ಸಿದ್ಧಾಪುರದ ಇಬ್ಬರು ಯುವಕರು ಹತ್ಯೆಯಾದರೆ…..? ಸೂಳೆಮುರಕಿ ಪ್ರಕರಣ!

ಒಂದೇ ಕುಟುಂಬದ ಇಬ್ಬರು ದಲಿತ ಯುವಕರು ಬುಧವಾರ ಸಿದ್ಧಾಪುರ-ಹೊನ್ನಾವರ ಅಂದರೆ… ಹೊನ್ನಾವರ ಬೆಂಗಳೂರು ಮಾರ್ಗದಲ್ಲಿ ಸುಟ್ಟು ಕರಕಲಾದ ವಿಚಾರ ಒಂದು ದಿನದ ನಂತರ ಬಹಿರಂಗವಾಗಿದೆ…

ಈ ಬಡ ದಲಿತ ಯುವಕರ ಸಾವಿನ ಹಿಂದೆ ಸಂಶಯದ ಹುತ್ತವೇ ಎದ್ದಿದೆ.

ಸಿದ್ಧಾಪುರ ಕುಡುಗುಂದದ ಮಂಜುನಾಥ, ಚಂದ್ರಶೇಖರ್‌ ಅಣ್ಣ-ತಮ್ಮ ಇವರಲ್ಲಿ ಒಬ್ಬನಿಗೆ ವಿವಾಹವಾಗಿ ಒಂದು ಶಿಶು ಇದ್ದರೆ ಇನ್ನೊಬ್ಬ ತನ್ನ ಮತ್ತೊಬ್ಬ ತಮ್ಮನಂತೆ ಅವಿವಾಹಿತ.

ಈ ಇಬ್ಬರೂ ಸಹೋದರರು ಚಂದ್ರಘಟಕಿಯ ಪ್ರಮೋದ್‌ ಎನ್ನುವವರ ಬಳಿ ದಿನಂಪ್ರತಿ ಕೆಲಸ ಮಾಡಿಕೊಂಡಿದ್ದವರು.

ಈ ಇಬ್ಬರೂ ಸಹೋದರು ಬೈಕ್‌ ನಿಂದ ಮನೆ ಬಿಟ್ಟವರು ಮಾಲೀಕ ಪ್ರಮೋದ್‌ ಬಳಿ ಇದ್ದ ಮತ್ಯಾರದೋ ಕಾರನಲ್ಲಿ ಹೋಗಿ ಸಂಶಯಾಸ್ಪದ ಸಾವು ಕಂಡ ಬಗ್ಗೆ ಅನೇಕ ವದಂತಿಗಳು ಚರ್ಚೆಯಲ್ಲಿವೆ.

ಅಡ್ಡಕಸಬಿ ಪ್ರಮೋದ್‌ ಬಳಿ ಕೆಲಸ ಮಾಡುತಿದ್ದ ಈ ಹಸ್ಲರ್‌ ಸಹೋದರರು ಪ್ರಮೋದನ ಸಕಲೆಂಟೂ ಅವ್ಯವಹಾರಗಳ ಪಾಲುದಾರರು, ಇನ್ನು ಪ್ರಮೋದ ಎಂಥಾ ಪ್ರಳಯಾಂತಕನೆಂದರೆ… ಹಳೆಯ ವಾಹನಗಳನ್ನು ಖರೀದಿಸಿ ವಾಹನ ವಿಮೆ ಹಣಕ್ಕಾಗಿ ಸುಡುತಿದ್ದ ಭಯಂಕರ ವ್ಯಕ್ತಿ ಎನ್ನಲಾಗಿದೆ. ಕಳೆದ ಮಂಗಳವಾರ ಮಧ್ಯಾಹ್ನದ ವೇಳೆಗೆ ಮನೆಯಿಂದ ಹೊರಟಿದ್ದ ಸಹೋದರರ ಮೊಬೈಲ್‌ ಗಳು ಸಂಜೆ ವೇಳೆಗೆ ಸ್ವಿಚ್‌ ಆಫ್‌ ಆಗಿದ್ದವು.

ಮಾರನೇ ದಿನದ ಬುಧವಾರ ಈ ಇಬ್ಬರೂ ಸಹೋದರರು ಒಂದು ವಾಹನದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಮೋದನ ಅಕ್ರಮವ್ಯವಹಾರಗಳಿಗೆ ಬಳಕೆಯಾಗುತಿದ್ದ ಈ ಇಬ್ಬರು ಸಹೋದರರ ಹೆಸರಿಗೆ ವಾರ್ಷಿಕ ೫ ಲಕ್ಷಗಳ ಕಂತಿನ ವಿಮಾ ಪಾಲಸಿಗಳಿದ್ದು !ಇವುಗಳಿಗೆ ನಾಮಿನಿ ಪ್ರಮೋದ್‌ ನಾಯ್ಕ ಆಗಿದ್ದ !!? ಎನ್ನುವಲ್ಲಿಗೆ ಕುಚ್‌ ಗಡಬಡ ಹೈ ಎನ್ನುವ ಚರ್ಚೆಗಳ ವದಂತಿ ಕೇಳೀಬರುತ್ತಿದೆ.

ಈಗ ಉಳಿದಿರುವ ಪ್ರಶ್ನೆಗಳು… * ಅಕ್ರಮವ್ಯವಹಾರಿ ಪ್ರಮೋದ್‌ ನಾಪತ್ತೆಯಾಗಲು ಕಾರಣವೇನು?

ವಾಹನ ಚಲಾಯಿಸದ ಇಬ್ಬರು ಸಹೋದರರು ಒಂದೇ ಕಾರಿನಲ್ಲಿ ಸುಟ್ಟು ಕರಕಲಾಗಲು ಹೇಗೆ ಸಾಧ್ಯ?

# ವಿಮಾ ಪರಿಹಾರ ಪಡೆಯಲು ಬೆಂಕಿಯಾಟ ಆಡುವ ಪ್ರಮೋದ್‌ ವಿಮೆ ಚಾಲ್ತಿಇಲ್ಲದ ಕಾರ್‌ ನಲ್ಲಿ ಜೀವವಿಮೆ ಮಾಡಿಸಿದ್ದ ಇಬ್ಬರು ಸಹೋದರರನ್ನು ಮುಗಿಸಿಬಿಟ್ಟನೆ!?

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *