ಎ.ರವೀಂದ್ರ ಬಂಡಲ್ ಬಿಡುತ್ತಾರಾ?!

ಕಳೆದ ನಾಲ್ಕು ದಶಕಗಳಿಂದ ಅರಣ್ಯ ಭೂಮಿ ಸಾಗುವಳಿದಾರರ ಅರಣ್ಯ ಅತಿಕ್ರಮಣ ಹೋರಾಟ ಸಮೀತಿ ಮೂಲಕ ಹೋರಾಟ ಮಾಡುತ್ತಿರುವ ಎ.ರವೀಂದ್ರ ಉತ್ತರ ಕನ್ನಡ ಜಿಲ್ಲೆ, ರಾಜ್ಯ, ದೇಶದ ಅರಣ್ಯ ವಾಸಿಗಳ ವಾಸ್ತವ ಸ್ಥಿತಿ-ಗತಿಗಳ ಅಧೀಕೃತ ಅಂಕಿ-ಸಂಖ್ಯೆಗಳನ್ನು ಹೇಳಬಲ್ಲರು. 40 ವರ್ಷಗಳ ಹೋರಾಟದಲ್ಲಿ ಬುಡಮಟ್ಟದಿಂದ ಪ್ರಾರಂಭಿಸಿ ರಾಷ್ಟ್ರಮಟ್ಟದ ವರೆಗೆ ಅಧ್ಯಯನ, ಕಾನೂನು ಹೋರಾಟ ಮಾಡಿ ಅರಣ್ಯಭೂಮಿ ಸಾಗುವಳಿದಾರರನ್ನು ಭೂಮಾಲಿಕರನ್ನಾಗಿಸುವ ಅವರ ಹೋರಾಟದ ಬದ್ಧತೆಯನ್ನು ಅವರ ವಿರೋಧಿಗಳೂ ಮೆಚ್ಚಬೇಕು.

ಇಂಥ ರವೀಂದ್ರ ನಾಥ ನಾಯ್ಕ ಜಿಲ್ಲೆಯಿಂದ ಹೊರಗೆ ಕಾರ್ಯಕ್ರಮಕ್ಕೆ ಹೋದಾಗ ಭಾಷಣದಲ್ಲಿ ಹೇಳಿದ ಕರಾವಕ್ಕು ಅಂಕಿ-ಸಂಖ್ಯೆಗಳನ್ನು ದಾಖಲಿಸಿಕೊಂಡ ಪತ್ರಕರ್ತರೊಬ್ಬರು ನಂತರ ಇವರ ಸಂದರ್ಶನ ಮಾಡಿದಂತೆ ಮಾಡಿ! ಅರಣ್ಯ ಭೂಮಿ ಹಕ್ಕು ಹೋರಾಟ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರಂತೆ.

ಭಾಷಣ, ಸಂದರ್ಶನ, ಮಾತು ಎಲ್ಲಾ ಕಡೆ ಅಂಕಿ-ಸಂಖ್ಯೆ ಏರುಪೇರಾಗದಿರುವುದನ್ನು ದೃಢೀಕರಿಸಿಕೊಂಡ ನಂತರ ಎ. ರವೀಂದ್ರರಿಗೆ ‘ಸರ್ ನಿಮ್ಮ ಅಂಕಿಸಂಖ್ಯೆ ಗಳ ವಿಶ್ವಾಸಾರ್ಹತೆ ಬಗ್ಗೆ ನಾವು ಬೆಟ್ಟುಕಟ್ಟಿಕೊಂಡಿದ್ದೆವು. ಆದರೆ ನಿಮ್ಮ ಸತ್ಯ-ಬದಲಾಗದ ಅಂಕಿಸಂಖ್ಯೆ ಗಳ ಕರಾರುವಾಕ್ಕುತನ ನನಗೆ 5 ಸಾವಿರ ಉಳಿಸಿದೆ,’ ಎಂದರಂತೆ…. ಹೀಗೆ ಅರಣ್ಯಭೂಮಿ ಹಕ್ಕು ಹೋರಾಟ, ಅದಕ್ಕೆ ಸಂಬಂಧಿಸಿದ ದಾಖಲೆಗಳು, ಹೋರಾಟಗಳಿಂದ ಪ್ರಸಿದ್ಧರಾಗಿರುವ ಎ. ರವೀಂದ್ರ ಈಗಲೂ ಅರಣ್ಯ ಹಕ್ಕು ಹೋರಾಟ ಅಭಿಯಾನವನ್ನು ಚಳವಳಿಯಾಗಿ, ನ್ಯಾಯಾಂಗದಲ್ಲಿ ಅದನ್ನೊಂದು ಹೋರಾಟವಾಗಿ ಪರಿಗಣಿಸಿದ್ದಾರೆ. ರವೀಂದ್ರನಾಥ ನಾಯ್ಕ ನಮ್ಮ ಸಮಾಜಮುಖಿ ಯೂ ಟ್ಯೂಬ್ ಚಾನೆಲ್ ನ ಕಾರ್ಯಕ್ರಮಕ್ಕೆ ಮೂಖಾಮುಖಿಯಾಗಿ ತಮ್ಮ ಹೋರಾಟ, ಫಲಶೃತಿಗಳ ಬಗ್ಗೆ ಅವಶ್ಯ ದಾಖಲೆಗಳೊಂದಿಗೆ ವಿವರಿಸಿದರು ಅವರ ಸಂದರ್ಶನದ ಎರಡು ಕಂತುಗಳು ನಮ್ಮ samaajamukhi, samaajamukhi.net ನಲ್ಲಿ ಲಭ್ಯವಿವೆ. ಈ ಸಂದರ್ಶನ ಅವರ ಸಾಮರ್ಥ್ಯ, ವಿಮರ್ಶಕರ ಆರೋಪ,ಪ್ರಶ್ನೆಗಳಿಗೂ ತಕ್ಕ ಉತ್ತರ ನೀಡಿವೆ. samajamukhi.net ಮತ್ತು samaajamukhi ಯೂಟ್ಯೂಬ್ ಚಾನೆಲ್ ಗಳಿಗೆ subscibe ಆಗುವ ಮೂಲಕ ಸಹಕ ರಿಸಿ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *