ಮೊಹರೊತ್ತಲು ಮೇಲೊಬ್ಬ ಮಹಾರಾಯನಿದ್ದಾನೆ…


ಇವರ ಒಂದು ಕಲಾಕೃತಿ ಹೀಗೆ ಹೇಳುತ್ತದೆ
“ಬಂಧುಗಳೇ.. ನನಗೆ ಯಾವುದೇ ಪಕ್ಷ ಪಂಥ ಜಾತಿ ಧರ್ಮ ಲಿಂಗಗಳ ಮೊಹರೊತ್ತಬೇಡಿ, ದಯವಿಟ್ಟು ನನ್ನನ್ನು ಮನುಷ್ಯನ್ನನ್ನಾಗಿ ನೋಡಿ, ಹೃದಯದ ಪ್ರೀತಿಕೊಡಿ, ಮೋಹರೊತ್ತಲು ಮೇಲೊಬ್ಬ ಮಹಾರಾಯನಿದ್ದಾನೆ.”

ವಿಜಯ ಕಿರೇಸೂರ ಅವರು ಪ್ರಗತಿಪರ ಆಲೋಚನೆಯ ಚಿತ್ರಕಲಾ ಶಿಕ್ಷಕರು. ಗದಗ ಹತ್ತಿರದ ನಿರಲಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ತುಂಬಾ ವಿಶಿಷ್ಟ ಕನಸಿನೊಂದಿಗೆ ಕಾವ್ಯದಂತಹ ಚಿತ್ರಗಳನ್ನು ಬರೆಯುತ್ತಿದ್ದಾರೆ. ನಾಡಿನ ದಾರ್ಶನಿಕರ ಪುಟ್ಟ ಪುಟ್ಟ ಸಂದೇಶಗಳಿಗೆ ಕಲೆಯ ಸ್ಪರ್ಶ ನೀಡಿ ‘ಮಾತುಗಳು ಮಾರಾಟಕ್ಕಿವೆ’ ಶಿರ್ಷಿಕೆಡಿಯಲ್ಲಿ ಮಾತುಮಾರಿ ಜನಜಾಗೃತಿ ಮೂಡಿಸಿದ್ದಾರೆ.
ಚಿತ್ರಕಲಾ ಪದವಿಯಲ್ಲಿ ಚಿನ್ನದ ಪದಕದೊಂದಿಗೆ ವಿಜೇತರಾಗಿರುವ ಇವರು ನಾಡಿನ ಹಲವಡೆ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ, ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಚಿತ್ರ ಬರೆಯುವುದರ ಜೊತೆಜೊತೆಗೆ ಮಕ್ಕಳಲ್ಲಿ ವೈಚಾರಿಕ ಹೊಳಹುಗಳನ್ನು, ಚಿತ್ರದಾಚೆಗಿರುವ ಚಿಂತನೆಗಳನ್ನು ಬಿತ್ತುವ ಕೃಷಿಕರು. ಇವರ ರೇಖಾಚಿತ್ರಗಳು, ಕಲಾಕೃತಿಗಳು ತಕ್ಷಣ ನೋಡುಗರ ಮನಸೆಳೆಯುತ್ತವೆ.
ತಮ್ಮದೇ ಆದ ಒಂದು ಪುಟ್ಟ ಕಲಾಗ್ಯಾಲರಿಯ ಕನವರಿಕೆಯೊಂದಿಗೆ, ಜನಸಾಮಾನ್ಯರಿಗೂ ಕಲಾಕೃತಿಗಳನ್ನು ಅರ್ಥೈಸಬೇಕೆಂಬ ಸದಾಶಯದೊಂದಿಗೆ ಶ್ರಮಿಸುತ್ತಿದ್ದಾರೆ. ಕಲೆಯೊಳಗಡಗಿರುವ ಸಂಪ್ರದಾಯ ಮೌಢ್ಯದ ಚೌಕಟ್ಟನ್ನು ಮುರಿದು ಕಟ್ಟುವ ಕಾಯಕದಲಿ ತಲ್ಲೀನರಾಗಿದ್ದಾರೆ. ವೈಚಾರಿಕ ಚಿಂತನೆಯುಳ್ಳ ಕಿರೇಸೂರಂತಹ ಶಿಕ್ಷಕರ ಸಂಖ್ಯೆ ಹೆಚ್ಚೆಚ್ಚು ಹಿರಿದಾಗಬೇಕಿದೆ.
ಇವರ ಒಂದು ಕಲಾಕೃತಿ ಹೀಗೆ ಹೇಳುತ್ತದೆ
“ಬಂಧುಗಳೇ.. ನನಗೆ ಯಾವುದೇ ಪಕ್ಷ ಪಂಥ ಜಾತಿ ಧರ್ಮ ಲಿಂಗಗಳ ಮೊಹರೊತ್ತಬೇಡಿ, ದಯವಿಟ್ಟು ನನ್ನನ್ನು ಮನುಷ್ಯನ್ನನ್ನಾಗಿ ನೋಡಿ, ಹೃದಯದ ಪ್ರೀತಿಕೊಡಿ, ಮೋಹರೊತ್ತಲು ಮೇಲೊಬ್ಬ ಮಹಾರಾಯನಿದ್ದಾನೆ.” ಅಪ್ಪಟ ಜೀವಪರ ಕಾಳಜಿಯುಳ್ಳ ವಿಜಯ ಕಿರೇಸೂರವರ ಕಲಾಪಯಣ ಯಶಸ್ವಿಯಾಗಲಿ.
ಕೆ.ಬಿ.ವೀರಲಿಂಗನಗೌಡ್ರ.
ಎಸ್.ಆರ್.ಜಿ.ಹೆಚ್.ಎಂ ಪ್ರೌಢಶಾಲೆ, ಸಿದ್ದಾಪುರ-581355. ಉ.ಕ ಜಿಲ್ಲೆ. ದೂ-9448186099.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *