ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ.

ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು!

ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ ಯುವಕರು ಡೊಳ್ಳು ಹೊಡೆಯುತ್ತಾ ನಮ್ಮೂರಿನ ಪತಾಕೆಯನ್ನು ರಾಷ್ಟ್ರಮಟ್ಟದ ವರೆಗೆ ಹಾರಿಸಿದರು.

ಇವು ಬುದ್ಧಿವಂತಿಕೆಯಲ್ಲವೆ?

ಹಳ್ಳಿಗಾಡಿನ ಜನ ತಮ್ಮ ಹೊಟ್ಟೆಪಾಡು ನೋಡುತ್ತಲೇ ಜಾನಪದ ಹಾಡುತ್ತಾರೆ. ಸಮೃದ್ಧ ಪರಂಪರೆಯೊಂದನ್ನು ಉಳಿಸಲು ಬೆವರು ಸುರಿಸುತ್ತಾರೆ.

ಇವೆಲ್ಲಾ ಕಾರುಣ್ಯ ಉಳ್ಳವರಿಗೆ ಬೆರಗು ಹುಟ್ಟಿಸಬೇಕು. ಮಾನವೀಯತೆ ಕೃತಿ, ಬದುಕಿನಲ್ಲಿ ಮೇಳೈಸದೆ ಶಾಸ್ತ್ರ,ವೇದಾಂತಗಳಾದರೆ ಲೋಕಾಂತವಾಗುವುದಿಲ್ಲ.

ಕನ್ನಡ ತಿಂಗಳು ನವೆಂಬರ್‌ ಮುಗಿಯಿತು ಕನ್ನಡ ಬಾವುಟ ಏರದ ಎತ್ತರವಿಲ್ಲ. ಕನ್ನಡಕ್ಕಾಗಿ ದುಡಿಯುತ್ತಿರುವವರು ಹೊಸ ಹುಡುಗರು ಎನ್ನುವುದು ವಿಶೇಶ

ಕೇಡಿಗಳು ಎಲ್ಲಡೆಯೂ ಇರುತ್ತಾರೆ. ರಾಜಕೀಯದಲ್ಲಿ ಅಧಿಕವಾಗಿರುವುದರಿಂದ ಕೇಡಿಗೆ ರಾಜಕೀಯ ಅನ್ವರ್ಥಕವಾಗುತ್ತಿದೆ.

ಬ್ರಟೀಷರು ಇಲ್ಲಿಗೆ ವ್ಯಾಪಾರಕ್ಕೆ ಬರುವ ಮೊದಲು, ನೆಲೆ ಹುಡುಕಿ ಬಂದವರು ತಮ್ಮ ಅಸ್ಥಿತ್ವ ಸ್ಥಾಪನೆಗಾಗಿ ಬ್ರಿಟೀಷರ ವಿರುದ್ಧ ಸಮರ ಸಾರಿದರು!. ಆಗಲೂ ಕೇಡಿಗಳು ಬ್ರಟೀಷರ ಪರವಾಗಿದ್ದರು. ಈ ಹೋರಾಟ ಚಳುವಳಿಯಾಗಿ ವ್ಯಾಪಿಸುತಿದ್ದಾಗಲೂ ಕೆಲವು ಮೂಲನಿವಾಸಿಗಳು ಭವ್ಯ ಶೋಧನೆಯಾದ ಬೆಂಕಿಯ ಬೆರಗಿಗೆ ಮೈಒಡ್ಡಿ ಚಳಿ ಕಾಯಿಸಿಕೊಳ್ಳುತಿದ್ದರು.

ಯಾರ್ಯಾರೆಲ್ಲಾ ಬಂದು ಹೋದರು. ಕೆಲವರು ಗಾಡಾಂಧಕಾರದಲ್ಲಿದ್ದರು!. ಅವರಿಗೆ ಸ್ವಾತಂತ್ರ್ಯದ ಸವಿ ತಿಳಿದಿರಲಿಲ್ಲ. ಈಗಿನ ಮತಾಂಧರಂತೆ ಗುಲಾಮರಾಗಿರುವವರಿಗೆ ಸ್ವಾತಂತ್ರ್ಯದ ಸವಿ ಸ್ಫರ್ಶಿಸುವುದಿಲ್ಲ! ಕೆಲವರು ಆಶಾಡಭೂತಿಗಳು ಸಂಘ ಕಟ್ಟಿಕೊಂಡಿದ್ದರು. ಅವರು ಸ್ವಾರ್ಥಕ್ಕೆ ಹೋರಾಡಿದರು!

ಇವರ ಎದುರು ನಿಂತವರು ತಾವು ಸವೆದು ಕಾಗೋಡು ಹೋರಾಟದಂಥ ಚಳವಳಿ ಕಟ್ಟಿ ಲಕ್ಷಾಂತರ ಜನರಿಗೆ ನೆಲ, ನೆಲೆ ಕೊಡಿಸಿದರು. ಅವರು ಕೂಗಿದ್ದು ಇನ್ಕ್ವಿಲಾಬ್ ಜಿಂದಾಬಾದ್…‌ ಹೋರಾಟ ಚಿರಾಯುವಾಗಲಿ.

ಸದಾ ಲಾಭದ ಪರವಾಗಿದ್ದವರು ಮೊಗಲರ ಜೊತೆಗೂ ಇದ್ದರು, ಬ್ರಟೀಷರೊಂದಿಗೂ ಕೈ ಜೋಡಿಸಿದ್ದರು. ಈಗಲೂ ಕೇಡಿಗಳಿದ್ದಾರೆ ದುಡಿಮೆಗಾಗಿ ದೇಶಭಕ್ತರಾಗುತ್ತಾರೆ ಕೀರ್ತಿ, ದುಡಿಮೆಗೆ ರಾಷ್ಟ್ರೀಯತೆಯ ಸೋಗು ತೊಡುತ್ತಾರೆ. ಇವರ ಬಣ್ಣ ರಾತ್ರಿಯೂ ಖಾತ್ರಿಯಾಗುತ್ತದೆ ಆದರೆ ಹಗಲೂ ಕೂಡಾ ಇವರು ನಿರಾಳ!.

ಮತ್ತೆ ಸಾಹಿತ್ಯ ಸಮ್ಮೇಳನ, ಚುನಾವಣೆ, ಶಿಶಿರ, ಬೇಸಿಗೆ ಬಿಸಿಲು,ಸನ್ಮಾನ, ಅವಕಾಶ, ಕೀರ್ತಿ, ಬಿರುದು ಎಲ್ಲವೂ ಬರುತ್ತಿವೆ. ಅಲ್ಲಿ ಅರ್ಹರು, ಯೋಗ್ಯರು ಕಾಣುವುದು ಕಡಿಮೆ. ಶ್ರೇಷ್ಠ ಸಂಸ್ಕೃತಿಯೇ ಅಸಮಾನತೆ, ಅವಕಾಶವಾದ, ಅಸ್ಫಶ್ಯತೆ, ಭಟ್ಟಂಗಿತನ ಪೋಶಿಸುತ್ತಿದೆಯಲ್ಲವೆ?

ಕಾಲ ಬದಲಾಗುತ್ತಿದೆ, ಜನ ಬದಲಾಗುತಿದ್ದಾರೆ ಆದರೆ ಸಿ.ಸಿ. ಕ್ಯಾಮರಾ ಇದ್ದರೂ ಕಳ್ಳತನ, ಕೇಡಿತನ, ವ್ಯಭಿಚಾರ, ದುರಾಚಾರ ಕಡಿಮೆಯಾಗುತ್ತಿಲ್ಲ ಕಡಮೆ ಕೇಡಿ ಜೈಲು ಸೇರುತ್ತಾನೆ ದೊಡ್ಡ ಕಳ್ಳ ಸನ್ಮಾನಕ್ಕೆ ಪಾತ್ರನಾಗುತ್ತಾನೆ. ನವೆಂಬರ್‌ ಕನ್ನಡದ ಕಂಪು, ಡಿಸೆಂಬರ್ ನ ಚಳಿಯಸೌಹಾರ್ದತೆ ಎಲ್ಲರನ್ನೂ ಪೊರೆಯಲ್ಲಿ. ಇದು ೨೦೨೪ ಕ್ಕೆ ವಿದಾಯದ ನುಡಿನಮನ, ೨೦೨೫ ಕ್ಕೆ ಸ್ವಾಗತ ತೋರಣ.

ಜನ ಬೆಳೆಸಿದರೆ ಬೆಳವಣಿಗೆ, ಮೆರೆಸಿದರೆ ಮೆರವಣಿಗೆ ಸಿದ್ದಾಪುರದ ಮಾಧ್ಯಮ ಪ್ರತಿನಿಧಿಗಳ ಸಂಘಕ್ಕೆ ಅಧ್ಯಕ್ಷನಾಗಿದ್ದೇನಿ, ನಮ್ಮ ಐದು ಅಂತರ್ಜಾಲ ವೇದಿಕೆಗಳ ಮೂಲಕ ದಿನ ಒಂದಕ್ಕೆ ಒಂದು ಲಕ್ಷ ಜನರನ್ನು ತಲುಪುವ ಸೀಮೋಲ್ಲಂಘನ ತಲುಪಿದ್ದೇವೆ.

ಉಳಿಸಿದವರೂ ನೀವೇ, ಬೆಳೆಸುವವರೂ ನೀವೇ. ನಿಮ್ಮ ಕೃಪೆ ನಿರಂತರವಾಗಿರಲಿ ಫಾಲೋ, ಸಬ್‌ ಸ್ಕ್ರೈಬ್‌ ಆಗದವರು ಇಂದೇ ಜೊತೆಯಾಗಿ.. (. samajamukhi.net news portal, samaajamukhi.net fb page, samajamukhinews & samaajamukhi youtube channels etc.

ಧನ್ಯವಾದಗಳು. ನಿಮ್ಮ ಕನ್ನೇಶ್.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *