ಎ.ರವೀಂದ್ರ ಬಂಡಲ್ ಬಿಡುತ್ತಾರಾ?!

ಕಳೆದ ನಾಲ್ಕು ದಶಕಗಳಿಂದ ಅರಣ್ಯ ಭೂಮಿ ಸಾಗುವಳಿದಾರರ ಅರಣ್ಯ ಅತಿಕ್ರಮಣ ಹೋರಾಟ ಸಮೀತಿ ಮೂಲಕ ಹೋರಾಟ ಮಾಡುತ್ತಿರುವ ಎ.ರವೀಂದ್ರ ಉತ್ತರ ಕನ್ನಡ ಜಿಲ್ಲೆ, ರಾಜ್ಯ, ದೇಶದ ಅರಣ್ಯ ವಾಸಿಗಳ ವಾಸ್ತವ ಸ್ಥಿತಿ-ಗತಿಗಳ ಅಧೀಕೃತ ಅಂಕಿ-ಸಂಖ್ಯೆಗಳನ್ನು ಹೇಳಬಲ್ಲರು. 40 ವರ್ಷಗಳ ಹೋರಾಟದಲ್ಲಿ ಬುಡಮಟ್ಟದಿಂದ ಪ್ರಾರಂಭಿಸಿ ರಾಷ್ಟ್ರಮಟ್ಟದ ವರೆಗೆ ಅಧ್ಯಯನ, ಕಾನೂನು ಹೋರಾಟ ಮಾಡಿ ಅರಣ್ಯಭೂಮಿ ಸಾಗುವಳಿದಾರರನ್ನು ಭೂಮಾಲಿಕರನ್ನಾಗಿಸುವ ಅವರ ಹೋರಾಟದ ಬದ್ಧತೆಯನ್ನು ಅವರ ವಿರೋಧಿಗಳೂ ಮೆಚ್ಚಬೇಕು.

ಇಂಥ ರವೀಂದ್ರ ನಾಥ ನಾಯ್ಕ ಜಿಲ್ಲೆಯಿಂದ ಹೊರಗೆ ಕಾರ್ಯಕ್ರಮಕ್ಕೆ ಹೋದಾಗ ಭಾಷಣದಲ್ಲಿ ಹೇಳಿದ ಕರಾವಕ್ಕು ಅಂಕಿ-ಸಂಖ್ಯೆಗಳನ್ನು ದಾಖಲಿಸಿಕೊಂಡ ಪತ್ರಕರ್ತರೊಬ್ಬರು ನಂತರ ಇವರ ಸಂದರ್ಶನ ಮಾಡಿದಂತೆ ಮಾಡಿ! ಅರಣ್ಯ ಭೂಮಿ ಹಕ್ಕು ಹೋರಾಟ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರಂತೆ.

ಭಾಷಣ, ಸಂದರ್ಶನ, ಮಾತು ಎಲ್ಲಾ ಕಡೆ ಅಂಕಿ-ಸಂಖ್ಯೆ ಏರುಪೇರಾಗದಿರುವುದನ್ನು ದೃಢೀಕರಿಸಿಕೊಂಡ ನಂತರ ಎ. ರವೀಂದ್ರರಿಗೆ ‘ಸರ್ ನಿಮ್ಮ ಅಂಕಿಸಂಖ್ಯೆ ಗಳ ವಿಶ್ವಾಸಾರ್ಹತೆ ಬಗ್ಗೆ ನಾವು ಬೆಟ್ಟುಕಟ್ಟಿಕೊಂಡಿದ್ದೆವು. ಆದರೆ ನಿಮ್ಮ ಸತ್ಯ-ಬದಲಾಗದ ಅಂಕಿಸಂಖ್ಯೆ ಗಳ ಕರಾರುವಾಕ್ಕುತನ ನನಗೆ 5 ಸಾವಿರ ಉಳಿಸಿದೆ,’ ಎಂದರಂತೆ…. ಹೀಗೆ ಅರಣ್ಯಭೂಮಿ ಹಕ್ಕು ಹೋರಾಟ, ಅದಕ್ಕೆ ಸಂಬಂಧಿಸಿದ ದಾಖಲೆಗಳು, ಹೋರಾಟಗಳಿಂದ ಪ್ರಸಿದ್ಧರಾಗಿರುವ ಎ. ರವೀಂದ್ರ ಈಗಲೂ ಅರಣ್ಯ ಹಕ್ಕು ಹೋರಾಟ ಅಭಿಯಾನವನ್ನು ಚಳವಳಿಯಾಗಿ, ನ್ಯಾಯಾಂಗದಲ್ಲಿ ಅದನ್ನೊಂದು ಹೋರಾಟವಾಗಿ ಪರಿಗಣಿಸಿದ್ದಾರೆ. ರವೀಂದ್ರನಾಥ ನಾಯ್ಕ ನಮ್ಮ ಸಮಾಜಮುಖಿ ಯೂ ಟ್ಯೂಬ್ ಚಾನೆಲ್ ನ ಕಾರ್ಯಕ್ರಮಕ್ಕೆ ಮೂಖಾಮುಖಿಯಾಗಿ ತಮ್ಮ ಹೋರಾಟ, ಫಲಶೃತಿಗಳ ಬಗ್ಗೆ ಅವಶ್ಯ ದಾಖಲೆಗಳೊಂದಿಗೆ ವಿವರಿಸಿದರು ಅವರ ಸಂದರ್ಶನದ ಎರಡು ಕಂತುಗಳು ನಮ್ಮ samaajamukhi, samaajamukhi.net ನಲ್ಲಿ ಲಭ್ಯವಿವೆ. ಈ ಸಂದರ್ಶನ ಅವರ ಸಾಮರ್ಥ್ಯ, ವಿಮರ್ಶಕರ ಆರೋಪ,ಪ್ರಶ್ನೆಗಳಿಗೂ ತಕ್ಕ ಉತ್ತರ ನೀಡಿವೆ. samajamukhi.net ಮತ್ತು samaajamukhi ಯೂಟ್ಯೂಬ್ ಚಾನೆಲ್ ಗಳಿಗೆ subscibe ಆಗುವ ಮೂಲಕ ಸಹಕ ರಿಸಿ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *