old is gold- ಮರಳಿ ಮರೆಯಾದ ಸವಾರಿ ಬೀರುವ ಪರಿಣಾಮ ಅಪಾರ!

ಅದೆಷ್ಟೋ ದಿನಗಳಾಗಿತ್ತು ಆ ಸಿನೆಮಾ ನೋಡಬೇಕೆಂದು ಬಯಸಿ,

ವಾಸ್ತವದಲ್ಲಿ ಅದು ಜೇಕಬ್ ವರ್ಗೀಸ್ ರ ಮೂವಿ ಎನ್ನುವ ಅರಿವು ನನಗಿರಲಿಲ್ಲ. ಆ ಸಿನೆಮಾದ ಅತ್ತಾವರರ ಹಾಡು ನನ್ನಂಥ ಅನೇಕರನ್ನು ಸೆಳೆದಿತ್ತು. ಮರಳಿ ಮರೆಯಾದೆ……. ತೆರಳಿ ತೆರೆಯಾದೆ….. ಎನ್ನುವ ಮಧುರ ಹಾಡನ್ನು ಕೇಳಿ ಸಂಬ್ರಮಿಸದವರ್ಯಾರಾದರೂ ಇದ್ದರೆ ಅದು ಅವರ ದೋಷವಷ್ಟೆ.

ಇಂಥ ಚಲನಚಿತ್ರವನ್ನು ನನ್ನ ಈಗಿನ ಕಛೇರಿಯ ಮೊಟ್ಟ ಮೊದಲ ಸಿನೇಮಾವಾಗಿ ನೋಡಿದೆ, ನಿರೀಕ್ಷೆ ಹುಸಿಯಾಗಲಿಲ್ಲ. ಆ ಸಿನೆಮಾದ ಹೆಸರು ಸವಾರಿ, 2009 ರಲ್ಲಿ ಕನ್ನಡ,ತೆಲುಗು ಎರಡು ಅವತರಣಿಕೆಗಳಲ್ಲಿ ತೆರೆಗೆ ಬಂದ ಈ ಸಿನೆಮಾದ ನಿರ್ಮಾಪಕರು ಲಾಗಾಯ್ತಿನ ಸದಭಿರುಚಿಯ ನಿರ್ಧೇಶಕ ರಾಮೋಜಿ ರಾವ್.

ಶ್ರೀಮಂತ ಉದ್ಯಮಿಯ ಮಗ ಪ್ರೀತಿ (ಪ್ರಿಯತಮೆ ಡಾ. ಜಾನಕಿ) ಯನ್ನು ಹುಡುಕಿ ಬೆಂಗಳೂರು ಬಿಡುವ ನಾಯಕ, ಮಾರ್ಗಮಧ್ಯೆ ಬೈಕ್ ಕಳ್ಳನ ಸ್ನೇಹ ಮಾಡಿ, ಶಿವಮೊಗ್ಗ, ಭದ್ರಾವತಿ, ಹಾಸನ ಸಕಲೇಶ್ ಪುರಗಳನ್ನು ಸುತ್ತಾಡಿ ಮೂಡಗೆರೆಗೆ ಹೋಗುವ ಕ್ಲೈಮ್ಯಾಕ್ಸ್ ಹಂತದಲ್ಲಿ ನಕ್ಸಲೈಟ್ ರ ಸೆರೆಗೆ ಸಿಕ್ಕು ಕಾಡಿನ ಹೋರಾಟ, ಶ್ರೀಮಂತಿಕೆಯ ಶೋಕಿಗಿಂತ ವಾಸ್ತವದ ಬದುಕಿನಲ್ಲಿ ಜನಪರವಾಗಿ ಸಮಾಜಮುಖಿಯಾಗಿ ಬದುಕುವ ಅಗತ್ಯ ಮಹತ್ವವನ್ನು ಸಾರುವ ಉತ್ತಮ ಸಂದೇಶದ ಈ ಚಿತ್ರವನ್ನು ನಿರೂಪಣೆ, ಸಂಭಾಷಣೆ, ಹಾಸ್ಯ, ಭಾವನಾತ್ಮಕತೆ, ಸೇರಿದ ಹಲವು ಮೆಲೊಡ್ರಾಮಾದ ಮೂಲಕ ಹೇಳುವ ವರ್ಗೀಸರ ಪ್ರಯತ್ನ ಎಲ್ಲರಿಗೂ ಆಪ್ತವಾಗುವಂತಿದೆ.

ಪ್ರಥ್ವಿ ಯಂಥ ಅತ್ಯುತ್ತಮ ಚಿತ್ರ ನಿರ್ಧೆಶಿರುವ ಜಾಕಬ್ ಆಕಸ್ಮಿಕವಾಗಿ ಪ್ರಥ್ವಿ ಯಶಸ್ವಿಗೊಳಿಸಿದ ನಿರ್ಧೇಶಕನಲ್ಲ, ಅವರೊಬ್ಬ ಪ್ರತಿಭಾವಂಥ, ಸದಭಿರುಚಿಯ ದಿಗ್ಧರ್ಶಕ ಎನ್ನುವುದಕ್ಕೆ ತೀರಾ ಹಿಂದೆ ಸಿಕ್ಕ ಸಾಕ್ಷಿ-ದೃಷ್ಟಾಂತ ಈ ಸಿನೆಮಾ. ಇಂಥ ಅಸಂಖ್ಯ ಚಿತ್ರಗಳು ಕನ್ನಡ ಸೇರಿದಂತೆ ಭಾರತೀಯ ಚಿತ್ರಲೋಕದಲ್ಲಿ ಬಂದು ಹೋಗಿವೆ. ಇಂಥ ಸಿನೆಮಾಗಳನ್ನು ನೋಡಲೆಂದೇ ಹಿಂದೆಲ್ಲಾ ಚಿತ್ರೋತ್ಸವಗಳು ಜಿಲ್ಲಾಮಟ್ಟದಲ್ಲಿ ನಡೆಯುತಿದ್ದವು. ಈಗ ಆ ಕೊರತೆ ಇರುವುದರಿಂದ ಜನ ಯೂಟ್ಯೂಬ್, ಓಟಿಟಿ ಗಳ ಮೊರೆಹೋಗುತಿದ್ದಾರೆ.

ಹಳೆಯ ಚಿತ್ರ- ಗೀತೆಗಳ ಮೋಹದ ನನಗೆ ಬಹುಹಿಂದೆ ನೋಡಿದ ಶರಪಂಜರ, ಸಜಾಹಿ ಕಾಲಾಪಾನಿ, ಹುಲಿಯಾ ಥರದ ಸಿನೆಮಾಗಳನ್ನು ನಮ್ಮ ನ್ಯೂಸ್ ಪೋರ್ಟಲ್ ಮೂಲಕ ಪರಿಚಯಿಸುವ ಹೆಬ್ಬಯಕೆ ಹುಟ್ಟಿಕೊಂಡಿದೆ. ಆಸಕ್ತರು ತಾವು ನೋಡಿದ ಹಳೆಯ ಅದ್ಭುತ ಸಿನೆಮಾಗಳ ಬಗ್ಗೆ ಚೆಂದವಾಗಿ ಬರೆದು ಬಹುಮಾನ ಗಳಿಸಲು ವೇದಿಕೆ ನೀಡಲು ನಾವಂತೂ ಸಿದ್ಧ, ತಡವೇಕೆ ನಿಮ್ಮ ನೆಚ್ಚಿನ ಸಿನೆಮಾದ ಬಗ್ಗೆ ಬರೆದು ನುಡಿ ಯಲ್ಲಿ ಟೈಪ್ ಮಾಡಿ samajamukhi@rediffmail ಈ mail ಗೆ ಕಳುಹಿಸಿ. ಉಳಿದಂತೆ ಕುಶಲ-ಕ್ಷೇಮ ಸಾಂಪ್ರದ……. ಕನ್ನೇಶ್,

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಭಿತ್ತಿಯ ಚಿತ್ರ ಬಿ. ಡಿ. ಹಿರೇಮಠ

ಬಿ. ಡಿ. ಹಿರೇಮಠ… ಯಾರಿಗೆ ಗೊತ್ತಿಲ್ಲ ಹೇಳಿ….೨೦ ವರ್ಷಗಳ ಹಿಂದೆ ಹೈ ಕೋರ್ಟ್ ಧಾರವಾಡ ವಿಭಾಗೀಯ ಪೀಠಕ್ಕಾಗಿ ಹೋರಾಡಿ ಮನೆ ಮಾತಾಗಿದ್ದ ಬಿಡಿ ಹಿರೇಮಠ...

ಶಾಲೆಗೆ ಹೋಗದ ರಾಜ!

ಅಕ್ಷರ ಕಲಿಯದೇ ಆಕಾಶದೆತ್ತರಕ್ಕೆ ಬೆಳೆದ ಅಪರೂಪದ ನಟ ಅನರ್ಘ್ಯ ರತ್ನ. ಮತ್ತೇ ಶಾಲೆಗೆ ಮುಖ ತೋರಿಸಲೇ ಇಲ್ಲ.

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

Latest Posts

ಭಿತ್ತಿಯ ಚಿತ್ರ ಬಿ. ಡಿ. ಹಿರೇಮಠ

ಬಿ. ಡಿ. ಹಿರೇಮಠ… ಯಾರಿಗೆ ಗೊತ್ತಿಲ್ಲ ಹೇಳಿ….೨೦ ವರ್ಷಗಳ ಹಿಂದೆ ಹೈ ಕೋರ್ಟ್ ಧಾರವಾಡ ವಿಭಾಗೀಯ ಪೀಠಕ್ಕಾಗಿ ಹೋರಾಡಿ ಮನೆ ಮಾತಾಗಿದ್ದ ಬಿಡಿ ಹಿರೇಮಠ ಅಂದರೆ ಎಲ್ಲರ ಭಿತ್ತಿಯ ಚಿತ್ರ… ಅವಳಿ ನಗರ ಹುಬ್ಬಳ್ಳಿ – ಧಾರವಾಡದಲ್ಲಿ ಉತ್ತರ ಕರ್ನಾಟಕ ಅಂದರೆ…. ಅದು ಪಾಪು, ಚಂಪಾ… ಪಾವಟೆ, ನಂತರದ ದೊಡ್ಡ ಹೆಸರು. ಅಧಿಕಾರ ಇಲ್ಲದೆ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *