ಹಿರಿಯ ವೈದ್ಯ ಡಾ|ಎಸ್.ಆರ್.ಹೆಗಡೆಯವರಿಗೆ ನಾಗರಿಕ ಸನ್ಮಾನ & ಇತರ local ಸುದ್ದಿಗಳು


ಸಿದ್ದಾಪುರ
ಜ್ಞಾನ, ಕೌಶಲ್ಯಗಳಿಂದ ಮಾತ್ರ ವೈದ್ಯಕೀಯ ಕಾರ್ಯ ಸಾಧ್ಯವಿಲ್ಲ. ವಿಶ್ವಾಸ, ಶೃದ್ಧೆ, ಪ್ರಾಮಾಣಿಕತೆ, ತಾಳ್ಮೆ, ಅನುಕಂಪಗಳು ಅತ್ಯಗತ್ಯ. ಈ ಗುಣಗಳು ಡಾ|ಎಸ್.ಆರ.ಹೆಗಡೆಯವರಲ್ಲಿರುವದಕ್ಕೆ ಅವರೊಬ್ಬ ಜನಪರ, ಮಾದರಿ ವೈದ್ಯರಾಗಿ ಕಳೆದ ೫೦ ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ ಎಂದು ನೇತ್ರತಜ್ಞ ಡಾ|ಕೆ.ವಿ.ಶಿವರಾಂ ಶಿರಸಿ ಹೇಳಿದರು.
ಅವರು ಹಿರಿಯ ವೈದ್ಯ ಡಾ|ಎಸ್.ಆರ್.ಹೆಗಡೆ ಹಾರ್ಸಿಮನೆಯವರ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಅರ್ಧ ಶತಮಾನದ ಹಿಂದೆಯೇ ಎಂ.ಬಿ.ಬಿ.ಎಸ್. ಪದವಿ ಪಡೆದು ಅಪ್ಪಟ ಗ್ರಾಮೀಣ ಭಾಗವಾದರು ತನ್ನ ಹುಟ್ಟೂರಿನ ಸಿದ್ದಾಪುರದಲ್ಲಿ ವೃತ್ತಿಯನ್ನು ಆರಂಭಿಸಿ, ನಂತರದಲ್ಲಿ ಆಧುನಿಕ ವೈದ್ಯಕೀಯ ಸೇವೆಯನ್ನು ನೀಡಿದವರು ಎಸ್.ಆರ್.ಹೆಗಡೆ. ಸೇವಾ ಕ್ಷೇತ್ರದಲ್ಲಿ ಇರುವವರಿಗೆ ಇವರು ಮಾರ್ಗದರ್ಶಿಯಾಗಿದ್ದಾರೆ ಎಂದರು.

ತಾಳಮದ್ದಲೆ
ಸಿದ್ದಾಪುರ : ಯಕ್ಷಗಾನ ಕವಿ ಬೆಳಸಲಿಗೆ ಗಣಪತಿ ಹೆಗಡೆ ಪುಣ್ಯತಿಥಿಯ ಅಂಗವಾಗಿ, ʼಅಹಲ್ಯಾಶಾಪʼ(ರಚನೆ : ಬೆಳಸಲಿಗೆ ಗಣಪತಿ ಹೆಗಡೆ) ಪ್ರಸಂಗದ ತಾಳಮದ್ದಲೆ ತಾಲ್ಲೂಕಿನಬೆಳಸಲಿಗೆಯಸುರೇಶ ಗಣಪತಿ ಹೆಗಡೆ ಅವರಮನೆಯಲ್ಲಿ ಇತ್ತೀಚೆಗೆನಡೆಯಿತು.
ಬೆಳಸಲಿಗೆ ಯಕ್ಷಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ತಾಳಮದ್ದಲೆಯ ಹಿಮ್ಮೇಳದಲ್ಲಿ ಸತೀಶ ಹೆಗಡೆ ದಂಟಕಲ್(ಭಾಗವತರು), ಮಂಜುನಾಥ ಹೆಗಡೆ ಕಂಚಿಮನೆ (ಮದ್ದಲೆವಾದಕರು) ಮತ್ತು ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಗೀತಾ ಸುರೇಶ ಹೆಗಡೆ ಬೆಳಸಲಿಗೆ(ಇಂದ್ರ), ಸುಜಾತಾ ಹೆಗಡೆ ದಂಟಕಲ್(ಅಹಲ್ಯೆ), ಕಾತ್ಯಾಯಿನಿ ನಾಗೇಶ ಹೆಗಡೆ ಅತ್ತಿಕೊಪ್ಪ(ಗೌತಮ), ನಾಗರತ್ನ ಶ್ರೀಧರ ಹೆಗಡೆ ಅತ್ತಿಕೊಪ್ಪ(ಬ್ರಹ್ಮ),ವೆಂಕಟರಾಮ ಹೆಗಡೆ ಬಿದ್ರಕಾನ(ನಾರದ) ಭಾಗವಹಿಸಿದ್ದರು.
btr


ಅಭಿನಂದನಾ ಮಾತುಗಳನ್ನಾಡಿದ ಆಶಾಕಿರಣ ಟ್ರಸ್ಟ ಅಧ್ಯಕ್ಷ ಡಾ|ರವಿ ಹೆಗಡೆ ಹೂವಿನಮನೆ ನಗರ ಪ್ರದೇಶದಲ್ಲಿ ಅವಕಾಶವಿದ್ದರೂ ಹುಟ್ಟಿದ ಊರಿನಲ್ಲಿ ವೈದ್ಯಕೀಯ ಸೇವೆಗೆ ಮುಂದಾದ ಡಾ|ಎಸ್.ಆರ್.ಹೆಗಡೆ ಮಾನವೀಯ ಮೌಲ್ಯಗಳನ್ನಿಟ್ಟುಕೊಂಡು ಕಾರ್ಯನಿರ್ವಹಿಸುತ್ತ ಬಂದವರು. ಸಿದ್ದಾಪುರಕ್ಕೆ ಮೊದಲ ಅಂಬುಲೆನ್ಸ, ಎಕ್ಸರೇ ಯೂನಿಟ್ ಮುಂತಾಗಿ ಅನೇಕ ಪ್ರಥಮಗಳನ್ನು ತಂದವರು. ಹಣವೇ ಮುಖ್ಯವೆಂದುಕೊಳ್ಳದೇ ತೀರಾ ಕುಗ್ರಾಮಗಳ ರೋಗಿಗಳ ಶುಶ್ರೂಷೆಯನ್ನು ಮಾಡಿದ್ದು ಅವರ ಅತಿ ದೊಡ್ಡ ಗುಣ. ಕಳೆದ ೫೦ ವರ್ಷಗಳಿಂದ ಜನರ ವಿಶ್ವಾಸವನ್ನು ಉಳಿಸಿಕೊಂಡದ್ದು ಅವರ ವೃತ್ತಿಪರತೆಗೆ ಸಾಕ್ಷಿ ಎಂದರು.
ಸಾಗರದ ನೇತ್ರತಜ್ಞ ಡಾ|ಎಚ್.ಎಸ್.ಮೋಹನ್ ಮಾತನಾಡಿ ಕೇವಲ ವೈದ್ಯರಾಗಿ ಮಾತ್ರವಲ್ಲದೇ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿದ ಡಾ|ಎಸ್.ಆರ್.ಹೆಗಡೆ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದರು.
ದಾನಿ, ಉದ್ಯಮಿ ಆನಂದ ಈರಾ ನಾಯ್ಕ ಹೊಸೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಅಧ್ಯಕ್ಷತೆ ವಹಿಸಿ ಡಾ|ಎಸ್.ಆರ್.ಹೆಗಡೆಯವರ ವ್ಯಕ್ತಿತ್ವ, ಸೇವೆಗಳ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಡಾ|ಎಸ್.ಆರ್.ಹೆಗಡೆ ಸನ್ಮಾನ ಸಮಿತಿ ವತಿಯಿಂದ ಡಾ|ಎಸ್.ಆರ್.ಹೆಗಡೆ ದಂಪತಿಗಳನ್ನು ಸನ್ಮಾನಿಸಲಾಯಿತು. ವಿವಿಧ ಭಾಗಗಳಿಂದ ಆಗಮಿಸಿದ ಹಿತೈಷಿಗಳು, ಆತ್ಮೀಯರು ಸನ್ಮಾನಿಸಿದರು.
ಎಂ.ಎಂ.ಹೆಗಡೆ ಮಗೇಗಾರ ಸ್ವಾಗತಿಸಿದರು. ಪ್ರೊ}ಎಂ.ಕೆ.ನಾಯ್ಕ ನಿರೂಪಿಸಿದರು.

ಕಾನೂನು ಅರಿವು-

ಸಿದ್ದಾಪುರ
ಪ್ರತಿಯೊಬ್ಬರೂ ಕಾನೂನನ್ನು ತಿಳಿದುಕೊಂಡಾಗ ಮಾತ್ರ ಸಮಾಜ ಸುಸ್ಥಿರವಾಗಿರುತ್ತದೆ. ಕಾನೂನಿನ ಅರಿವಿಲ್ಲದಿದ್ದರೆ ನ್ಯಾಯ ಪಡೆಯುವುದು ಕಷ್ಠವಾಗುತ್ತದೆ. ಪ್ರಾಚೀನ ಕಾಲಕ್ಕೂ ಹಾಗೂ ಇಂದಿನ ಆಧುನಿಕ ಕಾಲಕ್ಕೂ ಕಾನೂನಿನಲ್ಲಿ ಬದಲಾವಣೆ ಆಗಿದೆ ಎಂದು ಸಿದ್ದಾಪುರದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಸಿದ್ದರಾಮ ಎಸ್ ಹೇಳಿದರು.
ತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಹಾಗೂ ಕಾನೂನು ನೆರವು-ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು.
ತಹಸೀಲ್ದಾರ ಪ್ರಸಾದ ಎಸ್.ಎ.ಮಾತನಾಡಿ ಸರ್ಕಾರದ ಸೌಲಭ್ಯಗಳು ಎಲ್ಲರಿಗೂ ತಲುಪಿಸಬೇಕೆನ್ನುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಡೆಯುತ್ತಿದೆ. ಜನರು ಸಹ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೆ ಇದೊಂದು ಮುಕ್ತ ವೇದಿಕೆ ಆಗಿದೆ ಎಂದು ಹೇಳಿದರು.
ಎಪಿಪಿ ಚಂದ್ರಶೇಖರ ಎಚ್.ಎಸ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ದಿನೇಶ ನಾಯ್ಕ, ವಕೀಲ ಅಶೋಕ ನಾಯ್ಕ ಕಾನೂನು ಅರಿವು-ನೆರವು ಕುರಿತು ಮಾತನಾಡಿದರು. ದುರ್ಗಾವಿನಾಯಕ ದೇವಸ್ಥಾನದ ಮೊಕ್ತೇಸರ ಎಸ್.ಎಂ.ಹೆಗಡೆ,ಹಾರ್ಸಿಕಟ್ಟಾ ಗ್ರಾಪಂ ಅಧ್ಯಕ್ಷೆ ವಿದ್ಯಾ ಪಿ.ನಾಯ್ಕ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.
ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯದ ಕುರಿತು ಮಾಹಿತಿ. ಔಷಧಿ ಹಾಗೂ ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು. ಆರೋಗ್ಯ ಇಲಾಖೆಯಿಂದ ಗ್ರಾಮಸ್ಥರ ಆರೋಗ್ಯ ತಪಾಸಣೆ,ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪೋಷಣ ಪಕ್ವಾಡ ಕಾರ್ಯಕ್ರಮ,ಮತದಾರರ ಪಟ್ಟಿಯಲ್ಲಿ ಹೆಸರು ಕಡಿಮೆ ಮಾಡುವುದು/ ಸೇರ್ಪಡೆಮಾಡುವ ಹಾಗೂ ಆಧಾರ ನೋಂದಣಿ ಕುರಿತು ಮಾಹಿತಿ, ಜನಪ್ರತಿನಿಧಿಗಳಿಂದ ಕಂದಾಯ ಇಲಾಖೆಯ ವಿವಿಧ ಯೋಜನೆಯಲ್ಲಿ ಮಂಜೂರಿಯಾದ ಫಲಾನುಭವಿಗಳಿಗೆ ಆದೇಶ ಪ್ರತಿ ವಿತರಣೆ ನಡೆಯಿತು.


Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *