡೆ, ಕೊಟ್ಟಿಗೆಗಳಿಗೆ ಹಾನಿಯಾಗಿದ್ದು ಅವರಿಗೆ ವಸತಿ ಪುನರನಿರ್ಮಾಣ ಹಾಗೂ ದುರಸ್ಥಿ ಕಾರ್ಯಕ್ಕೆ ಧನ ಸಹಾಯ ನೀಡುವ ಮೂಲಕ ನೊಂದವರಿಗೆ ನೆರವಾಗುವ ನಿಟ್ಟಿನಲ್ಲಿ ಆಗಸ್ಟ 10 ಮತ್ತು 11 ರಂದು ಸಿದ್ದಾಪುರ ಮತ್ತು ಯಲ್ಲಾಪುರದಲ್ಲಿ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಜನಹಿತ ಸೇವಾ ಫೌಂಡೇಶನ ಅಧ್ಯಕ್ಷ ಕಾರ್ಯಕ್ರಮದ ಆಯೋಜಕ ಲೋಕೇಶ ಹೆಗಡೆ ತಿಳಿಸಿದ್ದಾರೆ .
ಹಾಲಾಡಿ ಮೇಳದ ಪ್ರಬುದ್ಧ ಕಲಾವಿದರಿಂದ ಹಂಸ ಪಲ್ಲಕ್ಕಿ ಎನ್ನುವ ಯಕ್ಷಗಾನ ಆಖ್ಯಾನ ವನ್ನು ಎರಡು ದಿನ ಹಮ್ಮಿಕೊಳ್ಳಲಾಗಿದೆ.

ಆಗಸ್ಟ್ 10 ಕ್ಕೆ ಸಿದ್ದಾಪುರ ಶಂಕರ ಮಠದಲ್ಲಿ ಸಂಜೆ 5 ರಿಂದ, ಆಗಸ್ಟ್ 11 ಕ್ಕೆ ಯಲ್ಲಾಪುರದ ಮಂಚಿಕೇರಿ ರಾಜರಾಜೇಶ್ವರಿ ರಂಗ ಮಂದಿರದಲ್ಲಿ ಸಂಜೆ 5 ರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಮಾನವೀಯತೆ ಮೆರೆಯುವ ಈ ಕಾರ್ಯಕ್ರಮ ಕ್ಕೆ ಸುತ್ತ ಮುತ್ತ ಇರುವ ಎಲ್ಲಾ ಯಕ್ಷಗಾನ ಕಲಾಭಿಮಾನಿಗಳು ತನು ಮನ ಧನ ಸಹಕಾರ ಮಾಡಿ, ಕಾರ್ಯಕ್ರಮ ವನ್ನು ಯಶಸ್ವಿ ಗೊಳಿಸಬೇಕೆಂದು ಲೋಕೇಶ ಹೆಗಡೆ ವಿನಂತಿಸಿದ್ದಾರೆ.
” ಈಗಾಗಲೇ ಸಿದ್ದಾಪುರ ಕೊಲಶಿರಸಿ ಗ್ರಾಮದ ಒಂದು ಕುಟುಂಬಕ್ಕೆ ಧನ ಸಹಾಯ ನೀಡಿ ಅವರ ಕಷ್ಟ ಸುಖ ಆಲಿಸಿದ್ದೇವೆ ಇದೇ ರೀತಿ ಇನ್ನೂ ಅನೇಕ ಕುಟುಂಬ ಗಳಿಗೆ ನೆರವು ಆಗಬೇಕಾಗಿದೆ, ಆದುದರಿಂದ ಸಹೃದಯಿ ಕಲಾಭಿಮಾನಿಗಳು ಈ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡಿ ನಮ್ಮ ಕಾರ್ಯಕ್ಕೆ ಕೈ ಜೋಡಿಸಿ ” ಲೊಕೇಶ ಹೆಗಡೆ ಯಕ್ಷಗಾನ ಆಯೋಜಕ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
