ದಿಗ್ಬಂಧನ ನೀವೇನಂತೀರಾ?…….

ಕರೋನಾ ಮಾರಿ ಊರು ಸೇರಬಾರದೆಂದು ಗ್ರಾಮೀಣ ಯುವಕರು ತಮ್ಮ ಗ್ರಾಮಗಳ ರಸ್ತೆಗಳಿಗೆ ಮರ-ಮುಳ್ಳು, ಕಲ್ಲುಗಳನ್ನಿಟ್ಟು ತಾವೇ ತಮ್ಮೂರ ರಸ್ತೆ ಬಂದ್ ಮಾಡಿದ್ದಾರೆ. ಇದರಿಂದ ನಿಶ್ಚಿತ ಉದ್ದೇಶ ಈಡೇರುವುದಕ್ಕಿಂತ ಗ್ರಾಮಸ್ಥರಿಗೇ ತೊಂದರೆ ಎನ್ನುವ ಅಭಿಪ್ರಾಯ ವ್ಯಾಪಕವಾಗುತ್ತಿದೆ. ಹೊರ ಊರಿನ ಜನ ತಮ್ಮೂರಿಗೆ ಬರಬಾರದು ನಿಜ ಆದರೆ ಹೊರೂರುಗಳಿಂದ ಈಗಾಗಲೇ ಅವರವರ ಊರು ಸೇರಿಕೊಂಡವರಿಗೆ ಏನು ಮಾಡುವುದು? ಸ್ವಂಯಂ ತಿಳುವಳಿಕೆ ಸ್ವಯಂ ಶಿಸ್ತು, ಸ್ವಯಂ ನಿಯಂತ್ರಣ ಗಳ ಮೂಲಕವೇ ಜಾಗೃತರಾಗಬೇಕು. ಪ್ರತಿ ಗ್ರಾಮ, ಊರು,ನಗರಗಳ ಜನ ಮಾಮೂಲಿ ಅನಾರೋಗ್ಯ, ಆಪತ್ತುಗಳಿಗೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಅಂತಹ ಸಮಯದಲ್ಲಿ ನಾವು ಬೇರೆಯವರಿಗೆ ಹಾಕುವ ದಿಗ್ಭಂಧನ ನಮಗೇ ಮಾರಕವಾಗಬಹುದು ಈ ಬಗ್ಗೆ ನೀವೇನಂತೀರಿ ಪ್ರತಿಕ್ರೀಯಿಸಿ

ಪ್ರತಿಕ್ರೀಯೆಗಳು-

ಮುಳ್ಳಿನ ಬೇಲಿ ಹಾಕಿ ನಿರ್ಬಂಧ ಹೇರುವದು ಸರಿಯಾದ ಕ್ರಮವಲ್ಲ. ಸ್ವಯಂ ಪ್ರೇರಣೆಯಿಂದ ಮನೆಯಲ್ಲೇ ಇರೋದು ಗಟ್ಟಿತನ. ಆ ಸಂಕಲ್ಪದಿಂದ ಹಳ್ಳಿಯಿಂದ ದಿಲ್ಲಿಯವರೆಗೂ ಲಾಕ್ ಡೌನ್ ಆಗಬೇಕಿದೆ.ಮಾನ್ಯ ಪ್ರಧಾನಿಯವರ ಆದೇಶದ ದಿನಾಂಕ ಮುಗಿಯುವವರೆಗಾದರೂ ತಾಳ್ಮೆ ಗುಂದದೆ, ಧೃತಿಗೆಡದೆ ಕೊರೊನಾ ಚಕ್ರವ್ಯೂಹ ಭೇದಿಸಬೇಕಿದೆ. ಈ ತಾಂತ್ರಿಕ ಹಾಗೂ ಮುಂದುವರಿದ ಯುಗದಲ್ಲೂ ಮುಳ್ಳು ಹಾಕಿ ನಿರ್ಬಂಧ ಸಂದೇಶಿಸುವದು, ಸಂಕೇತಿಸುವದು ಒಂದು ರೀತಿಯಲ್ಲಿ,ದೇಶದ ಅನಕ್ಷರತೆಯನ್ನು,ಅಜ್ಞಾನವನ್ನು, ಬಿಂಬಿಸುವ ನಿಟ್ಟಿನಲ್ಲಿ ನಾವು ಇಪ್ಪತ್ತೊಂದು ವರುಷ ಹಿಂದೆ ಹೋದಂತೆ ಭಾಸವಾಗುವ ಪೂರಕ ಸೂತಕ ವಾತಾವರಣ ನಿರ್ಮಿಸುತ್ತದೆ.

ಮೇಲಾಗಿ ಗರ್ಭಿಣಿಯರಿಗೆ, ತುರ್ತು ಅನಾರೋಗ್ಯದಿಂದ ಬಳಲುತ್ತಿರುವವರಿಗೆ,ಚಿಕ್ಕ ಮಕ್ಕಳಿಗೆ ,ತುರ್ತು ಪರಿಸ್ಥಿತಿಯ ಅನೀರಕ್ಷಿತ ತೊಂದರೆಗಳಿಗೆ ಗ್ರಾಮದತ್ತ ಧಾವಿಸುವ 108 ಹಾಗೂ ಪೊಲೀಸ್,ಹಾಗೂ ತೀವ್ರ ಬೇಸಿಗೆಯ ತಾಪಮಾನವಿರುವದರಿಂದ ಅಗ್ನಿಶಾಮಕ ದಳ ,ಹೀಗೆ ಅನೇಕ ಸೇವೆಗೆ ತೊಂದರೆಯಾಗಿ ದುರಂತ ಸಂಭವಿಸಬಹುದು. ಹಾಗಾಗಿ ನಾವೆಲ್ಲ ನಮ್ಮ ಕೈ ಇಂದ ತುತ್ತು ತಿನ್ನುವದು ಎಷ್ಟು ಸತ್ಯವೋ ಹಾಗೆ ಮನೆಯಲ್ಲೇ ಇರೋದು ಅಷ್ಟೇ ಪ್ರಾಮಾಣಿಕವಾಗಿ ಪಾಲಿಸೋಣ.ಸಾಮಾಜಿಕ ಅಂತರದ ಮೂಲಕ ಸ್ವಾಸ್ತ್ಯ ಕಾಪಾಡಿ ಬಹು ಬೇಗ ಕೊರೊನಾ ಮುಕ್ತರಾಗೋಣ, ಜೈ ಹಿಂದ್ ಜೈ ಭಾರತ್. ಮಾರ್ಗ ವಂದೇ …ಮನೆಯಲ್ಲೇ ಇರೋದು.
———ಎ.ಕೆ.(ಅರುಣ್ ಕೊಪ್ಪ,ಯುವಕವಿ ಶಿರಸಿ)

ಈ ರೀತಿ ರೋಡಲ್ಲಿ ಹಾಕುವುದು ತಪ್ಪು ಏಕೆಂದರೆ ಅದೆ ಊರಿನವರು ಒಂದು ಜೀವ ಹೋಗ ಸಮಯ ಬಂದ್ರೆ ಆಗ ಗಾಡಿಯಲ್ಲಿ ಕರೆದುಕೊಂಡು ಹೋಗಬೇಕು ಮತ್ತು ಅದನ್ನು ತೆಗಿಯಲಿಕ್ಕೆ 10 ನಿಮಿಷಗಳು ಆಗುತ್ತೆ ಆ 10 ನಿಮಿಷಕ್ಕೆ ನಾವು ಆಸ್ಪತ್ರೆಗೆ ಸೇರಿಸಬಹುದು ಈದನ್ನು ತೆಗಿಯುವುದರೊ ಳಗೆ ಪ್ರಾಣ ಹೋದರೆ ಯಾರು ಹೊಣೆ? ಸುಮ್ಮ ಸುಮ್ಮನೆ ಜಾಸ್ತಿ ಜನ ಹೋದರೆ ಊರಿನ ಜನ ಕೇಳಲಿ ಅದು ಬಿಟ್ಟು ಈ ರೀತಿ ಬೇಲಿ ಹಾಕುವುದು ಕಾನೂನಿ ಪ್ರಕಾರ ಸರಿನಾ? ಹಾಗೂ ಅರ್ಜಂಟ್ ಕೆಲಸ ಇದ್ದರೆ ಒಂದು ಊರಿಂದ ಮ ತ್ತೊಂದು ಊರಿಗೆ ಹೋಗಬೇಕಾದರೆ ಬೇರೆ ಊರಿನ ರಸ್ತೆ ಬೇಕೆ, ಬೇಕು.

– ಹೇಮಂತ್ ಸಿದ್ಧಾಪುರ, ರಣಧೀರ ಪಡೆ

ಈ ಮಾರಕ ಖಾಯಿಲೆ ಬಗ್ಗೆ ಜಾಗೃತಿ ಮುಖ್ಯ. ಜನಸಾಮಾನ್ಯರಿಗೆ ತೊಂದರೆ ಕೊಡದೆ ತಮಗೆ ತಾವೇ ಬೇಲಿ ಹಾಕಿಕೊಳ್ಳುವ ಮೂಲಕ ಕರೋನಾ ಹೊಡೆದೋಡಿಸಬೇಕು – ಉಮೇಶ್ ನಾಯ್ಕ, ಉಪಾಧ್ಯಕ್ಷರು ಬೇಡ್ಕಣಿ ಗ್ರಾ.ಪಂ. ಸಿದ್ಧಾಪುರ (ಉ.ಕ.)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

1 Comment

  1. “ದಿಗ್ಬಂಧನ ನೀವೇನಂತೀರಾ?…”
    ಎಚ್ಚರ ತಪ್ಪಿದ ಮಾಬ್ ಮೆಂಟಾಲಿಟಿ.

Leave a Reply

Your email address will not be published. Required fields are marked *