ವಿದ್ಯುತ್ ನಿಗಮಕ್ಕೆ ಹೊರೆಯಾಗುತ್ತಿರುವ ಜನರಿಲ್ಲದ ಕಾಟಾಚಾರದ ಅದಾಲತ್ ಮತ್ತು ಸಂವಾದ ಸಭೆಗಳು


ಕರ್ನಾಟಕ ವಿದ್ಯುಚ್ಛಕ್ತಿ ನಿಗಮ ನಡೆಸುತ್ತಿರುವ ಮಾಸಿಕ ಗ್ರಾಹಕರ ಅದಾಲತ್ ಮತ್ತು ಸಂವಾದ ಸಭೆಗಳು ಕಾಟಾಚಾರದ ಕಾರ್ಯಕ್ರಮಗಳಾಗು ತ್ತಿರುವ ಅಂಶ ಬೆಳಕಿಗೆ ಬಂದಿದೆ.
ಸಿದ್ಧಾಪುರ ತಾಲೂಕು, ಉತ್ತರಕನ್ನಡ ಜಿಲ್ಲೆ ಸೇರಿದ ಕರ್ನಾಟಕದಾದ್ಯಂತ ನಾನಾ ವಿಭಾಗಗಳಾಗಿ ವಿಸ್ತರಿಸಿರುವ ಹೆಸ್ಕಾಂ, ಬೆಸ್ಕಾಂ, ಮೆಸ್ಕಾಂಗಳಲ್ಲಿ ಪ್ರತಿತಿಂಗಳು ನಿಗದಿತ ದಿನಗಳಂದು ಗ್ರಾಹಕರ ಅದಾಲತ್ ಮತ್ತು ಸಂವಾದ ಸಭೆಗಳು ನಡೆಯುತ್ತಿವೆ.
ಈ ಅದಾಲತ್ ಮತ್ತು ಸಂವಾದಸಭೆಗಳಿಗೆ ಗ್ರಾಹಕರೇ ಬರದಿರುವುದರಿಂದ ಸಭೆ,ಸಂವಾದ ಯಾರೊಂದಿಗೆ ಮಾಡುವುದು? ಹೀಗಾಗಿ ಈ ಯೋಜನೆ ವಿಫಲವಾಗುತ್ತಿದೆ. ಕಳೆದ ಶನಿವಾರ ಜು.20 ರಂದು ನಿಗದಿಯಂತೆ ಮುಂಜಾನೆ ಗ್ರಾಹಕರ ಅದಾಲತ್ ಮತ್ತು ಸಾಯಂಕಾಲ ಸಂವಾದ ಸಭೆಗಳಿದ್ದವು. ಆದರೆ ಈ ಎರಡೂ ನಿಗದಿತ ಕಾರ್ಯಕ್ರಮಗಳಿಗೆ ಜನರೇ ಇರಲಿಲ್ಲ.
ಮುಂಜಾನೆ ವೇಳೆ ದೂರು ಹೊತ್ತು ಬಂದ ಏಕೈಕ ಗ್ರಾಹಕ ಸಿಬ್ಬಂದಿಗಳು ಮತ್ತು ವ್ಯವಸ್ಥೆಯ ಲೋಪದ ಬಗ್ಗೆ ದೂರುತಿದ್ದುದು ಬಿಟ್ಟರೆ, ಬೇರೆ ಯಾವ ಗ್ರಾಹಕರ ಮುಖಗಳೂ ಸಿದ್ಧಾಪುರ ಹೆಸ್ಕಾಂ ಉಪವಿಭಾಗೀಯ ಕಚೇರಿ ಎದುರು ಕಾಣಲಿಲ್ಲ. ಹಾಗೆಂದು ಸಿದ್ಧಾಪುರದಲ್ಲಿ ವಿದ್ಯುತ್ ಸಮಸ್ಯೆಗಳೇ ಇಲ್ಲವೇನೆಂದೇನಿಲ್ಲ, ಆದರೆ ಗ್ರಾಹಕರಿಗೆ ನಿರಾಸಕ್ತಿ. ಕಟ್ಟೆಮೇಲೆ ಕೂತು, ಸಂಬಂಧಿಸಿರದ ಪ್ರದೇಶ, ಸಮಯಗಳಲ್ಲಿ ಕೆ.ಇ.ಬಿ., ಹೆಸ್ಕಾಂ ಬಗ್ಗೆ ದೂರುವವರು ಅವರದೇ ವೇದಿಕೆಗಳಾದ ಸಂವಾದ ಸಭೆ,ಗ್ರಾಹಕರ ಅದಾಲತ್ ಗಳಿಗೆ ಬಂದಿರುವುದಿಲ್ಲ.
ಜನಪ್ರತಿನಿಧಿಗಳು ಗ್ರಾಮಸಭೆ,ತಾಲೂಕಾ ಪಂಚಾಯತ್ ಮಾಸಿಕ ಸಭೆಗಳಲ್ಲಿ ಇಂಥ ವಿಚಾರ, ಮಾಹಿತಿ ಪಡೆದಿರುತ್ತಾರೆ. ಆದರೆ ನಿಗದಿತ ಗ್ರಾಹಕರ ಅದಾಲತ್ ಮತ್ತು ಗ್ರಾಹಕರ ಸಂವಾದ ಸಭೆಗಳಲ್ಲಿ ಜನಪ್ರತಿನಿಧಿಗಳೂ ಕಾಣಸಿಗುವುದಿಲ್ಲ. ಅಧಿಕಾರ, ಅನುಕೂಲ, ಜಾತಿ-ಧರ್ಮಗಳ ಕಾರಣಕ್ಕೆ ಆಯ್ಕೆಯಾಗುವ ಇಲ್ಲಿಯ ಶಾಸಕರು, ಸಂಸದರನ್ನಂತೂ ಕಾಣುವುದು ಹಾಗಿರಲಿ, ಕೇಳುವ ಹಾಗೂ ಇಲ್ಲ. ಸಿದ್ಧಾಪುರದ ಕೋಲಶಿರ್ಸಿ, ಬೇಡ್ಕಣಿ ಪಂಚಾಯತ್ ಗಳಲ್ಲಿ ಹೆಸ್ಕಾಂ ಉಳ್ಳವರಿಗೊಂದು ನ್ಯಾಯ, ಇಲ್ಲದವರಿಗೊಂದು ನ್ಯಾಯ ಎನ್ನುವ ಪಕ್ಷಪಾತ ಮಾಡಿ ಕೆಲವರಿಗಷ್ಟೆ ನಗರದ ವಿದ್ಯುತ್ ಸಂಪರ್ಕ, ಹಲವರಿಗೆ ಗ್ರಾಮೀಣ ಸಂಪರ್ಕದ ತಾರತಮ್ಯ ಮಾಡುತ್ತಿದೆ.
ಆದರೆ ಈ ಬಗ್ಗೆ ಈ ಭಾಗದ ಜನಪ್ರತಿನಿಧಿಗಳು,ಗ್ರಾ.ಪಂ., ತಾ.ಪಂ. ಜಿ.ಪಂ. ಸದಸ್ಯರು ಕೂಡಾ ಧ್ವನಿ ಎತ್ತುತ್ತಿಲ್ಲ. ಜನಪ್ರತಿನಿಧಿಗಳು, ಸಾರ್ವಜನಿಕರ ಈ ಅನಾಸಕ್ತಿಯಿಂದಾಗಿ ತಾಲೂಕಿನಲ್ಲಿ ಬಹುತೇಕ ದಿನಗಳಲ್ಲಿ ವಿಶೇಶವಾಗಿ ಮಳೆಗಾಲದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ನಿರಂತರ ಆದರೆ ಗ್ರಾಹಕರು, ಜನಪ್ರತಿನಿಧಿಗಳು ಜವಾಬ್ಧಾರಿ ವಹಿಸದ ಪರಿಣಾಮ ಹೆಸ್ಕಾಂ ಗೆ ಮಲಗುವವರಿಗೆ ಹಾಸಿಗೆ ಹಾಸಿ ಕೊಟ್ಟಂತಾಗಿದೆ.
ಶಿರಸಿ-ಸಿದ್ಧಾಪುರದ ಜನರಿಗೆ ಸಮಸ್ಯೆಗಳು, ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಸಹಿಸಿಕೊಂಡು ರೂಢಿಯಾಗಿದೆ ಹಾಗಾಗಿ ಅವರು ಇಂಥದ್ದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುವ ಅಭಿಪ್ರಾಯವಿದೆ. ಹೆಸ್ಕಾಂ ವಿಚಾರದಲ್ಲಂತೂ ಇದು ಸತ್ಯವಾಗಿದೆ. ಜನರಿಗೇ ಬೇಡದ ಅನುಕೂಲ, ಸೌಲಭ್ಯ,ಸೌಲತ್ತುಗಳ ಬಗ್ಗೆ ಹೊರಗಿನವರು ಎಷ್ಟು ಹೇಳಿದರೂ, ಬರೆದರೂ, ಮಾತನಾಡಿದರೂ ವ್ಯರ್ಥ ಎನ್ನುವ ನಿರಾಶಾವಾದ ಹೆಚ್ಚುವಂತಾಗಿದೆ.

ಪ್ರವಾಸಿಗಳೇ ಪೊಲೀಸರಿದ್ದಾರೆ ಎಚ್ಚರಿಕೆ!
ಸಿದ್ಧಾಪುರ ಹುಸೂರು ನಿಪ್ಲಿ ಜಲಪಾತದ ಬಳಿ ಅನುಚಿತವಾಗಿ ವರ್ತಿಸಿದರೆಂಬ ಆರೋಪದ ಮೇಲೆ ನಾಲ್ವರು ಯುವಕರನ್ನು ಸ್ಥಳಿಯ ಪೊಲೀಸರು ಬಂಧಿಸಿರುವ ಬಗ್ಗೆ ಮಾಹಿತಿ ಲಭಿಸಿದೆ.
ಜೋಗ, ಹುಸೂರು, 16 ನೇ ಮೈಲ್‍ಕಲ್ ತುಂಬರಗೋಡು, ಕಾಳೇನಳ್ಳಿ ಶೀರಲಗದ್ದೆ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಜಲಪಾತಗಳಿಗೆ ತೆರಳುವ ಯುವಕರಿಗೆ ಇದು ಮುನ್ನೆಚ್ಚರಿಕೆ. ಪ್ರವಾಸಿಗಳೇ ಪೊಲೀಸರಿದ್ದಾರೆ ಎಚ್ಚರಿಕೆ!

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *