ಎ.ರವೀಂದ್ರ ಬಂಡಲ್ ಬಿಡುತ್ತಾರಾ?!

ಕಳೆದ ನಾಲ್ಕು ದಶಕಗಳಿಂದ ಅರಣ್ಯ ಭೂಮಿ ಸಾಗುವಳಿದಾರರ ಅರಣ್ಯ ಅತಿಕ್ರಮಣ ಹೋರಾಟ ಸಮೀತಿ ಮೂಲಕ ಹೋರಾಟ ಮಾಡುತ್ತಿರುವ ಎ.ರವೀಂದ್ರ ಉತ್ತರ ಕನ್ನಡ ಜಿಲ್ಲೆ, ರಾಜ್ಯ, ದೇಶದ ಅರಣ್ಯ ವಾಸಿಗಳ ವಾಸ್ತವ ಸ್ಥಿತಿ-ಗತಿಗಳ ಅಧೀಕೃತ ಅಂಕಿ-ಸಂಖ್ಯೆಗಳನ್ನು ಹೇಳಬಲ್ಲರು. 40 ವರ್ಷಗಳ ಹೋರಾಟದಲ್ಲಿ ಬುಡಮಟ್ಟದಿಂದ ಪ್ರಾರಂಭಿಸಿ ರಾಷ್ಟ್ರಮಟ್ಟದ ವರೆಗೆ ಅಧ್ಯಯನ, ಕಾನೂನು ಹೋರಾಟ ಮಾಡಿ ಅರಣ್ಯಭೂಮಿ ಸಾಗುವಳಿದಾರರನ್ನು ಭೂಮಾಲಿಕರನ್ನಾಗಿಸುವ ಅವರ ಹೋರಾಟದ ಬದ್ಧತೆಯನ್ನು ಅವರ ವಿರೋಧಿಗಳೂ ಮೆಚ್ಚಬೇಕು.

ಇಂಥ ರವೀಂದ್ರ ನಾಥ ನಾಯ್ಕ ಜಿಲ್ಲೆಯಿಂದ ಹೊರಗೆ ಕಾರ್ಯಕ್ರಮಕ್ಕೆ ಹೋದಾಗ ಭಾಷಣದಲ್ಲಿ ಹೇಳಿದ ಕರಾವಕ್ಕು ಅಂಕಿ-ಸಂಖ್ಯೆಗಳನ್ನು ದಾಖಲಿಸಿಕೊಂಡ ಪತ್ರಕರ್ತರೊಬ್ಬರು ನಂತರ ಇವರ ಸಂದರ್ಶನ ಮಾಡಿದಂತೆ ಮಾಡಿ! ಅರಣ್ಯ ಭೂಮಿ ಹಕ್ಕು ಹೋರಾಟ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರಂತೆ.

ಭಾಷಣ, ಸಂದರ್ಶನ, ಮಾತು ಎಲ್ಲಾ ಕಡೆ ಅಂಕಿ-ಸಂಖ್ಯೆ ಏರುಪೇರಾಗದಿರುವುದನ್ನು ದೃಢೀಕರಿಸಿಕೊಂಡ ನಂತರ ಎ. ರವೀಂದ್ರರಿಗೆ ‘ಸರ್ ನಿಮ್ಮ ಅಂಕಿಸಂಖ್ಯೆ ಗಳ ವಿಶ್ವಾಸಾರ್ಹತೆ ಬಗ್ಗೆ ನಾವು ಬೆಟ್ಟುಕಟ್ಟಿಕೊಂಡಿದ್ದೆವು. ಆದರೆ ನಿಮ್ಮ ಸತ್ಯ-ಬದಲಾಗದ ಅಂಕಿಸಂಖ್ಯೆ ಗಳ ಕರಾರುವಾಕ್ಕುತನ ನನಗೆ 5 ಸಾವಿರ ಉಳಿಸಿದೆ,’ ಎಂದರಂತೆ…. ಹೀಗೆ ಅರಣ್ಯಭೂಮಿ ಹಕ್ಕು ಹೋರಾಟ, ಅದಕ್ಕೆ ಸಂಬಂಧಿಸಿದ ದಾಖಲೆಗಳು, ಹೋರಾಟಗಳಿಂದ ಪ್ರಸಿದ್ಧರಾಗಿರುವ ಎ. ರವೀಂದ್ರ ಈಗಲೂ ಅರಣ್ಯ ಹಕ್ಕು ಹೋರಾಟ ಅಭಿಯಾನವನ್ನು ಚಳವಳಿಯಾಗಿ, ನ್ಯಾಯಾಂಗದಲ್ಲಿ ಅದನ್ನೊಂದು ಹೋರಾಟವಾಗಿ ಪರಿಗಣಿಸಿದ್ದಾರೆ. ರವೀಂದ್ರನಾಥ ನಾಯ್ಕ ನಮ್ಮ ಸಮಾಜಮುಖಿ ಯೂ ಟ್ಯೂಬ್ ಚಾನೆಲ್ ನ ಕಾರ್ಯಕ್ರಮಕ್ಕೆ ಮೂಖಾಮುಖಿಯಾಗಿ ತಮ್ಮ ಹೋರಾಟ, ಫಲಶೃತಿಗಳ ಬಗ್ಗೆ ಅವಶ್ಯ ದಾಖಲೆಗಳೊಂದಿಗೆ ವಿವರಿಸಿದರು ಅವರ ಸಂದರ್ಶನದ ಎರಡು ಕಂತುಗಳು ನಮ್ಮ samaajamukhi, samaajamukhi.net ನಲ್ಲಿ ಲಭ್ಯವಿವೆ. ಈ ಸಂದರ್ಶನ ಅವರ ಸಾಮರ್ಥ್ಯ, ವಿಮರ್ಶಕರ ಆರೋಪ,ಪ್ರಶ್ನೆಗಳಿಗೂ ತಕ್ಕ ಉತ್ತರ ನೀಡಿವೆ. samajamukhi.net ಮತ್ತು samaajamukhi ಯೂಟ್ಯೂಬ್ ಚಾನೆಲ್ ಗಳಿಗೆ subscibe ಆಗುವ ಮೂಲಕ ಸಹಕ ರಿಸಿ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಅಕಾಲಿಕ ಮಳೆ, ಜಾತ್ರೆ, ವಾರ್ಷಿಕೋತ್ಸವಗಳಿಗೆ ಅಡ್ಡಿ… ಶಾಸಕರ ಮಿಂಚಿನ ಸಂಚಾರ!

ಮಲೆನಾಡು ಕರಾವಳಿಯ ಅಕಾಲಿಕ ಮಳೆ ಬೇಸಿಗೆಯ ಉಷ್ಣವನ್ನು ಶಮನ ಮಾಡಿದ್ದರೆ… ಪೂರ್ವನಿಶ್ಚಿತ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *