ಸುರಿಯುವ ಮಳೆಯ ನಡುವೆ ನಡೆದ ಜಂಗೀ ಬಿಂಗಿ! ಗಮನಸೆಳೆದ ನೆಲಮೂಲದ ಅನನ್ಯ ಆಚರಣೆ! ಇದು ಮಲೆನಾಡಿನ ಆರಿದ್ರಮಳೆ ಹಬ್ಬದ ವಿಶೇಶ

ಮಲೆನಾಡಿನ ಮೂಲನಿವಾಸಿ ಬಹುಸಂಖ್ಯಾತರು ಆಚರಿಸುವ ಮಲೆನಾಡಿನ ವಿಶಿಷ್ಟ ಹಬ್ಬಗಳಲ್ಲಿ ಆರಿದ್ರಮಳೆ ಹಬ್ಬವೂ ಒಂದು. ಭಾರತೀಯ ಋತುಗಳನುಸಾರ ವರ್ಷ ಋತುವಿನ ಮೊದಲು ಆಚರಿಸುವ ಈ ಆರಿದ್ರಮಳೆ ಹಬ್ಬದ ರೀತಿ-ನೀತಿಗಳು ತುಸು ಭಿನ್ನವಾದರೂ ಆಚರಣೆ ಉದ್ದೇಶ ಒಂದೇ. ಕರಾವಳಿ, ಮಲೆನಾಡಿನ ದೀವರೊಂದಿಗೆ ಈ ನೆಲಮೂಲದ ಮೂಲನಿವಾಸಿಗಳು ಆಚರಿಸುವ ಈ ಆರಿದ್ರಮಳೆ ಹಬ್ಬಕ್ಕೆ ಹನಿ ಹಬ್ಬ ಎಂದೂ ಕರೆಯುತ್ತಾರೆ.

ಕುಮಾರ ರಾಮ-

ಧೀರ ಚಾರಿತ್ರಿಕ ಪುರುಷ ಕುಮಾರರಾಮನನ್ನು ಕರಾವಳಿ, ಮಲೆನಾಡು, ಬಯಲುಸೀಮೆ ಎನ್ನದೆ ರಾಜ್ಯದಾದ್ಯಂತ ವಿಭಿನ್ನವಾಗಿ ನಾನಾ ಸಂದರ್ಭಗಳಲ್ಲಿ ಪೂಜಿಸಿ- ಆರಾಧಿಸುತ್ತಾರೆ. ಕರಾವಳಿಯ ಹೊನ್ನಾವರದ ಅನಿಲಗೋಡು ಕುಮಾರರಾಮ ದೇವಾಲಯದಿಂದ ಹಿಡಿದು ಕೊಪ್ಪಳ ಜಿಲ್ಲೆಯ ಕೆಲವೆಡೆ ಇರುವ ಕುಮಾರರಾಮನ ದೇವಾಲಯಗಳ ವರೆಗೆ ಪ್ರಾದೇಶಿಕವಾಗಿ ತುಸು ಮಾರ್ಪಾಡುಗಳೊಂದಿಗೆ ಕುಮಾರ ರಾಮನನ್ನು ಹನಿಹಬ್ಬ, ಬಂಡಿಹಬ್ಬ ಸೇರಿದಂತೆ ಅನೇಕ ಉತ್ಸವಗಳಲ್ಲಿ ವಿಭಿನ್ನವಾಗಿ ಪೂಜಿಸಿ ಆರಾಧಿಸಲಾಗುತ್ತದೆ.

ಸೇನೆಯ ಹಿನ್ನೆಲೆ-

ಹಳೆಪೈಕ ಅಂದರೆ ಆದಿಸೈನಿಕ ( ದೀವರು| ಈಡಿಗ) ರಾಗಿದ್ದ ಈ ನೆಲದ ಮೂಲನಿವಾಸಿಗಳು ರಾಜರು, ಸಾಮಂತರ ಜೊತೆಗೆ ಸೈನಿಕರಾಗಿ ಕೆಲಸಮಾಡುತಿದ್ದ ಸಮಯದಲ್ಲಿ ಮಳೆಗಾಲದ ಯುದ್ಧ ವಿರಾಮದ ಕಾಲದಲ್ಲಿ ತಿಂಡುಂಡು, ಕೃಷಿಕಾಯಕ ಮಾಡುತ್ತಾ ತಮ್ಮ ಪ್ರಕೃತಿ ಪುರುಷರಿಗೆ ನೈವೇದ್ಯ ಕೊಟ್ಟು ತಮ್ಮನ್ನು ರಕ್ಷಿಸುವಂತೆ ಬೇಡಿಕೊಳ್ಳುವ ಆಚರಣೆ ಕ್ರಮೇಣ ಆರಿದ್ರಮಳೆ ಹಬ್ಬ ವಾಗಿ ರೂಢಿಯಾಯಿತು. ಈ ಉತ್ಸವದ ನೆನಪಿಗಾಗಿ ಸಂಬ್ರಮದ ಕುಣಿತ ಮಾಡುತ್ತಾ ಸ್ನೇಹಿತರು, ಸಂಬಂಧಿಗಳೆಲ್ಲಾ ಕೂಡಿ-ಕಲೆತು ಆಚರಿಸುವ ಈ ದೇಶೀ ಉತ್ಸವವೇ ಆರಿದ್ರಮಳೆ ಹಬ್ಬ.

ರಾಜರೊಂದಿಗೆ ಸೈನಿಕರಾಗಿರುತಿದ್ದ ಜನಸಾಮಾನ್ಯರು ರಾಜಪುತ್ರ ಪರಾಕ್ರಮಿ ಕುಮಾರರಾಮನೇ ತಮ್ಮ ಆದಿ ಪುರುಷ, ಆತನ ತ್ಯಾಗ, ಧೀರತನ, ಸಾಹಸ, ವೀರತ್ವಗಳೇ ಈ ಜನರ ಆರಾಧನೆಯ, ಗೌರವದ ಅಂಶಗಳೆಂದು ಅರಿತು ಧೀರತ್ವ, ವೀರತ್ವ, ಶೂರತನ, ತ್ಯಾಗಗಳಿಗೆ ಸಂಕೇತವಾಗಿ ಕುಮಾರರಾಮನನ್ನು ಆರಾಧಿಸುತಿದ್ದವರು ಈಗ ತುಸು ಬದಲಾವಣೆಗಳನ್ನೂ ಮಾಡಿಕೊಂಡಿದ್ದಾರೆ.

ಸಾಗರ-ಸಿದ್ಧಾಪುರ ಶಿರಸಿಗಳ ಕೋಲಶಿರ್ಸಿ, ಹುಸೂರು, ಅವರಗುಪ್ಪಾ,ಮನಮನೆ,ಕುಗ್ವೆ ಸೇರಿದ ಬಹುತೇಕ ಹಳ್ಳಿಗಳಲ್ಲಿ ಪ್ರತಿವರ್ಷ ಆರಿದ್ರ ಮಳೆಯಲ್ಲಿ ಆಚರಿಸುವ ಈ ಹನಿಹಬ್ಬದಲ್ಲಿ ಗ್ರಾಮದ ದೇವರನ್ನು ಪೂಜಿಸುವ ಜೊತೆಗೆ ಗ್ರಾಮದೇವತೆಗಳು, ಊರದೇವರುಗಳು ಸೇರಿದ ತಮ್ಮ ಹಿಂದಿನ ಸ್ತ್ರೀ, ಪುರುಷ ಮಾದರಿಗಳನ್ನೇ ಪೂಜಿಸುವ ಮೂಲಕ ಆರಾಧಿಸಿ ತಮ್ಮ ಬದುಕು, ಸಂಸ್ಕೃತಿ, ಆಚರಣೆಗಳಿಗೂ ವ್ಯಾಪಾರಿ ವೈದಿಕ ಆಚರಣೆಗಳಿಗೂ ಸೂತ್ರ-ಸಂಬಂಧಗಳಿಲ್ಲ ಎಂಬುದನ್ನು ಪ್ರತಿಬಿಂಬಿಸುವುದರಿಂದ ಈ ಆಚರಣೆ ಸಾಂಪ್ರದಾಯಿಕ, ಜನಾಂಗೀಯ ಭಿನ್ನತೆಗಳಿಂದಲೂ ವಿಶಿಷ್ಟ. ಜೂನ್‌ ಅಂತ್ಯ, ಜುಲೈ ಪ್ರಾರಂಭದ ವಾರದಲ್ಲಿ ಆಚರಿಸಿದ ಈ ಆರಿದ್ರಮಳೆ ಹಬ್ಬದಲ್ಲಿ ಸಿದ್ಧಾಪುರ ಹೊಸೂರಿನಲ್ಲಿ ಬೊಮ್ಮ ದೇವರ ಮೆರವಣಿಗೆ, ಹಣ್ಣು ಕಾಯಿ ಅರ್ಪಣೆಗಳು ನಡೆದವು.

ಕೋಲಶಿರ್ಸಿಯಲ್ಲಿ ಸಾವಿನ ಸೂತಕದ ಹಿನ್ನೆಲೆಯಲ್ಲಿ ಈ ವರ್ಷ ಸರಳವಾಗಿ, ವಿಳಂಬವಾಗಿ ಹನಿ ಹಬ್ಬ ಆಚರಿಸಲಾಯಿತು. ಪ್ರತಿವರ್ಷ ಬಹುವಿಶಿಷ್ಟವಾಗಿ ಆರಿದ್ರಮಳೆ ಹಬ್ಬ ಆಚರಿಸುವ ಅವರಗುಪ್ಪದಲ್ಲಿ ಈ ವರ್ಷವೂ ಈ ಹಬ್ಬ ವಿಜೃಂಬಣೆಯಿಂದ ನಡೆಯಿತು.

ನವವಧುವರರು ದೇವರ ರೂಪಗಳ ವಿಭಿನ್ನ ಮುಖವಾಡ ಹೊತ್ತು ಕೆಂಡತುಳಿಯುವ ಆಚರಣೆ ಮೂಲಕ ತ್ರೈಮಾಸಿಕ ಉಪವಾಸ ಆಚರಿಸುವುದೂ ಈ ಹಬ್ಬದ ವೈಶಿಷ್ಟ್ಯವೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *