ವಿದ್ಯುತ್ ನಿಗಮಕ್ಕೆ ಹೊರೆಯಾಗುತ್ತಿರುವ ಜನರಿಲ್ಲದ ಕಾಟಾಚಾರದ ಅದಾಲತ್ ಮತ್ತು ಸಂವಾದ ಸಭೆಗಳು


ಕರ್ನಾಟಕ ವಿದ್ಯುಚ್ಛಕ್ತಿ ನಿಗಮ ನಡೆಸುತ್ತಿರುವ ಮಾಸಿಕ ಗ್ರಾಹಕರ ಅದಾಲತ್ ಮತ್ತು ಸಂವಾದ ಸಭೆಗಳು ಕಾಟಾಚಾರದ ಕಾರ್ಯಕ್ರಮಗಳಾಗು ತ್ತಿರುವ ಅಂಶ ಬೆಳಕಿಗೆ ಬಂದಿದೆ.
ಸಿದ್ಧಾಪುರ ತಾಲೂಕು, ಉತ್ತರಕನ್ನಡ ಜಿಲ್ಲೆ ಸೇರಿದ ಕರ್ನಾಟಕದಾದ್ಯಂತ ನಾನಾ ವಿಭಾಗಗಳಾಗಿ ವಿಸ್ತರಿಸಿರುವ ಹೆಸ್ಕಾಂ, ಬೆಸ್ಕಾಂ, ಮೆಸ್ಕಾಂಗಳಲ್ಲಿ ಪ್ರತಿತಿಂಗಳು ನಿಗದಿತ ದಿನಗಳಂದು ಗ್ರಾಹಕರ ಅದಾಲತ್ ಮತ್ತು ಸಂವಾದ ಸಭೆಗಳು ನಡೆಯುತ್ತಿವೆ.
ಈ ಅದಾಲತ್ ಮತ್ತು ಸಂವಾದಸಭೆಗಳಿಗೆ ಗ್ರಾಹಕರೇ ಬರದಿರುವುದರಿಂದ ಸಭೆ,ಸಂವಾದ ಯಾರೊಂದಿಗೆ ಮಾಡುವುದು? ಹೀಗಾಗಿ ಈ ಯೋಜನೆ ವಿಫಲವಾಗುತ್ತಿದೆ. ಕಳೆದ ಶನಿವಾರ ಜು.20 ರಂದು ನಿಗದಿಯಂತೆ ಮುಂಜಾನೆ ಗ್ರಾಹಕರ ಅದಾಲತ್ ಮತ್ತು ಸಾಯಂಕಾಲ ಸಂವಾದ ಸಭೆಗಳಿದ್ದವು. ಆದರೆ ಈ ಎರಡೂ ನಿಗದಿತ ಕಾರ್ಯಕ್ರಮಗಳಿಗೆ ಜನರೇ ಇರಲಿಲ್ಲ.
ಮುಂಜಾನೆ ವೇಳೆ ದೂರು ಹೊತ್ತು ಬಂದ ಏಕೈಕ ಗ್ರಾಹಕ ಸಿಬ್ಬಂದಿಗಳು ಮತ್ತು ವ್ಯವಸ್ಥೆಯ ಲೋಪದ ಬಗ್ಗೆ ದೂರುತಿದ್ದುದು ಬಿಟ್ಟರೆ, ಬೇರೆ ಯಾವ ಗ್ರಾಹಕರ ಮುಖಗಳೂ ಸಿದ್ಧಾಪುರ ಹೆಸ್ಕಾಂ ಉಪವಿಭಾಗೀಯ ಕಚೇರಿ ಎದುರು ಕಾಣಲಿಲ್ಲ. ಹಾಗೆಂದು ಸಿದ್ಧಾಪುರದಲ್ಲಿ ವಿದ್ಯುತ್ ಸಮಸ್ಯೆಗಳೇ ಇಲ್ಲವೇನೆಂದೇನಿಲ್ಲ, ಆದರೆ ಗ್ರಾಹಕರಿಗೆ ನಿರಾಸಕ್ತಿ. ಕಟ್ಟೆಮೇಲೆ ಕೂತು, ಸಂಬಂಧಿಸಿರದ ಪ್ರದೇಶ, ಸಮಯಗಳಲ್ಲಿ ಕೆ.ಇ.ಬಿ., ಹೆಸ್ಕಾಂ ಬಗ್ಗೆ ದೂರುವವರು ಅವರದೇ ವೇದಿಕೆಗಳಾದ ಸಂವಾದ ಸಭೆ,ಗ್ರಾಹಕರ ಅದಾಲತ್ ಗಳಿಗೆ ಬಂದಿರುವುದಿಲ್ಲ.
ಜನಪ್ರತಿನಿಧಿಗಳು ಗ್ರಾಮಸಭೆ,ತಾಲೂಕಾ ಪಂಚಾಯತ್ ಮಾಸಿಕ ಸಭೆಗಳಲ್ಲಿ ಇಂಥ ವಿಚಾರ, ಮಾಹಿತಿ ಪಡೆದಿರುತ್ತಾರೆ. ಆದರೆ ನಿಗದಿತ ಗ್ರಾಹಕರ ಅದಾಲತ್ ಮತ್ತು ಗ್ರಾಹಕರ ಸಂವಾದ ಸಭೆಗಳಲ್ಲಿ ಜನಪ್ರತಿನಿಧಿಗಳೂ ಕಾಣಸಿಗುವುದಿಲ್ಲ. ಅಧಿಕಾರ, ಅನುಕೂಲ, ಜಾತಿ-ಧರ್ಮಗಳ ಕಾರಣಕ್ಕೆ ಆಯ್ಕೆಯಾಗುವ ಇಲ್ಲಿಯ ಶಾಸಕರು, ಸಂಸದರನ್ನಂತೂ ಕಾಣುವುದು ಹಾಗಿರಲಿ, ಕೇಳುವ ಹಾಗೂ ಇಲ್ಲ. ಸಿದ್ಧಾಪುರದ ಕೋಲಶಿರ್ಸಿ, ಬೇಡ್ಕಣಿ ಪಂಚಾಯತ್ ಗಳಲ್ಲಿ ಹೆಸ್ಕಾಂ ಉಳ್ಳವರಿಗೊಂದು ನ್ಯಾಯ, ಇಲ್ಲದವರಿಗೊಂದು ನ್ಯಾಯ ಎನ್ನುವ ಪಕ್ಷಪಾತ ಮಾಡಿ ಕೆಲವರಿಗಷ್ಟೆ ನಗರದ ವಿದ್ಯುತ್ ಸಂಪರ್ಕ, ಹಲವರಿಗೆ ಗ್ರಾಮೀಣ ಸಂಪರ್ಕದ ತಾರತಮ್ಯ ಮಾಡುತ್ತಿದೆ.
ಆದರೆ ಈ ಬಗ್ಗೆ ಈ ಭಾಗದ ಜನಪ್ರತಿನಿಧಿಗಳು,ಗ್ರಾ.ಪಂ., ತಾ.ಪಂ. ಜಿ.ಪಂ. ಸದಸ್ಯರು ಕೂಡಾ ಧ್ವನಿ ಎತ್ತುತ್ತಿಲ್ಲ. ಜನಪ್ರತಿನಿಧಿಗಳು, ಸಾರ್ವಜನಿಕರ ಈ ಅನಾಸಕ್ತಿಯಿಂದಾಗಿ ತಾಲೂಕಿನಲ್ಲಿ ಬಹುತೇಕ ದಿನಗಳಲ್ಲಿ ವಿಶೇಶವಾಗಿ ಮಳೆಗಾಲದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ನಿರಂತರ ಆದರೆ ಗ್ರಾಹಕರು, ಜನಪ್ರತಿನಿಧಿಗಳು ಜವಾಬ್ಧಾರಿ ವಹಿಸದ ಪರಿಣಾಮ ಹೆಸ್ಕಾಂ ಗೆ ಮಲಗುವವರಿಗೆ ಹಾಸಿಗೆ ಹಾಸಿ ಕೊಟ್ಟಂತಾಗಿದೆ.
ಶಿರಸಿ-ಸಿದ್ಧಾಪುರದ ಜನರಿಗೆ ಸಮಸ್ಯೆಗಳು, ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಸಹಿಸಿಕೊಂಡು ರೂಢಿಯಾಗಿದೆ ಹಾಗಾಗಿ ಅವರು ಇಂಥದ್ದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುವ ಅಭಿಪ್ರಾಯವಿದೆ. ಹೆಸ್ಕಾಂ ವಿಚಾರದಲ್ಲಂತೂ ಇದು ಸತ್ಯವಾಗಿದೆ. ಜನರಿಗೇ ಬೇಡದ ಅನುಕೂಲ, ಸೌಲಭ್ಯ,ಸೌಲತ್ತುಗಳ ಬಗ್ಗೆ ಹೊರಗಿನವರು ಎಷ್ಟು ಹೇಳಿದರೂ, ಬರೆದರೂ, ಮಾತನಾಡಿದರೂ ವ್ಯರ್ಥ ಎನ್ನುವ ನಿರಾಶಾವಾದ ಹೆಚ್ಚುವಂತಾಗಿದೆ.

ಪ್ರವಾಸಿಗಳೇ ಪೊಲೀಸರಿದ್ದಾರೆ ಎಚ್ಚರಿಕೆ!
ಸಿದ್ಧಾಪುರ ಹುಸೂರು ನಿಪ್ಲಿ ಜಲಪಾತದ ಬಳಿ ಅನುಚಿತವಾಗಿ ವರ್ತಿಸಿದರೆಂಬ ಆರೋಪದ ಮೇಲೆ ನಾಲ್ವರು ಯುವಕರನ್ನು ಸ್ಥಳಿಯ ಪೊಲೀಸರು ಬಂಧಿಸಿರುವ ಬಗ್ಗೆ ಮಾಹಿತಿ ಲಭಿಸಿದೆ.
ಜೋಗ, ಹುಸೂರು, 16 ನೇ ಮೈಲ್‍ಕಲ್ ತುಂಬರಗೋಡು, ಕಾಳೇನಳ್ಳಿ ಶೀರಲಗದ್ದೆ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಜಲಪಾತಗಳಿಗೆ ತೆರಳುವ ಯುವಕರಿಗೆ ಇದು ಮುನ್ನೆಚ್ಚರಿಕೆ. ಪ್ರವಾಸಿಗಳೇ ಪೊಲೀಸರಿದ್ದಾರೆ ಎಚ್ಚರಿಕೆ!

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *