no shivaji- ಶಿವಾಜಿ ಬೇಡ, ಸದಾಶಿವರಾಯ ನಾಯಕ ಬೇಕು

ಸದಾಶಿವಗಡ ಕೋಟೆಯ ನಿರ್ಮಾತೃ ” ಸೋದೆಸದಾಶಿವರಾಯ”

———————————ಕಾರವಾರದ ಸದಾಶಿವಗಡ ಐತಿಹಾಸಿಕ ಪ್ರದೇಶ,ಕಾರವಾರಕ್ಕೆ ಸಾವಿರಾರು ವರ್ಷದ ಸ್ಪಷ್ಟ ಚಾರಿತ್ರಿಕ ಹಿನ್ನೆಲೆ ಇದ್ದರೂ,೧೬ ನೇ ಶತಮಾನದಿಂದ ಈ ಪ್ರದೇಶಕ್ಕೆ ಹೆಚ್ಚಿನ ಮಹತ್ವ ಬಂದಿತ್ತು,ಕಾರಣ ಐರೋಪ್ಯರ ಆಗಮನ,ಬ್ರಿಟಿಷರು,ಪೋರ್ಚುಗೀಸರು ಈ ಪ್ರದೇಶವನ್ನು ತಮ್ಮ ಅನುಕೂಲತೆಗೆ ತಕ್ಕ ಹಾಗೆ ಬಳಸಿ ಇದನ್ನು ತಮ್ಮ ವ್ಯಾಪಾರಿ ಕೇಂದ್ರವನ್ನಾಗಿಸಿಕೊಂಡಿದ್ದರು,ಆ ಸಂದರ್ಭದಲ್ಲಿ ಉತ್ತರ ಕನ್ನಡಜಿಲ್ಲೆಯ ಪ್ರಮುಖ ಆಳರಸರಾಗಿದ್ದವರು ಸೋದೆಯ ಅರಸರು,ಕಾರವಾರ ಕೂಡಾ ಇವರ ಹಿಡಿತದಲ್ಲೇ ಇತ್ತು,೧೭ ನೇ ಶತಮಾನದ ಮಧ್ಯಭಾಗದಲ್ಲಿ ಸೋದೆಯ ಅರಸನಾಗಿದ್ದ ಸದಾಶಿವರಾಯನು ಬ್ರಿಟಿಷರನ್ನು ಹೇಗಾದರೂ ಮಾಡಿ ಮಟ್ಟ ಹಾಕಲೇಬೇಕೆಂದು ಕಾರವಾರದಿಂದ ಅವರನ್ನು ಓಡಿಸಲೇಬೇಕೆಂದು ತೀರ್ಮಾನಿಸಿ ಅಲ್ಲಿ ಒಂದು ಕೋಟೆಯನ್ನು ಕಟ್ಟಿಸುತ್ತಾನೆ,(ನಂತರ ಅದನ್ನು ಸೋದೆಯ ಬಸವಲಿಂಗರಾಯ ಬಲಿಷ್ಠಪಡಿಸಿದ) ಅದುವೇ ಸದಾಶಿವಗಡ ಕೋಟೆ,ಸಾಮಾನ್ಯವಾಗಿ ಗಡ ಎಂದರೆ ಕೋಟೆ ಅಂತಲೇ ಅರ್ಥ,ಸದಾಶಿವಗಡ ಎಂದರೆ ಸದಾಶಿವರಾಯನ ಕೋಟೆ ಎಂದೇ ಅರ್ಥ,

ಈ ವಿಷಯಕ್ಕೆ ಸಾಕಷ್ಟು ಆಧಾರಗಳಿವೆ,ಅಲ್ಲದೆ ಬ್ರಿಟಿಷರನ್ನು ಭಾರತದಲ್ಲಿ ಮೊಟ್ಟ ಮೊದಲಬಾರಿಗೆ ಸೋಲಿಸಿದ್ದೂ ಇದೇ ಸೋದೆ ಸದಾಶಿವರಾಯ! ಆದರೆ ಈ ಕೀರ್ತಿ ಒಲಿದದ್ದು ಮಾತ್ರ ಹೈದರಲಿಗೆ!!! ಕಾರವಾರದಲ್ಲಿ ಹದಿನೇಳನೆಯ ಶತಮಾನದ ಮಧ್ಯಭಾಗದಲ್ಲಿ ಬ್ರಿಟಿಷರನ್ನು ಸೋಲಿಸಿ ವಿಜಯದಾಖಲಿಸಿದ್ದು ನಮ್ಮ ಹೆಮ್ಮೆಯ ಸೋದೆ ಸದಾಶಿವರಾಯ,ಆ ಹಿನ್ನೆಲೆಯಲ್ಲಿಯೇ ಪ್ರತಿವರ್ಷ ಸದಾಶಿವಗಡದಲ್ಲಿ ” ವಿಜಯದಿವಸ” ವನ್ನೂ ಆಚರಿಸುತ್ತಿದ್ದಾರೆ,ಇಷ್ಟೆಲ್ಲ ಇರುವಾಗ ಈಗ ಸದಾಶಿವರಾಯನ ಕೋಟೆ ಶಿವಾಜಿಯ ಕೋಟೆ ಎಂದು ಸುಮ್ಮಸುಮ್ಮನೆ ಬಿಂಬಿಸುತ್ತಾ ಅಲ್ಲಿ ಶಿವಾಜಿಯವರ ಪುತ್ಥಳಿಯನ್ನು ನಿರ್ಮಿಸಲು ಮುಂದಾಗಿರುವುದು ತುಂಬಾ ಬೇಸರದ ಸಂಗತಿ,ಇತಿಹಾಸದ ತಿಳಿವಳಿಕೆ ಯಾಕೆ ಬೇಕೆಂದರೆ ಅಭಿಮಾನಕ್ಕೋಸ್ಕರ,ತನ್ಮೂಲಕ ಅಭಿವೃದ್ಧಿಯ ಆಶಯಕ್ಕೋಸ್ಕರ,ಅದೇ ಅಭಿಮಾನ ಅವಾಂತರಕ್ಕೆ ಕಾರಣವಾಗಬಾರದು,ಒಂದು ವೇಳೆ ಸದಾಶಿವಗಡದ ಕೋಟೆಯಲ್ಲಿ ಶಿವಾಜಿಯ ಪ್ರತಿಮೆ ಸ್ಥಾಪನೆಯಾದರೆ ಮುಂದಿನ ತಲೆಮಾರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ,ನಮಗೆ ಶಿವಾಜಿಯ ಮೇಲೂ ಆತ ಹಿಂದೂ ಧರ್ಮದ ರಕ್ಷಣೆಗೆ ಮಾಡಿದ ಕಾರ್ಯದ ಮೇಲೂ ಅಪಾರ ಅಭಿಮಾನವಿದೆ,ಹಾಗಂತ ನಮ್ಮ‌ನೆಲದ ಹೆಮ್ಮೆಯ ಅರಸರ ಸಾಧನೆಯನ್ನು ಅಲ್ಲಗಳೆಯಲಾದೀತೇ? ಅದು ಸಮಂಜಸವಲ್ಲ,ಶಿವಾಜಿಯ ಮೂರ್ತಿಯನ್ನು ಈ ಸ್ಥಳದ ಬದಲಿಗೆ ಬೇರೆ ಸ್ಥಳದಲ್ಲಿ ಸ್ಥಾಪಿಸಿ,ಈ ಸ್ಥಳದಲ್ಲಿ ಸೋದೆ ಸದಾಶಿವರಾಯನ ಮೂರ್ತಿಯನ್ನು ಸ್ಥಾಪಿಸಿ, ಆಗ ಅವರ ಪರಿಶ್ರಮಕ್ಕೊಂದು ಬೆಲೆ ಪ್ರಾಪ್ತಿಯಾಗುತ್ತದೆ, ಕಳೆದ ೪ ವರ್ಷದಿಂದ ನಾವು ಮನವಿಕೊಡುತ್ತಿದ್ದೇವೆ,ಕೇಳಿಕೊಳ್ಳುತ್ತಿದ್ದೇವೆ,ಶಿರಸಿಯ ಸ್ಥಾಪಕ ಸೋದೆ ರಾಮಚಂದ್ರ ನಾಯಕ,ಹೀಗಾಗಿ ಈ ಸಂಗತಿ ಮುಂದಿನ ಯುವ ತಲೆಮಾರಿಗೆ ತಿಳಿದಿರಬೇಕೆಂದರೆ ದಯವಿಟ್ಟು ಶಿರಸಿಯಲ್ಲಿ ಆತನದೊಂದು ಪುತ್ಥಳಿ ಸ್ಥಾಪಿಸಿ ಅಥವಾ ಯಾವುದಾದರೂ ಸರ್ಕಲ್ ಗಾದರೂ ಆತನ ಹೆಸರಿಡಿ ಎಂದು….ಯಾರಿಗೂ ಕಿವಿಯೇ ಕೇಳುತ್ತಿಲ್ಲ ನಾನೇನುಮಾಡಲಿ….ಎಲ್ಲವನ್ನೂ ರಾಜಕೀಯ ಲಾಭದ ನೆಲೆಯಲ್ಲೇ ದಯವಿಟ್ಟು ನೋಡಬೇಡಿ,ಸಾಂಸ್ಕೃತಿಕವಾಗಿ ಚಿಂತಿಸಿ,ಚರಿತ್ರೆಯ ಅದ್ಭುತ ಸಂಗತಿಗಳನ್ನು ಚಿರಂತನಗೊಳಿಸಿ

-ಲಕ್ಷ್ಮೀಶ್ ಹೆಗಡೆ, ಸೋಂದಾ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *