


ಇತ್ತೀಚಿನ ವರ್ಷಗಳಲ್ಲಿ ಸಿದ್ಧಾಪುರದ ನೆಲಕ್ಕೆ ಮೊಟ್ಟಮೊದಲ ಬಾರಿಯೆಂಬಂತೆ ಭಾರತದ ಉಪರಾಷ್ಟ್ರಪತಿಗಳ ಆಗಮನವಾಗುತ್ತಿದೆ. ಉಪರಾಷ್ಟ್ರಪತಿಗಳ ಕಛೇರಿಯ ವಿಶೇಶ ಅಧಿಕಾರಿ ರಾಜೇಶ್ ನಾಯ್ಕರ ತಾಯಿ ಲಕ್ಷ್ಮಿ ನಾರಾಯಣ ನಾಯ್ಕ ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ತಮ್ಮ ಅಧೀನ ಅಧಿಕಾರಿ ರಾಜೇಶ್ ನಾಯ್ಕ ಭೇಟಿಯಾಗಿ ಅವರ ಕುಟುಂಬವರ್ಗಕ್ಕೆ ಸಾಂತ್ವನ ಹೇಳಲು ಬರುತ್ತಿರುವ ಗೌರವಾನ್ವಿತ ಭಾರತದ ಉಪರಾಷ್ಟ್ರಪತಿಗಳು ಸಿದ್ಧಾಪುರದಲ್ಲಿ ಅರ್ಧಗಂಟೆಗಳ ಸಮಯ ಕಳೆಯಲಿದ್ದಾರೆ.


ಸಿದ್ದಾಪುರದ ಹಿರಿಯ ವಕೀಲ ಎನ್.ಡಿ. ನಾಯ್ಕರ ಇಂದಿರಾನಗರದ ಮನೆಗೆ ಭೇಟಿ ನೀಡಲಿರುವ ಜಗದೀಪ ಧನಕರ ಸ್ವಾಗತಕ್ಕೆ ಜಿಲ್ಲಾಡಳಿತ ಎಲ್ಲಾ ತಯಾರಿ ನಡೆಸಿದೆ. ಕೋಲಶಿರ್ಸಿ ಗ್ರಾ.ಪಂ. ನ ತಾಲೂಕಾ ಕ್ರೀಡಾಂಗಣದಲ್ಲಿ ಹೆಲಿಕಾಪ್ಟರ್ ಮೂಲಕ ಬಂದಿಳಿಯಲಿರುವ ಉಪರಾಷ್ಟ್ರಪತಿಗಳು ತಾಲೂಕಾ ಕ್ರೀಡಾಂಗಣದಿಂದ ಸಿದ್ಧಾಪುರ ರಸ್ತೆಯ ಮೂಲಕ ಇಂದಿರಾನಗರಕ್ಕೆ ಬಂದು ಅಲ್ಲಿ ವೃಕ್ಷಾರೋಪಣದ ಜೊತೆಗೆ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಉಪರಾಷ್ಟ್ರಪತಿಗಳ ಅಪರೂಪದ ಭೇಟಿಗೆ ಪೂರ್ವಸಿದ್ಧತೆ ನಡೆಸಿರುವ ತಾಲೂಕಾ ಆಡಳಿತಕ್ಕೆ ರಾಜೇಶ್ ನಾಯ್ಕರ ಕುಟುಂಬ ಸಂಪೂರ್ಣ ಸಹಕಾರ ನೀಡಿದೆ. ನೀತಿಸಂಹಿತೆ, ಪ್ರೋಟೋಕಾಲ್, ಜೆಡ್ ಭದ್ರತೆಗಳ ಹಿನ್ನೆಲೆಯಲ್ಲಿ ಸೋಮುವಾರ ಬೆಳಿಗ್ಗೆ೧೧ ರಿಂದ ೧ ಗಂಟೆಯ ವರೆಗೆ ಶಿರಸಿ ರಸ್ತೆ, ಸಿದ್ಧಾಪುರದ ಕೆಲವು ಭಾಗಗಳಲ್ಲಿ ಕೆಲವು ನಿರ್ಬಂಧಗಳು ಜಾರಿಯಲ್ಲಿರಲಿವೆ. ಬೆಳಿಗ್ಗೆ ಶಿರಸಿಯಿಂದ ವಾಯುಮಾರ್ಗದಲ್ಲಿ ಸಿದ್ಧಾಪುರಕ್ಕೆ ಬರಲಿರುವ ಉಪರಾಷ್ಟ್ರಪತಿಗಳು ಮಧ್ಯಾನ್ಹದ ವರೆಗೆ ಸಿದ್ಧಾಪುರದಲ್ಲಿದ್ದು ನಂತರ ಮರಳಲಿದ್ದಾರೆ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






