ದಿಗ್ಬಂಧನ ನೀವೇನಂತೀರಾ?…….

ಕರೋನಾ ಮಾರಿ ಊರು ಸೇರಬಾರದೆಂದು ಗ್ರಾಮೀಣ ಯುವಕರು ತಮ್ಮ ಗ್ರಾಮಗಳ ರಸ್ತೆಗಳಿಗೆ ಮರ-ಮುಳ್ಳು, ಕಲ್ಲುಗಳನ್ನಿಟ್ಟು ತಾವೇ ತಮ್ಮೂರ ರಸ್ತೆ ಬಂದ್ ಮಾಡಿದ್ದಾರೆ. ಇದರಿಂದ ನಿಶ್ಚಿತ ಉದ್ದೇಶ ಈಡೇರುವುದಕ್ಕಿಂತ ಗ್ರಾಮಸ್ಥರಿಗೇ ತೊಂದರೆ ಎನ್ನುವ ಅಭಿಪ್ರಾಯ ವ್ಯಾಪಕವಾಗುತ್ತಿದೆ. ಹೊರ ಊರಿನ ಜನ ತಮ್ಮೂರಿಗೆ ಬರಬಾರದು ನಿಜ ಆದರೆ ಹೊರೂರುಗಳಿಂದ ಈಗಾಗಲೇ ಅವರವರ ಊರು ಸೇರಿಕೊಂಡವರಿಗೆ ಏನು ಮಾಡುವುದು? ಸ್ವಂಯಂ ತಿಳುವಳಿಕೆ ಸ್ವಯಂ ಶಿಸ್ತು, ಸ್ವಯಂ ನಿಯಂತ್ರಣ ಗಳ ಮೂಲಕವೇ ಜಾಗೃತರಾಗಬೇಕು. ಪ್ರತಿ ಗ್ರಾಮ, ಊರು,ನಗರಗಳ ಜನ ಮಾಮೂಲಿ ಅನಾರೋಗ್ಯ, ಆಪತ್ತುಗಳಿಗೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಅಂತಹ ಸಮಯದಲ್ಲಿ ನಾವು ಬೇರೆಯವರಿಗೆ ಹಾಕುವ ದಿಗ್ಭಂಧನ ನಮಗೇ ಮಾರಕವಾಗಬಹುದು ಈ ಬಗ್ಗೆ ನೀವೇನಂತೀರಿ ಪ್ರತಿಕ್ರೀಯಿಸಿ

ಪ್ರತಿಕ್ರೀಯೆಗಳು-

ಮುಳ್ಳಿನ ಬೇಲಿ ಹಾಕಿ ನಿರ್ಬಂಧ ಹೇರುವದು ಸರಿಯಾದ ಕ್ರಮವಲ್ಲ. ಸ್ವಯಂ ಪ್ರೇರಣೆಯಿಂದ ಮನೆಯಲ್ಲೇ ಇರೋದು ಗಟ್ಟಿತನ. ಆ ಸಂಕಲ್ಪದಿಂದ ಹಳ್ಳಿಯಿಂದ ದಿಲ್ಲಿಯವರೆಗೂ ಲಾಕ್ ಡೌನ್ ಆಗಬೇಕಿದೆ.ಮಾನ್ಯ ಪ್ರಧಾನಿಯವರ ಆದೇಶದ ದಿನಾಂಕ ಮುಗಿಯುವವರೆಗಾದರೂ ತಾಳ್ಮೆ ಗುಂದದೆ, ಧೃತಿಗೆಡದೆ ಕೊರೊನಾ ಚಕ್ರವ್ಯೂಹ ಭೇದಿಸಬೇಕಿದೆ. ಈ ತಾಂತ್ರಿಕ ಹಾಗೂ ಮುಂದುವರಿದ ಯುಗದಲ್ಲೂ ಮುಳ್ಳು ಹಾಕಿ ನಿರ್ಬಂಧ ಸಂದೇಶಿಸುವದು, ಸಂಕೇತಿಸುವದು ಒಂದು ರೀತಿಯಲ್ಲಿ,ದೇಶದ ಅನಕ್ಷರತೆಯನ್ನು,ಅಜ್ಞಾನವನ್ನು, ಬಿಂಬಿಸುವ ನಿಟ್ಟಿನಲ್ಲಿ ನಾವು ಇಪ್ಪತ್ತೊಂದು ವರುಷ ಹಿಂದೆ ಹೋದಂತೆ ಭಾಸವಾಗುವ ಪೂರಕ ಸೂತಕ ವಾತಾವರಣ ನಿರ್ಮಿಸುತ್ತದೆ.

ಮೇಲಾಗಿ ಗರ್ಭಿಣಿಯರಿಗೆ, ತುರ್ತು ಅನಾರೋಗ್ಯದಿಂದ ಬಳಲುತ್ತಿರುವವರಿಗೆ,ಚಿಕ್ಕ ಮಕ್ಕಳಿಗೆ ,ತುರ್ತು ಪರಿಸ್ಥಿತಿಯ ಅನೀರಕ್ಷಿತ ತೊಂದರೆಗಳಿಗೆ ಗ್ರಾಮದತ್ತ ಧಾವಿಸುವ 108 ಹಾಗೂ ಪೊಲೀಸ್,ಹಾಗೂ ತೀವ್ರ ಬೇಸಿಗೆಯ ತಾಪಮಾನವಿರುವದರಿಂದ ಅಗ್ನಿಶಾಮಕ ದಳ ,ಹೀಗೆ ಅನೇಕ ಸೇವೆಗೆ ತೊಂದರೆಯಾಗಿ ದುರಂತ ಸಂಭವಿಸಬಹುದು. ಹಾಗಾಗಿ ನಾವೆಲ್ಲ ನಮ್ಮ ಕೈ ಇಂದ ತುತ್ತು ತಿನ್ನುವದು ಎಷ್ಟು ಸತ್ಯವೋ ಹಾಗೆ ಮನೆಯಲ್ಲೇ ಇರೋದು ಅಷ್ಟೇ ಪ್ರಾಮಾಣಿಕವಾಗಿ ಪಾಲಿಸೋಣ.ಸಾಮಾಜಿಕ ಅಂತರದ ಮೂಲಕ ಸ್ವಾಸ್ತ್ಯ ಕಾಪಾಡಿ ಬಹು ಬೇಗ ಕೊರೊನಾ ಮುಕ್ತರಾಗೋಣ, ಜೈ ಹಿಂದ್ ಜೈ ಭಾರತ್. ಮಾರ್ಗ ವಂದೇ …ಮನೆಯಲ್ಲೇ ಇರೋದು.
———ಎ.ಕೆ.(ಅರುಣ್ ಕೊಪ್ಪ,ಯುವಕವಿ ಶಿರಸಿ)

ಈ ರೀತಿ ರೋಡಲ್ಲಿ ಹಾಕುವುದು ತಪ್ಪು ಏಕೆಂದರೆ ಅದೆ ಊರಿನವರು ಒಂದು ಜೀವ ಹೋಗ ಸಮಯ ಬಂದ್ರೆ ಆಗ ಗಾಡಿಯಲ್ಲಿ ಕರೆದುಕೊಂಡು ಹೋಗಬೇಕು ಮತ್ತು ಅದನ್ನು ತೆಗಿಯಲಿಕ್ಕೆ 10 ನಿಮಿಷಗಳು ಆಗುತ್ತೆ ಆ 10 ನಿಮಿಷಕ್ಕೆ ನಾವು ಆಸ್ಪತ್ರೆಗೆ ಸೇರಿಸಬಹುದು ಈದನ್ನು ತೆಗಿಯುವುದರೊ ಳಗೆ ಪ್ರಾಣ ಹೋದರೆ ಯಾರು ಹೊಣೆ? ಸುಮ್ಮ ಸುಮ್ಮನೆ ಜಾಸ್ತಿ ಜನ ಹೋದರೆ ಊರಿನ ಜನ ಕೇಳಲಿ ಅದು ಬಿಟ್ಟು ಈ ರೀತಿ ಬೇಲಿ ಹಾಕುವುದು ಕಾನೂನಿ ಪ್ರಕಾರ ಸರಿನಾ? ಹಾಗೂ ಅರ್ಜಂಟ್ ಕೆಲಸ ಇದ್ದರೆ ಒಂದು ಊರಿಂದ ಮ ತ್ತೊಂದು ಊರಿಗೆ ಹೋಗಬೇಕಾದರೆ ಬೇರೆ ಊರಿನ ರಸ್ತೆ ಬೇಕೆ, ಬೇಕು.

– ಹೇಮಂತ್ ಸಿದ್ಧಾಪುರ, ರಣಧೀರ ಪಡೆ

ಈ ಮಾರಕ ಖಾಯಿಲೆ ಬಗ್ಗೆ ಜಾಗೃತಿ ಮುಖ್ಯ. ಜನಸಾಮಾನ್ಯರಿಗೆ ತೊಂದರೆ ಕೊಡದೆ ತಮಗೆ ತಾವೇ ಬೇಲಿ ಹಾಕಿಕೊಳ್ಳುವ ಮೂಲಕ ಕರೋನಾ ಹೊಡೆದೋಡಿಸಬೇಕು – ಉಮೇಶ್ ನಾಯ್ಕ, ಉಪಾಧ್ಯಕ್ಷರು ಬೇಡ್ಕಣಿ ಗ್ರಾ.ಪಂ. ಸಿದ್ಧಾಪುರ (ಉ.ಕ.)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

1 Comment

  1. “ದಿಗ್ಬಂಧನ ನೀವೇನಂತೀರಾ?…”
    ಎಚ್ಚರ ತಪ್ಪಿದ ಮಾಬ್ ಮೆಂಟಾಲಿಟಿ.

Leave a Reply

Your email address will not be published. Required fields are marked *