ವಿದ್ಯುತ್ ನಿಗಮಕ್ಕೆ ಹೊರೆಯಾಗುತ್ತಿರುವ ಜನರಿಲ್ಲದ ಕಾಟಾಚಾರದ ಅದಾಲತ್ ಮತ್ತು ಸಂವಾದ ಸಭೆಗಳು


ಕರ್ನಾಟಕ ವಿದ್ಯುಚ್ಛಕ್ತಿ ನಿಗಮ ನಡೆಸುತ್ತಿರುವ ಮಾಸಿಕ ಗ್ರಾಹಕರ ಅದಾಲತ್ ಮತ್ತು ಸಂವಾದ ಸಭೆಗಳು ಕಾಟಾಚಾರದ ಕಾರ್ಯಕ್ರಮಗಳಾಗು ತ್ತಿರುವ ಅಂಶ ಬೆಳಕಿಗೆ ಬಂದಿದೆ.
ಸಿದ್ಧಾಪುರ ತಾಲೂಕು, ಉತ್ತರಕನ್ನಡ ಜಿಲ್ಲೆ ಸೇರಿದ ಕರ್ನಾಟಕದಾದ್ಯಂತ ನಾನಾ ವಿಭಾಗಗಳಾಗಿ ವಿಸ್ತರಿಸಿರುವ ಹೆಸ್ಕಾಂ, ಬೆಸ್ಕಾಂ, ಮೆಸ್ಕಾಂಗಳಲ್ಲಿ ಪ್ರತಿತಿಂಗಳು ನಿಗದಿತ ದಿನಗಳಂದು ಗ್ರಾಹಕರ ಅದಾಲತ್ ಮತ್ತು ಸಂವಾದ ಸಭೆಗಳು ನಡೆಯುತ್ತಿವೆ.
ಈ ಅದಾಲತ್ ಮತ್ತು ಸಂವಾದಸಭೆಗಳಿಗೆ ಗ್ರಾಹಕರೇ ಬರದಿರುವುದರಿಂದ ಸಭೆ,ಸಂವಾದ ಯಾರೊಂದಿಗೆ ಮಾಡುವುದು? ಹೀಗಾಗಿ ಈ ಯೋಜನೆ ವಿಫಲವಾಗುತ್ತಿದೆ. ಕಳೆದ ಶನಿವಾರ ಜು.20 ರಂದು ನಿಗದಿಯಂತೆ ಮುಂಜಾನೆ ಗ್ರಾಹಕರ ಅದಾಲತ್ ಮತ್ತು ಸಾಯಂಕಾಲ ಸಂವಾದ ಸಭೆಗಳಿದ್ದವು. ಆದರೆ ಈ ಎರಡೂ ನಿಗದಿತ ಕಾರ್ಯಕ್ರಮಗಳಿಗೆ ಜನರೇ ಇರಲಿಲ್ಲ.
ಮುಂಜಾನೆ ವೇಳೆ ದೂರು ಹೊತ್ತು ಬಂದ ಏಕೈಕ ಗ್ರಾಹಕ ಸಿಬ್ಬಂದಿಗಳು ಮತ್ತು ವ್ಯವಸ್ಥೆಯ ಲೋಪದ ಬಗ್ಗೆ ದೂರುತಿದ್ದುದು ಬಿಟ್ಟರೆ, ಬೇರೆ ಯಾವ ಗ್ರಾಹಕರ ಮುಖಗಳೂ ಸಿದ್ಧಾಪುರ ಹೆಸ್ಕಾಂ ಉಪವಿಭಾಗೀಯ ಕಚೇರಿ ಎದುರು ಕಾಣಲಿಲ್ಲ. ಹಾಗೆಂದು ಸಿದ್ಧಾಪುರದಲ್ಲಿ ವಿದ್ಯುತ್ ಸಮಸ್ಯೆಗಳೇ ಇಲ್ಲವೇನೆಂದೇನಿಲ್ಲ, ಆದರೆ ಗ್ರಾಹಕರಿಗೆ ನಿರಾಸಕ್ತಿ. ಕಟ್ಟೆಮೇಲೆ ಕೂತು, ಸಂಬಂಧಿಸಿರದ ಪ್ರದೇಶ, ಸಮಯಗಳಲ್ಲಿ ಕೆ.ಇ.ಬಿ., ಹೆಸ್ಕಾಂ ಬಗ್ಗೆ ದೂರುವವರು ಅವರದೇ ವೇದಿಕೆಗಳಾದ ಸಂವಾದ ಸಭೆ,ಗ್ರಾಹಕರ ಅದಾಲತ್ ಗಳಿಗೆ ಬಂದಿರುವುದಿಲ್ಲ.
ಜನಪ್ರತಿನಿಧಿಗಳು ಗ್ರಾಮಸಭೆ,ತಾಲೂಕಾ ಪಂಚಾಯತ್ ಮಾಸಿಕ ಸಭೆಗಳಲ್ಲಿ ಇಂಥ ವಿಚಾರ, ಮಾಹಿತಿ ಪಡೆದಿರುತ್ತಾರೆ. ಆದರೆ ನಿಗದಿತ ಗ್ರಾಹಕರ ಅದಾಲತ್ ಮತ್ತು ಗ್ರಾಹಕರ ಸಂವಾದ ಸಭೆಗಳಲ್ಲಿ ಜನಪ್ರತಿನಿಧಿಗಳೂ ಕಾಣಸಿಗುವುದಿಲ್ಲ. ಅಧಿಕಾರ, ಅನುಕೂಲ, ಜಾತಿ-ಧರ್ಮಗಳ ಕಾರಣಕ್ಕೆ ಆಯ್ಕೆಯಾಗುವ ಇಲ್ಲಿಯ ಶಾಸಕರು, ಸಂಸದರನ್ನಂತೂ ಕಾಣುವುದು ಹಾಗಿರಲಿ, ಕೇಳುವ ಹಾಗೂ ಇಲ್ಲ. ಸಿದ್ಧಾಪುರದ ಕೋಲಶಿರ್ಸಿ, ಬೇಡ್ಕಣಿ ಪಂಚಾಯತ್ ಗಳಲ್ಲಿ ಹೆಸ್ಕಾಂ ಉಳ್ಳವರಿಗೊಂದು ನ್ಯಾಯ, ಇಲ್ಲದವರಿಗೊಂದು ನ್ಯಾಯ ಎನ್ನುವ ಪಕ್ಷಪಾತ ಮಾಡಿ ಕೆಲವರಿಗಷ್ಟೆ ನಗರದ ವಿದ್ಯುತ್ ಸಂಪರ್ಕ, ಹಲವರಿಗೆ ಗ್ರಾಮೀಣ ಸಂಪರ್ಕದ ತಾರತಮ್ಯ ಮಾಡುತ್ತಿದೆ.
ಆದರೆ ಈ ಬಗ್ಗೆ ಈ ಭಾಗದ ಜನಪ್ರತಿನಿಧಿಗಳು,ಗ್ರಾ.ಪಂ., ತಾ.ಪಂ. ಜಿ.ಪಂ. ಸದಸ್ಯರು ಕೂಡಾ ಧ್ವನಿ ಎತ್ತುತ್ತಿಲ್ಲ. ಜನಪ್ರತಿನಿಧಿಗಳು, ಸಾರ್ವಜನಿಕರ ಈ ಅನಾಸಕ್ತಿಯಿಂದಾಗಿ ತಾಲೂಕಿನಲ್ಲಿ ಬಹುತೇಕ ದಿನಗಳಲ್ಲಿ ವಿಶೇಶವಾಗಿ ಮಳೆಗಾಲದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ನಿರಂತರ ಆದರೆ ಗ್ರಾಹಕರು, ಜನಪ್ರತಿನಿಧಿಗಳು ಜವಾಬ್ಧಾರಿ ವಹಿಸದ ಪರಿಣಾಮ ಹೆಸ್ಕಾಂ ಗೆ ಮಲಗುವವರಿಗೆ ಹಾಸಿಗೆ ಹಾಸಿ ಕೊಟ್ಟಂತಾಗಿದೆ.
ಶಿರಸಿ-ಸಿದ್ಧಾಪುರದ ಜನರಿಗೆ ಸಮಸ್ಯೆಗಳು, ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಸಹಿಸಿಕೊಂಡು ರೂಢಿಯಾಗಿದೆ ಹಾಗಾಗಿ ಅವರು ಇಂಥದ್ದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುವ ಅಭಿಪ್ರಾಯವಿದೆ. ಹೆಸ್ಕಾಂ ವಿಚಾರದಲ್ಲಂತೂ ಇದು ಸತ್ಯವಾಗಿದೆ. ಜನರಿಗೇ ಬೇಡದ ಅನುಕೂಲ, ಸೌಲಭ್ಯ,ಸೌಲತ್ತುಗಳ ಬಗ್ಗೆ ಹೊರಗಿನವರು ಎಷ್ಟು ಹೇಳಿದರೂ, ಬರೆದರೂ, ಮಾತನಾಡಿದರೂ ವ್ಯರ್ಥ ಎನ್ನುವ ನಿರಾಶಾವಾದ ಹೆಚ್ಚುವಂತಾಗಿದೆ.

ಪ್ರವಾಸಿಗಳೇ ಪೊಲೀಸರಿದ್ದಾರೆ ಎಚ್ಚರಿಕೆ!
ಸಿದ್ಧಾಪುರ ಹುಸೂರು ನಿಪ್ಲಿ ಜಲಪಾತದ ಬಳಿ ಅನುಚಿತವಾಗಿ ವರ್ತಿಸಿದರೆಂಬ ಆರೋಪದ ಮೇಲೆ ನಾಲ್ವರು ಯುವಕರನ್ನು ಸ್ಥಳಿಯ ಪೊಲೀಸರು ಬಂಧಿಸಿರುವ ಬಗ್ಗೆ ಮಾಹಿತಿ ಲಭಿಸಿದೆ.
ಜೋಗ, ಹುಸೂರು, 16 ನೇ ಮೈಲ್‍ಕಲ್ ತುಂಬರಗೋಡು, ಕಾಳೇನಳ್ಳಿ ಶೀರಲಗದ್ದೆ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಜಲಪಾತಗಳಿಗೆ ತೆರಳುವ ಯುವಕರಿಗೆ ಇದು ಮುನ್ನೆಚ್ಚರಿಕೆ. ಪ್ರವಾಸಿಗಳೇ ಪೊಲೀಸರಿದ್ದಾರೆ ಎಚ್ಚರಿಕೆ!

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *