ಮೋದಿ ಕಾಲದಲ್ಲಿ ಅದಾನಿ ಆದಾಯ ಎಷ್ಟು ಗೊತ್ತೆ..? ಉತ್ತರ ಕನ್ನಡದ ಬಗ್ಗೆ ಜಿ.ಸಿ.ಚಂದ್ರಶೇಖರ್ ಹೇಳಿದ್ದೇನು?

ಈ ವರ್ಷ ಅದಾನಿ ಆದಾಯ ದಿನವೊಂದಕ್ಕೆ 1,000 ಕೋಟಿ: ಶ್ರೀಮಂತರ ಪಟ್ಟಿ ಹೀಗಿದೆ…

ಈ ವರ್ಷ ಭಾರತ 179 ಮಂದಿ ಸೂಪರ್ ರಿಚ್ ವ್ಯಾಪ್ತಿಗೆ ಬಂದಿದ್ದು, ಅದಾನಿ ಸಮೂಹದ ಗೌತಮ್ ಅದಾನಿ ವಾರ್ಷಿಕ 3,65700 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಅಥವಾ ದಿನವೊಂದಕ್ಕೆ 1,000 ಕೋಟಿಗಿಂತಲೂ ಹೆಚ್ಚಿನ ಹಣವನ್ನು ಸಂಪಾದಿಸಿದ್ದಾರೆ. 

ಉತ್ತರ ಕನ್ನಡ ಸುಂದರ ಜಿಲ್ಲೆಯಾಗಿದ್ದು ಇಲ್ಲಿಯ ಜನರ ಪ್ರೀತಿಗೆ ತಲೆಬಾಗಿದ್ದೇನೆ ಎಂದಿರುವ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಜಿಲ್ಲೆಯಲ್ಲಿ ಬಹುವಿಶೇಶಗಳ ಮಲ್ಟಿಸ್ಪೆಶಾಲಿಟಿ ಆಸ್ಫತ್ರೆ ನಿರ್ಮಾಣಕ್ಕೆ ಪ್ರಯತ್ನಿಸದಿರುವುದು ಸೋಜಿಗ ಎಂದಿದ್ದಾರೆ. ಸಿದ್ಧಾಪುರದ ಕಾವಂಚೂರು ಬಸರಮನೆ ಹಳ್ಳಕ್ಕೆ ತಮ್ಮ ಅನುದಾನದಲ್ಲಿ ನಿರ್ಮಾಣವಾದ ಸೇತುವೆ ಉದ್ಘಾಟಿಸಿದ ನಂತರ ಅತ್ತಿಸವಲು ಸಭಾಭವನ ನಿರ್ಮಾಣಕ್ಕೆ ಅನುದಾನ ಘೋಶಿಸಿ ಸಿದ್ಧಾಪುರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.

ಉತ್ತರ ಕನ್ನಡ ಜಿಲ್ಲೆಯ ರಾಜಕಾಣಿಗಳ ಬಗ್ಗೆ ಗೌರವವಿದೆ ಆದರೆ ಈ ಕ್ಷೇತ್ರದ ಶಾಸಕರು, ಸ್ಫೀಕರ್ ಕಾಗೇರಿಯವರಾಗಲಿ,ಸಂಸದ ಅನಂತಕುಮಾರ ಹೆಗಡೆಯವರಾಗಲಿ ಕ್ಷೇತ್ರ, ಜಿಲ್ಲೆಯ ಮೂಲಭೂತ ಅಗತ್ಯಗಳಿಗೆ ಸ್ಫಂದಿಸುವ ಕೆಲಸ ಮಾಡಿದಂತೆ ಕಾಣುತ್ತಿಲ್ಲ.ಮಾಜಿ ಸಚಿವ ಅನಂತಕುಮಾರ ಹೆಗಡೆಯವರ ಸಹಾಯ ನಮಗೂ ದೊರೆತಿದೆ ಆದರೆ ಜಿಲ್ಲೆಗೆ ಸುಸಜ್ಜಿತ ಆಸ್ಫತ್ರೆ ನಿರ್ಮಾಣ ಮಾಡುವ ವಿಚಾರದಲ್ಲಿ ಅವರು ಪ್ರಯತ್ನಿಸಿದ್ದರೆ ನಾವೂ ಸಹಕರಿಸುತಿದ್ದೆವು ಎಂದು ಜಿಲ್ಲೆಯ ತೊಂದರೆಗೆ ಮರುಗಿದ ಚಂದ್ರಶೇಖರ್ ಕನ್ನಡ ಶಾಲೆ ಉಳಿಸುವ ಕೆಲಸ,ಮೂಲಭೂತ ಸೌಲಭ್ಯ ನೀಡಿಕೆ ಸೇರಿದಂತೆ ಜಿಲ್ಲೆಯ ಅಗತ್ಯಕ್ಕೆ ಸ್ಫಂದಿಸುವ ಕೆಲಸಕ್ಕೆ ತಮ್ಮ ಸಹಕಾರ ಮುಂದುವರಿಯಲಿದೆ ಎಂದರು.

ರಾಜ್ಯ ಕೇಂದ್ರ ಸರ್ಕಾರಗಳಿಗೆ ಕಾರ್ಯಕ್ರಮ ಅನುಷ್ಠಾನದ ಆಸಕ್ತಿ ಇಲ್ಲ, ಹೊಸ ಶಿಕ್ಷಣ ನೀತಿಯಂತೆ ಈ ಸರ್ಕಾರಗಳ ಬಹುತೇಕ ಯೋಜನೆಗಳು ವಿಮಾನ ಬರುವಂತೆ ಮಾಡಿ ಲ್ಯಾಂಡಿಂಗ್ ವ್ಯವಸ್ಥೆ ಮಾಡದಂತಾಗಿವೆ. ಜನರ ತೆರಿಗೆ ಹಣ ತ್ರಿಶಂಕು ಸ್ಥಿತಿಯಲ್ಲಿ ಪೋಲಾಗುತ್ತಿರುವುದಕ್ಕೆ ಈ ಸರ್ಕಾರದ ನೀತಿಗಳೇ ಉದಾಹರಣೆ ಎಂದರು

ಮುಂಬೈ: ಈ ವರ್ಷ ಭಾರತ 179 ಮಂದಿ ಸೂಪರ್ ರಿಚ್ ವ್ಯಾಪ್ತಿಗೆ ಬಂದಿದ್ದು, ಅದಾನಿ ಸಮೂಹದ ಗೌತಮ್ ಅದಾನಿ ವಾರ್ಷಿಕ 3,65700 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಅಥವಾ ದಿನವೊಂದಕ್ಕೆ 1,000 ಕೋಟಿಗಿಂತಲೂ ಹೆಚ್ಚಿನ ಹಣವನ್ನು ಸಂಪಾದಿಸಿದ್ದಾರೆ. 

ಭಾರತದಲ್ಲಿನ ಸೂಪರ್ ರಿಚ್ ಗಳ ಸಂಖ್ಯೆ 1,000 ನ್ನು ದಾಟಿದೆ ಎಂದು ಸೆ.30 ರಂದು ಪ್ರಕಟಗೊಂಡ ಹುರುನ್ ಇಂಡಿಯಾ-ಐಐಎಫ್ಎಲ್ ಶ್ರೀಮಂತ ಪಟ್ಟಿ ಮೂಲಕ ತಿಳಿದುಬಂದಿದೆ.

https://imasdk.googleapis.com/js/core/bridge3.482.0_en.html#goog_130422801

ಭೌಗೋಳಿಕವಾಗಿ ಐದು ನಗರಗಳು ಸೂಪರ್ ರಿಚ್ ಗಳ ವಾಸಸ್ಥಾನಕ್ಕೆ ಸೇರ್ಪಡೆಯಾಗಿದ್ದು, ಸೂಪರ್ ರಿಚ್ ನಗರಳ ಸಂಖ್ಯೆ 119 ಕ್ಕೆ ಏರಿಕೆಯಾಗಿದೆ ಹಾಗೂ ಈ 1007 ವ್ಯಕ್ತಿಗಳು 2021 ರಲ್ಲಿ ಶೇ.51 ರಷ್ಟು ಸಂಪತ್ತನ್ನು ಹೆಚ್ಚಿಸಿಕೊಂಡಿದ್ದಾರೆ. 

ಈ ವರ್ಷ ಕೊರೋನಾ ಸಾಂಕ್ರಾಮಿಕದ ಅಂಗವಾಗಿ ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡಿದ್ದರೆ ಇತ್ತ ಸರಾಸರಿ ಶೇ.25 ರಷ್ಟು ಸಂಪತ್ತು ಏರಿಕೆಯಾಗಿದೆ. 

ಹುರುನ್ ಇಂಡಿಯಾ-ಐಐಎಫ್ಎಲ್ ವರದಿಯ ಪ್ರಕಾರ, 1,007 ರ ಮಂದಿಯ ಪೈಕಿ 13 ಮಂದಿ 1,000 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಸಂಪತ್ತು ಹೊಂದಿರುವ ದೇಶದಲ್ಲಿ 1 ಲಕ್ಷ ಕೋಟಿಗಿಂತಲೂ ಹೆಚ್ಚಿನ ಸಂಪತ್ತನ್ನು ಹೊಂದಿದ್ದು, 

ಮುಖೇಶ್ ಅಂಬಾನಿ 7,18,000 ಕೋಟಿ ರೂಪಾಯಿ ಸಂಪತ್ತಿನೊಂದಿಗೆ ಸತತ 10ನೇ ವರ್ಷವೂ ಶ್ರೀಮಂತರ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿ ಮುಂದುವರೆದಿದ್ದು 2020 ರಲ್ಲಿ ಶೇ.9 ರಷ್ಟು ಮಾತ್ರ ಏರಿಕೆಯಾಗಿದೆ. ನಂತರದ ಸ್ಥಾನದಲ್ಲಿ ಅದಾನಿ ಕುಟುಂಬ ಇದ್ದು 5,05,900 ಕೋಟಿ ರೂಪಾಯಿಗಳ ಸಂಪತ್ತನ್ನು ಹೊಂದಿದ್ದು, 1,40,200 ಕೋಟಿ ರೂಪಾಯಿಗಳಿಂದ ಶೇ.261 ರಷ್ಟು ಏರಿಕೆ ಕಂಡಿದೆ. ಈ ಮೂಲಕ ಅದಾನಿ ಏಷ್ಯಾದ ಎರಡನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ. 

ಮೂರನೇ ಸ್ಥಾನದಲ್ಲಿ ಹೆಚ್ ಸಿಎಲ್ ನ ಶಿವ್ ನಾದರ್ ಹಾಗೂ ಕುಟುಂಬದವರಿದ್ದು 2,36,600 ಕೋಟಿ ರೂಪಾಯಿ ಆಸ್ತಿ ಹೊಂದಿದ್ದು ಶೇ.67 ರಷ್ಟು ಏರಿಕೆಯಾಗಿದೆ.  (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *